Friday, October 12, 2007

ನಾಡಹಬ್ಬ













ಎಲ್ಲರಿಗೂ ನವರಾತ್ರಿ ಶುಭಾಶಯಗಳು.

--------------------------------
ಕವನ : ನಾಡಹಬ್ಬ
ಬರ್ದಿದ್ದು : ಶ್ರೀಕಾಂತ್
--------------------------------

ಚೆಲುವ ನಾಡ,ನಾಡ ಹಬ್ಬ ಬಂದಿತಿದೊ ಗೆಳೆಯ
ಸಿಂಗರಿಸಿಹ ಸಾಲುಗೊಂಬೆ ಸ್ವರ್ಗವೆನಿಸೆ ಇಳೆಯ

ಸಂಗೀತದ ಸಿರಿಯ ತವರು,ಕಾಣು ಕಲೆಯ ನೆಲೆಯ
ಮುಸ್ಸಂಜೆಯ ಮಧುರ ಸ್ವರದ ಮಂದ್ರಶೃತಿಯ ಅಲೆಯ

ಮಲ್ಲರಾಳೊ ಮಣ್ಣಮಹಿಮೆ ಮೆರೆಯೊ ವೀರ ವಲಯ
ಅಂಬಾರಿಯ ಅಂದದಕರಿ ಆನಂದದ ನಿಲಯ

ಅರಮನೆಯದು ಅಮಿತ ಪ್ರಭೆಯ ಚೆಲ್ಲೊ ಅರಸರಾಲಯ
ತಾಯ ಕೃಪೆಯ ಕೊರು ತೊಡಿಸಿ, ಹೊನ್ನುಡಿಗಳ ಮಾಲೆಯ
----------------------------------

Sometime during Dasara 2006 ಬರ್ದಿದ್ದು.'ತಾಯೇ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ', ರೀತಿ ಈ ಮೇಲಿನ ಕವನವನ್ನು ಹಾಡಿದರೆ,ಗೇಯ ಗುಣ ಗೋಚರ ಆಗತ್ತೆ.

No comments: