Friday, December 21, 2007

ಬಣ್ಣಿಸಲಾರದ ಭವ




====
ಮತ್ತೆ ಆವರಿಸಿದೆ.
ಬಣ್ಣಿಸಲಾರದ ಭವ.
ಅಭಾವ!
ಸುತ್ತ ಸಮ್ವೃದ್ಧಿಯ ನಡುವೆಯೂ
ಮನ ಹೆತ್ತ ಅಗೋಚರ
ಕೊರತೆ.. ನೋವು .. ಬೇಗೆ...
ದಿನವೆಲ್ಲ ಹಾಡಿ-ಪಾಡಿ, ಕುಣಿದು ದಣಿದು
ಮೂರ್ತಾಸು ನಕ್ಕು ನಲಿದು
ಉಲ್ಲಾಸದೆ, ಅಬ್ಬಾ! ಉಸ್ಸೇಂದು
ಕೂರುವಷ್ಟರಲ್ಲಿ........
ದುಪಟಿ ಹೊದೆದು, ಅವಿತು ಕುಳಿತ
ಗೊಗ್ಗಯ್ಯನಂತೆ ಜಿಗಿದು,
"ಬ್ಯಾಆಆಆ!!!!" ಎಂದು ನನ್ನ ಬೆನ್ತಬ್ಬಿ,
ತಬ್ಬಿಬ್ಬಾಗಿಸಿ, ಬಾಗಿಸಿ ಮತ್ತೆ ಆವರಿಸಿದೆ.
ಬಣ್ಣಿಸಲಾರದ ಭವ.
ಅಭಾವ!
---------------------
Miami Lakes. 08:28PM December 21 2007. Friday Evening. "Happy" Holidays Begin!


Get this widget | Track details | ಬಣ್ಣಿಸಲಾರದ ಭವ

Sunday, December 09, 2007

ಹಯವದನರಾಯರ ಕುದುರೆ


ಹಯವದನರಾಯರ ಕುದುರೆ
ಕತ್ತೆಯಾಯಿಯಂತೆ.
ಯಾರಿಗೂ ತಿಳಿಯಲೇ ಇಲ್ಲ.
ಕಣ್ಗೆಕಟ್ಟಿದ ಪಟ್ಟಿ ಏಕಾಗ್ರ ಮೂಡಿಸದೆ
ನಿಲುವನಾಗಿಸಿದೆ ಸಂಕುಚಿತ.
ಮೂಗಿನ ನೇರದ ಅಶ್ವಯಾನ
ಗಾರ್ಧಭ ಗಮನವಲ್ಲದೆ,
ಅಶ್ವಾಂದೋಳಿಕವಾಗಬಲ್ಲದೆ?
ಹ್ಮ್ಮ್ಮ್ ...ಹಯವದನ
ರಾಯರ ಕುದುರೆ ಕತ್ತೆಯಾಯಿಯಂತೆ!

Miami Lakes, Florida - 2:30 AM

Monday, November 26, 2007

ಕಾಲಗರ್ಭ

ಕಾಲಗರ್ಭದಲ್ಲಿ ಬಿತ್ತಿದ ಭವಿಷ್ಯತ್ತಿನ ಸಸಿಗಳು ವರ್ತಮಾನದ ವ್ಯಾಪ್ತಿಯಲ್ಲಿ ಮೊಳೆತು ಸೂರ್ಯರಶ್ಮಿಯಾಗಿ ವ್ಯಕ್ತವಾಗುತ್ತವೆ. ವೈಷ್ವಾನರವಾಗಿ ಸಸ್ಯಧಮನಿಯಲಿ ಹರಿದು,ಜೀವಗಳ ಒಳಹೊಕ್ಕು ,ಅಂತ್ಯದಲ್ಲಿ ಮೂರ್ತರೂಪಾತೀತವಾಗಿ, ಮತ್ತೆ ಅದೇ ಅಮೂರ್ತತೆಯ ಮಡಿಲಿನಲಿ ಕಾಲ್ಮುದುರಿ ಮಲಗುತ್ತವೆ. ಕಾಲಾಂತರದಲ್ಲಿ ಅದೇ ಸೂರ್ಯರಶ್ಮಿಯು ಸ್ಫ್ಹುರಿಸಿ ಭುವನಾಂಕುರವಾಗುವುದು ಯಾವ ಮನ್ವಂತರದಲ್ಲೋ! ಆ ಘಳಿಗೆಯ ಆಧಿಪತ್ಯಕ್ಕೆ ಕಾಯುತ್ತ ಅನಂತತೆಯ ಕಾಲಶರಧಿಯಲಿ ಸ್ಥೂಲತೆಯ ಪೊರೆಕಳಚಿ, ಸೂಕ್ಷ್ಮದಲೇಪ ಮೆರೆದು ಸುಪ್ತಾವಸ್ತೆಯಲ್ಲಿ ಅವಿತು ಆಕಳಿಸುತಿದೆ ನೋಡಿ ಆ ಮರಿಕಿರಣ......

Saturday, November 17, 2007

ಮುಕುತಿ

ಙ್ನಾನ ಭಕುತಿ ಕರ್ಮ ಮಾರ್ಗ
ನಡೆದು ಪಡೆವೆ ಮುಕುತಿ
ನನ್ನ ದಾರಿ ನನಗೆ ಎನಲು
ಕಡೆಗೆ ಮಣ್ಣು ಮುಕುತಿ !

4:15 AM Saturday 17 November 2007. Milpitas CA.

ರಂಗೋಲಿ

ನನ್ನೆದೆಯ ಅಂಗಳದೆ
ನೀ ಬರೆದ ರಂಗೋಲಿ
ವಿಧಿ ಕದಡಿ ಬಿರುಗಾಳಿ
ಮುಗಿಲಿಗೇರಿದೆ ಧೂಳಿ
ಭುಗಿಲೆದ್ದ ಬಣ್ಣದೋಕುಳಿ
ಕಂಗಳಾ ಒಳನುಸುಳಿ
ಅವಿತ ಹಳೆಯಾಸೆಯ ಹುಳಿ
ನಿಂದು ಕಾಯುತಿದೆ ಕಣ್ಣಂಚಿನ ಬಳಿ


ನನ್ನ ಪ್ರಿಯೆ ಇಟ್ಟ heartshape ರಂಗೋಲಿ, ವಿಧಿಯ ಬಿರುಗಾಳಿಯಿಂದ washout ಆಗಿ, ಕಣ್ಣೊಳಗೆ ಹೋಗಿ ಕುಚ್ಚ್ ಕೊಂಡು, ಕಣ್ಣೀರು generate ಆಗಿ, ಕಣ್ಣು caorner ನಲ್ಲಿ parking ಮಾಡ್ಕೊಂಡಿದೆ ಅನ್ನೋ ಅರ್ಥ.

Between 12:00 midnight to 12:45 AM Saturday 17 November 2007. Milpitas CA.

Friday, November 16, 2007

ಪೂರ್ವಾಗ್ರಹ




--
ಶಾಂತಿ ಮಾಡಿಸಲು
ತಣ್ಣಗಾಗುವವು,
ರಾಹು ಕೇತು ಮಿಕ್ಕೆಲ್ಲಾ ನವಗ್ರಹ.

ಬ್ರಾಂತಿ ಮೂಡಿಸಿ
ಬಿಡದೆ ಕಾಡುವುದೊಂದೆ,
ಪೂರ್ವಾಗ್ರಹ!

ಹಿನ್ನೆಲೆ: ಅತೀ ಬುದ್ಧಿವಂತರು, ಪ್ರಙ್ನಾವಂತರು, ವಿದ್ವದ್ಪೂರ್ಣರು ಎಂದು ನಾನು ಪರಿಗಣಿಸಿದ್ದ (ಈಗಲೂ ಗೌವರವಿಸುವ) ಕೆಲವು ಮಿತ್ರರು ಪೂರ್ವಾಗ್ರಹ ಪೀಡಿತರಾಗಿ, ವಸ್ತುನಿಷ್ಟವಲ್ಲದ ವಾದದಲ್ಲಿ ತೊಡಗಿದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಸಾಲುಗಳು.

Pre-concieved notion bagge. Nov 16 12:20AM Milpitas,CA
--

Monday, November 12, 2007

ಸವ್ಯಸಾಚಿ

--
ಸವ್ಯಸಾಚಿ,
ಎರಡೂ ಕೈ ಚಾಚಿ,
ನಾಚದೆ
ಬಾಚಿ ಬಾಚಿ,
ಕಾಳು ಗೀಳು ಹಾಳು ಮೂಳು ತಿಂದು,
ಆವರಿಸಿದೆ ಕಫ ವಾತ ಪಿತ್ತ;

ಅವನೇನು ಮಾಡಲಾದೀತು
ಮೂಡಿದರೆ ವಾತ ಪಿತ್ತ.
ಕಿಟ್ಟಪ್ಪ ನುಡಿದಿರಲು:
"ಮಗನೇ, ನೀ ಮಾತ್ರ ನಿಮಿತ್ತ"
---

ಹಿನ್ನೆಲೆ:

'ಸವ್ಯಸಾಚಿ' ಅಂದರೆ ಎರಡೂ ಕೈಗಳನ್ನು ಸಮಶಕ್ತಿಯಿಂದ ಬಳಸಲು ಶಕ್ತಿವುಳ್ಳವ.ಮಹಾಭಾರತದ ಅರ್ಜುನ. ಏಡಬಲಗಳೆನ್ನದೆ ಬಾಣಪ್ರಯೋಗ ಮಾಡಬಲ್ಲ ಸಾಹಸಿ. ಶ್ರೀ ಕೃಷ್ಣ, ಅರ್ಜುನನ್ನನ್ನು ಕುರಿತು: 'ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್" ಎಂದು ಗೀತೆಯಲ್ಲಿ ಉಪದೇಶಿಸುತ್ತಾನೆ. ನಮ್ಮ ಚುಟುಕದ ಸವ್ಯಸಾಚಿ, ಏಡಗೈ, ಬಲಗೈ ಭೇದ ತೋರದೆ, ಸಿಕ್ಕಿದ್ದೆಲ್ಲ ನುಂಗಿ, ನೀರು ಕುಡಿದು, ವಾತ-ಪಿತ್ತ ಬರಿಸಿಕೊಳ್ತಾನೆ. ಪಿತ್ತವಾದ್ರು, ಅವನು ನಿಮಿತ್ತ ಮಾತ್ರ ಅನ್ನೊ ಭಾವ ಹಿಡಿದು ಗೀಚಿದ ಅಣಕ ಚುಟುಕ.

--

ಚಿತ್ಸುಖ

---
ಕೊಳಕು ಚಿಂತೆಯ
ತೊಳೆದು ಮನದೆ
ಮೂಡಿಹುದು: ಚಿತ್ಸುಖ
ಹುಳುಕು ಹಲ್ಕಿತ್ತು
ದಂತ ವೈದ್ಯರು
ನೀಡಿದ್ದು: ಕಿತ್ಸುಖ
---

ಚಿತ್ + ಸುಖ = ಚಿತ್ಸುಖ
ಕಿತ್ + ಸುಖ = ಕಿತ್ಸುಖ
ಚುಟುಕ ಅಸಹ್ಯವೆನಿಸುವಷ್ಟು ಕೆಟ್ಟದಾಗಿದ್ರೆ, ಓದುಗರ ಕ್ಷಮೆ ಇರಲಿ.
--

Friday, November 09, 2007

ಗುಂಡನ ದೀಪಾವಳಿ

ಇಂದು ದೀಪಾವಳಿ.ಎಲ್ಲರಿಗೂ ಡಂ ಡಂ ಹಬ್ಬದ ಡುಂ ಡುಂ ಶುಭಾಶಯಗಳು.

ಕಬ್ಬಿನ ಜಲ್ಲೆ ಹಿಡಿದು ನಡೆದ ಗುಂಡನ್ನನ್ನು ನೋಡಿ ಗುರುಗಳು ವಿಚಾರಿಸಿದರಂತೆ, "ಏನೋ ಗುಂಡ, ಹಬ್ಬ ಜೋರಾ? ಹೇಗೆ ಆಚರಿಸಿದೆ?".
ಇರುವ ಮೂವತ್ತೆರೆಡೂ ಗಿಂಜಿ," ಆಗ್ತಾ ಇದೆ, ಗುರುಗಳೇ", ಗುಂಡ ನುಡಿದ.

"ಏಳ್ಳು - ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಇವೆಲ್ಲ ಸ್ನೇಹಿತರಿಗೆ ಬೀರಿ, ಮನೆಯಲ್ಲಿ ಬೊಂಬೆ ಕುಂಡ್ರಿಸಿ, ಬೇವು ಬೆಲ್ಲ ತಿಂದು, ಶ್ಯಮಂತಕೋಪಾಖ್ಯಾನ ಓದಿ, ದೀಪಾವಳಿ ಆಚರಿಸಿದೆ."

ಬೇಸ್ತು ಬಿದ್ದ ಗುರುಗಳು," ಅಲ್ಲಯ್ಯ, ದೀಪಾವಳಿಗೆ ದೀಪಾ ಬೆಳಗುವುದಾಗಲಿ, ಪಟಾಕಿ ಸಿಡಿಸೊದಾಗ್ಲಿ ಏನೂ ಮಾಡ್ಲಿಲ್ವೇ?" ಅಂತ ಕೇಳಿದ್ರು.

"ಇಲ್ಲ ಸಾ, ನಾನೇ ಬೇರೆ, ನನ್ನ ಸ್ಟೈಲೇ ಬೇರೆ. ಎಲ್ಲರಂತಲ್ಲ ನಾನು. ಎಲ್ಲರೂ ಮಾಡೊದನ್ನ ಮಾಡೊಕ್ಕೆ ನನಗೆ ಬೋರು" ಎಂದು ಕಾಲರ್ ಪಟ್ಟಿಯನ್ನು ಒಮ್ಮೆ ಹಾಗಂದು, ಗುಂಡ ಮನೆ ಕಡೆ ನಡೆದ.

"ಎಲ್ಲಾರಿಗೂ ಒಂದು ದಾರಿ ಆದ್ರೆ, ಏಡವಟ್ಟನಿಗೇ..." ಅಂತ ಎನೋ ಗುರುಗಳು ಗೊಣಗಿ ನಡೆದ ಹಾಗೆ ಇತ್ತು.

ನಮ್ಮಲ್ಲಿ ಕೆಲವರಿಗೆ ವಿಭಿನ್ನವಾಗಿರುವ ಹುಚ್ಚು. ಎಲ್ಲರೂ ಮಾಡುವುದನ್ನು ತಾವು ಮಾಡಿದರೆ ಅವರ ಘನತೆಗೆ ಅದು ಸರಿಬರುವುದಿಲ್ಲ. ಎಲ್ಲದರಲ್ಲೂ ಅವರ ಅಧಿಕಪ್ರಸಂಗ ಕಾಣಲೇಬೇಕು.ಐದು ಜನರ ಗುಂಪಿನಲ್ಲಿ ಈ ವಿಭಿನ್ನತೆಯಿಂದ ಇವರು ಎದ್ದು ಕಾಣ ಬೇಕ್ಂಬ ಉತ್ಕಟ ಇಚ್ಚೆ.ಅಸಾಧ್ಯರು ಇಂತ ಜನ. ನಮ್ಮ ಗುಂಡನ ಹಾಗೆ. ಆದರೆ ಅವರಿಗೆ ತಿಳಿಯದಿದ್ದ ವಿಷಯವೆನೆಂದರೆ, ವಿಭಿನ್ನವಾಗಿರಲು ವಿಶಿಶ್ಟವಾಗ ಬೇಕೆ ವಿನಃ ವಿಚಿತ್ರವೆನಿಸಬಾರದು ಎಂದು! ಈ ಗುಟ್ಟನ್ನು ನಮ್ಮ ಗುಂಡನಿಗೆ ಯಾರದರು ಪಿಸುಗುಟ್ಟಿ ಬರುವಿರಾ?

Friday, October 26, 2007

ಪ್ರಿಯಂವದೆ

ಹುಡುಕಿ ಹೊರಟ್ಟದ್ದು ಶಾಕುಂ
ತಲೆಯನ್ನು.
ಶಾಕಿಂಗ್ ಅಂದ್ರೆ
ಸಿಕ್ಕಿಬಿದ್ದವಳು ಸೈಡ್ ಯಾಕ್ಟ್ರೆಸ್ಸ್
ಪ್ರಿಯಂವದೆ!

ಶ್!!!!
ಗಟ್ಟಿಯಾಗಿ ಗೊಣಗಲಾರೆ,
ಗುಟ್ಟಾಗಿಯೇ ಇರಲಿ.
ಅವಳಿಗೆ ತಿಳಿದರೆ,
ಪ್ರಿಯೆಯಿಂದಲೇ
(ನನಗೆ)ವದೆ.
rather, ವಧೆ.
ಪ್ರಿಯಂವಧೆ!
--

Wednesday, October 24, 2007

ಹರಟೆ - ಹೂರಣ




--
ನಮ್ಮಿರ್ವರ ನಡುವೆ ಹೀಗೆ.
ಟಾಪಿಕ್ಕೆ ಇಲ್ಲದೆ
ಘಂಟೆ ಘಟ್ಟಲೆ ಹರಟೆ.
ಅನ್ಯರಿಗಿದು
ಕಾಲಹರಣ.
ಅರಿತು ಅನುಭವಿಸಿದವರಿಗೆ,
ರಸ ಹೂರಣ !
--
Oct 24 2007; 04:11 PM ; Milpitas,CA.

ಹೈಕು

ಕನ್ನಡದಲ್ಲಿ ಹೈಕು ಪ್ರಯತ್ನ (ಮಾಡಕ್ಕೆ ಹೋಗಿ, ಆದ ಕಲಸುಮೇಲೋಗರ.):

--
ಹಾಲ್ಚಿಮ್ಮಿತು ಉಕ್ಕಿ,
ಭುಗಿಲೆಬ್ಬಿಸಿ.
ಹಸಿಕಳಚಿ;
ಕಾವೀಯ್ದ ಒಳ ಬಿಸಿ
ಇನ್ನು..
ನಿಗ್ರಹಃ ಕಿಂ ಕರಿಷ್ಯಸಿ?
--
Oct 24 2007; 01:40 AM ; Milpitas,CA.

Saturday, October 20, 2007

ಪದಬಂಧ

ಹೊರಗಡೆ ರಣ ಬಿಸಿಲು. ಫ್ಯಾನ್ ಹಾಕೋಣ ಅಂದ್ರೆ ಕರೆಂಟು ಬೇರೆ ಇಲ್ಲ. ಏನು ಸುಡುಗಾಡೋ ಏನೋ? ಜೊತೆಗೆ ಇವಳು ಬೇರೆ. ನನ್ನ ಅರ್ಧಾಂಗಿ. ಕೋಡಂಗಿ. ಎಡಬಿಡಂಗಿ. ಇವಳ್ನ ಕಂಡ್ರೆ ನಂಗೆ ಮೈ ಎಲ್ಲ ಉರಿ.ಆದ್ರೆ ಏನು ಮಾಡೋದು, ಕರ್ಮ. ಇವಳ ಜೊತೆನೇ ಬದುಕು. ಇವಳ ಜೊತೆನೇ ಸಾವು.

ಜೀನಾ ಯಹಾಂ, ಮರ್ನಾ ಯಹಾಂ; ಇಸ್ ಕೆ ಶಿವ ಶಿವಾ ಜಾನಾ ಕಹಾಂ.

