Monday, October 26, 2020

ಸೇವಾ ವೃತಿ.

 ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |

ಯೋ ನ ದದಾತಿ ನ ಭುಂಕ್ತೇ  ತಸ್ಯ ತ್ರತೀಯಾ ಗತಿರ್ಭವತಿ ||--ಪಂಚ ತಂತ್ರ.

 ಸಂಪತ್ತಿಗೆ  ದಾನ, ಭೋಗ, ಮತ್ತು ನಾಶ ಎಂಬ ಮೂರೇ  ಗತಿಗಳು.  ಯಾವನು ದಾನವನ್ನು(ಸತ್ಪಾತ್ರರಿಗೆ)  ಮಾಡುವುದಿಲ್ಲವೋ, ತಾನೂ (ತನ್ನವರೊಂದಿಗೆ ಸಂಪತ್ತನ್ನು) ಭೋಗಿಸುವುದಿಲ್ಲವೋ  ಆ ಅವನಲ್ಲಿರುವ ಸಂಪತ್ತು ಅದರ ಮೂರನೆಯ ಗತಿಯಾದ    ನಾಶವನ್ನು ಹೊಂದುವುದು ನಿಶ್ಚಿತವೇ.  (ರಾಜ (ಸರಕಾರ) , ಚೋರ (ವಂಚಕ) ಮತ್ತು ಅಗ್ನಿ – ಈ ಮೂರು ನಾಶದ  ವಿಧಾನವಾಗಿವೆ.

ವಿಜಯದಶಮಿ

 ಶಮೀ ಶಮಯತೇ ಪಾಪಂ  ಶಮೀ ಶತ್ರು ವಿನಾಶನಿ|

ಅರ್ಜುನಸ್ಯ ಧನುರ್ಧಾರೀ  ರಾಮಸ್ಯ ಪ್ರಿಯದರ್ಶಿನಿ||