Sunday, August 30, 2015

ಶಶಾಂಕಾರ್ಧಮೌಲೇ

 ಸಂಸ್ಕೃತ ಭಾಷೆಯಲ್ಲಿ ಒಂದು ಅನುಸ್ವರ - ವಿಸರ್ಗ ಲೋಪ ಮಾತ್ರದಿಂದ ಅರ್ಥ ವ್ಯತ್ಯಯವಾಗ ಬಹುದು. ’ವೇದಸಾರ ಶಿವ ಸ್ತುತಿ’ ಪ್ರವಚನದಲ್ಲಿ ಅಂತದ್ದೊಂದು ಸ್ವಾರಸ್ಯ ಕಂಡು ಬಂತು. ಈ ಸ್ತವದಲ್ಲಿ "ಶಶಾಂಕಾರ್ಧಮೌಲೇ" ಎಂಬ ಒಂದು ಪ್ರಯೋಗವಿದೆ. ಇದರಲ್ಲಿ ಗಮನಿಸ ಬೇಕಾದ ವಿಷಯವೆಂದರೆ "ಅರ್ಧ:" ಎಂಬ ಪುಲ್ಲಿಂಗ ಪದದ ಪ್ರಯೋಗ ಮಾಡಿದರೆ, "ಚೂರು" ಎಂಬ ಅರ್ಥವನ್ನು ನೀಡುತ್ತದೆ. ಅದೇ, "ಅರ್ಧಂ" ಎಂಬ ನಪುಂಸಕ ಪದ ಪ್ರಯೋಗ ಮಾಡಿದರೆ , "ಅರ್ಧ ಭಾಗ" ಎಂಬ ಅರ್ಥ ನೀಡುತ್ತದೆ. ಹೀಗೆ, ಅರ್ಧಃ ಮತ್ತು ಅರ್ಧಂ ಎಂಬ ಕಿಂಚಿತ್ ಪ್ರಯೋಗಾಂತರದಿಂದ ಸಹ ಬೀರೆ ಅರ್ಥ ಸ್ಫುರಿಸ ಬಹುದು.