ಇಬ್ಬರೂ ಕೂತುಕೊಂಡು ಪದಬಂಧ ಆಡ್ತಾ ಇದೀವಿ. ಐವತ್ತೆರಡು ವಯಸ್ಸು. ಲಾಸ್ಟ್ ಇಯರ್ರೇ ವಾಲಂಟರಿ ತೊಗೊಂಡೆ. ಅದೇ ರಿಟೈರ್ಮೆಂಟು. ಈಗ ಮಾಡೋಕ್ಕೆ ಏನು ಘನಂಧಾರಿ ಕೆಲಸ ಇಲ್ಲ. ಹಾಂ... ಇವಳ ಜೊತೆ ಪದಬಂಧ ಆಡೋದು ಬಿಟ್ಟು. ಕಳೆದ ಗುರುವಾರದಿಂದ ಆ ಹಾಲಪ್ಪ ಕರಿಯ -- ಅವನನ್ನು ಬಿಟ್ಟು, ಇವಳನ್ನು ಬಿಟ್ಟು, ಬೇರೆ ಯಾರ್ನೂ ನಾನು ಮಾತಾಡ್ಸೇ ಇಲ್ಲ ಅಂತೀನಿ. ಒಂದು ಕಾಲ್ದಲ್ಲಿ ಗುಬ್ಬಿ ವೀರಣ್ಣನವರ ಕಂಪ್ನಿನಲ್ಲಿ ಜೋರ್ , ಜೋರ್ ನಾಟ್ಕಾ ಆಡ್ತಾ ಇದ್ದೆ. ವರ್ಷಕ್ಕೆ ಏರಡು ಸಾರ್ತಿ ಜೋಗದ ಗುಂಡಿಗೆ ಟ್ರಿಪ್ಪು. ಹೇಗೆಲ್ಲ ಮಜ ಮಾಡ್ತಾ ಇದ್ದೆ. ಅದು ಒಂದು ಕಾಲ. ಈಗೇನಿದೆ? ಈ ಮೂದೇವಿನ ಬಿಟ್ಟು. ಥೂ! ಥೂ!

ತರಂಗ ಯುಗಾದಿ ವಿಶೇಷಾಂಕ ಈ ಬಾರಿ. ಸಾಕಷ್ಟು ದೊಡ್ಡ ಪದಬಂದ ಬಂದಿದೆ. ನಾನು, ಇವಳು ಮಧುಚಂದ್ರಕ್ಕೆ ಮೈಲಾರ ಬೆಟ್ಟಕ್ಕೆ ಹೋಗಿದ್ವಲ್ಲ , ಆವಗ್ಲಿಂದ್ಲೂ ಹೀಗೆ ಜೋಡಿಯಾಗಿ ಪದಬಂಧ ಬಿಡಿಸೋ ಆಟ ಆಡ್ತೀವಿ. ಬೇರೆ ಏನೇ ಹೇಳಿ, ಮುಂಡೇದು ಭಾಷಾ ನಾ ಮಾತ್ರ ಸಕ್ಕತ್ತಾಗಿ ಇದೆ ಇವಳಿಗೆ. ಪದಬಂಧನ ಪಾದರಸ ಬಿಡಿಸಿ ಹಾಕಿದ ಹಾಗೆ ಬಿಡಿಸಿ ಬಿಸಾಕ್ತಾಳೆ. ಅವಳು ಪಾದರಸ, ನಾನು ಹರಳೆಣ್ಣೆ. ಹೂಂ...

ಮೊದಲನೇ ಪದ. ಏಡದಿಂದ ಬಲಕ್ಕೆ. ಕ್ಲೂ ಬಂದು : 'ಹಬ್ಬ' ೩ ಪದಗಳಿರೋದು. ಥಟ್ ಅಂತ ಬರೆದೆ, 'ಯುಗಾದಿ' ಅಂತ. ಭೇಷ! ಭೇಷ!!! ನನ್ನ ಬೆನ್ನು ನಾನೇ ತಟ್ಕೋ ಬೇಕು. ಅಲ್ಲಾ, ಯುಗಾದಿ ಹಬ್ಬದ ವಿಷೇಶಾಂಕ. ಇನೇನು ಪದ ಇರುತ್ತೆ ಹೇಳಿ? ಇದೇ ಪದ ಸರಿ. ಯುಗಾದಿ.

ಹಾಂ.. ಈಗ ಅವಳ ಸರದಿ. ಏನು ಆಡ್ಥಾಳೋ ನೋಡೋಣ.
ಮೇಲಿನಿಂದ ಕೆಳಕ್ಕೆ. ೪ ಪದ. ಜೋಡಿ ಪದ ಅಂತ ಇದೆ. 'ಮಾಟಮಂತ್ರ' ಅಂತ ಬರೆದಿದಾಳೆ. ಏನು ಪಾಡೋ ಏನೋ . ಸರಿ ಇರ್ಬೇಕು ಬಿಡಿ. ಪದ, ಲೆಕ್ಕ ಏನೊ ತುಂಬುತ್ತೆ, ಸರಿಹೋಗುತ್ತೆ . ಮತ್ತೆ ನನ್ನ ಸರದಿ. ಏನಪ್ಪ ತುಂಬೋದು?? ೨ ಪದ. ಏಡದಿಂದ ಬಲಕ್ಕೆ. ಕೀಟ ಅಂತ ಸೂಚಿಸ್ತಾ ಇದೆ. 'ದುಂಬಿ' ಅಂತ ಬರ್ದೆ ನಾನು. ಅರೇ ! ನಾನು ದುಂಬಿ ಅಂತ ಬರ್ಯೋ ಹಾಗಿಲ್ಲ.ಅಷ್ಟು ಬೇಗ ಇಷ್ಟು ದೊಡ್ಡ ದುಂಬಿ ಮನೆ ಒಳಗೆ ಬರೋದಾ?. ದುಶ್ಯಂತ ಶಾಕುಂತಲೆನ ದುಂಬಿಯಿಂದ ಪಾರು ಮಾಡೋ ಹಾಗೆ, ನಾನು ವೀರಾವೇಷದಿಂದ ದುಂಬಿಯನ್ನು ಹುರಿದುಂಬಿಸಿದೆ. ಅಯ್ಯೋ. ಹೊರಗಟ್ಟಿದೆ.(ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣಾವ್ರು ಹಾಗೆ ಅಲ್ವಾ, ಜಯಪ್ರಧಾ ನ ಸೇವ್ ಮಾಡಿದ್ದು..ಹೆ ಹೆ)

ಮತ್ತೆ ಆಟ ಮುಂದುವರಿಸುತ್ತ. ಮೇಲಿನಿಂದ ಕೆಳಕ್ಕೆ. 'ಯುಗಾದಿಯ' 'ಗಾ' ಜೊತೆಗೆ 'ಯ' ಜೋಡಿಸಿ, 'ಗಾಯ' ಅಂತ ಬರೆದಳು. ಅಯ್ಯೋ !! ಕುರ್ಚಿಗೆ ನನ್ನ ಕಿರುಬೆರಳು ಸಿಕ್ಕಿಕೊಂಡು....ಅಯ್ಯೋ ಅಯ್ಯೋ...ರಕ್ತ,ಗಾಯ,ನೋವು! ನಿಜವಾಗಿಯೂ 'ಗಾಯ' ಆಯಿತು. ಬಾಯ್ನಲ್ಲಿ ಸುಮ್ನೆ ಕಚ್ಚುತ್ತ ಇದ್ದ ಪೆನ್ಸಿಲ್ ತೆಗೆದು, ಬೆರಳು ಇಟ್ಟುಕೊಂಡೆ. ನನಗೆ ಇದೊಂದು ದುರಭ್ಯಾಸ.. ಕೈನಲ್ಲಿ ಪೆನ್ಸಿಲ್ ಇದ್ರೆ, ಆಟೊಮ್ಯಾಟಿಕಾಗಿ ಬಾಯಲ್ಲಿ ಹೋಗುತ್ತೆ. ಇವಳು ಒಂದು ಬ್ಯಾಂಡೇಜ್ ಏನಾದ್ರು ಮಾಡ್ಥಾಳೇನೋ ಅಂತ ನೋಡ್ಥೀನಿ. ಇಲ್ಲ.. ಇಲ್ಲವೇ ಇಲ್ಲ. ಅವಳ ಪಾಡಿಗೆ ಅವಳು 'ಪದಬಂಧ' ಆಡ್ತಾ ಇದಾಳೆ.

'ಮಾಟಮಂತ್ರ' ಪದದಿಂದ 'ಮಾ' ಜೊತೆಗೆ 'ವುಬೇವು' ಜೋಡಿಸಿ - 'ಮಾವುಬೇವು' ಅಂತ ಮುಂದಿನ ಪದಜೋಡಿಸಿದೆ. 'ವು' ಬರೆದು ಇನ್ನು ಕೈ ಪುಸ್ತಕದ ಮೇಲೆ ಇದ್ದೇ ಇದೆ, ಅಷ್ಟು ಬೇಗ ಬಾಗಿಲಿಗೆ ಸಡಿಲವಾಗಿ ಕಟ್ಟಿದ್ದ ಮಾವುಬೇವಿನ ಗೊಂಚಲು ಕೆಳಗೆಬೀಳೋದೆ??? ಇರಿ ಇರಿ. ಇಲ್ಲಿ ಏನೊ ಕರಾಮತ್ತು ನಡೆದಿದೆ. ಪುಟುಗೋಸಿ ಪದಗಳಿಗೆ ಹೇಗೆ ಇಂಥ ಶಕ್ತಿ? ಇವತ್ತು 'ಯುಗಾದಿ', ಮನೆ ಒಳಗೆ 'ದುಂಬಿ' ಬಂದಿತ್ತು.ನನಗೆ 'ಗಾಯ' ಆಯಿತು.' ತೋರಣ ಕಟ್ಟಿದ್ದ 'ಮಾವು-ಬೇವು' ಕಳಚಿ ಬಿದ್ದವು. ಪದಬಂದದಲ್ಲಿ ಏನು ಬರೆದರೂ ಅದು ವಾಸ್ತವದಲ್ಲಿ ನಡೆಯುತ್ತಿದೆಯೆ? ಏನಾದ್ರು 'ಮಾಟಮಂತ್ರ' ನಾ?

'ಬೇವು' ನಲ್ಲಿನ, 'ವು' ಗೆ 'ಸಾ', ಸೇರಿಸಿ ಈಕೆ ನಕ್ಕಳು. ಒಳ್ಳೆ ಆಪ್ತಮಿತ್ರ ಚಿತ್ರದ ನಾಗಮಣಿ ಹಾಗೆ, ಕೆಟ್ - ಕೆಟ್ ದಾಗಿ ದೊಡ್ಡ ಕಣ್ಣು ಬಿಟ್ಟು ದೆವ್ವ ನಕ್ಕಹಾಗೆ ನಗ್ತಾ ಇದಾಳೆ. ಅಯ್ಯೋ , ಬಾಯಿ ನಲ್ಲಿ ಇದ್ದ ಪೆನ್ಸಿಲ್ ಗಂಟಲಿಗೆ ಚುಚ್ಚಿಕೊಂಡಿದೆ. ಉಸಿರು ಕಟ್ಟುತಾ ಇದೆ. ನೀರು, ನೀರು.. ನೀ..

---
Credits and Courtesy:

Based on a short story, 'Death by Scrabble' by Charlie Fish. The characters and certain scenarios have been indianised to induce contextual humour. The Plot and theme, however are based on the original work.

ಕೊಡೆಸೇವೆ

ಇಲ್ಲಿ ಒಬ್ಬ ಐನಾತಿಗೆ ನನ್ನ ತಲೆ ಮೇಲೆ ಕೊಡೆನಲ್ಲಿ 'ಟುಪುಕ್! ಟುಪುಕ್!' ಅಂತ ಮೊಟುಕೊ ವಿಚಿತ್ರ ಹವ್ಯಾಸ ಇದೆ. ಇಂದಿಗೆ ಸರಿಯಾಗಿ ಐದು ವರ್ಷ ಆಯಿತು ಅವನು ನನಗೆ ಕೊಡೆಸೇವೆ ಮಾಡೊಕ್ಕೆ ಶುರುಮಾಡಿ. ಮೊದಮೊದಲು ನನಗೆ ಇದನ್ನು ಸಹಿಸೋ ಸಹನೆ ಇರ್ಲಿಲ್ಲ, ಈಗ ಒಗ್ಗಿ ಹೋಗಿದ್ದೇನೆ.ಇವನ ಹೆಸರು ಗೊತ್ತಿಲ್ಲ ನನಗೆ. ಸಾಧಾರಣ ಮೈ ಕಟ್ಟು. ಗೋಧಿ ಮೈ ಬಣ್ಣ. ಬೂದು ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾನೆ ('ಮಾನಸಿಕವಾಗಿ ಅಸ್ವಸ್ತರು', ಎಂತ ಸೇರ್ಸಿದ್ದಿದ್ರೆ, ಆಕಾಶವಾಣಿ 'ಕಾಣೆಯಾದವರ ಬಗ್ಗೆ ಪ್ರಕಟಣೆ' ಪೂರ್ಣವಾಗುತಿತ್ತು). ಆ ದಿನ ನಾನು ಕಬ್ಬನ್ ಪಾರ್ಕ್ನಲ್ಲಿ, ಕಲ್ಲು ಬೆಂಚ್ ಮೇಲೆ ಕೂತು ಪೇಪರ್ ಓದುತಾ ಇದ್ದೆ. ಏನೋ ಮೆಲ್ಲಗೆ ನೆತ್ತಿಯನ್ನು ತಾಕಿದ ಹಾಗೆ ಆಯಿತು. ಕಣ್ಣನ್ನು ಮೇಲಕ್ಕೆತ್ತಿ ನೋಡಿದರೆ, ಈ ಮನುಷ್ಯ ಯಾಂತ್ರಿಕವಾಗಿ, ಅಸಂಗತವಾಗಿ ನನ್ನ ತಲೆಗೆ ತನ್ನ ಕಪ್ಪು ಕೊಡೆಯನ್ನು ತಾಕಿಸುತ್ತಿದ್ದಾನೆ.ನನಗೆ ಹೇಗೆ ವರ್ತಿಸಬೇಕು ಅನ್ನೋದು ತಿಳಿಯಲಿಲ್ಲ. ನೊಡಿದವರು ಏನೆಂದು ಕೊಂಡಾರು ಅನ್ನುವ ಅವಮಾನದಲ್ಲಿ ಹಿಂದೆ ತಿರುಗಿ ಒಮ್ಮೆ ನೆಟ್ಟ ನೋಟದಲ್ಲಿ ಅವನನ್ನು ನೋಡಿದೆ. 'ಏನಯ್ಯ, ನಿನಗೆ ಹುಚ್ಚೆ?' ಎಂದು ದಬಾಯಿಸಿದೆ. ಆತ ನನ್ನ ಮಾತಿಗೆ ಕಿವಿಗೊಡಲೇ ಇಲ್ಲ. ತನ್ನಪಾಡಿಗೆ ತಾನು ಕೆಲಸವನ್ನು ಮಾಡ್ತಾ ಇದ್ದ. ಶಾಂತಚಿತ್ತನಾಗಿ, ಮೌನವಾಗಿ ನನ್ನ ತಲೆ ಮೇಲೆ ಅವನ ಶ್ರೀರಕ್ಷೆ ಕೊಡುತ್ತಲೇ ಹೋದ. ರೇಗಿದವನೇ ನಾನು ದಪೇದಾರನ್ನನ್ನು ಕರೆಯುತ್ತೇನೆ ಎಂದು ಧಮಕಾಯಿಸಿದೆ. ಊಂ .. ಹೂಂ.... ಪ್ರಜೆ ಜಗ್ಗಲಿಲ್ಲ. ಎರಡು ನಿಮಿಷ ಅವ್ಯವಸ್ತೆ ತಾಳಲಾರದೆ ಸಹಿಸಿಕೊಂಡು, ಬಲವೆಲ್ಲ ಹಾಕಿ ಅವನ ಕಪ್ಪಾಳಮೋಕ್ಷ ಮಾಡಿದೆ. ಪಾಪ, ಅಲ್ಲೆ ನೆಲಕ್ಕೆ ಉರುಳಿ, ಮೂಗಿನಲ್ಲಿ ರಕ್ತ ಸೋರಿಸಿಕೊಂಡು ನರಳಾಡುತ್ತಿದ್ದ. ಅಯ್ಯೊ ಪಾಪ ಅನಿಸಿತು ನನಗೆ. ಸ್ವಲ್ಪ ಚೇತರಿಸಿಕೊಂಡು - ತಡವರಿಸಿಕೊಂಡು, ಮೇಲೆ ಎದ್ದು ಒಂದು ಮಾತೂ ಆಡದೆ, ಮತ್ತೆ ತನ್ನ ಕೈಂಕರ್ಯ ಆರಂಭಿಸಿದ. ಅವನು ನನಗೆ ಪೆಟ್ಟು ಆಗುವ ರೀತಿ ಹಲ್ಲೆ ನಡೆಸುತ್ತಿರಲಿಲ್ಲ, ಆದರೆ ಅತೀವ ಅಸಹನೀಯವಾಗಿ, ಏಕತಾನದಲ್ಲಿ ಮತ್ತೆ ಮತ್ತೆ ಮೆಲ್ಲ ಮೆಲ್ಲಗೆ ಸೋಕಿಸುತ್ತಿದ್ದ. ನೋಣ ಒಂದೇ ಜಾಗದಲ್ಲಿ ಬಂದು ಬಂದು ಕೂತು ಚೇಡಿಸೊ ಹಾಗೆ.ಯಾಕೋ ಬೆಳಗ್ಗೆ ಏಡಮಗ್ಗಲಲ್ಲಿ ಏದ್ದಿರ್ಬೇಕು, ಅದಕ್ಕೆ ಹುಚ್ಚನ ಸಹವಾಸ ಆಯಿತು ಅಂತ ತಿಳಿದು, ಅಲ್ಲಿಂದ ಪರಾರಿ ಆಗಲು ಕಾಲಿಗೆ ಬುದ್ಧಿ ಹೇಳಿದೆ. ಕಷ್ಟಪಟ್ಟು ಒಡೋದಕ್ಕೆ ಪ್ರಯತ್ನಿಸಿ, ಮೇಲುಸಿರು ಬಿಡುತ್ತಿದ್ದ.ಅವನ ಮುಖದಲ್ಲಿ ಯಾವುದೂ ಭಾವನಯೇ ಇಲ್ಲದೆ, ನನ್ನನ್ನು ಹಿಂಬಾಲಿಸಿ ಮತ್ತೆ ಕಾರ್ಯನಿರತನಾದ.

ಪೋಲಿಸ್ ಠಾಣೆಗೆ ಕರೆದೊಯ್ಯೊಣ ಅಂದರೆ, ಅಲ್ಲಿ ಇಂತಹ ಹಾಸ್ಯಾಸ್ಪದ ದೂರು ಸಲ್ಲಿಸಿದರೆ ನಕ್ಕುಬಿಟ್ಟಾರು ಎಂದು ಮನೆಯ ಕಡೆ ಹೋಗಲು ಧಾವಿಸಿದೆ. ಕಣ್ಣಿಗೆ ಕಂಡ ಪುಷ್ಪಕ್ ಬಸ್ ಹಿಡಿದು ಸುಭಾಷನಗರ ಕಡೆ ದಾರಿಹಿಡಿದೆ.ನಕ್ಷತ್ರಿಕನ ಹಾಗೆ ಈ ಆಸಾಮಿ ಅದೆ ಬಸ್ಸು ಹಿಡಿದು, ನಾನು ಕುಳಿತ ಸೀಟಿನ ಪಕ್ಕದಲ್ಲೆ ನಿಂತು ತನ್ನ ಕೆಲಸ ಮುಂದುವರಿಸಿದ. 'ಟುಪುಕ್! ಟುಪುಕ್!' ಪ್ರಯಾಣಿಕರು ಮುಖ ಮುಖ ನೊಡಿಕೊಂಡು ನಕ್ಕರು. ಸ್ವಲ್ಪ ಸಮಯದಲ್ಲಿ ನಗುವಿನ ಅಲೆಗಲು ಭುಗಿಲೆದ್ದವು.ನಾನು ನಾಚಿಕೆ, ಹೇಳಿಕೊಳ್ಳಲಾರದ ಅವಮಾನದಲ್ಲಿ ಬೆಂದುಹೋದೆ.ನಾನು ಬಸ್ಸಿನಿಂದ ಇಳಿದೆ (ಅರ್ಥಾತ್.. ನಾವು ಇಳಿದೆವು). ರಸ್ತೆನಲ್ಲಿ ಜನ ನಮ್ಮನ್ನು ನೊಡಿ ಕೇಕೆ ಹಾಕತೊಡಗಿದರು. ನಾನು ಅವರನ್ನು ಕಂಡು 'ಯಾಕ್ರಯ್ಯ, ಇಲ್ಲಿ ಕೋತಿ ಕುಣಿತಾ ಇದ್ಯಾ? ನೀವುಗಳು ಯಾರೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೊಡೆ ಸೇವೆ ಮಾಡೊದನ್ನ ನೋಡಿಲ್ವ?' ಅಂತ ಅರಚಿದೆ.ಹಾಳು ನಕ್ಷತ್ರಿಕ ನಮ್ಮ ಮನೆಗೆ ಸಹ ಬಂದು ನಿಂತ. ನಾನು ಎಲ್ಲಿ ಹೋದ್ರೆ ಅಲ್ಲಿಗೆ ಬರ್ತಾನೆ ಈ ಛತ್ರಿಪತಿ.ನನ್ನ ನೆರಳಿನ ಹಾಗೆ ಹಿಂಬಾಲಿಸೊ ಛಾಯಾಪತಿ. ನಾನು ಎಲ್ಲಿ ಬಂದ್ರೆ ಅಲ್ಲಿ ಬರ್ತಾನೆ. ಕಡೇ ಪಕ್ಷ ಕನಕದಾಸರ ಸಹಪಾಠಿ ಕದಳೀಫಲ ತಿಂದ ಕಡೆಗೆ ನಾನು ಹೋದ್ರೆ ಅಲ್ಲಿ ಆದ್ರೂ ನಿರಾಳ್ವಾಗಿ ಕೆಲಸ ಮಾಡೋಕ್ಕೆ ಬಿಡ್ತಾನ ಈತ? ಊಂ ಹೂಂ..ಇಲ್ಲವೇ ಇಲ್ಲ... ಅ'ಲ್ಲೂ' ಬಂದು ವಕ್ರಸ್ತಾನೆ, ಕುಕ್ರಸ್ತಾನೆ. ಮೊದಲಿಗೆ ಸ್ವಲ್ಪ ದಿನ ನಿದ್ದೆ ಕೆಡ್ತ ಇದ್ದೆ, ಈ ಟಚ್-ಟಚ್ ಸೇವೆ ಇಂದ. ಈ ನಡುವೆ, ಇದು ಒಳ್ಳೆ ತಟ್ಟಿ-ತಟ್ಟಿ ಆಗ್ಬಿಟ್ಟಿದೆ. ನನ್ನ ತಾಯಿ ಜೊಗುಳ ಹಾಡಿ ನನ್ನನ್ನು ಮಲಗಿಸುವ ಹಾಗೆ ಅನ್ನಿ. ಅವನನ್ನ ರೇಗಿಸಿ, ಮುದ್ದು ಮಾಡಿ, ಅಂಗಲಾಚಿ ಬೇಡಿ ಕೊಂಡು, ಅಯ್ಯೋ - ದಮ್ಮಯ್ಯ ಅಂದು, ಸಾಮ - ದಾನ - ದಂಡ - ಬೇಧ -- ಹೀಗೆ ಎಲ್ಲ ಉಪಾಯ ಹಾಕಿಕೊಂಡು ಕೇಳಿದ್ರು ಸುತರಾಂ ಹೀಗೆ ಯಾಕೆ ಮಾಡ್ಥಾನೆ ಅಂತ ಹೇಳೊಲ್ಲ. ಬೊಧಿವೃಕ್ಷದ ಕೆಳಗೆ ಕೂತ ಬುದ್ಧನ ಹಾಗೆ ಮುಖ ಮಾಡ್ತಾನೆ ಮೂರ್ಖ. ಸ್ಥಿತಪ್ರಗ್ನನ ಹಾಗೆ. ಎಷ್ಟೋ ಸಾರಿ ಪಿತ್ತ ನೆತ್ತಿಗೇರಿ ಕೈಗೆ ಸಿಕ್ಕಿದ್ರಲ್ಲಿ -- ಬೇಳ್ಟು , ಚೈನು, ಚಾವ್ಟಿ , ಕೊಡೆ (ಅವನ ಕೊಡೆ ಅಲ್ಲ, ನನ್ನ ಹೆಂಡತಿದು; ಫ್ಲೋರಲ್ ಪ್ಯಾಟ್ರನ್ನು ಇರೋದು) ಏಟು ಹಾಕಿದೀನಿ. ಆದ್ರು ಇವೆಲ್ಲ ಆಕ್ಯುಪೇಶನಲ್ ಹಾಜರ್ಡ್ ಅನ್ನೊ ಹಾಗೆ ಲೇಬರ್ ಮಾಡ್ತಾನೆ ಪುನ್ಯಾತ್ಮ ! ಒಂದು ದಿನ ತುಪಾಕಿ ತೆಗೆದು ಹರಹರ ಅನ್ಸೋಣ ಅನ್ಕೊಂಡೆ.ಆದ್ರೆ ಇವನು ಬೇತಾಳವಾಗಿ ಬಂದು ನನ್ನ ಕಾಡೋದ್ರಲ್ಲಿ ಸಂಶಯ ಇಲ್ಲ.

ಆದ್ರೆ ಇತ್ತೀಚೆಗೆ ನನ್ನ ಯೋಚನಾ ಲಹರಿ ಹೀಗೆ ಹರಿಯುತ್ತಿದೆ -- ನಾನು ಕೊಡೆ ಕೈಂಕರ್ಯಕ್ಕೆ ಒಗ್ಗಿ ಹೋಗಿದೀನಿ. ಬಹುಶಃ ಇವನು ಹೀಗೆ ಕೊಡೆ ಸೇವೆ ಮಾಡದೆ ಹೋದ್ರೆ, ನನಗೆ ಹುಚ್ಚೆ ಹಿಡಿಯುವುದೇನೋ. ಏಕತಾನದಲ್ಲಿ ನನ್ನ ತಲೆ ಮೇಲೆ ಏನೂ ಸ್ಪರ್ಶಿಸದಿದ್ದರೆ ನನ್ನ ತಲೆ ಒಳಗಿನಿಂದ ಸೀಳುವುದೋ ಏನೂ? ಒಂದು ವೇಳೆ ಈತ ಸತ್ತು ಹೋದರೆ ಏನು ಗತಿ? ಸುಮ್ಸುಮ್ನೆ ಆರಂಭಗೊಂಡಿದ್ದು ಈಗ ನನಗೆ ಅನಿವಾರ್ಯತೆ ಆಗಿದೆ.ಇವನು 'ಗೊಟಕ್' ಅಂದ ಮೇಲೆ ನನಗೆ 'ಟುಪುಕ್' ಆನೋವ್ರು ಯಾರದ್ರು ಬೇಕೆ ಬೇಕು. ಶಿಫ್ಟ್ ಸಿಸ್ಟಂನಲ್ಲಿ ಯಾರದ್ರು ಪಾರ್ಟ್ ಟೈಂ ಕೊಡೆಸೇವೆ ಮಾಡೋವ್ರು ಸಿಕ್ಕಿದ್ರೆ ನನಗೆ ತಿಳಿಸಿ, ಪ್ಲೀಸ್.

'''''

ಮತ್ತೊಂದು ರೂಪಾಂತರದ ಪ್ರಯತ್ನ.

Credits and Courtesy:

Based on a short story,

'There's a Man in the Habit of Hitting Me on the Head with an Umbrella'

by Argentine author, Fernando Sorrentino.

Translated to English by: Clark M. Zlotchew.
Translated and adapted to Kannada by : yours truly, Srikanth Venkatesh.

The characters and certain scenarios have been Indianised to induce contextual humour. The Plot and theme, however are based on the original work.

'''''''''''''''''''''''''''''''''''''''''

ನಾನೇ ನನ್ನ ಗಂಡ

ಯಾಕಾಗಬಾರದು? ಗುಂಡಾ ಜೋಯಿಸರು ಮೀನಾ-ಮೇಷ ಎಣಿಸಿ, ಒಂಟಿಕೊಪ್ಪಲ್ ಪಂಚಾಂಗ ಮುದುರಿಟ್ಟು, ಹಸಿರು ನಿಷಾನೆ ಕೊಟ್ಟೇಬಿಟ್ಟರು. ಈ ಮೊದಲೇ ವರವರಮೂರ್ತಿ ತನ್ನ ಜಾತಕವನ್ನು ಕಂಕುಳಲ್ಲಿ ಇಟ್ಟುಕೊಂಡು, ತನ್ನ ಮದುವೆ ತಾನೆ ಮಾಡ್ಕೊಳ್ಳೋದಕ್ಕೆ ಶಾಸ್ತ್ರಿಗಳ ಹತ್ತಿರ ಬಂದಿದ್ದ. ವಿಪರ್ಯಾಸ ಏನಪ್ಪ ಅಂದ್ರೆ, ಅವನು ಅವನನ್ನೇ ಮದುವೆ ಆಗಬೇಕಂತೆ. ಜೋಯಿಸರು ಪಾಪ ಕಕ್ಕಾಬಿಕ್ಕಿಯಾಗಿ, ತಾಮ್ರದ ಬಿಂದಿಗೆಯ ತಣ್ಣನೆ ನೀರು ಕುಡಿದು, ಸ್ವಲ್ಪ ಸುಧಾರಿಸಿಕೊಂಡ್ರು. ತಮ್ಮ ಜಾಯಮಾನದಲ್ಲೇ ಇಂಥ ವರ'ಸಾಮ್ಯ' ನೋಡೋ ಕ್ಯಾಮೆ, ಇದೇ ಮೊದಲ ಬಾರಿ ಅವರಿಗೆ ಬಂದದ್ದು. ಚೇತರಿಸಿಕೊಂಡಿದ್ದೆ, ಗುಂಡಾ ಜೋಯಿಸರು ತಮ್ಮ ಬಕ್ಕ ತಲೆ ಸವರಿಕೊಂಡು, 'ಮನುಸ್ಮ್ರುತಿ' ತಿರುವಿ ಹಾಕಿದರು. ದೇವ, ಅರ್ಶ, ಪ್ರಾಜಾಪತ್ಯ, ಗಂಧರ್ವ, ಪೈಶಾಚ್ಯ... ಊಂ ಹೂ .. ತನ್ನನ್ನು ತಾನೆ ಮದುವೆ ಆಗೋದು ಎಲ್ಲೂ ಇರ್ಲಿಲ್ಲ. ಆದರೆ, ಕೂಡದು ಅಂತ್ಲೂ ಎಲ್ಲೂ ಇರ್ಲಿಲ್ಲ ಬಿಡಿ. ಇನ್ನು ಅವನದ್ದೆ ಜಾತಕ ಆಗಿರೋದ್ರಿಂದ ಗುಣ-ಗಣ ಸರಿಹೋಗೋದ್ರಲ್ಲಿ ಸಂಶಯವೇ ಇಲ್ಲ. ಸ್ವಗೋತ್ರ ಅಂತು ನಿಜ. ಅದ್ರೆ ಅದಕ್ಕೆ ಏನೋ ಉಪಾಯ,ವ್ಯವಸ್ಥೆ, ಅವಸ್ಥೆ ಮಾಡ್ತಾರೆ ಜೋಯಿಸ್ರು. ಪೆಟ್ಟಿ ಕೆಳಗೆ ಚೆನ್ನಾಗಿಯೇ ತಿನ್ಸಿದಾನೆ ಮೂರ್ತಿ. ಎರ್ಡೂ ಕಡೆ ಅವನೇ ಅಂದ್ರೆ ಸುಮ್ನೇನಾ, ಹೇಳಿ ಮತ್ತೆ.

ಅಂತೂ ವರವರಮೂರ್ತಿ ಲಗ್ನಪತ್ರಿಕೆ ಮುದ್ರಿಸಿಯೇ ಬಿಟ್ಟ. ಅದರ ಮೇಲೆ 'ಮದುವೆಯ ಮಮತೆಯ ಕರೆಯೋಲೆ' ಅಂತ ಬೇರೆ ಉತ್ಸಾಹದಲ್ಲಿ ಬರ್ಸಿದ್ದ. ಮೊದಲ ಸಾಲಿನಲ್ಲಿ 'ಶ್ರೀ ವೇಂಕಟೇಶ್ವರಸ್ವಾಮಿ ಪ್ರಸನ್ನ' ಅಂತ ಇತ್ತು. ಪ್ರಸನ್ನತೆ ವಿಷಯ ನನಗೆ ಗೊತ್ತಿಲ್ಲ, ಆದರೆ ದೇವರ ಮುಖ ಸ್ವಲ್ಪ ಸಣ್ಣ ಆಗಿದ್ದಂತೂ ನಿಜ. ಏಡುಕೊಂಡಲಪ್ಪನ ಫೇಸ್ಕಟ್, ಫಸ್ಟ್ ಟೈಂ ಗಾಬರಿ ಆಗಿರೊ ಹಾಗೆ ಫೀಲಿಂಗು. ಈ ರೀತಿ ಸ್ವವಿವಾಹ ಲಗ್ನಪತ್ರಿಕೆ ಮೇಲೆ ವೆಂಕಪ್ಪನ ಪಟ ಅವತರಿಸಿರೋದು ಇದೇ ಮೊದಲು. ಮೊದಲ ಬಾರಿ ಅಲ್ವಾ; ಹಾಗೆ, ಬೇಸ್ತು ಬಿದ್ದದ್ದ ಬಾಲಾಜಿ. ಮುದ್ರಣ ಮಾಡೋವ್ನು ಒಂದು ಸಣ್ಣ ತಪ್ಪು ಮಾಡಿದ್ದ ಪ್ರಿಂಟಿಂಗ್ನಲ್ಲಿ. 'ಚಿ.ಸೌ.ಹಾ.ಕುಂ.ಶೋ.' ಅಂತ ಒನ್ ಆಫ್ ದ (ಓನ್ಲಿ) ನೇಮ್ ಮುಂದೆ ಹಾಗೆಯೇ ಮರೆತು ಮುದ್ರಿಸಿದ .ಚಾಲಾಕಿ ವರವರ. ಗಮನಿಸಿದವನೇ, ಎರಡು ಹೆಸರು ಮುಂದೆಯೂ 'ಚಿ.ರಾ.' ಎಂದು ಹಾಕಿಸಿದ. ಮುದ್ರಕ ಎರಡು ಬಾರಿ 'ಚಿ.ರಾ' ಕಂಡು, ಕಿಟಾಆಆಆಆಆಆರ್! ಅಂತ ಚೀರುವುದೊಂದು ಬಾಕಿ.

ಆಶಾಡ ಅಮಾವಾಸ್ಯೆಯ ದಿನ ಸರಿಯಾಗಿ ರಾಹುಕಾಲಕ್ಕೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ಮದುವೆ. ಮುಹೂರ್ತಕ್ಕೆ ಮುಂಚೆ ಅಲ್ಲಿ ಕೊಂಚ ಕೋಲಾಹಲ ಏರ್ಪಟ್ಟಿತ್ತು. 'ಕೋಲಾಹಲ' ಅಂದ್ರೆ, ಜನ ಕುಡಿಯುತ್ತಿದ್ದ, ಕೋಲಾ ಮತ್ತು ಹಾಲು ಅಲ್ಲ. ನಿಜವಾದ ಕೋಲಾಹಲ. ಇತ್ತ ವರವರಮೂರ್ತಿ ಗೌರಿ ಪೂಜೆಗೂ ಕೂರಬೇಕು. ಅತ್ತ ಕಾಶಿಯಾತ್ರೆಗೂ ಹೊಗಬೇಕು. ವೇಳೆ ಮೀರ್ತ ಇದೆ ಅಂತ ಶಾಸ್ತ್ರಿಗಳು ಒಂದೇ ಸಮ ಗಲಾಟೆ. ರಾಹುಕಾಲದಲ್ಲಿ ಹುಡುಕಿ ಹುಡುಕಿ ಇಟ್ಟಿರೋ ಸ್ವವಿವಾಹ ವಿಚಿತ್ರ ಲಗ್ನ ಅಂದ್ರೇ ಏನು ಸಾಮಾನ್ಯಾನೇ? ಹೇಗೊ ಮದುವೆ ಆಗೋ ಗೀಳಿನಲ್ಲಿ ವರವರ,ಅಟ್ -ಏ-ಟೈಂ ಗೌರಿ ಪೂಜೆ - ಕಾಶಿಯಾತ್ರೆ ಒಟ್ಟೊಟ್ಟಿಗೆ ಮ್ಯಾನೇಜ್ ಮಾಡಿ, ಹಸೆಮಣೆ ಮೇಲೆ ಬಂದು, ಹಲ್ಲುಗಿಂಜುತ್ತ ಕೂತೇ ಬಿಟ್ಟ. ಕೊಂಡಂಭಟ್ಟ ಶಾಸ್ತ್ರಿಗಳು 'ಮಾಂಗಲ್ಯಂ ತಂತುನಾನೇನಾ' ಅನ್ನೋ ಮಂತ್ರಾನ ತುಸು ತೀಡಿ -- 'ಮಾಂಗಲ್ಯಂ ತನಗೆ ತಾನೇನಾ??' ,ಅಂತ ಪ್ರಶ್ನಾರ್ಥಕ ಚಿನ್ಹೆ ಹಾಕಿ, ವಾಲಗ ಊದಿಸಿಯೇ ಬಿಟ್ಟರು. ಹದಿನಾಲ್ಕು ಸುತ್ತು ಹಾಕಿ ವರವರ 'ಸಪ್ತಪದಿ' ಮುಗಿಸಿದ. ತನ್ನ ತಲೆ ಮೇಲೆ ತಾನೆ ಜೀರಿಗೆ ಬೆಲ್ಲ ಕೂಡಾ ಎರಚಿಕೊಂಡ. ಅವನು ಎರಚಿಕೊಂಡ್ಡಿದ್ದೇ, ಜನ ಮೈ ಪರಚಿ ಕೊಂಡ್ರು. ಅಂತರಪಟದ ಶಾಸ್ತ್ರಕ್ಕೆ ಏನು ಮಾಡೊದು ಅಂತ ತೋಚದೆ 'ಕೊಕ್ಕ್' ಕೊಟ್ರು ಶಾಸ್ತ್ರಿಗಳು.ಮದುವೆಯ ಸುದಿನದಂದು ಅವನ ಸ್ನೇಹಿತರು ಹೊಟ್ಟೆ ಬಿರಿದು ತಿನ್ನುವುದಿರಲಿ, ಹೊಟ್ಟೆ ಬಿರಿಯುವ ಹಾಗೆ ನಕ್ಕರು.

