Monday, June 21, 2010

ಮಸಾಲಾಪುರಿ ಮತ್ತು ಅಷ್ಟಾವಧಾನ

೧೫ ಡಿಸೆಂಬರ್ ೧೯೯೧ರ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಸಂಪೂರ್ಣ ಶತಾವಧಾನದಲ್ಲಿ ಶತಾವಧಾನಿ. ಡಾ | ರಾ. ಗಣೇಶ್ ಅವರು ಕನ್ನಡ ದತ್ತಪದಿಯಲ್ಲಿ , ’ಮಸಾಲ ಪೂರಿ’ ಮತ್ತು ’ಪಾನಿ ಪುರಿ’ ಪದಗಳನ್ನು ಬಳಸಿ ರಚಿಸಿದ ಊರ್ಮಿಳೆ ಬಗೆಗಿನ ಪದ್ಯ

ವಿದೇಹನರಪಾಟವೀಕುಸುಮಮಸಾಲವಲ್ಲೀಸಮಳ್
ಸದಾ ನಿಯಮನಿಷ್ಠುರಳ್ ಸುಶಮೆ ಪೂರಿತಳ್ ಪ್ರೇಮದಿಂ |
ಚಿದಂಶೆ ರಘುಜಾನುಜಪ್ರಿಯೆ ಮನಃಕೃಪಾನೀರದಳ್
ಮದಾಪಹರೆ ಮೈಥಿಲೀತಪನಪೂರಿತಳ್ ಪ್ರೇರಿತಳ್ ||

ಸಾಲ = ಮರ ; ನೀರದ = ಮೋಡ
-----------
ಇನ್ನೊಂದು ಉದಾಹರಣೆಯಲ್ಲಿ ಖಾನಾ, ಪೀನಾ , ಸೋನಾ, ಗಾನಾ ಉಪಯೋಗಿಸಿ ಜೀವನ್ಮುಕ್ತ ವರ್ಣನೆ

ವಿಷಯ ವಿಮುಖಾ ನಾನಾತ್ವೋದ್ಭಾಸಕೇಪಿ ಜಗತ್ತ್ರಯೇ
ಸದಮಲಚಿದಾನಂದಾಪೀನಾತ್ಮತತ್ವಪರಾಯಣಾಃ |
ಸರಸಮನಸೋ ನಾಟ್ಯಾಲೋಕಿಕ್ರಮೇಣ ನಿರಂತರಂ
ಪ್ರಣಯನಪರಾ ಯೋಗಾನಾಗಾ ಜಯಂತಿ ಮುನೀಶ್ವರಾಃ ||