Thursday, December 29, 2016

::: ಹಂಸ ಕ್ಷೀರ ನ್ಯಾಯ :::


ಅನ೦ತ ಶಾಸ್ತ್ರ೦ ಬಹು ವೇದಿತವ್ಯಮ್ |
ಅಲ್ಪಶ್ಚ ಕಾಲೋ ಬಹವಶ್ಚ ವಿಘ್ನಾಃ ||
ಯತ್ ಸಾರಭೂತ೦ ತದುಪಾಸಿತವ್ಯಮ್
ಹ೦ಸೋ ಯಥಾ ಕ್ಷೀರಮಿವಾ೦ಬುಮಿಶ್ರಮ್ ||





Tuesday, November 29, 2016

ವೇದಮಂತ್ರೋಚ್ಛಾರಣೆಯ ಆರು ದೋಷಗಳು

 ಗೀತೀ ಶೀಘ್ರೀ ಶಿರಃ ಕಂಪೀ ತಥಾ ಲಿಖಿತಪಾಠಕಃ ।
ಅನರ್ಥಜ್ಞ ಅಲ್ಪಕಂಠಶ್ಚ ಷಡೇತೇ ಪಾಠಕಾಧಮಾಹ  ।।

ಗೀತೀ : ರಾಗವಾಗಿ ಹೇಳುವವನು, ಶೀಘ್ರೀ : ಅತಿ ವೇಗದಿಂದ ಹೇಳುವವನು, ಶರಃ  ಕಂಪೀ : ತಲೆ ಅಲ್ಲಾಡಿಸುತ್ತಾ ಹೇಳುವವನು, ಲಿಖಿತಪಾಠಕಃ  = ಗುರುಮುಖೇನ ಕಲಿಯದೇ ಪುಸ್ತಕ ನೋಡಿ  ಓದುವವನು , ಅನರ್ಥಜ್ಞ : ಅರ್ಥವನ್ನು ತಿಳಿಯದಿರುವುದು, ಅಲ್ಪ ಕಂಠ : ಮೆಲು ದನಿಯಲ್ಲಿ ಹೇಳುವುದು.

ಈ ಆರು ವೇದ ಮಂತ್ರೋಚ್ಛಾರಣೆಯ ದೋಷಗಳು.

Monday, October 10, 2016

ಸಂನ್ಯಾಸ ಸೂಕ್ತ

न कर्मणा न प्रजया धनेन त्यागेनैके अमृतत्वमानशुः । परेण नाकं निहितं गुहायां विभ्राजदे तद्यतयो विशन्ति ॥१॥ वेदान्तविज्ञानसुनिश्चितार्थाः संन्यास योगाद्यतय शुद्धसत्त्वाः । तेब्रह्मलोके तु परान्तकाले परामृतात्परिमुच्यन्ति सर्वे ॥२॥ दह्रं विपापं परमेश्मभूतं यत्पुण्डरीकं पुरमध्यसग्गस्थम् । तत्रापि दह्रं गगनं विशोकस्तस्मिन् यदन्तस्तदुपासितव्यम् ॥३॥ योवेदादौ स्वरः प्रोक्तो वेदान्ते च प्रतिष्ठितः । तस्य प्रकृतिलीनस्य यः परः स महेश्वरः ॥४॥