ಮದುವೆ ನಮೂದಿಸಲು ಲಾಯರ್ ಅಯ್ಯಂಗಾರಿ ಬಳಿ ಬಂದರು. ಅಣ್ಣನಾದ ಯಮನನ್ನು ಸೋದರಿ ಯಮಿ ಪರಿಣಯವಾಗುವಂತೆ ಕೇಳಿದ್ದುಂಟು. ಪುರಾಣದಲ್ಲಿ ಪುರಾವೆ ಇದೆ.ಸಾರಂಗ ತನ್ನ ಮಾತ್ರುಸ್ವರೂಪಿಣಿಯನ್ನು ವಿವಾಹವಾಗಲು ಇಚ್ಚಿಸಿದ್ದುಂಟು.ಇತಿಹಾಸದಲ್ಲಿ ದಾಖಲೆ ಇದ್ದಿರಬಹುದು. ಆದರೆ, ಲಾಯರ್ ಅಯ್ಯಂಗಾರಿಗೆ ಒಬ್ಬ ಮನುಷ್ಯ ಪ್ರಾಣಿ, ತನ್ನನ್ನು ತಾನೆ ಮದುವೆ ಆಗಬಹುದು ಅನ್ನೋ ಸಂಗತಿ, ವಿಷಯ, ಆಪ್ಷನ್ನು ಈಗ್ಲೇ ಗೋಚರವಾಗಿದ್ದು. ವೃಥಾ 'ಲಾ ಪಾಯಿಂಟ್' ಹಾಕದೆ ವಿವಾಹ ನಮೂದಿಸಿದರು. ಅಂತು ಮದುವೆ ಮುಗೀತು. ಮಧುಚಂದ್ರಕ್ಕೆ ಅಂತ ಮುನ್ನಾರ್ ಕಡೆ ಪಾದ ಬೆಳೆಸಿದ್ದಾಯ್ತು. ಒಳ್ಳೆ ದೊಡ್ಡ ಹೋಟೆಲ್ ನಲ್ಲಿ, ಡಬ್ಬಲ್ ಬೆಡ್ರೂಂ ಬುಕ್ ಕೂಡಾ ಮಾಡಿದ್ದಾಯ್ತು. ( ಶ್!!! ಯಾವ ಸೌಭಾಗ್ಯಕ್ಕೆ ಅಂತ ಮಾತ್ರ ಕೇಳ ಬೇಡಿ ಪ್ಲೀಸ್.)

ಮದುವೆ ಆಗಿದ್ದೇ ತಡ, ಮರುದಿನದಿಂದ ಪ್ರಜಾವಾಣಿ,ಕನ್ನಡಪ್ರಭ,ವಿಜಯ ಕರ್ನಾಟಕ ಎಲ್ಲ ಪತ್ರಿಕೆಗಳವರು ವರವರನನ್ನು ಸಂದರ್ಶಿಸಿದರು.ಹಾಯ್ ಬೆಂಗಳೂರ್ನಲ್ಲಿ ಸಹಾ 'ನಾನೇ ನನ್ನ ಗಂಡ' ಅಣಕ(ಣ);ಅಲ್ಲ ಅಂಕಣ, ಭುಗಿಲೆಬ್ಬಿಸಿತು. ಒಮ್ಮೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ವರವರ ಇಂತೆಂದನಂತೆ. ಅವನಿಗೆ ತನ್ನ ಅಭಿರುಚಿಗೆ ತಕ್ಕ ಸಂಗಾತಿಯೇ ಬೇಕಿತ್ತು. ಇಚ್ಚೆಯನರಿತು, ವಿಶ್ವಾಸವ ಸಂಪಾದಿಸಿ, ಸಹಸ್ಪಂದಿಸುವ ಒಡನಾಟಕ್ಕೆ ಹಾತೊರೆಯುತ್ತಿದ್ದ. ತನ್ನಲ್ಲಿರುವ ತನ್ನತನ, ತನ್ನನು ಬಿಟ್ಟು ಬೇರೆಲ್ಲೂ ದೊರೆಯದು ಎಂದು ತನ್ನನ್ನು ತಾನೆ ಮದುವೆಯಾದನಂತೆ. ಆದರೆ ಮದುವೆ ಯಾಕೆ ಆಗಬೇಕು? ಹಾಗೆ ತನ್ನ ಒಡನಾಟದಲ್ಲಿ ತಾನೆ ಇದ್ದುಬಿಡಬಹುದಲ್ಲ? ಎಂದು ಪ್ರಶ್ನಿಸಿದರೆ; ವರ್ಣಾಶ್ರಮ ಧರ್ಮ - ಗೃಹಸ್ಥಾ, ವಾನಪ್ರಸ್ಥ ಇನ್ನೂ ಏನೇನೋ ಹೇಳಿ ಸಮಜಾಯಿಷಿ ನೀಡುತ್ತಿದ್ದ. ವಿವಾಹದ ತರುವಾಯ,ಅಂತು ಇಂತು ಆರು ತಿಂಗಳು ಕಳೆಯಿತು. ಕಾಲಕ್ರಮೇಣ ವರವರನಿಗೆ ಪ್ರಕೃತಿದತ್ತವಾಗಿ ಸಂತತಿ ಬೆಳೆಸೋಣವೆನಿಸಿತು.ತನ್ನ ಸಮವಯಸ್ಕರ ಜೀವನ ನೋಡಿದಾಗ ಈ ಹಾತುರಿತ ಇಮ್ಮಡಿಯಾಯಿತು. ಆದರೆ ಸ್ವವಿವಾಹ ಪದ್ದತಿಯಲ್ಲಿ ಹೆರುವುದು ದುಸ್ಸಾಧ್ಯವಾದ ಸಂಗತಿ ಅಲ್ಲವೆ? ಇರಬಹುದೆನೋ. ಅದು ನಮಗೆ ನಿಮಗೆ ಹೇಗೆ ತಿಳಿಯಬೇಕು ಹೇಳಿ. ಈಗ ಉಳಿದದ್ದು ವಿಚ್ಚೀದನ ಮಾತ್ರವೇ. ಅದೊಂದೇ ಉಪಾಯ.

ಮತ್ತೆ ಲಾಯರ್ ಅಯ್ಯಂಗಾರಿ ಮೊರೆ ಹೊಕ್ಕ ವರವರ. 'ಲಾ ಪಾಯಿಂಟ್' ನರಸಿಂಹ ಅಯ್ಯಂಗಾರಿ ವಿಚ್ಛೇದನಕ್ಕೆ ೩ ವಿಧಾನ ಸೂಚಿಸಿದರು. ಒಂದು: ಗಂಡ - ಹೆಂಡಿರು ವರ್ಷ ಪರ್ಯಂತ ದೂರವಿರಬೇಕು. ಇಲ್ಲ, ಇಬ್ಬರ ನಡುವೆ ಹಿಂಸೆ ದೌರ್ಜನ್ಯ ನಡೆಯಬೇಕು. ಮೂರನೆಯದು ವ್ಯಭಿಚಾರ. ತನ್ನಿಂದ ತಾನೆ ದೂರವಿರಲಾರದು. ವಿಚ್ಚೀದನದ ಸಲುವಾಗಿ ಅವನಿಗೆ ಅವನೇ ಹಿಂಸಿಸಿ ಕೊಳ್ಳಲು ಮನಸ್ಸು ಒಪ್ಪಲಿಲ್ಲ. ಉಳಿದಿದ್ದು ವ್ಯಭಿಚಾರ ಒಂದೇ. ಆದ್ರೆ ಸಭ್ಯಸ್ಥ ಮೂರ್ತಿ, ಬಡಪಾಯಿಗೆ ಇವೆಲ್ಲ ತಿಳಿಯೋಲ್ಲ. ಅನುಭವ ಅಂತು ಕೇಳಲೇ ಬೇಡಿ, ಮೊದಲೇ ಇಲ್ಲ. ಈಗೇನು ಮಾಡೋದು? ಹುಣ್ಣಿಮೆ ದಿನ, ಪೋಲಿ ಪಾಪಣ್ಣನ ಜೊತೆ, ವರವರ ಪೇಟೆ ಆಚೆ ಮಂದಾರವತಿ ಮನೆ ಸೇರೊ ಸಂದರ್ಭಾನೂ ಬಂತು. ಅಲ್ಲಿ ನಡೆದ ಘಟನಾವಳಿಗಳ ಆಧಾರದ ಮೇಲೆ, ವಿಚ್ಚೀದನ ಕೂಡ ಭರ್ಜರಿಯಾಗಿ ಸಿಕ್ತು. ಈ ಸ್ವ-ವಿಚ್ಚೇದನದಿಂದ ಹಾಲು ಕುಡಿದಷ್ಟು ತೃಪ್ತಿ ಆಗಿದ್ದು ವರವರನ ತಾಯಿಗೆ ಮತ್ತು ಮಂದಾರವತಿಗೆ. ವರವರನನ್ನು ಗೌರವದಿಂದ ಕಂಡು, ಸಹಸ್ಪಂದಿಸಿ ವೇಶ್ಯೆಯಾದರೂ ವಿಶ್ವಾಸ ಗಳಿಸಿದ ಮಂದಾರವತಿ ಅವನನ್ನು (ಮರು)ವಿವಾಹವಾದಳು.

ಹರಕೆ ತೀರಿಸಲು, ಮುದ್ದಾದ ಅವಳಿ-ಜವಳಿ ಮೊಮ್ಮಕ್ಕಳನ್ನು ಹೊತ್ತು, ಮಂದಾರವತಿಯ ಅತ್ತೆ ತಿರುಪತಿಗೆ ಹೊರಟು ನಿಂತಿದ್ದರು. ಅಂದು, ಲಗ್ನಪತ್ರಿಕೆಯ ಮೇಲೆ ಗಂಟು ಮುಖ ಹಾಕಿಕೊಂಡಿದ್ದ ವೆಂಕಣ್ಣನ ಚಹರೆ ಈಗ ಸ್ವಲ್ಪ ಚೇತರಿಸಿದೆ. ತಿರುಮಲೆಯೆಡೆಗೆ ಮುಖಮಾಡಿ ನಿಂತಿದ್ದ ಬಸ್ಸಿನ ಮುಂಭಾಗದಲ್ಲಿದ್ದ ಪಟದಲ್ಲಿ, ಮಂದಸ್ಮಿತನಾಗಿ ಮಂದಾರವತಿಯ ಮಕ್ಕಳನ್ನು ಶ್ರೀನಿವಾಸ ಸ್ವಾಮಿ ಹರಸುತ್ತಿದ್ದರು. ಏಡುಕೊಂಡಲವಾಡ ವೆಂಕಟರಮಣ ಗೋವಿಂದ, ಗೋವಿಂದ!!!

Credits and Courtesy:

Based on a short story, 'The Man Who Married Himself' by Charlie Fish. The characters and certain scenarios have been indianised to induce contextual humour. The Plot and theme, however are based on the original work.

Translated on June 14 2007.

Friday, October 19, 2007

ಹೊಸ ಇತಿಹಾಸ

ದಂಪತಿಗಳಿಬ್ಬರು ಮಾರ್ಗಮಧ್ಯದಲ್ಲಿ ದಣಿವಾರಿಸಿಕೊಳ್ಳಲು ನಿಂತರು. ಊರಿಂದ ಊರಿಗೆ ಅಲೆಮಾರಿಗಳಾಗಿ ಅಲೆದು ಅಲೆದು ಬೇಸತ್ತು ಬಸವಳಿದ್ದಿದ್ದರು. ಬೊಳು ರಸ್ತೆಯ ಬದಿಯಲ್ಲಿದ್ದ ಗೋಶಾಲೆಯಲ್ಲಿಯೇ ಈ ರಾತ್ರಿ ಕಳೆಯ ಬೇಕು.ಆಕೆಗೆ ನೋವು ಕಾಣಿಸಿಕೊಳ್ಳವ ಸೂಚನೆಗಳು ಕಂಡವು. ಎಲ್ಲವೂ ಪೂರ್ವನಿರ್ಧಾರಿತವೆಂಬಂತೆ. ಪ್ರಸವಕ್ಕೆ ಇದುವೇ ಸೂಕ್ತ ದೇಶ ಕಾಲ ಸಂಯೋಗವೆನೋ. ನಭಃಮಂಡಲದಲ್ಲಿ ಕಾಂತಿಯುತವಾಗಿ ಹೊಳೆಯುತ್ತಿರುವ ತಾರಾದೀಪದ ಬೆಳಕಿನ ತೇಜದಲ್ಲಿ ಆಕೆ ಚೀರುತ್ತಿದ ಹೆದ್ದೆರೆಯ ಗದ್ದಲದಲ್ಲಿ, ಸಣ್ಣ ಕಂದಮ್ಮನ ಪ್ರಥಮ ಜೀವಾತ್ಮಾಭಿವ್ಯಕ್ತಿ! ತಂದೆ ಗಾಬರಿಯಿಂದ ನವಜಾತ ಶಿಶುವಿನತ್ತ ನೋಡಿದ. ಈ ಬಾರಿ ಮತ್ತೆ ಅದೇ ತಪ್ಪು ನಡೆಯಲು ಅನುವು ಮಾಡಿಕೊಡುವುದಿಲ್ಲ. ಬಿಸಿ ಕಾಯಿಸಲೆಂದು ಹೊಸೆದ್ದಿದ್ದ ಸಮಿತ್ತುಗಳಲ್ಲಿ ಎರಡನ್ನು ತೆಗೆದು, ಮಂಡಲಾಕಾರದಲ್ಲಿ ಪೋಣಿಸಿ, ಮಗುವನ್ನು ಶಿಲುಬೆಗೆ ಏರಿಸಿಯೇ ತೀರಿದ. ಬಾಂಧವರೆಲ್ಲ ಒಂದೆಡೆ ಸೇರಿ, ಗೋ-ಕರುಗಳೊಡನೆ ಮುಂದಿನ ಊರಿನತ್ತ ಪಾದಬೆಳೆಸಿದರು.


Based on a (very?) Short Story by João Anzanello Carrascoza
Title: Sign of These Times.
Translated from the Portuguese by Renato Rezende
Adapted to Kannada: Your's truly ಶ್ರೀ ಸಾಮಾನ್ಯ.
.

Sunday, October 14, 2007

ಮರಳು ಮತ್ತು ನೊರೆ




Sand and Foam by Kahlil Gibran

I am forever walking upon these shores,
Betwixt the sand and the foam,
The high tide will erase my foot-prints,
And the wind will blow away the foam.
But the sea and the shore will remain Forever


ಶ್ರೀ ಸಾಮಾನ್ಯನ ಭಾವಾನುವಾದ:

ಕಡಲ ತೀರದನವರತದ ನಿತ್ಯಚಾರಣ
ಮರಳಮಾರಿಗೆ ನೊರೆಯ ಮಂದಸಿಂಚನ
ಹೆದ್ದೆರೆಯು ಹೀರಿರಲು ಹೆಜ್ಜೆಯಾ ಗುರುತು
ತಂಪೆಲರು ತಾಗುತಲೆ ತೆರೆಯು ಹಿಂಜರಿತು

ಕಡಲಿನೊಡಲಿಗೆ ತೀರದೊಲುಮೆಯ ಸ್ಪಂದನ
ಇದುವೆ ನಿತ್ಯ ನೂತನ. ಚಿರಂತನ! ಜೀವನ!

ಮೂಲ: ಜಿಬ್ರಾನ್
- Translated by Srikanth V on April 05 2007.




Photos clicked on the morning of Jan 26 2008,Palm Beach,Florida

ಒಪ್ಪಿಗೆ

ಒಮ್ಮೆಮ್ಮೆ ಹೀಗೆ.
ಒಪ್ಪಲು ಬಲವಾದ
ಕಾರಣವಿಲ್ಲದಿದ್ದರೂ,
ಒಪ್ಪದಿರಲು
ಸಹಾ
ಕಾರಣಗಳಿಲ್ಲದೆ,
ಕಡೆಗೆ ಒಪ್ಪಿಯೇ ಬಿಡುತ್ತೇವೆ.
--

ಸುಮ್ನೆ ಹಾಗೆ, ತಲೆ ಕೆಟ್ಟಾಗ ಗೀಚಿದ್ದು.

Friday, October 12, 2007

ನನ್ನರಸಿ ನರಸಿ

ನನ್ನರಸಿ,
ನರಸಿಯನರಸಿ
ಅರಿತವಳ ಪರಿಯ
ನಾ ವರಿಸಿ,
ಅವಳಾಂತರ್ಯವನಾವರಿಸಿ
ಅರಿಸಿನದೆ ಸಿಂಗರಿಸಿ
ಸಿಂಧೂರವ ಹಣೆಗಿರಿಸಿ
ನನ್ನರಗಿಣಿಯನರೆಘಳಿಗೆ
ಅಗಲದೆಲೆ ನೆನೆನೆನೆದು
ಅಂದದಲಿ ಮುದದ
ಮಕರಂದ ಹಂದರದೆ
ನಿಂದು ನಲಿಯುವ
ಸುಖ ಸ್ವಾರ್ಥ ನನದೈ.
----

Scribbled and dribbled on 12-October-2007 14:10 to (around) 15:50. San Jose, CA.

ನಾಡಹಬ್ಬ













ಎಲ್ಲರಿಗೂ ನವರಾತ್ರಿ ಶುಭಾಶಯಗಳು.

--------------------------------
ಕವನ : ನಾಡಹಬ್ಬ
ಬರ್ದಿದ್ದು : ಶ್ರೀಕಾಂತ್
--------------------------------

ಚೆಲುವ ನಾಡ,ನಾಡ ಹಬ್ಬ ಬಂದಿತಿದೊ ಗೆಳೆಯ
ಸಿಂಗರಿಸಿಹ ಸಾಲುಗೊಂಬೆ ಸ್ವರ್ಗವೆನಿಸೆ ಇಳೆಯ

ಸಂಗೀತದ ಸಿರಿಯ ತವರು,ಕಾಣು ಕಲೆಯ ನೆಲೆಯ
ಮುಸ್ಸಂಜೆಯ ಮಧುರ ಸ್ವರದ ಮಂದ್ರಶೃತಿಯ ಅಲೆಯ

ಮಲ್ಲರಾಳೊ ಮಣ್ಣಮಹಿಮೆ ಮೆರೆಯೊ ವೀರ ವಲಯ
ಅಂಬಾರಿಯ ಅಂದದಕರಿ ಆನಂದದ ನಿಲಯ

ಅರಮನೆಯದು ಅಮಿತ ಪ್ರಭೆಯ ಚೆಲ್ಲೊ ಅರಸರಾಲಯ
ತಾಯ ಕೃಪೆಯ ಕೊರು ತೊಡಿಸಿ, ಹೊನ್ನುಡಿಗಳ ಮಾಲೆಯ
----------------------------------

Sometime during Dasara 2006 ಬರ್ದಿದ್ದು.'ತಾಯೇ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ', ರೀತಿ ಈ ಮೇಲಿನ ಕವನವನ್ನು ಹಾಡಿದರೆ,ಗೇಯ ಗುಣ ಗೋಚರ ಆಗತ್ತೆ.

Sunday, October 07, 2007

ಸ್ವಾತಿ ತಿರುನಾಳ್ ಮಹಾರಾಜರ ನವರಾತ್ರಿ ಕೃತಿಗಳು




ಇನ್ನು ಕೆಲವೇ ದಿನಗಳಲ್ಲಿ ದಸರ. ನವರಾತ್ರಿ ಸಂಭ್ರಮವೆಂದರೆ ನಮ್ಮೆಲ್ಲರಿಗೂ ನೆನಪಿಗೆ ಬರುವುದು ಮೈಸೂರು ದಸರೆಯ ವಿಜೃಂಬಣೆ. ಅದೇ ರೀತಿ ನೆರೆಯ ಕೇರಳದಲ್ಲಿ ತಿರುವನಂತಪುರದ ರಜಾಶ್ರಯದಲ್ಲಿ ಸಂಭ್ರಮದಿಂದ ನವರಾತ್ರಿ ಆಚರಿಸುವ ಐತಿಹ್ಯ, ಪ್ರತೀತಿ ಇದೆ. ಮಹಾರಾಜ ಸ್ವಾತಿ ತಿರುನಾಳರು ತ್ರಿಮೂರ್ತಿಗಳ ಸಮಕಾಲೀನರು.ಶ್ರೀಯುತರು ಬಹುಭಾಷಾ ಪರಿಣಿತರು ಮತ್ತು ಸಂಗೀತ ವಿದ್ವಾಂಸರು. ನವರಾತ್ರಿಯ ಪ್ರತಿ ಸಂಜೆಯೂ ಅರಮನೆಯ ಉತ್ಸವದಲ್ಲಿ ಒಂದು ಕೃತಿ ಹಾಡಲು ಅನುವಾಗುವಂತೆ ವಿಶಿಷ್ಟ ಕೃತಿಗಳನ್ನು ರಚಿಸಿ ಒಂದು ಪರಂಪರೆಗೆ ಬುನಾದಿ ಹಾಡಿದರು.ಈ ನವರಾತ್ರಿ ಕೃತಿಗಳ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ.

