ಇತ್ತೀಚೆಗೆ,
ನನ್ನಂತರಂಗದೆ
ಹೊಮ್ಮುತಿರುವ ಅಲೆ:
ಜೀವನ(ದ)ಅರಿ
ಸಿಕೆ.
ಅಭಿ
ವ್ಯಕ್ತಿ ಸ್ವಾತಂತ್ರ್ಯ.
ಅನಿವಾರ್ಯತೆ!
ಎಡೆಬಿಡದ ಹುಡು
ಕಾಟ
---
Sunday, September 30, 2007
Sunday, August 19, 2007
ಕಬ್ಬಿಣದ ಮಲ್ಲಿಗೆ
--
ಏಳುಸುತ್ತಿನ ಮಲ್ಲಿಗೆಯ ಸುತ್ತೇಳು ಸುತ್ತಿನ ಕೋಟೆ
ಕೋಟೆಯೊಳಗಿನ ರಾಣಿ ರಾಣಿಗವಳದೆ ಚಿಂತೆ
ವಿಧಿಹೊತ್ತ ಪಲ್ಲಕ್ಕಿ, ತೆರೆ ಹೊದೆದ ಪರದೆ
ಇದನೆಸಗಿದಾ ಕಪಟಿಗೆ ನನ ಶಾಪವಿರಲಿ
--
PS: ನೊಂದು ಬರೆದ ೨ ಸಾಲು. ಮುಂದೆ ಪದಗಳು ಹೊರಡಲಿಲ್ಲ.
remaining 2 lines written on 29 Nov 10:29PM
ಏಳುಸುತ್ತಿನ ಮಲ್ಲಿಗೆಯ ಸುತ್ತೇಳು ಸುತ್ತಿನ ಕೋಟೆ
ಕೋಟೆಯೊಳಗಿನ ರಾಣಿ ರಾಣಿಗವಳದೆ ಚಿಂತೆ
ವಿಧಿಹೊತ್ತ ಪಲ್ಲಕ್ಕಿ, ತೆರೆ ಹೊದೆದ ಪರದೆ
ಇದನೆಸಗಿದಾ ಕಪಟಿಗೆ ನನ ಶಾಪವಿರಲಿ
--
PS: ನೊಂದು ಬರೆದ ೨ ಸಾಲು. ಮುಂದೆ ಪದಗಳು ಹೊರಡಲಿಲ್ಲ.
remaining 2 lines written on 29 Nov 10:29PM
Saturday, August 11, 2007
ಆನಂದಮಯ ಈ ಜಗಹೃದಯ
ನನ್ನ ಹೃದಯಕ್ಕೆ ಹತ್ತಿರವಾದ, ನಿಜಕ್ಕೂ ನಿಜವೆನಿಸಿದ ಕುವೆಂಪುರವರ ಕವನ - ಆನಂದಮಯ ಈ ಜಗಹೃದಯ
ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ
ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನೋ ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ
ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ
ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ
Lyrics: KV Puttappa ;Music:C.Ashwath; Singer : Shimoga Subbanna.
http://www.udbhava.com/udbhava/songs.jsp?id=62
ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ
ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ
ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನೋ ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ
ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ
ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ
Lyrics: KV Puttappa ;Music:C.Ashwath; Singer : Shimoga Subbanna.
http://www.udbhava.com/udbhava/songs.jsp?id=62
Sunday, July 22, 2007
ಬಣ್ಣಿಸಲೇನಿಹುದು
--
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ
ತಣ್ಣಗೆ ಕಣ್ಣ ಹಾಯಿಸಿ
ಸಾವಿರ ವರ ವರ್ಣವ
ಸವಿದು ಇರುವಿಕೆಯ
ಮರು ಘಳಿಗೆಯ
ಸ್ವಾನಂದದೆ ಕಳೆವುದಲ್ಲದೆ
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ.
--
ಸಂದರ್ಭ:
ನಾನು ನಯಾಗರಾಗೆ ಹೋಗಿದ್ದ ಸಂದರ್ಭ. ರುದ್ರ ರಮಣೀಯವಾದ ಜಲಪಾತದ ತೊಪ್ಪಲಲ್ಲಿ ತೆಪ್ಪದ ಯಾನ. 'ಮೈಡ್ ಆಫ್ ದ ಮಿಸ್ಟ್' ಅಂತ ಯಾನದ ಹೆಸರು. ಕನ್ನಡದಲ್ಲಿ 'ಮಲೆಗಳಲ್ಲಿ ಮಧುಮಗಳು' ಅಂತ ಕರೆಯೋಣವೇ? ಸರಿ, ಅಲ್ಲಿ ಬಂದಿದ್ದ ಯಾತ್ರಾರ್ತಿಗಳು ಫಾಲ್ಸ್ ನೋಡೊದಕ್ಕಿಂತ ಫೋಟೊ ತೆಗೆಯೋದ್ರಲ್ಲೇ ಇನ್ವಾಲ್ವ್ ಆಗಿದಾರೆ. ಬಹಳಷ್ಟು ಜನ ನವ ವಧೂವರರು ಬಂದಿದ್ದರು. ಅವರೂ ಸಹ ಪೋಸ್ ಕೊಡೋದ್ರಲ್ಲಿ ವ್ಯಸ್ತವಾಗಿದ್ದರು. ಅಲ್ಲಾ, ಅಷ್ಟು ಚೆನ್ನಾಗಿ ಭೋರ್ಗರೆದು ಉಕ್ಕಿ ಹರಿಯುತಾ ಇದೆ ನಯಾಗರಾ ತಾಯಿ, ಅದನ್ನು ಕಂಡು ಸಂತಸಗೊಂಡು, ಆ 'ಘಳಿಗೆ'ಯನ್ನು ಆಸ್ವಾದಿಸಬೇಕಲ್ಲವೆ? ಇನ್ನು ಒಬ್ಬ ಕವಿ ಮಹಾಶಯ, ಏನೋ ಕವನನೋ ಏನೋ ಗೀಚ್ಕೋತಾ ಇದ್ದ. ಅವನಿಗೆ ಕವಿಸಮಯ ಆಗ ಕೂಡಿ ಬಂದಿದೆ. ಅದನೆಲ್ಲ ನೋಡಿ, ನನ್ನ ಮನಸ್ಸಿಗೆ ಹೀಗೆನಿಸಿತು: 'ಇರುವಿಕೆಯ ಅರೆ ಘಳಿಗೆಯನ್ನು ಆಸ್ವಾದಿಸಿದರೆ ಆಯಿತು ಅಲ್ಲವೆ? ಬಣ್ಣಿಸಲೇನಿಹುದು? ಅಂತ'. ಮನೆಗೆ ಬಂದು ನನ್ನ ಈ ಸ್ವಗತ ಗೀಚಿದೆ.
Sidenotes:
ಅಲ್ಲಾ, ಜನ ಏನೋ ಫೋಟೊ ತೊಗೊತಾ ಇದ್ರು; ಕವನ ಬರ್ಕೋತ ಇದ್ರೂ, ಇನ್ನು ಏನೆನೋ ಅವರಿಗೆ ಇಷ್ಟ ಆದದ್ದು ಮಾಡ್ಕೋತಾ ಇದ್ರು. ಆದ್ರೆ ನಾನು ಏನು ಮಾಡ್ತಾ ಇದ್ದೆ ಅಲ್ಲಿ. ಮಂಗನ ಹಾಗೆ ಅವರಿವರ ಮುಖ ನೋಡ್ತಾ ಇದ್ನಾ? ಅದೇನೋ ಹೇಳ್ತಾರೆ ನೋಡಿ, 'Physcologist is a person, who, when a beautiful girl walks into a room, looks at all others in the room, rather than the pretty girl' ಅಂತ. ಹಾಗಾಯ್ತು.
--
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ
ತಣ್ಣಗೆ ಕಣ್ಣ ಹಾಯಿಸಿ
ಸಾವಿರ ವರ ವರ್ಣವ
ಸವಿದು ಇರುವಿಕೆಯ
ಮರು ಘಳಿಗೆಯ
ಸ್ವಾನಂದದೆ ಕಳೆವುದಲ್ಲದೆ
ಬಣ್ಣಿಸಲೇನಿಹುದು
ಬಣ್ಣ ಬಣ್ಣದ ಚಿತ್ತಾರವ.
--
ಸಂದರ್ಭ:
ನಾನು ನಯಾಗರಾಗೆ ಹೋಗಿದ್ದ ಸಂದರ್ಭ. ರುದ್ರ ರಮಣೀಯವಾದ ಜಲಪಾತದ ತೊಪ್ಪಲಲ್ಲಿ ತೆಪ್ಪದ ಯಾನ. 'ಮೈಡ್ ಆಫ್ ದ ಮಿಸ್ಟ್' ಅಂತ ಯಾನದ ಹೆಸರು. ಕನ್ನಡದಲ್ಲಿ 'ಮಲೆಗಳಲ್ಲಿ ಮಧುಮಗಳು' ಅಂತ ಕರೆಯೋಣವೇ? ಸರಿ, ಅಲ್ಲಿ ಬಂದಿದ್ದ ಯಾತ್ರಾರ್ತಿಗಳು ಫಾಲ್ಸ್ ನೋಡೊದಕ್ಕಿಂತ ಫೋಟೊ ತೆಗೆಯೋದ್ರಲ್ಲೇ ಇನ್ವಾಲ್ವ್ ಆಗಿದಾರೆ. ಬಹಳಷ್ಟು ಜನ ನವ ವಧೂವರರು ಬಂದಿದ್ದರು. ಅವರೂ ಸಹ ಪೋಸ್ ಕೊಡೋದ್ರಲ್ಲಿ ವ್ಯಸ್ತವಾಗಿದ್ದರು. ಅಲ್ಲಾ, ಅಷ್ಟು ಚೆನ್ನಾಗಿ ಭೋರ್ಗರೆದು ಉಕ್ಕಿ ಹರಿಯುತಾ ಇದೆ ನಯಾಗರಾ ತಾಯಿ, ಅದನ್ನು ಕಂಡು ಸಂತಸಗೊಂಡು, ಆ 'ಘಳಿಗೆ'ಯನ್ನು ಆಸ್ವಾದಿಸಬೇಕಲ್ಲವೆ? ಇನ್ನು ಒಬ್ಬ ಕವಿ ಮಹಾಶಯ, ಏನೋ ಕವನನೋ ಏನೋ ಗೀಚ್ಕೋತಾ ಇದ್ದ. ಅವನಿಗೆ ಕವಿಸಮಯ ಆಗ ಕೂಡಿ ಬಂದಿದೆ. ಅದನೆಲ್ಲ ನೋಡಿ, ನನ್ನ ಮನಸ್ಸಿಗೆ ಹೀಗೆನಿಸಿತು: 'ಇರುವಿಕೆಯ ಅರೆ ಘಳಿಗೆಯನ್ನು ಆಸ್ವಾದಿಸಿದರೆ ಆಯಿತು ಅಲ್ಲವೆ? ಬಣ್ಣಿಸಲೇನಿಹುದು? ಅಂತ'. ಮನೆಗೆ ಬಂದು ನನ್ನ ಈ ಸ್ವಗತ ಗೀಚಿದೆ.
Sidenotes:
ಅಲ್ಲಾ, ಜನ ಏನೋ ಫೋಟೊ ತೊಗೊತಾ ಇದ್ರು; ಕವನ ಬರ್ಕೋತ ಇದ್ರೂ, ಇನ್ನು ಏನೆನೋ ಅವರಿಗೆ ಇಷ್ಟ ಆದದ್ದು ಮಾಡ್ಕೋತಾ ಇದ್ರು. ಆದ್ರೆ ನಾನು ಏನು ಮಾಡ್ತಾ ಇದ್ದೆ ಅಲ್ಲಿ. ಮಂಗನ ಹಾಗೆ ಅವರಿವರ ಮುಖ ನೋಡ್ತಾ ಇದ್ನಾ? ಅದೇನೋ ಹೇಳ್ತಾರೆ ನೋಡಿ, 'Physcologist is a person, who, when a beautiful girl walks into a room, looks at all others in the room, rather than the pretty girl' ಅಂತ. ಹಾಗಾಯ್ತು.