ಅಮೃತತ್ವವು ಕರ್ಮಗಳಿಂದಾಗಲಿ, ಸಂತತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಸಾಧಿಸುವುದಿಲ್ಲ . ತಪಸ್ವಿಗಳು ಪಡೆದಿರುವ ಈ ಅಮೃತತ್ವವು ಶುದ್ಧಾಂತರಾಳದಲ್ಲಿ ಪ್ರಕಾಶಮಾನವಾಗಿದ್ದು ಸ್ವರ್ಗಕ್ಕೂ ಮಿಗಿಲಾಗಿರುತ್ತದೆ. ವೇದಾಂತ ವಿಜ್ಞಾನದಿಂದ ನಿಶ್ಚಿತ ಬುದ್ಧಿಯುಳ್ಳವರಾಗಿದ್ದು  ಸನ್ಯಾಸದಿಂದ ಶುದ್ಧಸತ್ವರಾಗಿ ಇವರೆಲ್ಲರೂ ಸಾಧಿಸುತ್ತಿದ್ದು ಅಂತ್ಯಕಾಲದಲ್ಲಿ ಬ್ರಹ್ಮದಲ್ಲಿಯೇ ವಿಲೀನವಾಗುತ್ತಾರೆ. ಪರಮಾತ್ಮವು ದೇಹದೊಳಗೆ ನಿಷ್ಕಲ್ಮಷವಾದ ಹೃದಯ ಕಮಲದಲ್ಲಿರುತ್ತದೆ. ಈ ಹೃದಯ ಕಮಲದಲ್ಲಿ ದುಃಖರಹಿತವಾದ ಆಕಾಶವಿರುತ್ತದೆ. ಈ ಹೃದಯಾಕಾಶವನ್ನೇ ಸಂತತ ಧ್ಯಾನ ಮಾಡಬೇಕು. ಯಾವ ಸ್ವರವು ವೇದಾರಂಭನದಲ್ಲಿ ಮತ್ತು ವೇದಾಂತದಲ್ಲಿ ಪ್ರತಿಷ್ಠಾಪಿತವಾಗಿರುವುದೋ ಆ ಅದೇ ಪ್ರಣವವು ಧ್ಯಾನಕಾಲದಲ್ಲಿ ಅವ್ಯಾಕೃತ ಪ್ರಕೃತಿಯಲ್ಲಿ ಲೀನವಾಗಿ ಅದರ ನಾದವೇ ಪರಮೇಶ್ವರನೆಂದೆನಿಸಿ ಧ್ಯಾನಯೋಗ್ಯವಾಗಿದೆ.  

* न तत्र सुर्यो भाति न चंन्द्रतारकं नेमा विद्युतो भान्ति कुतोऽयमग्निः । तमेव भान्तमनुभाति सर्वं तस्य भासा सर्व मिदं विभाति ॥ 

ಸಂನ್ಯಾಸ ಸೂಕ್ತ

न कर्मणा न प्रजया धनेन त्यागेनैके अमृतत्वमानशुः । परेण नाकं निहितं गुहायां विभ्राजदे तद्यतयो विशन्ति ॥१॥ वेदान्तविज्ञानसुनिश्चितार्थाः संन्यास योगाद्यतय शुद्धसत्त्वाः । तेब्रह्मलोके तु परान्तकाले परामृतात्परिमुच्यन्ति सर्वे ॥२॥ दह्रं विपापं परमेश्मभूतं यत्पुण्डरीकं पुरमध्यसग्गस्थम् । तत्रापि दह्रं गगनं विशोकस्तस्मिन् यदन्तस्तदुपासितव्यम् ॥३॥ योवेदादौ स्वरः प्रोक्तो वेदान्ते च प्रतिष्ठितः । तस्य प्रकृतिलीनस्य यः परः स महेश्वरः ॥४॥

* न तत्र सुर्यो भाति न चंन्द्रतारकं नेमा विद्युतो भान्ति कुतोऽयमग्निः । तमेव भान्तमनुभाति सर्वं तस्य भासा सर्व मिदं विभाति ॥ 



