Monday, May 14, 2012

ಆನಂದಲಹರೀ



ಅಯಃ ಸ್ಪರ್ಶೇ ಲಗ್ನಂ ಸಪದಿ ಲಭತೇ ಹೇಮಪದವೀಂ
ಯಥಾ ರಥ್ಯಾಪಾಥಃ ಶುಚಿ ಭವತಿ ಗಂಗೌಘಮಿಲಿತಮ್ |
ತಥಾ ತತ್ತತ್ ಪಾಪೈಃ ಅತಿಮಲಿನಂ ಅಂತರ್ಮಮ ಯದಿ
ತ್ವಯಿ ಪ್ರೇಮ್ಣಾ ಸಕ್ತಂ ಕಥಮಿವ ನ ಜಾಯೇತ ವಿಮಲಂ ||

ತಾತ್ಪರ್ಯ :  ಸ್ಪರ್ಶಮಣಿಯಿಂದ ಸ್ಪರ್ಶಿಸಿದರೆ ಕಬ್ಬಿಣವು ಬಂಗಾರವಾಗುವುದು; ದಾರಿಯ ಮಗ್ಗಲಿನ ಕೊಳಚೆ ನೀರು ಗಂಗೆಯನ್ನು ಸೇರಿದರೆ ಶುದ್ಧವಾಗುವುದು. ಇದರಂತೆ, ಹೇ ಭವಾನಿ, ನನ್ನ ಹೃದಯವು ಅನೇಕ ಪಾಪಗಳಿಂದ ಅತಿ ಮಲಿನವಾಗಿದ್ದರೂ ಕೂಡ, ನಿನ್ನಲ್ಲಿ ಪ್ರೇಮಸ್ವರೂಪದ ಭಕ್ತಿಯನ್ನು ಪಡೆಯಿತೆಂದರೆ, ಹೇಗೆ ತಾನೇ ನಿರ್ಮಲವಾಗುವುದಿಲ್ಲ?