--
Friday, June 29, 2007
ಆನೆ ಬಂತೊಂದಾನೆ
ಕಾರ್ತೀಕ ಮಾಸದ ತದಿಗೆ.ಕಚೇರಿಯಲ್ಲಿ ಫೈಲ್ ತಿರುವು ಹಾಕುತ್ತಿದ್ದಾಗ, ಏಡಗೈ ಕಿರುಬೆರಳಿಗೆ ಏನೋ ಒತ್ತಿದ ಹಾಗೆ ಆಯಿತು.ಒಮ್ಮೆ ಕಣ್ಣು ಹಾಯಿಸಿ ಸುಮ್ಮನಾದೆ. ಮೂರು ದಿನಗಳ ನಂತರ ಚಹಾ ಹೀರುತ್ತಾ, ಮತ್ತೊಮ್ಮೆ ಆ ಹುಣ್ಣನ್ನು ಗಮನಿಸಿದೆ.ಗಾತ್ರದಲ್ಲಿ ಬೆಳೆದ್ದಿತ್ತಾದರೂ ; ಅದರ ಆಕಾರ, ಗಮ್ಮತ್ತು ಪೂರ್ಣವಾಗಿ ತಿಳಿಯದಾಗಲಿಲ್ಲ.ಸರಿ ಸುಮಾರು ನಾಲ್ಕು ದಿನಗಳ ನಂತರ ಬೂದುಗಾಜಿನಲ್ಲಿ ನೊಡಿದರೆ ಅಂಗೈ ಹುಣ್ಣು ಒಂದು ಸಣ್ಣ ಆನೆಯ ಆಕಾರವನ್ನು ಹೋಲುವ ರೀತಿ ಹೊರಗೆ ಜೋತು ಬೀಳುತ್ತಿತ್ತು.ಮರಿ ಆನೆಯ ಬಾಲ ನನ್ನ ಕಿರುಬೆರಳಿನ ತುದಿಗೆ ಅಂಟಿಕೊಂಡು ವಾಲಾಡುತ್ತಿದ್ದಿತು. ಪುಟ್ಟ ಕುಂಜರ ನನ್ನ ಕಿರುಬೆರಳಿನ ಬಂದಿ. ಅದು ಏಷ್ಟೆ ಜಿಗುದು, ನಲಿದು, ಅಲುಗಾಡಿದರೂ ನನ್ನ ಇಚ್ಚಾನುಸಾರವೇ ಕುಣಿಯ ಬೇಕು.ಸಾಂದರ್ಭಿಕವಾಗಿ ನನ್ನ ಸ್ನೇಹಿತರಿಗೆ ನನ್ನ ಕಿರುಬೆರಳಿನ ಹುಣ್ಣನ್ನು ತೊರಿಸಿದೆ. ವೈದ್ಯರಲ್ಲಿ ತಪಾಸಣೆ ಮಾಡಿಸುವಂತೆ ಎಲ್ಲರೂ ಸೂಚಿಸಿದರು. ನಾನು ವೈದ್ಯರಲ್ಲಿ ಹೊಗುವ ಗೋಜಿಗೆ ಹೊಗಲಿಲ್ಲ. ಈ ಆನೆಯ ಆಕಾರದ ವೃಣವು ನನ್ನನು ಸೂರೆಗೊಂಡಿತ್ತು. ಅದು ಬೆಳೆಯುತ್ತಿರುವ ವಿಧಾನ; ಅದು ನನ್ನ ಕಿರುಬೆರಳಿಗೆ ಬಂದಿಯಾಗಿದ್ದರೂ, ಚಲಿಸಲು ಮಾಡುವ ಪ್ರಯತ್ನ, ಎಲ್ಲವೂ ನನಗೆ ಅಚ್ಚುಮೆಚ್ಚು. ನಾನು ಒಬ್ಬ ಭಾವುಕ ಪ್ರಾಣಿ. ನನ್ನ ಪುಟ್ಟ ಅನೆಯ ಜೊತೆ ಸ್ನೇಹ ಬೆಳೆಸಿದೆ. ಅದೂ ಸಹ ನನ್ನ ಸ್ನೇಹಕ್ಕೆ ಸಹಸ್ಪಂದಿಸಿತು. ದಿನವಿಡಿ ಅದರ ಜೊತೆ 'ಆನೆ ಬಂತೊಂದಾನೆ,ಯಾವೂರಾನೆ, ಬೀಜಾಪುರದಾನೆ' ಆಡ್ತಾ ಇದ್ದೆ. ಮತ್ತೆ, ಹಾಂ.. ಅದಕ್ಕೆ ಹುಲ್ಲು, ಸೊಪ್ಪು, ಗೆಡ್ಡೆ ಗೆಣಸು, ಸಿಹಿಕಬ್ಬು ಅಂದರೆ ಪಂಚಪ್ರಾಣ. ದಿನಾಲು ಆಟವಾಡಿದ ತರುವಾಯ ಈ ಎಲ್ಲ ತಿನಿಸುಗಳನ್ನು ಅದಕ್ಕೆ ಪ್ರೀತಿಯಿಂದ ನೀಡಿದೆ. ಒಮ್ಮೆಮ್ಮೆ ನನ್ನ ಸ್ನೇಹಿತ ಕಬ್ಬಿನ ತುಂಡುಗಳನ್ನು ತನ್ನ ಸೊಂಡಲಿನಿಂದ ಹಿಡಿಯಲು ಹಾತೊರೆಯುತ್ತಿದ್ದ. ನನ್ನ ಮುಷ್ಟಿಯನ್ನು ನಾನು ಗಟ್ಟಿಗಾಗಿ ಹಿಡಿದರೆ, ಬಡಪಾಯಿ ಗಜರಾಜ ಆಹಾರವನ್ನು