ಅಮೃತತ್ವವು ಕರ್ಮಗಳಿಂದಾಗಲಿ, ಸಂತತಿಯಿಂದಾಗಲಿ ಅಥವಾ ಸಂಪತ್ತಿನಿಂದಾಗಲಿ ಸಾಧಿಸುವುದಿಲ್ಲ . ತಪಸ್ವಿಗಳು ಪಡೆದಿರುವ ಈ ಅಮೃತತ್ವವು ಶುದ್ಧಾಂತರಾಳದಲ್ಲಿ ಪ್ರಕಾಶಮಾನವಾಗಿದ್ದು ಸ್ವರ್ಗಕ್ಕೂ ಮಿಗಿಲಾಗಿರುತ್ತದೆ. ವೇದಾಂತ ವಿಜ್ಞಾನದಿಂದ ನಿಶ್ಚಿತ ಬುದ್ಧಿಯುಳ್ಳವರಾಗಿದ್ದು  ಸನ್ಯಾಸದಿಂದ ಶುದ್ಧಸತ್ವರಾಗಿ ಇವರೆಲ್ಲರೂ ಸಾಧಿಸುತ್ತಿದ್ದು ಅಂತ್ಯಕಾಲದಲ್ಲಿ ಬ್ರಹ್ಮದಲ್ಲಿಯೇ ವಿಲೀನವಾಗುತ್ತಾರೆ. ಪರಮಾತ್ಮವು ದೇಹದೊಳಗೆ ನಿಷ್ಕಲ್ಮಷವಾದ ಹೃದಯ ಕಮಲದಲ್ಲಿರುತ್ತದೆ. ಈ ಹೃದಯ ಕಮಲದಲ್ಲಿ ದುಃಖರಹಿತವಾದ ಆಕಾಶವಿರುತ್ತದೆ. ಈ ಹೃದಯಾಕಾಶವನ್ನೇ ಸಂತತ ಧ್ಯಾನ ಮಾಡಬೇಕು. ಯಾವ ಸ್ವರವು ವೇದಾರಂಭನದಲ್ಲಿ ಮತ್ತು ವೇದಾಂತದಲ್ಲಿ ಪ್ರತಿಷ್ಠಾಪಿತವಾಗಿರುವುದೋ ಆ ಅದೇ ಪ್ರಣವವು ಧ್ಯಾನಕಾಲದಲ್ಲಿ ಅವ್ಯಾಕೃತ ಪ್ರಕೃತಿಯಲ್ಲಿ ಲೀನವಾಗಿ ಅದರ ನಾದವೇ ಪರಮೇಶ್ವರನೆಂದೆನಿಸಿ ಧ್ಯಾನಯೋಗ್ಯವಾಗಿದೆ.  

Wednesday, September 28, 2016

ಸೂರ್ಯನಮಸ್ಕಾರ ಮಂತ್ರ

ಸೂರ್ಯನಮಸ್ಕಾರ ಮಂತ್ರ -- ನಿತ್ಯ ಪಾಠ ಮತ್ತು ಅನುಷ್ಠಾನಕ್ಕೆ ಯೋಗ್ಯ. ವಿಶೇಷವಾಗಿ ಮಾಘ ಭಾನುವಾರ ಮಾಡಿದರೆ ಅತಿಶಯ ಫಲ.


1 • ॐ मित्राय नमः • om mitrāya namaḥ
2 • ॐ रवये नमः • om ravaye namaḥ
3 • ॐ सूर्याय नमः • om sūryāya namaḥ
4 • ॐ भानवे नमः • om bhānave namaḥ
5 • ॐ खगाय नमः • om khagāya namaḥ
6 • ॐ पूष्णे नमः • om puṣṇe namaḥ
7 • ॐ हिरण्यगर्भाय नमः• om hiraṇya garbhāya namaḥ
8 • ॐ मरीचये नमः • om marīcaye namaḥ
9 • ॐ आदित्याय नमः • om ādityāya namaḥ
10 • ॐ सवित्रे नमः • om savitre namaḥ
11 • ॐ अर्काय नमः • om arkāya namaḥ
12 • ॐ भास्कराय नमः • om bhāskarāya namaḥ
ॐ श्रीसवितृसूर्यनारायणाय नमः
om śrī savitṛ sūrya nārāyaṇāya namaḥ





1. ಓಂ ಹ್ರಾಂ ಮಿತ್ರಾಯ ನಮಃ
2. ಓಂ ಹ್ರೀಂ ರವಯೇ ನಮಃ
3. ಓಂ ಹ್ರೂಂ ಸೂರ್ಯಾಯ ನಮಃ
4. ಓಂ ಹ್ರೈಂ ಭಾನವೇ ನಮಃ
5. ಓಂ ಹ್ರೌಂ ಖಗಾಯ ನಮಃ
6. ಓಂ ಹ್ರಃ ಪೂಷ್ಣೇ ನಮಃ
7. ಓಂ ಹ್ರಾಂ ಹಿರಣ್ಯಗರ್ಭಾಯ ನಮಃ
8. ಓಂ ಹ್ರೀಂ ಮರೀಚಯೇ ನಮಃ
9. ಓಂ ಹ್ರೂಂ ಆದಿತ್ಯಾಯ ನಮಃ
10. ಓಂ ಹ್ರೈಂ ಸವಿತ್ರೇ ನಮಃ
11. ಓಂ ಹ್ರೌಂ ಅರ್ಕಾಯ ನಮಃ
12. ಓಂ ಹ್ರಃ ಭಾಸ್ಕರಾಯ ನಮಃ
 

ಸೂರ್ಯನಮಸ್ಕಾರ ಮಂತ್ರ

ಸೂರ್ಯನಮಾಸ್ಕಾರ ಮಂತ್ರ -- ನಿತ್ಯ ಪಾಠ ಮತ್ತು ಅನುಷ್ಠಾನಕ್ಕೆ ಯೋಗ್ಯ. ವಿಶೇಷವಾಗಿ ಮಾಘ ಭಾನುವಾರ ಮಾಡಿದರೆ ಅತಿಶಯ ಫಲ.


1 • ॐ मित्राय नमः • om mitrāya namaḥ
2 • ॐ रवये नमः • om ravaye namaḥ
3 • ॐ सूर्याय नमः • om sūryāya namaḥ
4 • ॐ भानवे नमः • om bhānave namaḥ
5 • ॐ खगाय नमः • om khagāya namaḥ
6 • ॐ पूष्णे नमः • om puṣṇe namaḥ
7 • ॐ हिरण्यगर्भाय नमः• om hiraṇya garbhāya namaḥ
8 • ॐ मरीचये नमः • om marīcaye namaḥ
9 • ॐ आदित्याय नमः • om ādityāya namaḥ
10 • ॐ सवित्रे नमः • om savitre namaḥ
11 • ॐ अर्काय नमः • om arkāya namaḥ
12 • ॐ भास्कराय नमः • om bhāskarāya namaḥ
ॐ श्रीसवितृसूर्यनारायणाय नमः
om śrī savitṛ sūrya nārāyaṇāya namaḥ

Wednesday, August 31, 2016

ಯೋಗಾಮೃತ

ಮಧುಮೇಹವನ್ನು ತಡೆಗಟ್ಟುಲು ಯೋಗಗುರುಗಳು ಕಲಿಸಿ ಕೊಟ್ಟ ಯೋಗಾಸನಗಳು 

ಅರ್ಧಮತ್ಸ್ಯೇಂದ್ರಾಸನ
ವಕ್ರಾಸನ
ಭಾರದ್ವಾಜಾಸನ 

Friday, July 29, 2016

ಸುಭಾಷಿತ ಸಂಗ್ರಹ

ತೃಣಪರ್ಣೋದಕಾಹಾರಾಃ ಸತತಂ ವನವಾಸಿನಃ |
ಜಂಬೂಕಾಖುಮೃಗಾದ್ಯಾಶ್ಚ ತಾಪಸಾಸ್ತೇ ಭವಂತಿ ಕಿಮ್ ||
ಯಾವಾಗಲೂ ಕಾಡಿನಲ್ಲಿರುತ್ತಾ ಹುಲ್ಲು, ಎಲೆ, ನೀರನ್ನು ಸೇವಿಸುತ್ತಾ ಇದ್ದ ಮಾತ್ರಕ್ಕೆ ತಪಸ್ವಿ ಎನ್ನಿಸುವುದಾದರೆ ನರಿ, ಇಲಿ, ಮೃಗ ಮೊದಲಾದುವುಗಳೂ ಸಹ ತಪಸ್ವಿಗಳೆನಿಸಬಹುದಲ್ಲ ?

ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್ |
ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಲಮ್ ||
ಪಂಚತಂತ್ರ, ಮಿತ್ರಭೇದ ೬೭
ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಬಂದು ಹೇಳಿದರೂ ಸಹ ಅವನ ಮಾತು ಸಹ ತಿರಸ್ಕಾರ ಮತ್ತು ಅಪಮಾನಕ್ಕೊಳಗಾಗುವುದು.