ಕಂಬ ರಾಮಾಯಣ ಬರೆದ ತಮಿಳು ಕವಿ ಕಂಬರು, ಪದ್ಮನಾಭಪುರದಲ್ಲಿನ ಸರಸ್ವತಿ ದೇವಿಯನ್ನು ಅರಾಧಿಸುತ್ತಿದ್ದರಂತೆ. ಅವರು ಅನಾರೋಗ್ಯದಿಂದ ಬಳಲುತ್ತಿದಾಗ, ಚೇರ ದೊರೆಯ ಬಳಿ ಬಂದು, ಪದ್ಮನಾಭಪುರದ ದೇವಳದಲ್ಲಿ ಪ್ರತಿ ಸಂವತ್ಸರವೂ ನವರಾತ್ರಿ ವಿಷೇಶ ಪೂಜೆ ನಡೆಸಿಕೊಡಬೇಕಾಗಿ ಮೊರೆ ಹೊಕ್ಕರಂತೆ. ಅಂದಿನಿಂದ ಪ್ರತಿ ವರ್ಷವೂ ನವರಾತ್ರಿ ಉತ್ಸವ ನಡೆಯುತ್ತಿದೆ. ಮಹಾರಾಜಾ ಸ್ವಾತಿ ತಿರುನಾಳರ ಕಾಲದಲ್ಲಿ ರಾಜಧಾನಿಯು ಪದ್ಮನಾಭಪುರದಿಂದ ತಿರುವನಂತಪುರಕ್ಕೆ ವರ್ಗವಾಯಿತು. ಕವಿ ಕಂಬರಿಗೆ ಕೊಟ್ಟಮಾತು ತಪ್ಪದಂತೆ ನವರಾತ್ರಿ ಉತ್ಸವ ಸಮಯದಲ್ಲಿ ಪದ್ಮನಾಭಪುರದ ಮೂಲವಿಗ್ರಹವನ್ನು ತಿರುವನಂತಪುರಕ್ಕೆ ಸಂಭ್ರಮದ ಮೆರವಣಿಗೆಯಲ್ಲಿ ಕರೆತಂದು ನವರಾತ್ರಿ ಉತ್ಸವ ನಡೆಸಲಾಗುತ್ತದೆ. ಮೂಲಮುರ್ತಿಯನ್ನು ಪದ್ಮನಾಭಪುರದಿಂದ ತರುವುದರಿಂದ ಅಲ್ಲಿ ಪ್ರಾತಿನಿಧಿಕ ದೀಪವನ್ನು ಇರಿಸಲಾಗುತ್ತದೆ.

೧. ದೇವಿ ಜಗತ್ ಜನನಿ - ಶಂಕರಾಭರಣಂ - ಆದಿತಾಳ
೨. ಪಾಹಿಮಾಂ ಶ್ರೀ ವಾಗೀಶ್ವರಿ - ಕಲ್ಯಾಣಿ - ಆದಿತಾಳ
೩. ದೇವಿ ಪಾವನೆ - ಸಾವೇರಿ - ಆದಿತಾಳ
೪. ಭಾರತಿ ಮಾಮವ - ತೋಡಿ - ಆದಿತಾಳ
೫. ಜನನಿ ಮಮವಮೇಯೆ - ಭೈರವಿ - ಮಿಶ್ರ ಛಾಪು ತಾಳ
೬. ಸರೋರುಹಾಸನ ಜಾಯೆ - ಪಂತುವಾರಳಿ - ಆದಿತಾಳ
೭. ಜನನಿ ಪಾಹಿ - ಶುದ್ಧಸಾವೇರಿ - ಮಿಶ್ರ ಛಾಪು ತಾಳ
೮. ಪಾಹಿ ಜನನಿ ಸಂತಾರಂ - ನಟ್ಟಕುರಂಜಿ - ಮಿಶ್ರ ಛಾಪು ತಾಳ
೯. ಪಾಹಿ ಪರ್ವತ ನಂದಿನಿ - ಆರಭಿ - ಆದಿತಾಳ

ದೀಕ್ಷಿತರು ತಮ್ಮ ನವಾವರಣ ಕೃತಿಗಳಲ್ಲಿ ಎಂಟು ವಿಭಕ್ತಿ ಪ್ರತ್ಯಯಗಳನ್ನು ಉಪಯೋಗಿಸಿದರೆ,ತಿರುನಾಳರು ನವರಾತ್ರಿ ಕೃತಿಗಳಲ್ಲಿ ಸಂಭೋದನಾ ವಿಭಕ್ತಿ ಮತ್ತು ಪ್ರಥಮಾ ವಿಭಕ್ತಿಯನ್ನು ಮಾತ್ರ ಬಳಸಿರುತ್ತಾರೆ.ಮೊದಲ ಆರು ಕೃತಿಗಳು ಚೌಕ ಕಾಲದವುಗಳಾಗಿದ್ದು, ಉಳಿದ ಮೂರು ಮಧ್ಯಮ ಗತಿಯನ್ನು ಅನುಸರಿಸುತ್ತವೆ.ಒಂಬತ್ತು ದಿನಗಳು ನಡೆಯುವ ದೇವಿ ಪೂಜೆಯಲ್ಲಿ ಮೊದಲ ಮೂರು ದಿನ ದೇವಿ ಸರಸ್ವತಿ ಸ್ವರೂಪಿಣಿಯಾದರೆ, ತದನಂತರ ಮೂರು ದಿನಗಳು ಲಕ್ಷ್ಮಿ ಆರಾಧನೆ. ಕೊನೆಯ ಮೂರು ದಿನ ದುರ್ಗಾವಂದನೆ. ಈ ಕೃತಿಗಳನ್ನು ದೇವಿಗೆ ಅರ್ಪಿಸಲಾಗುತ್ತದೆ. ಪೂರ್ವದಲ್ಲಿ ಮುಲ್ಲಾಮುಡು ಭಾಗವತರ ವಂಶಸ್ತರು ಮಾತ್ರ ಈ ಹಾಡುಗಳನ್ನು ಮೂಲ ಉತ್ಸವದಲ್ಲಿ ಹಾಡುತಿದ್ದರು. ಮುಖ್ಯ ಸಂಗೀತ ವಿದ್ವಾಂಸರು ಮುಂದಾಳತ್ವ ವಹಿಸಿದರೂ, ಹಲವಾರು ವಿದ್ವಾಂಸರು ರಾಗಾಲಾಪನೆ, ನೆರವಲ್, ಕಲ್ಪನಾಸ್ವರಗಳು ಹೇಗೆ ಮುಂದುವರಿಸುವ ವಾಡಿಕೆ ಇದೆ. ತಿರುನಾಳರ ಕೃತಿಗಳು ಈ ದಿನ ಜನ ಮನದಲ್ಲಿ ನೆಲೆಸಬೇಕಾದರೆ ಮುಲ್ಲಮುಡು ಭಾಗವತರ ಕೊಡುಗೆ ಅತ್ಯಮೂಲ್ಯ. ಕಾಲಕ್ರಮೇಣ ಇತರ ಘನವಿದ್ವಾಂಸರನ್ನು ಆಹ್ವಾನಿಸಿ ನವರಾತ್ರಿ ಕೃತಿಗಳನ್ನು ಹಾಡುವ ಪ್ರತೀತಿ ಪ್ರಾರಂಭವಾಯಿತು. ಸಂಗೀತ ಕಚೇರಿಯು ಸಂಜೆ ೬.೦೦ ರಿಂದ ೮.೩೦ ಕಾಲದಲ್ಲಿ ನಡೆದು, ವಿಷೇಶವೇನೆಂದರೆ ಅಂತ್ಯದಲ್ಲಿ ಕರತಾಡನವಿರುವಿದಿಲ್ಲ.ದೇವಿಗೆ ಅರ್ಪಣೆಯೆಂಬ ಭಾವದಲ್ಲಿ ಹಾಡುವುದರಿಂದ ಇತರೆ ಗೋಷ್ಠಿಗಳ ಹಾಗೆ ಕರತಾಡನ ಕೂಡದು.



---
http://www.sangeethapriya.org/~gvr/navarathri-swathithirunal/
---

Saturday, October 06, 2007

ಶ್ರೀಕೃಷ್ಣಾಯನು ನಾಮಮಂತ್ರ

ರಚನೆ: ಕೈವಾರ ಅಮರ ನಾರೇಯಣ ಅವರ ತೆಲುಗು ಕೃತಿ.
ಹಾಡುಗಾರಿಕೆ: ಮಂಗಳಂಪಲ್ಲಿ ಡಾ.ಬಾಲಮುರಳೀಕೃಷ್ಣ.
ರಾಗ: ? ( ಭಕ್ತಿರಂಜನಿ)

---
ಶ್ರೀಕೃಷ್ಣಾಯನು ನಾಮಮಂತ್ರ

ಶ್ರೀಕೃಷ್ಣಾಯನು ನಾಮಮಂತ್ರ ರುಚಿ ಸಿದ್ಧಿಂಚುಟನಾಕೇನ್ನಟಿಕೋ |
ಶ್ರೀಗುರುಪಾದಾಬ್ಜಂಬುಲು ಮತಿಲೋ ಸ್ಥಿರಮುಗ ನೆಲಿಚೇದೆನ್ನಟಿಕೋ ||

ಮರವಕ ಮಾಧವು ಮಹಿಮಲು ಪೊಗಡೆ ಮರ್ಮಮುದೆಲೆಸೇದೆನ್ನಟಿಕೋ
ಹರಿಹರಿಹರಿ ಹರಿನಾಮಾಮ್ರುತ ಪಾನಮುಚೆಸೆದೆನ್ನಟಿಕೋ ||

ಕಮಲಾಕ್ಷುನಿ ನಾ ಕನ್ನುಲು ಚಲ್ಲಗ ಕನಿ ಸೇವಿಂಚೇದೆನ್ನಟಿಕೋ
ಲಕ್ಷಣಮುಗ ಶ್ರೀಲಕ್ಷ್ಮೀರಮಣುನಿ ದಾಸುಡನೈಯ್ಯೇದೆನ್ನಟಿಕೋ ||

ಪಂಚಾಕ್ಷರಿ ಮಂತ್ರಮು ಮತಿಲೋ ಪಡಿಯಿಂಚುಟನಾಕೆನ್ನಟಿಕೋ
ಆದಿಮೂರ್ತಿ ಶ್ರೀ ಅಮರ ನಾರೇಯಣ ಭಕ್ತುಡನ್ನಯ್ಯೇದೆನ್ನಟಿಕೋ ||

---



---

ಮಮ ಹೃದಯೇ ವಿಹರ ದಯಾಳೋ




ಮಮ ಹೃದಯೇ ವಿಹರ ದಯಾಳೋ

ರಾಗ: ರೀತಿಗೌಳ
ತಾಳ: ಖಂಡ ತ್ರಿಪುಟತಾಳ
ರಚನೆ: ಮೈಸೂರು ವಾಸುದೇವಾಚಾರ್ಯರು.
ಹಾಡುಗಾರಿಕೆ: ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಆರ್.ಕೆ. ಶ್ರೀಕಂಠನ್
ರಾಗಭಾವ: ಕರುಣಾರಸ ಜನಕ ರಾಗ.

ಮಮ ಹೃದಯೇ ವಿಹರ ದಯಾಳೋ, ಕೃಷ್ಣ
ಮಂಧರಧರ ಗೋವಿಂದ ಮುಕುಂದ || ಪ ||

ಮಂಥದಾಮ ಸುವಿರಾಜಿತ ಶ್ರೀಕೃಷ್ಣ
ಮಂಧಹಾಸ ವದನಾರವಿಂದ ನಯನಾ ||

ಯದುಕುಲ ವಾರಿಧಿ ಪೂರ್ಣಚಂದ್ರ
ವಿಧುರವಂದಿತ ಪಾದ ಗುಣಸಾಂದ್ರ ||

ಮದನಜನಕ ಶ್ರೀಕರ ಮಹಾನುಭಾವ
ಸದಯ ಹೃದಯ ಶ್ರೀವಾಸುದೇವ ಸದಾ ||

---
URL : http://www.esnips.com/doc/6335b378-3b48-4e9a-aeea-dbcada4eb22e/mamahRudayE.mp3
---

Get this widget | Track details | eSnips Social DNA

Sunday, September 30, 2007

ಹುಡುಕಾಟ

ಇತ್ತೀಚೆಗೆ,
ನನ್ನಂತರಂಗದೆ
ಹೊಮ್ಮುತಿರುವ ಅಲೆ:
ಜೀವನ(ದ)ಅರಿ
ಸಿಕೆ.
ಅಭಿ
ವ್ಯಕ್ತಿ ಸ್ವಾತಂತ್ರ್ಯ.
ಅನಿವಾರ್ಯತೆ!
ಎಡೆಬಿಡದ ಹುಡು
ಕಾಟ
---

Sunday, August 19, 2007

ಕಬ್ಬಿಣದ ಮಲ್ಲಿಗೆ

--
ಏಳುಸುತ್ತಿನ ಮಲ್ಲಿಗೆಯ ಸುತ್ತೇಳು ಸುತ್ತಿನ ಕೋಟೆ
ಕೋಟೆಯೊಳಗಿನ ರಾಣಿ ರಾಣಿಗವಳದೆ ಚಿಂತೆ

ವಿಧಿಹೊತ್ತ ಪಲ್ಲಕ್ಕಿ, ತೆರೆ ಹೊದೆದ ಪರದೆ
ಇದನೆಸಗಿದಾ ಕಪಟಿಗೆ ನನ ಶಾಪವಿರಲಿ
--

PS: ನೊಂದು ಬರೆದ ೨ ಸಾಲು. ಮುಂದೆ ಪದಗಳು ಹೊರಡಲಿಲ್ಲ.
remaining 2 lines written on 29 Nov 10:29PM

Saturday, August 11, 2007

ಆನಂದಮಯ ಈ ಜಗಹೃದಯ

ನನ್ನ ಹೃದಯಕ್ಕೆ ಹತ್ತಿರವಾದ, ನಿಜಕ್ಕೂ ನಿಜವೆನಿಸಿದ ಕುವೆಂಪುರವರ ಕವನ - ಆನಂದಮಯ ಈ ಜಗಹೃದಯ

ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ

ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ

ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನೋ ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ

ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ

ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ

Lyrics: KV Puttappa ;Music:C.Ashwath; Singer : Shimoga Subbanna.
http://www.udbhava.com/udbhava/songs.jsp?id=62

Sunday, July 22, 2007

ಬಣ್ಣಿಸಲೇನಿಹುದು

--
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ
ತಣ್ಣಗೆ ಕಣ್ಣ ಹಾಯಿಸಿ
ಸಾವಿರ ವರ ವರ್ಣವ
ಸವಿದು ಇರುವಿಕೆಯ
ಮರು ಘಳಿಗೆಯ
ಸ್ವಾನಂದದೆ ಕಳೆವುದಲ್ಲದೆ
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ.
--

ಸಂದರ್ಭ:
ನಾನು ನಯಾಗರಾಗೆ ಹೋಗಿದ್ದ ಸಂದರ್ಭ. ರುದ್ರ ರಮಣೀಯವಾದ ಜಲಪಾತದ ತೊಪ್ಪಲಲ್ಲಿ ತೆಪ್ಪದ ಯಾನ. 'ಮೈಡ್ ಆಫ್ ದ ಮಿಸ್ಟ್' ಅಂತ ಯಾನದ ಹೆಸರು. ಕನ್ನಡದಲ್ಲಿ 'ಮಲೆಗಳಲ್ಲಿ ಮಧುಮಗಳು' ಅಂತ ಕರೆಯೋಣವೇ? ಸರಿ, ಅಲ್ಲಿ ಬಂದಿದ್ದ ಯಾತ್ರಾರ್ತಿಗಳು ಫಾಲ್ಸ್ ನೋಡೊದಕ್ಕಿಂತ ಫೋಟೊ ತೆಗೆಯೋದ್ರಲ್ಲೇ ಇನ್ವಾಲ್ವ್ ಆಗಿದಾರೆ. ಬಹಳಷ್ಟು ಜನ ನವ ವಧೂವರರು ಬಂದಿದ್ದರು. ಅವರೂ ಸಹ ಪೋಸ್ ಕೊಡೋದ್ರಲ್ಲಿ ವ್ಯಸ್ತವಾಗಿದ್ದರು. ಅಲ್ಲಾ, ಅಷ್ಟು ಚೆನ್ನಾಗಿ ಭೋರ್ಗರೆದು ಉಕ್ಕಿ ಹರಿಯುತಾ ಇದೆ ನಯಾಗರಾ ತಾಯಿ, ಅದನ್ನು ಕಂಡು ಸಂತಸಗೊಂಡು, ಆ 'ಘಳಿಗೆ'ಯನ್ನು ಆಸ್ವಾದಿಸಬೇಕಲ್ಲವೆ? ಇನ್ನು ಒಬ್ಬ ಕವಿ ಮಹಾಶಯ, ಏನೋ ಕವನನೋ ಏನೋ ಗೀಚ್ಕೋತಾ ಇದ್ದ. ಅವನಿಗೆ ಕವಿಸಮಯ ಆಗ ಕೂಡಿ ಬಂದಿದೆ. ಅದನೆಲ್ಲ ನೋಡಿ, ನನ್ನ ಮನಸ್ಸಿಗೆ ಹೀಗೆನಿಸಿತು: 'ಇರುವಿಕೆಯ ಅರೆ ಘಳಿಗೆಯನ್ನು ಆಸ್ವಾದಿಸಿದರೆ ಆಯಿತು ಅಲ್ಲವೆ? ಬಣ್ಣಿಸಲೇನಿಹುದು? ಅಂತ'. ಮನೆಗೆ ಬಂದು ನನ್ನ ಈ ಸ್ವಗತ ಗೀಚಿದೆ.

Sidenotes:
ಅಲ್ಲಾ, ಜನ ಏನೋ ಫೋಟೊ ತೊಗೊತಾ ಇದ್ರು; ಕವನ ಬರ್ಕೋತ ಇದ್ರೂ, ಇನ್ನು ಏನೆನೋ ಅವರಿಗೆ ಇಷ್ಟ ಆದದ್ದು ಮಾಡ್ಕೋತಾ ಇದ್ರು. ಆದ್ರೆ ನಾನು ಏನು ಮಾಡ್ತಾ ಇದ್ದೆ ಅಲ್ಲಿ. ಮಂಗನ ಹಾಗೆ ಅವರಿವರ ಮುಖ ನೋಡ್ತಾ ಇದ್ನಾ? ಅದೇನೋ ಹೇಳ್ತಾರೆ ನೋಡಿ, 'Physcologist is a person, who, when a beautiful girl walks into a room, looks at all others in the room, rather than the pretty girl' ಅಂತ. ಹಾಗಾಯ್ತು.
--

Friday, June 29, 2007

ಆನೆ ಬಂತೊಂದಾನೆ

ಕಾರ್ತೀಕ ಮಾಸದ ತದಿಗೆ.ಕಚೇರಿಯಲ್ಲಿ ಫೈಲ್ ತಿರುವು ಹಾಕುತ್ತಿದ್ದಾಗ, ಏಡಗೈ ಕಿರುಬೆರಳಿಗೆ ಏನೋ ಒತ್ತಿದ ಹಾಗೆ ಆಯಿತು.ಒಮ್ಮೆ ಕಣ್ಣು ಹಾಯಿಸಿ ಸುಮ್ಮನಾದೆ. ಮೂರು ದಿನಗಳ ನಂತರ ಚಹಾ ಹೀರುತ್ತಾ, ಮತ್ತೊಮ್ಮೆ ಆ ಹುಣ್ಣನ್ನು ಗಮನಿಸಿದೆ.ಗಾತ್ರದಲ್ಲಿ ಬೆಳೆದ್ದಿತ್ತಾದರೂ ; ಅದರ ಆಕಾರ, ಗಮ್ಮತ್ತು ಪೂರ್ಣವಾಗಿ ತಿಳಿಯದಾಗಲಿಲ್ಲ.ಸರಿ ಸುಮಾರು ನಾಲ್ಕು ದಿನಗಳ ನಂತರ ಬೂದುಗಾಜಿನಲ್ಲಿ ನೊಡಿದರೆ ಅಂಗೈ ಹುಣ್ಣು ಒಂದು ಸಣ್ಣ ಆನೆಯ ಆಕಾರವನ್ನು ಹೋಲುವ ರೀತಿ ಹೊರಗೆ ಜೋತು ಬೀಳುತ್ತಿತ್ತು.ಮರಿ ಆನೆಯ ಬಾಲ ನನ್ನ ಕಿರುಬೆರಳಿನ ತುದಿಗೆ ಅಂಟಿಕೊಂಡು ವಾಲಾಡುತ್ತಿದ್ದಿತು. ಪುಟ್ಟ ಕುಂಜರ ನನ್ನ ಕಿರುಬೆರಳಿನ ಬಂದಿ. ಅದು ಏಷ್ಟೆ ಜಿಗುದು, ನಲಿದು, ಅಲುಗಾಡಿದರೂ ನನ್ನ ಇಚ್ಚಾನುಸಾರವೇ ಕುಣಿಯ ಬೇಕು.ಸಾಂದರ್ಭಿಕವಾಗಿ ನನ್ನ ಸ್ನೇಹಿತರಿಗೆ ನನ್ನ ಕಿರುಬೆರಳಿನ ಹುಣ್ಣನ್ನು ತೊರಿಸಿದೆ. ವೈದ್ಯರಲ್ಲಿ ತಪಾಸಣೆ ಮಾಡಿಸುವಂತೆ ಎಲ್ಲರೂ ಸೂಚಿಸಿದರು. ನಾನು ವೈದ್ಯರಲ್ಲಿ ಹೊಗುವ ಗೋಜಿಗೆ ಹೊಗಲಿಲ್ಲ. ಈ ಆನೆಯ ಆಕಾರದ ವೃಣವು ನನ್ನನು ಸೂರೆಗೊಂಡಿತ್ತು. ಅದು ಬೆಳೆಯುತ್ತಿರುವ ವಿಧಾನ; ಅದು ನನ್ನ ಕಿರುಬೆರಳಿಗೆ ಬಂದಿಯಾಗಿದ್ದರೂ, ಚಲಿಸಲು ಮಾಡುವ ಪ್ರಯತ್ನ, ಎಲ್ಲವೂ ನನಗೆ ಅಚ್ಚುಮೆಚ್ಚು. ನಾನು ಒಬ್ಬ ಭಾವುಕ ಪ್ರಾಣಿ. ನನ್ನ ಪುಟ್ಟ ಅನೆಯ ಜೊತೆ ಸ್ನೇಹ ಬೆಳೆಸಿದೆ. ಅದೂ ಸಹ ನನ್ನ ಸ್ನೇಹಕ್ಕೆ ಸಹಸ್ಪಂದಿಸಿತು. ದಿನವಿಡಿ ಅದರ ಜೊತೆ 'ಆನೆ ಬಂತೊಂದಾನೆ,ಯಾವೂರಾನೆ, ಬೀಜಾಪುರದಾನೆ' ಆಡ್ತಾ ಇದ್ದೆ. ಮತ್ತೆ, ಹಾಂ.. ಅದಕ್ಕೆ ಹುಲ್ಲು, ಸೊಪ್ಪು, ಗೆಡ್ಡೆ ಗೆಣಸು, ಸಿಹಿಕಬ್ಬು ಅಂದರೆ ಪಂಚಪ್ರಾಣ. ದಿನಾಲು ಆಟವಾಡಿದ ತರುವಾಯ ಈ ಎಲ್ಲ ತಿನಿಸುಗಳನ್ನು ಅದಕ್ಕೆ ಪ್ರೀತಿಯಿಂದ ನೀಡಿದೆ. ಒಮ್ಮೆಮ್ಮೆ ನನ್ನ ಸ್ನೇಹಿತ ಕಬ್ಬಿನ ತುಂಡುಗಳನ್ನು ತನ್ನ ಸೊಂಡಲಿನಿಂದ ಹಿಡಿಯಲು ಹಾತೊರೆಯುತ್ತಿದ್ದ. ನನ್ನ ಮುಷ್ಟಿಯನ್ನು ನಾನು ಗಟ್ಟಿಗಾಗಿ ಹಿಡಿದರೆ, ಬಡಪಾಯಿ ಗಜರಾಜ ಆಹಾರವನ್ನು ಏಟುಕಿಸಿಕೊಳ್ಳಲ್ಲು ಕಷ್ಟಪಡುತ್ತಿದ್ದ. ದಿನಗಳು ಉರುಳಿದಂತೆ ಈ ಗಜರಾಜ ನನ್ನದೇ ಆದ ಒಂದು ಅಂಶ ಎಂದು ಗೊಚರವಾಯಿತು -- ನನ್ನ ಅತ್ಯಂತ ದುರ್ಬಲ ಅಂಶ ಅನ್ನೋಣವೇ? . ಹೊರಜಗತ್ತಿನ ಸಂಪರ್ಕವೇ ನನಗೆ ಬೇಡವೆನಿಸಿತು. ನಾನು ಮತ್ತು ನನ್ನ ಬೀಜಾಪುರದ ಆನೆ. ಇದೇ ನನ್ನ ಜೀವನ. ಕಾಲಕ್ರಮೇಣ ನನ್ನ ಗಜರಾಜ ಆಡಿನ ಗಾತ್ರದಷ್ಟು ಬೇಳದು ನಿಂತ. ವಾಮನ ತ್ರಿವಿಕ್ರಮನಾದಂತೆ.ಆಡಿನ ಗಾತ್ರದ ಗಜರಾಜನೊಡನೆ ಆಟವಾಡುತ್ತ ನಾನೂ ಸಹ ಆಡಿನ ಗಾತ್ರವಾಗಿರುವೆನು ಎಂಬ ಅರಿವು ನನಗೆ ಕೂಡಲೇ ಮೂಡಲೇ ಇಲ್ಲ. ದಿನೆ ದಿನೆ ನಾನು ಕ್ಷೀಣಿಸುತ್ತಾ ಬಂದೆ. 'ಆಡೂ ಆನೆಯಾ ನುಂಗಿ, ಗೋಡೆ ಸುಣ್ಣಾವಾ ನುಂಗಿ,' ಎಲ್ಲೊ ಕೇಳಿದಂತಿದೆ, ಅಲ್ಲವೆ? ಬೆಳೆದು ನಿಂತ ಈ ಭಾಗವನ್ನು ನಾನು ಕಡಿದು ಹಾಕಲಾರೆ. ದಿನಾಲು ನಾನು ಮಂಚದಮೇಲೆ ಅಂಗಾತ ಮಲಗಿದರೆ, ಗಜರಾಜ ನೆಲದ ಮೇಲೆ ನನ್ನ ಬದಿಯಲ್ಲಿ ಮಲಗುತಿದ್ದ. ನನ್ನ ಏಡಗೈಯನ್ನು ನಾನು ಮಂಚದಿಂದ ತುಸು ದೂರ ಚಾಚಿ, ಗಜರಾಜ ಆರಾಮವಾಗಿ ನೆಲೆದ ಮೇಲೆ ಮಲಗಲು ಅನುವಾಗುವಂತೆ (ನಾನು) ಮಲಗಲು ಆರಂಭಿಸಿದೆ. ಇಂದು ಮುಂಜಾನೆ ನನಗೆ ಎಚ್ಚರವಾದಾಗ,ನಾನು ನನ್ನ ಬೀಜಾಪುರದ ಆನೆಯ ಮೇಲೆ ಜಂಬೂ ಸವಾರಿ ಮಾಡುತ್ತಿದ್ದೇನೆ. ಅಬ್ಬಾ, ಏನಾಶ್ಚರ್ಯ!!! ಅಂತು ಕಿರಿದಾದ ವೃಣವು ಬೆಳೆದು ನಿಂತು ಗಜಗಾತ್ರವಾಗಿ, ನನ್ನನ್ನು ತೃಣವೆನಿಸಿದೆ. ಈ ದಿನ ನಾನು ಅದರ ಬೆನ್ನಿನ ಮೇಲೆ ಸವಾರಿ ಮಾಡುವ ಸಣ್ನ ಜಂತುವಾಗಿರುವೆನು. ಹಾಗೆ, ಅದರ ಬೆನ್ನಿನಿಂದ ಉರುಳಿ, ಅದರ ಬಾಲವನ್ನು ಹಿಡಿದು ಜೋತು ಬೀಳುತಿರುವೆ.ಒಂದಾನೊಂದು ಕಾಲದಲ್ಲಿ, ವೃಣ ನನ್ನ ಕಿರುಬೆರಳು-ಮುಷ್ಟಿಯ ಆದೀನವಾಗಿದ್ದಂತೆ, ಈ ದಿನ ನಾನು ಅದರ ಕೈವಶವಾಗಿರುವೆ. ವಿಧಿವಿಲಾಸದ ಈ ಘಳಿಗೆಯಲ್ಲಿ ನಾನು ಆಶಾವಾದಿಯಾಗಿರುವೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಗಜರಾಜನಿಗೆ ಈಯ್ಯುವ ಕಾಯಿ - ತಿನಿಸು ನನಗೂ ಎಟುಕುವಂತಿದೆ.ನನಗೂ ಅದರಲ್ಲಿ ಪಾಲು ಸಿಗುತ್ತಿದೆ.ಮಗ್ಧರು. ತಮ್ಮ ನೆಚ್ಚಿನ ದೇವಳದ ಐರಾವತ ಕ್ಷೀಣಿಸುತಿರುವುದು ಅವರಿಗೆ ತಿಳಿಯುತ್ತಿಲ್ಲ. ಪಾಪ, ಇವರಿಗೇನು ಗೊತ್ತು, ಈ ಗಜರಾಜ ನನ್ನ ಇರುವಿಕೆಯಲ್ಲಿ ಅಡಕವಾಗಿರುವ ಭವಿಷ್ಯತ್ತಿನ ಗುಣ(ವಿ)ಶೇಷ ಮಾತ್ರವೆಂದು! ಹೌದು,ಈಗ 'ಗಜೇಂದ್ರಮೋಕ್ಷ'ಕ್ಕೆ ಕಾಯುತಿರುವೆ.

*************************************************

Credits and Courtesy:Based on a short story, 'Essence and Attribute' by Argentine author, Fernando Sorrentino. Translated to English by: Clark M. Zlotchew. Translated and adapted to Kannada by : yours truly, Srikanth Venkatesh.The characters and certain scenarios have been indianised to induce contextual humour. The Plot and theme, however are based on the original work.

*************************************************

Thursday, June 14, 2007

ಅವನು

ಹೊರಗೆ ಧಾರಾಕಾರವಾಗಿ ಮಳೆ. ಗರ್ಭಗುಡಿಗೆ ಬೀಗ ಬಿಗಿದು, ದೇವರನ್ನು ಪೂಜಾರಪ್ಪ ಕೂಡಿಟ್ಟು ಹೋಗಿದ್ದಾಗಿತ್ತು.ಮಳೆಗಾಲ ನೋಡಿ; ಘಂಟೆ ಏಳು ಹೋಡೆಯುವಷ್ಟರಲ್ಲಿ ಶಾಸ್ತ್ರಿಗಳು ಬೇಚ್ಚಗೆ ಮನೆ ಸೇರುತಿದ್ದರು. ತದನಂತರ ಭಗವಂತನಿಗೆ ಏಕಾಂತ ಸೇವೆಯೇ ಗಟ್ಟಿ. ಈತ ನಡುಗುತ್ತ ಅಲ್ಲಿ ತಲುಪಿದಾಗ ಕಡುಗತ್ತಲೆ.ಹೋರಗೆ ಧಾರಕಾರವಾಗಿ ಮಳೆ. ಗರ್ಭಗುಡಿಯಲ್ಲಿ ಸಣ್ಣನೆಯ ನಂದಾದೀಪ. ತುಸು ಬೇಳಕು. ಲಿಂಗದ ಮೇಲೆ ನಿರ್ಮಾಲ್ಯದ ಹೂವು.ಜಟಾಶಂಕರನ ಜಟೆಯ ಮೇಲೆ ಓಣಗಿದ ತುಂಬೆಹಾರ. ಬಹಳಾ ಹೆದರಿದ್ದ ಪಾಪ. ಮುಂಜಾನೆಯಾಗುವಷ್ಟರಲ್ಲಿ ಏನಾದರು ಮಾಡಿ ಸಮಸ್ಯೆಗೆ ಪರಿಹಾರ ಹುಡುಕಲೇ ಬೇಕು. ಮುಂದಿನ ಊರು ಸೇರೋಣವೆಂದರೆ ಮಳೆ. ರಸ್ತೆ ಹದಗೇಟ್ಟಿದೆ. ಏತ್ತಿನ ಗಾಡಿಯ ಬಗ್ಗೆ ನೆನೆಯುವುದೂ ನಿರರ್ಥಕ. ನಿಸ್ಸಹಾಯನಾಗಿ ಸುಕನಾಸಿಯಿಂದ ಗರ್ಭಗುಡಿಯ ಬಳಿ ಬಂದು ಅಲ್ಲೆ ಕುಳಿತ. ನುಡುಗುತ್ತಿದ ಪಾಪ. ಮುಂಜಾನೆ ಇಂದ ಏನೂ ತಿಂದಿರಲಿಲ್ಲ. ಒಮ್ಮೆ ದೇವರನ್ನು ಹರಕೆ ಮಾಡಿ, ಬೇಡಿಕೊಂಡು ನಮಸ್ಕರಿಸುವ ಭಾವ ಮೂಡಿತು. ಕೈ ಜೋಡಿಸಿ ಮುಕ್ಕಣ್ಣನಿಗೆ ಮುಗಿಯುವಷ್ಟರಲ್ಲಿ ಅಡ್ಡ ಬಂದದ್ದು ಅಹಂಭಾವ. ಅಥವಾ.... ಅಹಂಭಾವವಿರಲಾರದು. ವ್ಯಕ್ತಿ ಒಳ್ಳೆಯವನು.ದುರಹಂಕಾರಿಯಲ್ಲ ಬಿಡಿ. ನಾಳೆ ಮುಂಜಾನೆ ವೇಳೆಗೆ ಏನಾದರೊಂದು ಆಗಲೇ ಬೇಕು. ಇತ್ಯರ್ಥವಾಗಲೇ ಬೇಕು. ಮತ್ತೋಮ್ಮೆ ಭಗವಂತನನ್ನು ಭಕ್ತಿಮಾಡಿ ಓಲಿಸಿಕೋಳ್ಳುವ ಪ್ರಯತ್ನ ನಡೆಯಿತು. ಈ ಗಂಡಾಂತರದಿಂದ ಶಿವಪ್ಪ ಪಾರು ಮಾಡಬಹುದು, ಆದರೆ ನಾನು ಚಿರಕಾಲ ಶಿವನ ಆಧೀನನಾಗ ಬೇಕೇನೊ ಏಂಬ ವಿರೋಧಾಭಾಸವಾದ ಭಾವ ಬಂದು ಕಾಡಿತು. ಸುಮ್ಮನಾದ. ನಾಳೆ ಸೋಲೋ - ಗೇಲುವೋ , ಏನಾದರೊಂದು ಆಗಲಿ. ಆದರೆ ನಾಳಿನ ಜಯದ ಸಲುವಾಗಿ ಮುಕ್ಕಣ್ಣನಿಗೆ ಮುಗಿದು, ಜೀವನ ಪರ್ಯಂತ ಶಿವನ ಬಂದಿ ಆಗಲಾರ. ನಾಳಿನ ಅಪಜಯವೇ ಮೇಲು; ಚಿರಕಾಲದ ಆಧೀನಕ್ಕಿಂತ. ದೇವರ ಮೇಹರುಬಾನಿ ನನಗೇನು ಬೇಡ. ನನ್ನ ನೋವು- ನಲಿವು ನನಗೆ ಇರಲಿ. ತಿರುಗಿ ಹೋರಗೆ ನಡೆಯಲಾರಂಭಿಸಿದ. ಹೋಗಲಾಗಲಿಲ್ಲ. ಲಿಂಗದ ಮುಂದೆ ನಿಂತು 'ದೇವರಿಲ್ಲದಿರಲಿ' ಎಂದು ದೇವರನ್ನೆ ಪ್ರಾರ್ಥಿಸಿ, ಮತ್ತೆ ಪ್ರಾಕಾರದ ಕಡೆಗೆ ನಡೆಯುವಷ್ಟರಲ್ಲಿ, ಗಾಳಿ ಬೀಸಿ ದೀಪ ಆರಿತು. ಕತ್ತಲ್ಲಲ್ಲಿ ಮುಕ್ಕಣ್ಣೇಷ್ವರ ತನ್ನೋಳಗೆ ತಾನೆ ನಕ್ಕನಂತೆ. ಸೋತ ತುಂಬೆಯ ಹಾರ ಕೇಳಗೆ ಬಿದ್ದಿತು.ಈತ ನಡುಗುತ್ತಿದ. ಮಳೆ ಇನ್ನು ಹೇಚ್ಚಾಗುತ್ತಿದೆ. ಮಿಂಚು. ಗುಡುಗು.ಸಮಯ ಮುಂಜಾನೆ ನಾಲ್ಕು ಘಂಟೆ.

Monday, May 14, 2007

ನಿಸ್ತರಂಗ !

ಹೆದ್ದೆರೆಯ ಗದ್ದಲದಿ
ಹದ್ದುಮೀರಿದ ಸದ್ದು.
ಮಬ್ಬು ಹೊದ್ದುನಿಂದ
ಯೋಚನೆಯು
ಭುಗಿಲೆದ್ದು;
ಸುಲೋಚನೆಯ
ಕಂಗಳಿಂ ನುಡಿದ
ವಿವೇಚನೆಯ ಮದ್ದು
ಮುದದೆ ಮೂಡಿಸಿಹುದು:
ನಿಸ್ತರಂಗ ಶಾಂತತೇಜ!

ಭಾವಾರ್ಥ :
The tumultous noise of the roaring waves rising above the threshold ; And, the thoughts impersonating as imposters surfaced with volcanic overtones.Only to be subsided by the assuring glances of the doe eyed one. Ah, and now you see a rippleless ocean of tranquility - that of vibrant calm!

Saturday, May 05, 2007

ನೀನು

ನನ್ನ ನಲ್ಮೆಯ ಮಿತ್ರರಾದ ಕೆ.ಎಸ್. ಮಂಜುನಾಥ ಅವರ ಲಹರಿ. ಇದು ನನಗೆ ಬಹಳಾ ಹಿಡಿಸಿದ ಕವನವಾದ್ದರಿಂದ , ಅವರ ಸಮ್ಮತಿಯ ಮೇರೆಗೆ ಇಲ್ಲಿ ಇರಿಸಿರುವೆ.

---
ನೀನು
---
ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರದ ಗಾಂಧಾರ-
ದಾಚೆಯ ದಾರಿ
ಗಮನಶ್ರಮ.

ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಬಹುದು,
ಅಥವ
ಎನ್ನ ನೀನಿಲ್ಲಿಂದ ಉದ್ಧರಿಸಿಕೊಳಬಹುದು;
ಎರಡೂ ಪಾವನ.

ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?

---
ಅಬ್ಬಾ ಎಂಥ ಕವನ!

