Monday, January 26, 2009

ರುದ್ರಪಟ್ನದಲ್ಲಿ ನಾದ ತಾಂಡವ



ಹಾಸನ ಜಿಲ್ಲೆಯ ರುದ್ರಪಟ್ನ ಕರ್ನಾಟಕ ಸಂಗೀತದ ವಲಯದಲ್ಲಿ ಮನೆಮಾತು. ನಾಡಿನ ಶ್ರೇಷ್ಟಶ್ರೇಣಿಯ ಹಲವಾರು ಕಲಾವಿದರು ರುದ್ರಪಟ್ಟಣದ ಮೂಲದವರೆ. ಈ ಕ್ಷೇತ್ರದಲ್ಲಿ ನಾದಬ್ರಹ್ಮ ಮತ್ತು ವೇದಬ್ರಹ್ಮ ಒಂದೆಡೆ ನೆಲೆಸಿದ್ದಾರೆ.ಸಂಗೀತಗ್ರಾಮ ರುದ್ರಪಟ್ಟಣದಲ್ಲಿ ಗಾನಕಲಾಭೂಷಣ ವಿದ್ವಾನ್. ಶ್ರೀ ಆರ್.ಕೆ.ಪದ್ಮನಾಭ ಅವರ ನೇತೃತ್ವದಲ್ಲಿ ವಿಶಿಷ್ಟವಾದ ತಂಬೂರಿ ಆಕಾರದ ಸಪ್ತಸ್ವರಮಂದಿರ ನಿರ್ಮಿಸಿದ್ದಾರೆ. ಕನಕ, ಪುರಂದರ, ವಾದಿರಾಜರಲ್ಲದೆ -- ತ್ಯಾಗಯ್ಯ,ದೀಕ್ಷಿತರು,ಶ್ಯಾಮಶಾಸ್ತ್ರಿಗಳು ಮತ್ತು ವಾಗ್ದೇವಿಗೆ ನಿತ್ಯ ಗಾನಪೂಜೆ ನಡೆಯುತ್ತದೆ.ಇದಲ್ಲದೆ ಪ್ರತಿಯೊಂದು ಮೇಳಕರ್ತ ರಾಗಕ್ಕೆ ಒಂದು ಎಂಬಂತೆ ನಿವೇಶನವನ್ನು ರಚಿಸಿ ’ನಾದಲೋಕ’ ಎಂಬ ಗ್ರಾಮವನ್ನೆ ಸೃಶ್ಟಿಸಿದ್ದಾರೆ. ಇಲ್ಲಿನ ಎಲ್ಲವೂ ಒಂದು ರೀತಿ ವಿಶಿಷ್ಟವೆ. ತಂಬೂರಿ ರೂಪದ ಸಪ್ತ ಸ್ವರಮಂದಿರವಾಗಲಿ, ಗಾನ ಪೂಜೆಯಾಗಲಿ, ವಿನೂತನ ವಸತಿ ಸಮುಚ್ಚಯವಾಗಲಿ - ಎಲ್ಲವೂ ವಿಶೇಷವೇ.