ಏಟುಕಿಸಿಕೊಳ್ಳಲ್ಲು ಕಷ್ಟಪಡುತ್ತಿದ್ದ. ದಿನಗಳು ಉರುಳಿದಂತೆ ಈ ಗಜರಾಜ ನನ್ನದೇ ಆದ ಒಂದು ಅಂಶ ಎಂದು ಗೊಚರವಾಯಿತು -- ನನ್ನ ಅತ್ಯಂತ ದುರ್ಬಲ ಅಂಶ ಅನ್ನೋಣವೇ? . ಹೊರಜಗತ್ತಿನ ಸಂಪರ್ಕವೇ ನನಗೆ ಬೇಡವೆನಿಸಿತು. ನಾನು ಮತ್ತು ನನ್ನ ಬೀಜಾಪುರದ ಆನೆ. ಇದೇ ನನ್ನ ಜೀವನ. ಕಾಲಕ್ರಮೇಣ ನನ್ನ ಗಜರಾಜ ಆಡಿನ ಗಾತ್ರದಷ್ಟು ಬೇಳದು ನಿಂತ. ವಾಮನ ತ್ರಿವಿಕ್ರಮನಾದಂತೆ.ಆಡಿನ ಗಾತ್ರದ ಗಜರಾಜನೊಡನೆ ಆಟವಾಡುತ್ತ ನಾನೂ ಸಹ ಆಡಿನ ಗಾತ್ರವಾಗಿರುವೆನು ಎಂಬ ಅರಿವು ನನಗೆ ಕೂಡಲೇ ಮೂಡಲೇ ಇಲ್ಲ. ದಿನೆ ದಿನೆ ನಾನು ಕ್ಷೀಣಿಸುತ್ತಾ ಬಂದೆ. 'ಆಡೂ ಆನೆಯಾ ನುಂಗಿ, ಗೋಡೆ ಸುಣ್ಣಾವಾ ನುಂಗಿ,' ಎಲ್ಲೊ ಕೇಳಿದಂತಿದೆ, ಅಲ್ಲವೆ? ಬೆಳೆದು ನಿಂತ ಈ ಭಾಗವನ್ನು ನಾನು ಕಡಿದು ಹಾಕಲಾರೆ. ದಿನಾಲು ನಾನು ಮಂಚದಮೇಲೆ ಅಂಗಾತ ಮಲಗಿದರೆ, ಗಜರಾಜ ನೆಲದ ಮೇಲೆ ನನ್ನ ಬದಿಯಲ್ಲಿ ಮಲಗುತಿದ್ದ. ನನ್ನ ಏಡಗೈಯನ್ನು ನಾನು ಮಂಚದಿಂದ ತುಸು ದೂರ ಚಾಚಿ, ಗಜರಾಜ ಆರಾಮವಾಗಿ ನೆಲೆದ ಮೇಲೆ ಮಲಗಲು ಅನುವಾಗುವಂತೆ (ನಾನು) ಮಲಗಲು ಆರಂಭಿಸಿದೆ. ಇಂದು ಮುಂಜಾನೆ ನನಗೆ ಎಚ್ಚರವಾದಾಗ,ನಾನು ನನ್ನ ಬೀಜಾಪುರದ ಆನೆಯ ಮೇಲೆ ಜಂಬೂ ಸವಾರಿ ಮಾಡುತ್ತಿದ್ದೇನೆ. ಅಬ್ಬಾ, ಏನಾಶ್ಚರ್ಯ!!! ಅಂತು ಕಿರಿದಾದ ವೃಣವು ಬೆಳೆದು ನಿಂತು ಗಜಗಾತ್ರವಾಗಿ, ನನ್ನನ್ನು ತೃಣವೆನಿಸಿದೆ. ಈ ದಿನ ನಾನು ಅದರ ಬೆನ್ನಿನ ಮೇಲೆ ಸವಾರಿ ಮಾಡುವ ಸಣ್ನ ಜಂತುವಾಗಿರುವೆನು. ಹಾಗೆ, ಅದರ ಬೆನ್ನಿನಿಂದ ಉರುಳಿ, ಅದರ ಬಾಲವನ್ನು ಹಿಡಿದು ಜೋತು ಬೀಳುತಿರುವೆ.ಒಂದಾನೊಂದು ಕಾಲದಲ್ಲಿ, ವೃಣ ನನ್ನ ಕಿರುಬೆರಳು-ಮುಷ್ಟಿಯ ಆದೀನವಾಗಿದ್ದಂತೆ, ಈ ದಿನ ನಾನು ಅದರ ಕೈವಶವಾಗಿರುವೆ. ವಿಧಿವಿಲಾಸದ ಈ ಘಳಿಗೆಯಲ್ಲಿ ನಾನು ಆಶಾವಾದಿಯಾಗಿರುವೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಗಜರಾಜನಿಗೆ ಈಯ್ಯುವ ಕಾಯಿ - ತಿನಿಸು ನನಗೂ ಎಟುಕುವಂತಿದೆ.ನನಗೂ ಅದರಲ್ಲಿ ಪಾಲು ಸಿಗುತ್ತಿದೆ.ಮಗ್ಧರು. ತಮ್ಮ ನೆಚ್ಚಿನ ದೇವಳದ ಐರಾವತ ಕ್ಷೀಣಿಸುತಿರುವುದು ಅವರಿಗೆ ತಿಳಿಯುತ್ತಿಲ್ಲ. ಪಾಪ, ಇವರಿಗೇನು ಗೊತ್ತು, ಈ ಗಜರಾಜ ನನ್ನ ಇರುವಿಕೆಯಲ್ಲಿ ಅಡಕವಾಗಿರುವ ಭವಿಷ್ಯತ್ತಿನ ಗುಣ(ವಿ)ಶೇಷ ಮಾತ್ರವೆಂದು! ಹೌದು,ಈಗ 'ಗಜೇಂದ್ರಮೋಕ್ಷ'ಕ್ಕೆ ಕಾಯುತಿರುವೆ.
