Monday, November 18, 2019

ಸದಾಶಿವಮಹಂ ಭಜೇ

ಶುದ್ಧಸ್ಪಟಿಕಸಂಕಾಶಂ ಶುದ್ಧವಿದ್ಯಾ-ಪ್ರದಾಯಕಂ।
ಶುದ್ಧಂ ಪೂರ್ಣಂ ಚಿದಾನಂದಂ ಸದಾಶಿವಮಹಂ ಭಜೇ ॥ 

ಸ್ವಸ್ತಿಕ



ಸ್ವಸ್ತಿಕದ ಗೆರೆಗಳು ಮಧ್ಯ ಬಿಂದುವಿಗೆ ಸೇರುವಂತೆ ರಚಿಸಬೇಕು. ಮಧ್ಯದ ಬಿಂದುವೆ ಬ್ರಹ್ಮ ತತ್ತ್ವ.

 ಧರ್ಮ ― ಸರಿಯಾದ ನಡೆವಳಿಕೆ ಯಿಂದ ಕೂಡಿದ ಧಾರ್ಮಿಕ ಆಚರಣೆ.
ಅರ್ಥ ― ಸುವ್ಯವಸ್ಥೆ, ಆರ್ಥಿಕ ದೃಢತೆ.
 ಕಾಮ ― ಸಣ್ಣ  ಪುಟ್ಟ, ದೊಡ್ಡ ಸಂತೋಷ ಆನಂದಗಳು.
 ಮೋಕ್ಷ – ಅಹಂಕಾರವನ್ನು ಮೀರಿದ ನನ್ನ ನಿಜ ಸ್ವರೂಪದ ಅರಿವು.

 ಈ ಪುರುಷಾರ್ಥಗಳ ಪ್ರತೀಕವಾದ ಗೆರೆಗಳು.

 ಸಾಲೋಕ್ಯ ― ಇಷ್ಟ ದೈವದ ಲೋಕ ಪ್ರಾಪ್ತಿ.
 ಸಾರೂಪ್ಯ ― ಇಷ್ಟ ದೈವದ ರೂಪ.
 ಸಾಮೀಪ್ಯ ― ಇಷ್ಟ ದೈವದ ಅತಿ ಸಮೀಪ ಸೇವೆ, ಸಂಪರ್ಕ.
 ಸಾಯುಜ್ಯ ― ಇಷ್ಟ ದೈವದಲ್ಲಿಯೇ, ಉಪ್ಪು ನೀರಿನಲ್ಲಿ ಕರಗಿ ಬಿಡುವಂತೆ ಸೇರ್ಪಡೆ. ದೈವವು ಒಂದು ಶಕ್ತಿಯೂ ಆಗಿರುವುದರಿಂದ, ಆ ಶಕ್ತಿ ಬಿಟ್ಟರೆ ನನ್ನ ಅಸ್ತಿತ್ವ ಇಲ್ಲ. ಹಾಗಾಗಿ ಅತ್ಯುನ್ನತ ಭಕ್ತಿಯಿಂದ ಸಾಯುಜ್ಯ ಮುಕ್ತಿ ದೊರಕುತ್ತದೆ.

 ಮನೋ ಬುದ್ಧಿ ಚಿತ್ತ ಅಹಂಕಾರ ಅನ್ನುವ ಗೆರೆಗಳು.

 ಪ್ರೇಮ , ಶ್ರದ್ಧಾ , ವಿಶ್ವಾಸ , ಸಮರ್ಪಣೆ ಅನ್ನುವ ಬಿಂದುಗಳು.

ಎಲ್ಲವೂ ಸೇರಿದರೆ ಸ್ವಸ್ತಿಕ. ಸುಂದರ ವ್ಯಾಖ್ಯಾನ. ತಿಳಿಸಿಕೊಟ್ಟಿರುವ ಮಹಾ ತಾಯಿಗೆ ವಂದನೆಗಳು.

ಅಪಾರ ಕರುಣಾ ಸಿಂಧುಂ



ಅಪಾರ ಕರುಣಾ ಸಿಂಧುಂ ಜ್ಞಾನದಂ ಶಾಂತ ರೂಪಿಣಂ ।
ಶ್ರೀ ಚಂದ್ರಶೇಖರ ಗುರುಂ ಪ್ರಣಮಾಮಿ ಮುದಾನ್ವಹಂ ॥

ಮಾ ಲಿಖ ಮಾ ಲಿಖ ಮಾ ಲಿಖ

ಇತರಪಾಪಫಲಾನಿ ಯಥೇಚ್ಛಯಾ ವಿಲಿಖಿತಾನಿ ಸಹೇ ಚತುರಾನನ |
ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ ||

Tuesday, November 12, 2019

ಭಾಗ್ಯಂ ಫಲತಿ ಸರ್ವತ್ರ


ಸಮುದ್ರಮಥನಾಲ್ಲೇಭೇ
ಹರಿರ್ಲಕ್ಷ್ಮೀಂ ಹರೋ ವಿಷಮ್ |
ಭಾಗ್ಯಂ ಫಲತಿ ಸರ್ವತ್ರ
ನ ವಿದ್ಯಾ ನ ಚ ಪೌರುಷಮ್ ||

ಸಮುದ್ರಮಥನ ಕಾಲದಲ್ಲಿ ವಿಷ್ಣುವು ಲಕ್ಷ್ಮಿಯನ್ನೂ, ಶಿವನು ವಿಷವನ್ನೂ ಪಡೆದರು. ಬಹುಶಃ ಅದೃಷ್ಟವೇ ಎಲ್ಲ ಕಡೆಯಲ್ಲೂ ಮುಖ್ಯವೇ ಹೊರತು ವಿದ್ಯೆ, ಶಕ್ತಿ ಮುಂತಾದುವುಗಳು ಅಲ್ಲವೇನೋ?!