ಅಕ್ಷರಾಣಿ ಪರೀಕ್ಷ್ಯಂತಾಮ್ ಅಂಬರಾಡಂಬರೇಣ ಕಿಂ |
ಶಂಭುರಂಬರ ಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ ||
ಅಪ್ಪಯ್ಯ ದೀಕ್ಷಿತರು.
ಅಕ್ಷರಗಳನ್ನು(ವಿದ್ಯೆಯನ್ನು) ಪರೀಕ್ಷಿಸಿ ನೋಡಬೇಕು, ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ ? ಶಿವನು ಬಟ್ಟೆ ಇಲ್ಲದ ದಿಗಂಬರ ಎನಿಸಿದ್ದರೂ ಸಹ ಅವನು ಸರ್ವಜ್ಞನಲ್ಲವೆ.

ಯದಧ್ರುವಸ್ಯ ದೇಹಸ್ಯ ಸಾನುಬಂಧಸ್ಯ ದುರ್ಮತಿಃ |
ಧ್ರುವಾಣಿ ಮನ್ಯತೇ ಮೋಹಾದ್ ಗೃಹಕ್ಷೇತ್ರವಸೂನಿ ಚ ||
ಭಾಗವತ, ೩ : ೩೦ : ೩
ವಿವೇಕವಿಲ್ಲದ ಮನುಷ್ಯನು ಶಾಶ್ವತವಲ್ಲದ ಮತ್ತು ಅನೇಕ ಕಷ್ಟಗಳಿಂದ ಕೂಡಿದ ಈ ಶರೀರಕ್ಕೆ ಸಂಬಂಧಿಸಿದ ಮನೆ, ಭೂಮಿ, ಹಣ ಮುಂತಾದ ಸಂಪತ್ತುಗಳನ್ನು ಮೋಹದಿಂದ ಶಾಶ್ವತವೆಂದು ತಿಳಿಯುತ್ತಾನೆ.

Thursday, June 30, 2016

ಶಂಕರಾಚಾರ್ಯ

अज्ञानान्तर्गहनपतितान् आत्मविद्योपदेशैः
त्रातुम् लोकान् भवदवशिखातापपापच्यमानान् ।
मुक्त्वा मौनं वटविटपिनो मूलतो निष्पतन्ती
शंभोर्मूर्तिः चरति भुवने शंकराचार्यरूपा ॥

Saturday, May 28, 2016

ವಿನಾಯಕ ದಾಮೋದರ ಸಾವರ್ಕರ್

ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ, ಅಪ್ರತಿಮ ದೇಶಭಕ್ತ, ಕವಿ, ವಾಗ್ಮಿ, ಚಿಂತಕ, ಹಿಂದು ಧರ್ಮ ಪೋಷಕ -- ವೀರ ಸಾವರ್ಕರ್.  ಸ್ಪೂರ್ತಿ ಮತ್ತು ಜೀವನ ಪ್ರೇಮ ತುಂಬುವ ಇವರ ಸಂತತಿ ಬೆಳೆಯಲಿ. 

Friday, April 15, 2016

ಶ್ರೀ ಶಂಕರರಾಮ ಸರ್ವಾಂಗ ರಕ್ಷಾ ಸ್ತುತಿ

|| ಶ್ರೀ ಶಂಕರರಾಮ ಸರ್ವಾಂಗ ರಕ್ಷಾ ಸ್ತುತಿ ||

ರಾಮಾ ಸತತ ನಿನ್ನ ನಾಮ ಕೊಂಡಾಡುವ ನೇಮವಿತ್ತು ಸಲಹೋ || ಪ ||
ಕಾಮಿತಾರ್ಥಗಳ ಕರುಣಿಸೋ ರಘುಪತಿ ಶ್ಯಾಮ ಮನೋಹರ ಹೃದಯದಿ ನೆಲೆಸೋ ||