*************************************************
Credits and Courtesy:Based on a short story, 'Essence and Attribute' by Argentine author, Fernando Sorrentino. Translated to English by: Clark M. Zlotchew. Translated and adapted to Kannada by : yours truly, Srikanth Venkatesh.The characters and certain scenarios have been indianised to induce contextual humour. The Plot and theme, however are based on the original work.
*************************************************
*************************************************
Credits and Courtesy:Based on a short story, 'Essence and Attribute' by Argentine author, Fernando Sorrentino. Translated to English by: Clark M. Zlotchew. Translated and adapted to Kannada by : yours truly, Srikanth Venkatesh.The characters and certain scenarios have been indianised to induce contextual humour. The Plot and theme, however are based on the original work.
*************************************************
Thursday, June 14, 2007
ಅವನು
ಹೊರಗೆ ಧಾರಾಕಾರವಾಗಿ ಮಳೆ. ಗರ್ಭಗುಡಿಗೆ ಬೀಗ ಬಿಗಿದು, ದೇವರನ್ನು ಪೂಜಾರಪ್ಪ ಕೂಡಿಟ್ಟು ಹೋಗಿದ್ದಾಗಿತ್ತು.ಮಳೆಗಾಲ ನೋಡಿ; ಘಂಟೆ ಏಳು ಹೋಡೆಯುವಷ್ಟರಲ್ಲಿ ಶಾಸ್ತ್ರಿಗಳು ಬೇಚ್ಚಗೆ ಮನೆ ಸೇರುತಿದ್ದರು. ತದನಂತರ ಭಗವಂತನಿಗೆ ಏಕಾಂತ ಸೇವೆಯೇ ಗಟ್ಟಿ. ಈತ ನಡುಗುತ್ತ ಅಲ್ಲಿ ತಲುಪಿದಾಗ ಕಡುಗತ್ತಲೆ.