Sunday, August 15, 2010

ಕಲಿಕೆ

ನಾನಾ ಭಾವೋಪ ಸಂಪನ್ನಂ ನಾನಾ ಅವಸ್ಥಾಂತರಾತ್ಮಕಂ
ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ

ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ
ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ -- ಜಯಂತ ಭಟ್ಟ

ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ

Saturday, August 07, 2010

ಯಾತ್ರೆ ಮುಗಿಸಿದ ’ನಡೆದಾಡುವ ಕಾವ್ಯಕೋಶ’



ದ.ರಾ.ಬೇಂದ್ರೆ ಕಾವ್ಯ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಹಲೋಕ ತ್ಯಜಿಸುವ ಕೆಲ ಘಂಟೆಗಳ ಮುನ್ನ ’ನಡೆದಾಡುವ ಕಾವ್ಯ ಕೋಶ’ ಎಂದು ಖ್ಯಾತರಾಗಿರುವ - ಕಿ.ರಂ. ನಾಗರಾಜ.

ಕಿತ್ತಾನೆ ರಂಗಪ್ಪ ನಾಗರಾಜ (ಕಿ.ರಂ.ನಾಗರಾಜ) ಇನ್ನಿಲ್ಲ. ನೆನ್ನೆಯಷ್ಟೆ ಸಂಚಯ ಮತ್ತು ಸುಚಿತ್ರ ಕಲಾ ಕೇಂದ್ರ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಸಹೃದಯರನ್ನು ಬೇಂದ್ರೆ ಕಾವ್ಯದಲ್ಲಿ ತಲ್ಲೀನರಾಗಿಸಿದ್ದ ಗಾರುಡಿಗ ಇಲ್ಲವೆಂದರೆ ನಜಕ್ಕೂ ನಂಬಲಾಗತ್ತಿಲ್ಲ. ’ಜೋಗಿ’ ಪದ್ಯವನ್ನು ಓದಬೇಕೆಂದು ಅವರು ಗುರುತು ಹಾಕಿಕೊಂಡು ಬಂದಿದ್ದರೂ, ಅವರ ನೆನ್ನೆಯ ಮನೋಧರ್ಮಕ್ಕೆ ಕಾಕತಾಲೀಯವೆಂಬಂತೆ ಒಲಿದು ಬಂದದ್ದು ಬೇಂದ್ರೆಯವರ ’ಸೃಷ್ಟಿ - ಪ್ರಳಯ’ ಕವನ. ಪ್ರತಿಯೊಂದು ಕ್ಷಣದಲ್ಲಿಯೂ ಸೃಷ್ಟಿ ಮತ್ತು ಪ್ರಳಯಗಳು ಬದಿ ಬದಿಯಲ್ಲಿಯೇ ಹೇಗೆ ಸುಳಿದಾಡುವವು ಎಂದು ತಮ್ಮ ಜೀವನದ ಅಂತಿಮ ಉಪನ್ಯಾಸದಲ್ಲಿ ಕಿ.ರಂ. ಮಾರ್ಮಿಕವಾಗಿ ನುಡಿದಿದ್ದರು. ಆ ಕ್ಷಣದಲ್ಲಿ ಶ್ರುಷ್ಟಿಯಾದ ಕಾವ್ಯ ವೃಷ್ಟಿ, ಇನ್ನು ಕೆಲವ ಘಂಟೆಗಳಲ್ಲಿ ಲಯವಾಗಿ, ಪ್ರಳಯವಾಗುತ್ತದೆಂದು ಕನಸು ಮನಸುನಲ್ಲೂ ನೆನೆಸಿರಲಿಲ್ಲ. ಕಾವ್ಯವನ್ನು ಅನುಭವಿಸಬೇಕೆಂದಿದ್ದರಷ್ಟೆ. ಸೃಷ್ಟಿ ಪ್ರಳಯಗಳ ಅನುಭವ ಮಾಡಿಸಿ ತೀರಿಕೊಂಡರು. ಉಪನ್ಯಾಸದ ಕೊನೆಯಲ್ಲಿ, -- " ನಾನು ನಿಮಗೆ ಹೇಳಬೇಕಾದುದು ಏನೂ ಇಲ್ಲ. ಈ ಕೆಲ ಘಂಟೆಗಳಲ್ಲಿ ನನ್ನ ಭಾವಮಂಡಲದಲ್ಲಿ ಸುಳಿದಾಡಿದ ಹಲವು ಲಹರಿಗಳ ಕುರಿತಾಗಿ ನನಗೆ ನಾನೆ ಮಾತನಾಡಿಕೊಂಡಿದ್ದೇನೆ. you people have just overheard " ಎಂದು ನುಡಿದಿದ್ದರು.

.