ಶಿರವೆರಗಲಿ ತವ ಪದಾಂಬುರುಹಕೆ, ಕರಗಳರ್ಚಿಸಲಿ ತವ ಪಾದುಕೆಯಾ || ೧ ||
ಕರ್ಣಂಗಳು ನಿನ್ನ ಕೀರ್ತನೆ ಕೇಳಲಿ, ಜಿಹ್ವೆ ಪೇಳಲಿ ನಿನ್ನ ಭಜನೆಯ ರಾಘವ || ೨ ||
ಕಂಗಳು ಮಂಗಳ ಮೂರ್ತಿಯ ಕಾಣಲಿ, ಭಂಗವಾಗಲಿ ಎನ್ನ ಗರ್ವಾಂಧಕಾರ ||೩||
ಹಿಂಗದೆ ಕುಣಿಯಲಿ ಕಾಲ್ಗಳು ಯಾತ್ರೇಯೋಳ್, ಸಂಘವಿರಲಿ ನಿನ್ನ ದಾಸರಂದೆನೆಗೆ ||೪||
ಕರಗಳು ಬರೆಯಲಿ ರಾಮ ನಮವನು, ಶಿರಧರಿಸಲಿ ನಿನಗೆ ಮುಡಿದಿಹ ಹೂವ ||೫||
ಸುರಿಯಲಿ ಹರ್ಷಾಶೃ ಕಂಗಳೆರಡರಲಿ, ಮರೆಯಲಿ ದೇಹವು ತವ ಕೀರ್ತನೆಯೋಳ್ ||೬||
ನಾಸಿಕವಾಘ್ರಾಣಿಸಲಿ ತುಳಸಿಯನು,ಅಶಾಪಾಶಾಗಳು ಸುಟ್ಟು ಹೋಗಲಿ ||೭||
ಕೇಶವದಾಸನು ತನೆತವದಾಸರ ,ದಾಸನಾಗುವ ಭಾಗ್ಯ ಬೇಗ ದೊರಕಲಿ ||೮||
ರಾಮಾ ಸತತ ನಿನ್ನ ನಾಮ ಕೊಂಡಾಡುವ ನೇಮವಿತ್ತು ಸಲಹೋ || ಪ ||
            || ಜೈ ಶ್ರೀ ರಾಮ ||

Wednesday, March 30, 2016

ತ್ರಿಫಲಾ ಎಂಬ ಅಮೃತಬಿಂದು

ತ್ರಿಫಲಾ : ನೆಲ್ಲಿ ಕಾಯಿ ( ಆಮ್ಲಕ - Embilica Officinalis) , ಅಳಲೇಕಾಯಿ (  ಹರೀತಕ - Terminalia chebula )  ಮತ್ತು ತಾರೇಕಾಯಿ ( ವಿಭೀಡಕ - Terminalia Bellirica)- ಇವುಗಳ ಮಿಶ್ರಣವನ್ನು ತ್ರಿಫಲಾ ಎಂದು ಕರೆಯಲಾಗುತ್ತದೆ. ಚರಕ ಸಂಹಿತೆ ಮತ್ತು ಸುಶ್ರುತ  ಸಂಹಿತೆಯಲ್ಲಿ ಇದರ ಉಲ್ಲೇಖವಿದೆ . ತ್ರಿಫಲಾ ಚೂರ್ಣವನ್ನು  'ಜೀವನದ ಅಮೃತ' ಎಂದೇ ಬಣ್ಣಿಸಲಾಗುತ್ತದೆ. ಇದು ನಿಜಕ್ಕೂ ಜೀವ ಚೈತನ್ಯ ತಂದುಕೊಡುವ ಅಮೃತ ವರ್ಷಿಣಿಯೇ. ನೆಲ್ಲಿಕಾಯಿಯನ್ನು ವೈದ್ಯ ಗ್ರಂಥಗಳಲ್ಲಿ "ಜಗದ್ದಾತ್ರೀ, ತ್ರಿದೋಷ ಶಮನೀ, ವೃಷ್ಯಾ ವಯಃ ಸ್ಥಾಪಿನಿ" ಎಂದು ಕೊಂಡಾಡಿದ್ದಾರೆ . ಅಳಲೇ ಕಾಯನ್ನು "ಅಭಯಾ" ಎಂದು ಕರೆದಿದ್ದಾರೆ. ಇದೊಂದು ಸರ್ವೋತ್ತಮ ರಸಾಯನವಾಗಿದೆ.