ಹೋರಗೆ ಧಾರಕಾರವಾಗಿ ಮಳೆ. ಗರ್ಭಗುಡಿಯಲ್ಲಿ ಸಣ್ಣನೆಯ ನಂದಾದೀಪ. ತುಸು ಬೇಳಕು. ಲಿಂಗದ ಮೇಲೆ ನಿರ್ಮಾಲ್ಯದ ಹೂವು.ಜಟಾಶಂಕರನ ಜಟೆಯ ಮೇಲೆ ಓಣಗಿದ ತುಂಬೆಹಾರ. ಬಹಳಾ ಹೆದರಿದ್ದ ಪಾಪ. ಮುಂಜಾನೆಯಾಗುವಷ್ಟರಲ್ಲಿ ಏನಾದರು ಮಾಡಿ ಸಮಸ್ಯೆಗೆ ಪರಿಹಾರ ಹುಡುಕಲೇ ಬೇಕು. ಮುಂದಿನ ಊರು ಸೇರೋಣವೆಂದರೆ ಮಳೆ. ರಸ್ತೆ ಹದಗೇಟ್ಟಿದೆ. ಏತ್ತಿನ ಗಾಡಿಯ ಬಗ್ಗೆ ನೆನೆಯುವುದೂ ನಿರರ್ಥಕ. ನಿಸ್ಸಹಾಯನಾಗಿ ಸುಕನಾಸಿಯಿಂದ ಗರ್ಭಗುಡಿಯ ಬಳಿ ಬಂದು ಅಲ್ಲೆ ಕುಳಿತ. ನುಡುಗುತ್ತಿದ ಪಾಪ. ಮುಂಜಾನೆ ಇಂದ ಏನೂ ತಿಂದಿರಲಿಲ್ಲ. ಒಮ್ಮೆ ದೇವರನ್ನು ಹರಕೆ ಮಾಡಿ, ಬೇಡಿಕೊಂಡು ನಮಸ್ಕರಿಸುವ ಭಾವ ಮೂಡಿತು. ಕೈ ಜೋಡಿಸಿ ಮುಕ್ಕಣ್ಣನಿಗೆ ಮುಗಿಯುವಷ್ಟರಲ್ಲಿ ಅಡ್ಡ ಬಂದದ್ದು ಅಹಂಭಾವ. ಅಥವಾ.... ಅಹಂಭಾವವಿರಲಾರದು. ವ್ಯಕ್ತಿ ಒಳ್ಳೆಯವನು.ದುರಹಂಕಾರಿಯಲ್ಲ ಬಿಡಿ. ನಾಳೆ ಮುಂಜಾನೆ ವೇಳೆಗೆ ಏನಾದರೊಂದು ಆಗಲೇ ಬೇಕು. ಇತ್ಯರ್ಥವಾಗಲೇ ಬೇಕು. ಮತ್ತೋಮ್ಮೆ ಭಗವಂತನನ್ನು ಭಕ್ತಿಮಾಡಿ ಓಲಿಸಿಕೋಳ್ಳುವ ಪ್ರಯತ್ನ ನಡೆಯಿತು. ಈ ಗಂಡಾಂತರದಿಂದ ಶಿವಪ್ಪ ಪಾರು ಮಾಡಬಹುದು, ಆದರೆ ನಾನು ಚಿರಕಾಲ ಶಿವನ ಆಧೀನನಾಗ ಬೇಕೇನೊ ಏಂಬ ವಿರೋಧಾಭಾಸವಾದ ಭಾವ ಬಂದು ಕಾಡಿತು. ಸುಮ್ಮನಾದ. ನಾಳೆ ಸೋಲೋ - ಗೇಲುವೋ , ಏನಾದರೊಂದು ಆಗಲಿ. ಆದರೆ ನಾಳಿನ ಜಯದ ಸಲುವಾಗಿ ಮುಕ್ಕಣ್ಣನಿಗೆ ಮುಗಿದು, ಜೀವನ ಪರ್ಯಂತ ಶಿವನ ಬಂದಿ ಆಗಲಾರ. ನಾಳಿನ ಅಪಜಯವೇ ಮೇಲು; ಚಿರಕಾಲದ ಆಧೀನಕ್ಕಿಂತ. ದೇವರ ಮೇಹರುಬಾನಿ ನನಗೇನು ಬೇಡ. ನನ್ನ ನೋವು- ನಲಿವು ನನಗೆ ಇರಲಿ. ತಿರುಗಿ ಹೋರಗೆ ನಡೆಯಲಾರಂಭಿಸಿದ. ಹೋಗಲಾಗಲಿಲ್ಲ. ಲಿಂಗದ ಮುಂದೆ ನಿಂತು 'ದೇವರಿಲ್ಲದಿರಲಿ' ಎಂದು ದೇವರನ್ನೆ ಪ್ರಾರ್ಥಿಸಿ, ಮತ್ತೆ ಪ್ರಾಕಾರದ ಕಡೆಗೆ ನಡೆಯುವಷ್ಟರಲ್ಲಿ, ಗಾಳಿ ಬೀಸಿ ದೀಪ ಆರಿತು. ಕತ್ತಲ್ಲಲ್ಲಿ ಮುಕ್ಕಣ್ಣೇಷ್ವರ ತನ್ನೋಳಗೆ ತಾನೆ ನಕ್ಕನಂತೆ. ಸೋತ ತುಂಬೆಯ ಹಾರ ಕೇಳಗೆ ಬಿದ್ದಿತು.ಈತ ನಡುಗುತ್ತಿದ. ಮಳೆ ಇನ್ನು ಹೇಚ್ಚಾಗುತ್ತಿದೆ. ಮಿಂಚು. ಗುಡುಗು.ಸಮಯ ಮುಂಜಾನೆ ನಾಲ್ಕು ಘಂಟೆ.