ಮಂಜುನಾಥ ಅವರ ನುಡಿಯಲ್ಲಿ ಈ ಕವನದ ಟಿಪ್ಪಣಿ :

" ಕನ್ನಡದಲ್ಲಿ ಸಂಗೀತ, ಆಧ್ಯಾತ್ಮಗಳ ಪ್ರತಿಮೆಯನ್ನು ಕಾವ್ಯಕ್ಕೆ ಬಳಸಿಕೊಳ್ಳುವ ಪ್ರಯೋಗವನ್ನು ಬೇಂದ್ರೆ, ಕುವೆಂಪು, ಅಡಿಗ ಹೀಗೆ ಸಾಕಷ್ಟು ಜನ ಮಾಡಿದ್ದಾರೆ, ಇದೊಂದು ಸಣ್ಣ ಪ್ರಯತ್ನ.

ಪ್ರಿಯ-ಪ್ರಿಯತಮೆ; ಜೀವಾತ್ಮ-ಪರಮಾತ್ಮ; ಅಥವ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ" ಯಾವುದೇ ಚೇತನದ ತಹತಹಿಕೆಯನ್ನು ಗ್ರಹಿಸುವುದು ಈ ಕವನದ ಉದ್ದೇಶ. ಪ್ರೇಮ, ಅದರ ಉತ್ಕಟಸ್ಥಿತಿಯಲ್ಲಿ ಆಧ್ಯಾತ್ಮ ತಾನೇ? ಮನಸ್ಸಿನಲ್ಲಿ ಹೀಗೇ ಕವನ ರೂಪುಗೊಳ್ಳುತ್ತಿದ್ದಾಗ ನಾನು ಕೇಳುತ್ತಿದ್ದ ರಾಗದ ಹೆಸರು (ಕಾಕತಾಳೀಯವಾಗಿ) "ಗಮನಶ್ರಮ" (ಪೂರ್ವಿ ಕಲ್ಯಾಣಿ ರಾಗದ ಮೇಳ ರಾಗ). ಸಂಗೀತದಲ್ಲಿ ಷಡ್ಜ-ಪಂಚಮಗಳು ಸಹಜವಾಗೇ ಒಂದು ಅಪೂರ್ವ ಸಾಮರಸ್ಯ ಹೊಂದಿದೆ (made for each other kind of hormoney ಅನ್ನೋಣ). ಆದರೆ ತಾರ ಷಡ್ಜ - ಮಂದ್ರ ಪಂಚಮಗಳ ಅಂತರ ಸಹಜವಾಗೇ ಈ ಸಮಾಗಮಕ್ಕೆ ಅಡ್ಡವಾಗಿದೆ, ಇದು ಯಾವುದೇ ಅಗಲಿಕೆಯ ಮನಸ್ಥಿತಿಯನ್ನು ಸೂಚಿಸುತ್ತದೆ. these two notes can not meet each other from such distance with discrete rendition. ಆದರೆ ಗಮಕ (glide movement)ಗಳ ಬಳಕೆಯಿಂದ ಈ ದೈವೀ ಸಮಾಗಮ ಸಾಧ್ಯ. ಆದ್ದರಿಂದ ಈ ಗಮಕವನ್ನು ದೇವಯಾನ ವಿಮಾನ ಎಂದಿದ್ದೇನೆ. ಮತ್ತೂ ಈ ಗಮಕಗಳು ಮೇಲಿನಿಂದ ಬಂದರೇ ಚೆನ್ನ, ಅಥವ, ಮೇಲಿನಿಂದ ಇಳಿದು, ತಗ್ಗಿನಿಂದ ಮತ್ತೆ ಮೇಲೇರಿದರೆ ಇನೂ ಸೊಗಸು. ಮತ್ತೆ, "ಪಂಚಮ" ಒಂದು ತಗ್ಗಿನ, ಅಸೃಷ್ಯ ಜಾತಿಯನ್ನು ಸಹ ಸೂಚಿಸುವುದರಿಂದ, ಮಂದ್ರ ಹಾಗೂ ಪಂಚಮ ಪದಗಳು ಪರಸ್ಪರ ಆ ದೈನ್ಯ ಸ್ಥಿತಿಯ ಅರ್ಥವನ್ನು ಗಾಢವಾಗಿಸುತ್ತದೆ. ಹಾಗೇ ತಾರೆಯು ನಿಲುಕದ ನಕ್ಷತ್ರವಾದರೂ ಸೈ. "

..


Get this widget | Track details | eSnips Social DNA

Monday, April 30, 2007

ಕೋಪ

ಮುನಿಸಿಕೊಂಡ ಮಾನಿನಿಯ ಮೌನದ ರೂಪ
ತುಂಬಿ ನಿಂದ ಇಂಬಿಗೀಯ್ದ ಕೋಪದ ಲೇಪ
ಮಧುರಭಾವ ಉತ್ಪಲವನದೆ ತೊಳಲಿದ ತಾಪ
ಮುನಿಸಮೆರುಗು ಪಡೆದ ಪ್ರೇಮ ನಂದದ ದೀಪ

to be continued.....

Sunday, March 25, 2007

ವರ

ಇರದುದರ ಗುಂಗಿನಲಿ ಮರುಗುತಿಹನಿಲ್ಲೋಬ್ಬ
ಕಳೆದುದರ ನೆನಪಿನಲಿ ಕೊರಗುತಿಹ ಮಗದೊಬ್ಬ
ಇರುವದರ ವರವನರಿಯದ ಹರಿಯ ಅರಿಗಳಿವರೆಂದರಿಯೊ - ಶ್ರೀಸಾಮಾನ್ಯ.

Saturday, February 24, 2007

ಖುಷಿ !!!

ನಮ್ಮೀರ್ವರ ನಡುವಣ
ಸಹಚರ್ಯದ ಸವಿಯಲೆಗಳ
ಸಹಸ್ಪಂದನ
ಮೃದುಬಂಧನ ಆಲಿಂಗನ
ಚಿಂತನ ಮಂಥನ
ದೈವಾನುಸಂಧಾನ
ಸತ್ವಪ್ರೇಮ ನಿತ್ಯಕೃಷಿ
ಶರದ್ದಶತಾಯುಷಿ
ಅಹರ್ನಿಷಿ
ಸಾಗಲೆಂಬ
ಅಭಿಲಾಶೆಯೇ - ಖುಷಿ !


ಪ್ರತಿಯೊಂದು ರಾಗಕ್ಕೆ ಜೀವಸ್ವರವಿರುವುದಂತೆ. ಅದೇ ರೀತಿ ಈ ನನ್ನ ಗೀಚುವಿಕೆಯ ಜೀವಸ್ವರ , ಜೀವಬಿಂದು ಈ ಒಂದು ಪದಗುಚ್ಚ - 'ಸತ್ವಪ್ರೇಮ ನಿತ್ಯಕೃಷಿ '.

Tuesday, January 30, 2007

ಕಾಳಿದಾಸನ ಕಗ್ಗೊಲೆ !

ಚುಟುಕದ ಹೆಸರು ಕಾಳಿದಾಸನ ಕಗ್ಗೊಲೆ ! - Glimpse of nonsense verse in kannaDa !

ಓ ನನ್ನ ಪ್ರಿಯೆ,
ನೀನೆ ನನ್ನ ಜೀವಾಳ,
ಅಂತರಾಳ
ದಾಸವಾಳ,
ಮಡಿವಾಳ,
ಎಲ್ಲವೂ ನೀನೆ ಪ್ರಿಯೆ!

ನೀನೆ ನನ್ನ ಸಾಧನೆಯ ಸೆಲೆ,
ಬಾಳಿನ ನೆಲೆ
ಕಟ್ಟಿಗೆ ಒಲೆ
ಕಾಳಿದಾಸನ ಕಗ್ಗೊಲೆ!
ಎಲ್ಲವೂ ನೀನೆ ಪ್ರಿಯೆ!


^^ ಟೈಂ ಪಾಸ್ ಗೆ ಬರ್ದಿದ್ದು! ..no meaning! no nothing ! ..hey , wait! actually last line has meaning..., - lots , infact.
'ಎಲ್ಲವೂ ನೀನೆ ಪ್ರಿಯೆ!' - I mean it.

.

Wednesday, January 24, 2007

ದಿಗ್ದಿಗಂತದ ಕಡೆಗೆ !!!

ಶಕ್ತನಿಗೆ ಶಾಶ್ವತಿಯು ಒಮ್ಮೆ ಶ್ಯಾಮಲೆಯಾಗಿ ತೋರಿದರೆ ಮಗದೊಮ್ಮೆ ಸಾಧನೆಯಾಗಿ ಅವತರಿಸುತ್ತಾಳೆ. ಸಾದನಾಕಾಂಕ್ಷಿಯಾದ ಶಕ್ತನು ತನ್ನ ಶಾಶ್ವತಿ ಜೊತೆಗಿದ್ದರೆ, ಸಾಧನೆಯ ದಿಗ್ದಿಗಂತದ ತನಕ ಪಯಣ ಬೆಳೆಸುವೆನು ಎಂದು ಘೊಷಿಸುತಾನೆ. ಬದಿಗೆ ಶ್ಯಾಮಲೆಯ ನಗು ಮೊಗವು ಒಂದಿದ್ದರೆ ಸಾಕು , ಶಕ್ತನು ದಣಿವೆನದೆ ದುಡಿದು ಬಾಳಹಾದಿಯನ್ನು ಹದವಾದ ಪುಷ್ಪಪಥವಾಗಿಸುತ್ತಾನಂತೆ.
ಇದೇ ಭಾವವನ್ನು ಶಕ್ತನು ಇಂತೆಂದು ಶಾಶ್ವತಿಯಲ್ಲಿ ತೋಡಿಕೊಳ್ಳುತಾನೆ

ಶಕ್ತ :

ನಡೆವ ಬಾ , ಕೈ ಹಿಡಿದು
ದಿಗ್ದಿಗಂತದ ಕಡೆಗೆ..
ಎಡೆಬಿಡದೆ ನಾ ನಡೆವೆ
ದಣಿವಿರದೆ, ಒಲವೇ!

ಮುದದ ನಗುಮೊಗವಿರಲು,
ಬದಿಗೆ ಸಖಿ ನೀನಿರಲು,
ಹಾದಿಯದು ಹದದ
ಸುಮಪಥವೆಂಬೆ , ಚೆಲುವೆ!

Saturday, January 20, 2007

ಕಾಯಾರೋಹಣೇಶಂ

ಭಕ್ತನ ತಪಸ್ಸಿಗೆ ಒಲಿದ ಮುಕ್ಕಣನು, ಆಲಿಂಗಿಸಿ ಅಭಯ ತೊರಿದ ಕಾರಣ ನಾಗಪಟ್ಟಣದ ಮಹೇಶ್ವರಸ್ವಾಮಿಗೆ ಕಾಯಾರೋಹಣೇಶ್ವರ ಎಂದು ಕರೆಯುವ ವಾಡಿಕೆ , ಐತಿಹ್ಯ.ಮುತ್ತುಸ್ವಾಮಿ ದೀಕ್ಷಿತರು ನಾಗಪಟ್ಟಣದ ಕ್ಷೇತ್ರಪುರಾಣ ವಿವರಿಸುತ್ತ ಕರ್ನಾಟಕ ದೇವಗಾಂಧಾರ ರಾಗದಲ್ಲಿ ಕಾಯಾರೋಹಣೇಶ್ವರನನ್ನು ಕೊಂಡಾಡಿದ್ದಾರೆ.

ಸತ್ಯೋಜಾತ,ಅಘೋರ,ತತ್ಪುರುಷ,ಈಶಾನಂ,ವಾಮದೇವಸಂಯುಕ್ತ ಪಂಚಾನನ ಸ್ವಾಮಿಯ ವರ್ಣನೆ ಭಕ್ತಿಪೂರ್ವಕವಾಗಿಯೂ,ಕಲಿ ಕಲ್ಮಷನಾಶೋಪಕಾರಿಯೂ ಆಗಿದೆ.ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'.

ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'

ರಚನೆ: ಗುರುವರ್ಯ ಶ್ರೀಮುತ್ತುಸ್ವಾಮಿ ದೀಕ್ಷಿತರು.
ರಾಗ: ಕರ್ನಾಟಕ ದೇವಗಾಂಧಾರ - ೨೨ ನೇ ಮೇಳಕರ್ತ ಖರಹರಪ್ರಿಯ ಜನ್ಯ.
ತಾಳ : ರೂಪಕ.

ಕಾಯಾರೋಹಣೇಶಂ ಭಜರೇ ಮಾನಸ
ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ |ಪ |

ಭಯಾಪಹಂ ದಿಕ್ಪಾಲಾಕಾಧಿ ವಿನುತ ಮಹೇಶ್ವರಂ
ಮಾಯಾಮಯ ಜಗದಾಧಾರಂ ಗುರುಗುಹೋಪಚಾರಂ |ಅನು|

ನೀಲಾಯತಾಕ್ಷಿ ಮನೊಲ್ಲಾಸ ಕಾರಣಂ
ನಿತ್ಯ ಶುದ್ಧ ಸತ್ವಗುಣಂ ಭುಕ್ತಿ ಮುಕ್ತಿ ಪ್ರಧ ನಿಪುಣಂ
ಪಾಲಿತ ಭಕ್ತಂ ಪಂಚಾನನಂ ಪ್ರಣತ ಗಜಾನನಂ
ಬಾಲಚಂದ್ರ ಶೇಖರ ಭಾವಪಾಷಮೊಚನಂ ತ್ರಿನಯನಂ |ಚ|

ಶ್ರೀ ಗುರುಗುಹಾರ್ಪಣಮಸ್ತು ||

.

Tuesday, January 16, 2007

ಸ್ತಭ್ದ

ಶಕ್ತ :

ನೀಲಿ ಭಾನು ನಿಂತ ಮೇಘ
ಜೀವ ಯಾನ ಸ್ತಭ್ದ ವೇಗ

ತುಂಬು ಪ್ರೀತಿ ನಿಂತ ರೀತಿ
ತಡೆಯಲಿಂತು ನನ್ನ ಗೆಳತಿ

ಮೋಡ ಬಿರಿದು ಮಳೆಯು ಸುರಿದು
ಜೀವ ಬಿಂದು ಧರಣಿ ಮಿಂದು

ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?

--

ಶಾಶ್ವತಿಯು ಶಕ್ತನ ಪ್ರೇಮವನ್ನು ಅಲ್ಲಗೆಳದಿರಲಿಲ್ಲ ... ಆದರೆ , ಶಕ್ತನಿಗೆ ಒಪ್ಪಿಗೆಯ ಸ್ಪಷ್ಟನುಡಿಯೂ ದೊರೆತಿರಲಿಲ್ಲ.ಒಪ್ಪಿಗೆಯ ಅಪ್ಪುಗೆ ಇನ್ನೂ ದೊರೆಯದ್ದಿದ್ದ ಪ್ರಿಯತಮನಿಗೆ ತನ್ನ ಪ್ರೇಮದ ಪಾವಿತ್ರ್ಯತೆಯ ಬಗ್ಗೆ ಸಂಪೂರ್ಣ ನಂಬಿಕೆ. ಪ್ರೇಮಾಭಿಸಾರಿಕೆಯ ಪ್ರಸಂಗದ ಮುಂಚಿತ ಕಳೆಯಬೇಕಿರುವ ನೀರವ ಸಮಯವನ್ನು ಶಕ್ತನು -- 'ಸ್ಥಭ್ದ' -- ಎಂದು ಬಣ್ಣಿಸುತ್ತಾನೆ. ತನ್ನ ಜೀವನವೆಂಬ ನೀಲಾಕಾಶದಲ್ಲಿ , ಸ್ಥಭ್ದವಾಗಿ ನಿಂತ ಮೇಘದ ರೀತಿ ತೋರುತ್ತಿತ್ತು ಆ ಸಮಯ. ಆದರೆ ತುಂಬು ಪ್ರೀತಿಯನ್ನು ಶಾಶ್ವತಿಯು ತಡೆಯಲಾರಳು. ಮೋಡ ಬಿರಿದು , ಪ್ರೇಮಾಮೃತವರ್ಶಿಣಿ ಭೋರ್ಗರೆದು , ವಸುಂಧರೆಯನ್ನು ತಣಿಸಿ, ಪ್ರಿಯತಮೆಯ ಹೃದಯದಿಂದ ಪ್ರೇಮದ ಹೊನಲು ಹರಿದು , ಸಾಗರ ಸಮಾನವಾದ ತನ್ನ ಪ್ರಣಯಾಂಬುಧಿಯನ್ನು ಸೇರುವುದು ಎಂದು ಶಕ್ತನು ಈ ಸ್ವಗತದಲ್ಲಿ ಹೇಳ ಬಯಸಿದ್ದಾನೆ.


^^ ಕಾಲ್ಪನಿಕ ಅಷ್ಟೆ :)

Sunday, January 14, 2007

ಜಗದಾನಂದಕಾರಕ

ಸದ್ಗುಗುರು ಶ್ರೀ ತ್ಯಾಗರಾಜಸ್ವಾಮಿ ವಿರಚಿತ ನಾಟ ರಾಗದ ಘನಪಂಚರತ್ನಕೃತಿ 'ಜಗದಾನಂದಕಾರಕ' ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರುಕೃತಿ. ನಾದೋಪಾಸನೆಯಿಂದ ಬ್ರಹ್ಮಸ್ವರೂಪದ ಸಾಕ್ಷಾತ್ಕಾರಕ್ಕೆ ಅಣುವಾಗುವಂತೆ ತ್ಯಾಗಬ್ರಹ್ಮರು ಕೃತಿರಚನೆ ಮಾಡಿ ಪಾಮರರಿಗೆ ಮೋಕ್ಷಪ್ರಧ ಸುಲಭಮಾರ್ಗ ತೋರಿಸಿಕೊಟ್ಟಿದ್ದಾರೆ. ಜಗದಾನಂದಕಾರಕದ ಬ್ರಹ್ಮಾನಂದದ ಸಾತ್ವಿಕಾಲೆಗಳಲ್ಲಿ ಸಾಕಷ್ಟು ಬಾರಿ ಮಿಂದರೂ ನನಗೆ ಇದರ ಸಗುಣಭಕ್ತಿ ಸ್ವರೂಪದ ಅರಿವಾಗಿರಲಿಲ್ಲ. ರಾಮ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಸಜ್ಜನರೊಬ್ಬರು ನನಗೆ ಇದರ ಅರಿವು ಮಾಡಿಕೊಟ್ಟರು. ಮೇಲ್ನೋಟಕ್ಕೆ ಕಾಣದ ಸ್ವಾರಸ್ಯಕರವಾದ ವಿಷಯ ಇಂತಿದೆ.

ಹತ್ತು ಚರಣಗಳುಳ್ಳ ಈ ಕೃತಿಯ ಪ್ರತಿ ಸಾಲನ್ನು ಬಿಡಿಸಿ , ಪದಪುಂಜಗಳನ್ನು ಜೋಡಿಸಿದರೆ ಆಷ್ಟ್ಟೋತ್ತರ ಶತನಾಮಾವಳಿಯು ಅಡಕವಾಗಿರುವುದು ಗೋಚರವಾಗುವುದು !!!

ಓಂ ಜಗದಾನಂದಕಾರಕಾಯ ನಮಃ
ಓಂ ಜಯ ಜಾನಕಿ ಪ್ರಾಣನಾಥಯ ನಮಃ
ಓಂ ಗಗನಾಧಿಪಸತ್ಕುಲಜಾಯ ನಮಃ .... ಇತ್ಯಾದಿ.