ಅದೃಷ್ಟ ವಶಾತ್  ಈಗ ನಮ್ಮ ಧರ್ಮಗುರುಗಳ ಕೃಪೆಯಿಂದ ಆಯುರ್ವೇದದ ಪುನರುತ್ಥಾನವಾಗಿ ಜನಸಾಮಾನ್ಯರಿಗೆ ಇಂತಹ ಅಮೃತೋಪಮವಾದ ಗಿಡಮೂಲಿಕೆಗಳು ಸುಲಭವಾಗಿ ಜನಸಾಮಾನ್ಯರಿಗೆ ದೊರೆಯುವಂತೆ ಆಗಿವೆ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಆಗಲಿ, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ "ಶ್ರೀ ಶ್ರೀ ಆಯುರ್ವೇದ"ದಿಂದಾಗಲಿ ಇಂತಹ ಅಮೃತ ಸಮಾನ ಆಯುರ್ವೇದ ಉತ್ಪನ್ನಗಳು ಜನಮಾನಸದಲ್ಲಿ ಉಳಿಯುವ ಹಾಗೆ ಆಗಿದೆ. 

Saturday, February 27, 2016

ತೃಷ್ಣಾಕ್ಷಯಸುಖ

ಯಚ್ಚ ಕಾಮಸುಖಂ ಲೋಕೆ ಯಚ್ಚ ದಿವ್ಯಂ ಮಹತ್ಸುಖಂ |
ತೃಷ್ಣಾಕ್ಷಯಸುಖಸ್ಯೈತೆ ನಾರ್ಹತಃ ಷೋಡಶೀಂ ಕಲಾಂ ||

ಈ ಭೂಲೋಕದಲ್ಲಿ ಪ್ರಸಿದ್ಧವಾದ ವೈಷಯಿಕ ಸುಖವೂ ಹಾಗು ಪರಲೋಕದಲ್ಲಿ ಲಭಿಸುವ ಅಲೌಕಿಕ ಸ್ವರ್ಗ ಸುಖವು ಇವೆರಡೂ "ಆಸೆಯ ತ್ಯಾಗದಿಂದ" ಲಭಿಸುವ ನೆಮ್ಮದಿಯ ಹದಿನಾರನೇ ಒಂದು ಭಾಗಕ್ಕೂ ಸಮನಾಗುವುದಿಲ್ಲ.

Monday, January 25, 2016

ರಾಷ್ಟ್ರದೇವೋಭವ

ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ
ಧ್ರುವಂ ತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂ ಧಾರಯತಾಂ ಧ್ರುವಂ ( ಋ ೧೦-೧೭೩-೫)

ಎಲೈ ರಾಜನೇ, ನಿನ್ನ ರಾಷ್ಟ್ರವನ್ನು ಈ ದೇವತೆಗಳು ಭದ್ರವಾಗಿ, ಶಾಶ್ವತವಾಗಿ ಧರಿಸಲಿ. ಸಾಮ್ರಾಟನಾದ ವರುಣ, ಜ್ನಾನದಾಯಕ ಬೃಹಸ್ಪತಿ, ಕ್ಷಾತ್ರಗುಣ ಸಂಪನ್ನ ಇಂದ್ರ, ಬ್ರಹ್ಮತತ್ವದ ಸಾಕಾರಮೂರ್ತಿ ಅಗ್ನಿ -- ಇವರ ಆಶೀರ್ವಾದ ನಿನಗೆ ಸದಾ ಇರಲಿ. ಇವರು ನಿನ್ನನ್ನು ರಕ್ಷಿಸಿ, ರಾಷ್ಟ್ರವನ್ನು ಎತ್ತಿ ಹಿಡಿದು ಉನ್ನತಿಗೆ ನಡೆಸಲಿ.

ಗಣರಾಜ್ಯೋತ್ಸವದ ಶುಭಾಶಯಗಳು