Wednesday, March 23, 2011
ನಮನ
ಇಂದು ೨೩ನೇ ಮಾರ್ಚ್ ೨೦೧೧, ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರ ಬಲಿದಾನ ದಿನ. ಎಲ್ಲೆಡೆ ಬ್ರಷ್ಟಾಚಾರ, ಅರಾಜಕತೆ, ನೈತಿಕತೆಯ ಅಭಾವ ಕಾಡುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ, ಈ ಮಹನೀಯರ ಬಲಿದಾನದ ಕಥೆ ನಮ್ಮ ದೇಶದ ಯುವಕರನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಲಿ. ನಮ್ಮ ನೇತಾರರಿಗೆ ’ತ್ಯಾಗ’ ಎಂದರೆ ಏನು ಎಂಬುದರ ಬಗ್ಗೆ ನೆನಪಿಸಲಿ.
Wednesday, March 02, 2011
ಲವ ಲೇಶ
ದಮ್ಮಯ್ಯ ! ನನ್ನ ಬಳಿಗೆ ಸಂಪೂರ್ಣ ಸತ್ಯವನು ತರಲು ಬೇಡಿರಯ್ಯ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ
Subscribe to:
Posts (Atom)