ಹೀಗೆ , ನಾದೋಪಾಸನ ಸಂಪ್ರದಾಯದ ನಿರ್ಗುಣಬ್ರಹ್ಮಾರಾಧನೆ ಒಂದು ಆಯಾಮವಾದರೆ , ಆಷ್ಟ್ಟೋತ್ತರ ನಾಮಸಂಕೀರ್ತನ ಒಳಗೊಂಡ ಸಗುಣಬ್ರಹ್ಮ ಸ್ವರೂಪದ ಬಣ್ಣನೆ ಇನ್ನೊಂದೆಡೆ. ಮಾಹತ್ಮರಾದ ತ್ಯಾಗಬ್ರಹ್ಮರ ಕ್ರಿತಿಗಳು ಹೀಗೆಯೆ; ಎಷ್ಟು ಬಾರಿ ಕೇಳಿದರೂ ಒಂದು ಹೊಸ ಆಯಾಮ ತಿಳಿದುಬರುತ್ತದೆ.

.

Get this widget | Track details | eSnips Social DNA

Friday, January 12, 2007

ಕನಸು .. ಕಾರ್ಮುಗಿಲು ...

ಬಾಂದಳದ ಆಯದಲಿ ಕಾರಿರುಳ ಗವಸು
ಪರಿವೆ ಪರಧಿಯ ಮೀರಿ ಮರುಗಿಹುದು ಮನಸು

ತರಣಿಗೊದಗಿದ ಗ್ರಹಣ ಪಟಲವಂಬರದಿ
ಪದುಳ ಕ್ಷೀಣಿಸುತಿಹುದು ವರವಿಲ್ಲ ಮನದಿ

ಬಾಳಿನೊಗಟೆಯ ಘಾತಿಸಲಾಗದಾ ಧುರೆಯೋ
ಕ್ಷಿತಿಕಂಪದೆಲರಲ್ಲಿ ಸಿಲುಕಿರುವ ಧರೆಯೋ

ಮನದ ಎಳಸಿಕೆ ವಿಲಯ ವಿಧಿಯ ನಿರ್ಘಾತ
ಮಿಸುಕು ಜೀವಿತಕಿನ್ನು ಹೊಂಗನಸು ಶೋಣಿತ

ಭವರೋಗ ಭೇಷಜವೆ ಗರಲವಾರಿಧಿಯಾಗೆ
ಮುಕುರ ಮೂರ್ಚೂರಾಯ್ತು ಬರಡಾಯ್ತು ಒಳಿತೆಸಗೆ
--

ಟಿಪ್ಪಣಿ :

ಸನ್ಮಾರ್ಗದರ್ಶಿಗಳು ,ಹಿರಿಯರು ಆದ ತ.ವಿ.ಶ್ರೀ ಅವರು 'ಕನಸು.. ಕಾರ್ಮುಗಿಲು..' ಪ್ರಯತ್ನಕ್ಕೆ ನನ್ನ ಟಿಪ್ಪಣಿ ಜೋಡಿಸಿ , ಬ್ಲಾಗಿಸಬೇಕೆಂದು ಆಗ್ನಾಪಿಸಿದರು. ಇಂತಿದೆ ನನ್ನ ಮಾತು - ಕಥೆ , ಈ ನನ್ನ ಕಿರು ಪ್ರಯತ್ನದ ಬಗ್ಗೆ :

'ಕನಸು..ಕಾರ್ಮುಗಿಲು..' - - ಈ ಪದ್ಯದಲ್ಲಿ ನೊಂದ ಮನವನ್ನು ಪ್ರಳಯಕಾಲದ ಆಗಸಕ್ಕೆ ಹೋಲಿಸಲಾಗಿದೆ. ಆಕಾಶದ ಉದ್ದಗಲಕ್ಕೂ ಕಾರುತ್ತಿರುವ ಇರುಳು ಪ್ರಳಯ ಕಾಲದಲ್ಲಿ ವ್ಯಾಪಿಸಿದ ಹಾಗೆ , ನೊಂದ ಮನವನ್ನು ನೊವು ವ್ಯಾಪಿಸಿದೆ. ಗವಸು ಎಂದರೆ ಹೋದಿಕೆ. ಮುಖ ಮತ್ತು ಶಿರೋಭಾಗವನ್ನು ಹೊದ್ದು ಮಲಗಿದ ರೀತಿ , ಮನವನ್ನು ನೊವು ಮುಚ್ಚಿದೆ.ಗ್ರಹಣಗ್ರಸ್ತ ಸೂರ್ಯನನ್ನು ರಾಹು-ಕೇತುಗಳು ಕ್ರಮೇಣ ಆವರಿಸುವಂತೆ,ಮನದಲ್ಲಿನ್ನ ನೆಮ್ಮದಿಯನ್ನು ವಿಧಿಯು ಕಬಳಿಸುತ್ತಿದೆ ಎಂಬ ಅರ್ಥ.ಭೂಕಂಪದ ಸಮದಲ್ಲಿ ಧರಣಿದೇವಿಯು ನಡುಗುವಂತೆ , ಬಾಳಿನ ಒಗಟನ್ನು ಬಿಡಿಸಲಾಗದ ಮಾನವನ ಮನವು ಕಂಪಿಸುತ್ತಿದೆ.ಭೂಕಂಪನಕ್ಕೆ ಮುಂಚಿತವಾಗಿ ಬೀಸುವ ಕೆಟ್ಟ ಗಾಳಿಯನ್ನು ಮನದಲ್ಲಿ ಸುಳಿಯುತ್ತಿರುವ ಕೆಟ್ಟ ಲಹರಿಗಳಿಗೆ ಹೋಲಿಸಲಾಗಿದೆ.ಮುಂದಿನ ಸಾಲುಗಳಲ್ಲಿ,ಮನದಾಸೆಗಳು ವಿಲಯವಾಗಿ ಹೊಂಗನಸು ರಕ್ತ ಸ್ನಿಘ್ದವಾಗಿರುವುದನು ಸೂಚಿಸುತ್ತದೆ. ಭವರೋಗಕ್ಕೆ ಯಾವುದು ಮದ್ದು ಎಂಬ ಗಣನೆ ಇದ್ದಿತೊ , ಆ ದ್ರವ್ಯವೇ ವಿಷ ಸಮಾನವಾಗಿದೆ. ನಾವು ಏನನ್ನು ಒಲಿತೆಸಗೆ ಎಂದು ಭಾವಿಸಿದೆವೋ ಅದುವೇ ನಮ್ಮನ್ನು ಕಾಡಿತಿನ್ನುತ್ತಿದೆ. ಹೀಗಿರಲು ಕನಸಿನ ಕನ್ನಡಿ ಮುರಿದು ಮೂರುಚೂರಾಗಿದೆ ಎಂಬ ಅರ್ಥ.

ಇಲ್ಲಿ ಕೆಲವು poetic devices ಅಳವಡಿಸಲು ಸಣ್ಣ ಪ್ರಯತ್ನ ಮಾಡಿರುತ್ತೇನೆ:

೧. ಪದ್ಯದಲ್ಲಿ ಘೋರವಾದ ಭಾವ-ಭಾವನೆಗಳು ಮೂಡಿ ಬರಲಿ ಎಂದು - ಮಹಾಪ್ರ್ರಾಣ ಮತ್ತು ಕರ್ಕಶ ವರ್ಣಗಳ ಪ್ರಯೋಗವಾಗಿದೆ. - to create a phonetic background

೨. ಇಲ್ಲಿ ಗ್ರಹಣ,ಭೂಕಂಪನ,ವಿಷಸಮುದ್ರ,ರಕ್ತಸ್ನಿಗ್ಧ ಕನಸು ಇತ್ಯಾದಿಗಳನ್ನು ಸೂಚಿಸಲು ಅಳವಡಿಸಲಾಗಿದೆ. - Visual imagery

೩. ಮನವನ್ನು ಇರುಳು ಕವಿದ ಆಗಸ, ಕಂಪಿಸುತ್ತಿರುವ ಭೂಮಿ, ಗ್ರಹಣಗಗ್ರಸ್ತ ಸೂರ್ಯ - ಹೀಗೆ ಕರಾಳ ಉಪಮೆಗಳ ಸಾಂಗತ್ಯ ನೀಡಲಾಗಿದೆ. - Simile , Metaphor , Symbolism


ಕಠಿಣ ಪದಗಳ ಅರ್ಥ :)

ಬಾಂದಳ - ಬಾನಿನ ಅಂಗಳ.
ಆಯ - ವಿಸ್ತಾರ.
ಗವಸು - ಹೊದಿಕೆ.
ಪರಿಧಿ - ಎಲ್ಲೆ. ; limit.
ತರಣಿ - ಸೂರ್ಯ.
ಪದುಳ - ನೆಮ್ಮದಿ.
ಕ್ಷಿತಿಕಂಪ- ಭೂಕಂಪ.
ಎಲರು - ಗಾಳಿ
ಕ್ಷಿತಿಕಂಪದೆಲರಲ್ಲಿ : in the baleful winds preceeding the catastrophic earthquake.
ಭೀಷಜ - ಔಷದಿ
ಗರಲ - ವಿಷ.
ವಾರಿಧಿ - ಸಮುದ್ರ.
ಮುಕುರ - ಕನ್ನಡಿ. vision

.

ಮೌನದ ಮಡಿಲಲ್ಲಿ

ಇನಿಯರಾಡೊ ಮಧುರ ಮಾತು ತಳಿರುತೋರಣ
ದನಿಗೂಡದೆ ಎದೆಯಲುಂಟು ದಟ್ಟ ಕಾನನ
ಎರಡು ಮಾತು ನೂರು ಭಾವ ಇದುವೆ ಜೀವನ
ಮಾತು ಸೋತು ಮೌನಹಾಡಿತಿಂತು ತನನನ

to be continued..

Thursday, January 11, 2007

ಸಂತಸ - ಸಹಜಸ್ಥಿತಿ

ಕಾರ್ಯಲಯದಲ್ಲಿ ವಿಶೇಷವಾಗಿ ಸಂತುಷ್ಟನಾಗಿಲ್ಲದಿದ್ದ ನನ್ನ ಸ್ನೇಹಿತನೊಬ್ಬ ಪ್ರಫುಲ್ಲಮನಸ್ಕನಾಗಿದ್ದುದನ್ನು ಬೆಳಗಿನಿಂದಲೂ ನಾನು ಗಮನಿಸಿದೆ.ಮಧ್ಯಾಹ್ನದ ವೇಳೆ , ಊಟದ ಸಮಯ. ಮಾತು ಮಾತಿನಲ್ಲಿ ಅವನು ಇಂತೆಂದನು : 'अरे यार् - खुश् रेहने की कोयी वजेह् नही , बस् आदत् पड् गया है !' ಈ ಮಾತುಗಳಲ್ಲಿ ಜೀವನ ಸತ್ಯವೇ ಅಡಕವಾಗಿದೆ ಎಂದು ನನಗೆ ಅನಿಸಿತು. ಕಲಿತು ನಡೆಯಲು , ತಿಳಿಸಿ ಬೆಳೆಸಲು ದೊಡ್ಡ ವೇದಾಂತಿಯಾಗಲಿ , ಮಹೋನ್ನತ ಕೃತಿಯೋ ಆಗಬೇಕಿಲ್ಲ. ದಿನನಿತ್ಯದ ವ್ಯವಹಾರದಲ್ಲಿ , ನಮ್ಮ - ನಿಮ್ಮಂತಹ ಸಾಧರಣ ಮರ್ತ್ಯರು ಜೀವನ ಸತ್ಯವನ್ನು ಗೋಚರಿಸ ಬಹುದು.
ಸಾಂದರ್ಭಿಕವಾಗಿ , ಸಂತಸವನ್ನು ಸಹಜ ಸ್ಥಿತಿಯನಾಗಿಸುವ ಕುರಿತು ನನ್ನ ಅಂತರಂಗದಲ್ಲಿ ಮೂಡಿಬಂದ ಚುಟುಕ:


ಸಂತಸವೆಂಬುದು ಅರಿಕೆಯಲಿಲ್ಲ ಬಾಳಿದನರಿತು ಮಂದಮತಿ
ಅರಿಕೆಗೆ ಸಿಲುಕದ ವರವಿದು ಇದನು ಆಗಿಸು ನಿನ್ನೆಯ ಸಹಜಸ್ಥಿತಿ
.

Wednesday, January 10, 2007

ಅಂತರ್ಜಾಲದ ಅಲೆಮಾರಿಗಳು

ಸಂಬಂಧಗಳು ಮತ್ತು ಸಹಸ್ಪಂದನ.

ಕಳೆದ ಸಂವತ್ಸರ ನಾನು ಅಂತರ್ಜಾಲದಲ್ಲಿ ಅಲೆದಾಡುತ್ತ ಹಲವು ಮಂದಿ ಹೊಸ ಸ್ನೇಹಿತರನ್ನು ಸಂಪಾದಿಸಿದೆ. ಈ ಸಂಬಂಧಗಳ ಸಂಕೋಲೆ ಬಹಳ ಸೋಜಿಗವೂ ಮತ್ತು ಸ್ವಾರಸ್ಯಕರವೂ ಆಗಿದೆ. ನನ್ನ ಒಡನಾಟಕ್ಕೆ ಸಿಕ್ಕ ಹಲವು ಮಂದಿಯ ಮುಖ ಪರಿಚಯ ಸಹ ನನಗೆ ಇಲ್ಲ. ಇಂತಿದ್ದರು, ಇವರುಗಳು ನನ್ನ ಜೀವನದಲ್ಲಿ ಈ ದಿನ ಹಾಸು ಹೊಕ್ಕು. ಇವರಲ್ಲಿ ಉಭಯಕುಶಲೋಪರಿ ವಿಚಾರಿಸದ ದಿನವೇ ಇಲ್ಲ. ಏತ್ತಣ ಮಾಮರ ; ಏತ್ತಣ ಕೋಗಿಲೆ -- ಆದರೂ ಅನುಬಂಧವಿರುವಂತೆ , ನಮ್ಮ ಮೈತ್ರಿ ಅಂಕುರಿಸಿ ಸಂಬಂಧಗಳು ಬೆಳೆಯುತ್ತಲೇ ಇವೆ. ಕಾರ್ಯ ನಿಮಿತ್ತ ನಾ ಹಿಂದೆಂದೂ ಕಾಣದ ಊರುಗಳಿಲ್ಲಿ ಸಂಚರಿಸುವ ಸಂದರ್ಭದಲ್ಲಿ ಇವರುಗಳ ಮನ - ಮನೆ - ಮಂದಿರದಲ್ಲೇ ಸಹ ಮೈತ್ರಿ ಭೋಜ್ಯ - ಸಹ ಮಿತ್ರ ವಾಸ. ಮಿತ್ರರು ಒಂದೆಡೆಯಾದರೆ , ಅಂತರ್ಜಾಲದಲ್ಲಿ ನಾ ಕಂಡ ಸಜ್ಜನರು ಈಗ ನನ್ನ ಒಲವಿನ ಭಾವನವರಾಗಿ ಮನೆಯ ಸದಸ್ಯರೇ ಆಗಿದ್ದಾರೆ.ಜೀವನವೀಡಿ ಪರಿಚಯವಿದ್ದರೂ ನಮ್ಮವರಲ್ಲದಂತೆ ವರ್ತಿಸುವ ಹಲವಾರು ಜನಗಳ ನಡುವೆ , ಕೆಲವೇ ದಿನಗಳ ಒಡನಾಟದಲ್ಲಿ ವಿಶ್ವಾಸದ ಮಾತುಗಳನ್ನು ಆಡಿ ನನ್ನ ದಿನಚರಿಯನ್ನು ಸುಗಮವೆನ್ನಿಸುವ ಇವರುಗಳಿಗೆ ನಾನು ಚಿರಋಣಿ.

ಈ ಸ್ನೇಹಸೇತುವನ್ನು ನಾನು ನೆನೆದಾಗ ಅಂತರಾಳದಲ್ಲಿ ಮೂಡಿಬಂದ ಸ್ವಗತ :

ಅಲೆಮಾರಿಗಳು , ನಾವು ಅಂತರ್ಜಾಲದ ಅಲೆಮಾರಿಗಳು
ಪುಟದಿಂದ ಪುಟಕ್ಕೆ ,ತಾಣದಿಂದ ತಾಣಕ್ಕೆ
ಜಿಗಿದು ,ನೆಗೆದು ,ಕುಣಿದು ,ಹೊಸ ಬೆಸುಗೆ ಬೆಸೆದು,
ಕಾಣದವರ ನಮ್ಮವರನಾಗಿಸುವ ಕಲೆಯ ನೆಲೆಯ
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು

ಅಪರಿಚಿತರಾದರೂ ಚಿರಪರಿಚಿತರು
ಮುಖಪರಿಚಯವಿಲ್ಲದ ಅಶರೀರಭ್ರಾತೃಗಳು
ಸ್ನೇಹ ಸಂಬಂಧಗಳ ಸಹಸ್ಪಂದನವನು
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು

As always - ಇದು ಪದ್ಯ, ಲಹರಿ ,ಕವನ , ಕಾವ್ಯ -- ಇದ್ಯಾವ್ದು ಅಲ್ಲ . ಇದು ಸುಮ್ನೆ ಹಾಗೆ , ಸ್ವಗತ!
.

Thursday, January 04, 2007

ಹಂಗು

ಹಂಗಿಲ್ಲದಾ ಬಾಳು ಹ್ಯಾಂಗ , ತಂಗ್ಯವ್ವ
ಹಂಗಿಲ್ಲದಾ ಬಾಳು ಹ್ಯಾಂಗ

ಭುವಿಗೆ ಭವಕಾರಕನ ಹಂಗು
ತೃಷೆಗೆ ಪಾವಕನ ಹಂಗು
ಸುಧೆಗೆ ಭೃಂಗದ ಹಂಗು
ಬೆದೆಗೆ ಕಾಮನ ಹಂಗು
ಋತುವಿಗೆ ಕಾಲನ ಹಂಗು
ಜೀವಿತಕೆ ಇರುವಿಕೆಯ ಹಂಗು

ಹಂಗಿಲ್ಲದಾ ಬಾಳು ಹ್ಯಾಂಗ , ತಂಗ್ಯವ್ವ
ಹಂಗಿಲ್ಲದಾ ಬಾಳು ಹ್ಯಾಂಗ


- ಶ್ರೀ ಸಾಮಾನ್ಯ

Monday, January 01, 2007

ಒಲವೇ ಚೆಲುವು !!!

ಎಲ್ಲರಂತಿಲ್ಲ ನನ್ನ ನಲ್ಲೆ
ಮೇಘವರ್ಣ , ನಿಜ ಶ್ಯಾಮಲೆ

ಹೇಳಿಕೊಳ್ಳುವಂತಹ
ಸ್ಪುರದೄಪಿಯೇನಲ್ಲ ಬಿಡಿ.
ಸಾಮಾನ್ಯೆ ... ಈ ಕನ್ಯೆ

ಗುಂಪಿನಲ್ಲಿ ನಿಂತರೆ
ಎದ್ದು ಕಾಣದಂತ ನೀರೆ
ಕಮಲದಳ ಸಮಾನ ಕಂಗಳು..
ನೈದಿಲೆಯ ಹೋಲುವ ಮುಗುಳು ನಗು ..
ಇವಾವವು ಇಲ್ಲ...

ಲೋಕವು ಬಯಸುವ ರೂಪವತಿಯಲ್ಲ ..
ನನ್ನ ಹೃದಯೇಶ್ವರಿ...ಶಾಶ್ವತಿ.. ಶ್ಯಾಮಲೆ

ಎಂತಿದ್ದರೇನಂತೆ - ಇವಳಿದ್ದಂತೆಯೇ ನನಗೆ ಓಲವು...
ಏಕೆಂದರೆ.. 'ಒಲವೇ ಚೆಲುವಲ್ಲವೇ' ?

. ಶ್ರೀ ಸಾಮನ್ಯ

ಇದು ಪದ್ಯ ಅಲ್ಲ .. ಸುಮ್ನೆ ಹಾಗೆ .. ಅಂತರಂಗದ ಮಾತು ಅವತರಿಸಿದೆ.