Sunday, January 16, 2011

ಧನ್ವಂತ್ರಿ ವನ




ಙ್ನಾನಭಾರತಿಯ ಆವರಣದಲ್ಲಿ ೩೭ ಎಕರೆ ಧನ್ವಂತ್ರಿವನವಿದೆ. ಇದೊಂದು ನೈಸರ್ಗಿಕ ದವಾಖಾನೆ. ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲು ಈ ವನ ಸಿದ್ದವಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ೧೯೮೭ರಲ್ಲಿ ಔಷಧೀಯ ಸಸ್ಯಗಳ ವನವನ್ನು ಬೆಳಸಲಾಯಿತು. ಇಲ್ಲಿ ಇರುವ ಪ್ರತಿಯೊಂದು ಗಿಡ, ಮರ, ಬೇರು, ಎಲೆ ಔಷಧೀಯ ಗುಣ ಹೊಂದಿದೆ. ಇಲ್ಲಿ ಸಸಿಗಳು ಗರಿಷ್ಟ ೩ ರೂಪಾಯಿಗೆ ದೊರೆಯುತ್ತವೆ. ಈ ಸಸಿಗಳನ್ನು ತಂದು ಸಣ್ಣಪುಟ್ಟ ಪಾಟುಗಳಲ್ಲಿ, ಹೂದಾನಿಗಳಲ್ಲಿ ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಸ್ಯಗಳ ಔಷಧೀಯ ಗುಣ: ಬಿಳಿಹಿಂಡಿ ಗಿಡದ ಬೇರನ್ನು ೩೦ ದಿನ ಬಳಸುವುದರಿಂದ ಕಿಡ್ನಿ ಸ್ಟೋನ್ ಕರಗಿಸಬಹುದು, ಮಧುನಾಶಿನಿ ಎಲೆಯಿಂದ ಸಕ್ಕರೆ ಖಾಯಿಲೆ ಹತೋಟಿಗೆ ತರಬಹುದು, ಬಾಯಿಹುಣ್ಣಿಗೆ ಬಸಲೆ ಎಲೆ, ರೋಗನಿರೋಧಕ ಶಕ್ತಿಗೆ ಶ್ರೀತುಳಸಿ, ಎಲ್ಲ ವಿಧವಾದ ಅಲರ್ಜಿಗೆ ದೊಡ್ಡಪತ್ರೆ ಸೊಪ್ಪು, ಸುಸ್ತು- ಜ್ವರ ಇತ್ಯಾದಿಗೆ ಅಮೃತಬಳ್ಳಿ, ಙ್ನಾಪಕಶಕ್ತಿಗೆ ಒಂದೆಲಗ. ಉಷ್ಣನಿವಾರಿಸಲು ಸೊಗದೆ ಬೇರು, ರಕ್ತಹೀನತೆ ನಿವಾರಣಗೆ ಚಕ್ರಮುನಿ ಸೊಪ್ಪು, ಕೆಮ್ಮು ನಿವಾರಣೆಗೆ ಆಡುಸೋಗೆ ಸೊಪ್ಪು...ಹೀಗೆ ಪಟ್ಟಿ ಬೆಳೆಯುತ್ತಲೆ ಇರುತ್ತದೆ.

ಇನ್ನೇಕೆ ತಡ ? ನಿಮ್ಮ ನೈಸರ್ಗಿಕ ತೋಟವನ್ನು ಪ್ರಾರಂಭಿಸಿ. ಸಂಪರ್ಕ: ಚಂದ್ರಕಾಂತ್, ವಲಯ ಅರಣ್ಯಾಧಿಕಾರಿ - ೯೪೪೮೫೧೯೩೪೭

ಕೃಪೆ: ವಿಜಯಕರ್ನಾಟಕ. ೪ ಜನವರಿ ೨೦೧೧