Monday, May 14, 2007
ನಿಸ್ತರಂಗ !
ಹೆದ್ದೆರೆಯ ಗದ್ದಲದಿ
ಹದ್ದುಮೀರಿದ ಸದ್ದು.
ಮಬ್ಬು ಹೊದ್ದುನಿಂದ
ಯೋಚನೆಯು
ಭುಗಿಲೆದ್ದು;
ಸುಲೋಚನೆಯ
ಕಂಗಳಿಂ ನುಡಿದ
ವಿವೇಚನೆಯ ಮದ್ದು
ಮುದದೆ ಮೂಡಿಸಿಹುದು:
ನಿಸ್ತರಂಗ ಶಾಂತತೇಜ!
ಭಾವಾರ್ಥ :
The tumultous noise of the roaring waves rising above the threshold ; And, the thoughts impersonating as imposters surfaced with volcanic overtones.Only to be subsided by the assuring glances of the doe eyed one. Ah, and now you see a rippleless ocean of tranquility - that of vibrant calm!
ಹದ್ದುಮೀರಿದ ಸದ್ದು.
ಮಬ್ಬು ಹೊದ್ದುನಿಂದ
ಯೋಚನೆಯು
ಭುಗಿಲೆದ್ದು;
ಸುಲೋಚನೆಯ
ಕಂಗಳಿಂ ನುಡಿದ
ವಿವೇಚನೆಯ ಮದ್ದು
ಮುದದೆ ಮೂಡಿಸಿಹುದು:
ನಿಸ್ತರಂಗ ಶಾಂತತೇಜ!
ಭಾವಾರ್ಥ :
The tumultous noise of the roaring waves rising above the threshold ; And, the thoughts impersonating as imposters surfaced with volcanic overtones.Only to be subsided by the assuring glances of the doe eyed one. Ah, and now you see a rippleless ocean of tranquility - that of vibrant calm!
Saturday, May 05, 2007
ನೀನು
ನನ್ನ ನಲ್ಮೆಯ ಮಿತ್ರರಾದ ಕೆ.ಎಸ್. ಮಂಜುನಾಥ ಅವರ ಲಹರಿ. ಇದು ನನಗೆ ಬಹಳಾ ಹಿಡಿಸಿದ ಕವನವಾದ್ದರಿಂದ , ಅವರ ಸಮ್ಮತಿಯ ಮೇರೆಗೆ ಇಲ್ಲಿ ಇರಿಸಿರುವೆ.
---
ನೀನು
---
ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರದ ಗಾಂಧಾರ-
ದಾಚೆಯ ದಾರಿ
ಗಮನಶ್ರಮ.
ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಬಹುದು,
ಅಥವ
ಎನ್ನ ನೀನಿಲ್ಲಿಂದ ಉದ್ಧರಿಸಿಕೊಳಬಹುದು;
ಎರಡೂ ಪಾವನ.
ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?
---
ಅಬ್ಬಾ ಎಂಥ ಕವನ!
ಮಂಜುನಾಥ ಅವರ ನುಡಿಯಲ್ಲಿ ಈ ಕವನದ ಟಿಪ್ಪಣಿ :
" ಕನ್ನಡದಲ್ಲಿ ಸಂಗೀತ, ಆಧ್ಯಾತ್ಮಗಳ ಪ್ರತಿಮೆಯನ್ನು ಕಾವ್ಯಕ್ಕೆ ಬಳಸಿಕೊಳ್ಳುವ ಪ್ರಯೋಗವನ್ನು ಬೇಂದ್ರೆ, ಕುವೆಂಪು, ಅಡಿಗ ಹೀಗೆ ಸಾಕಷ್ಟು ಜನ ಮಾಡಿದ್ದಾರೆ, ಇದೊಂದು ಸಣ್ಣ ಪ್ರಯತ್ನ.
ಪ್ರಿಯ-ಪ್ರಿಯತಮೆ; ಜೀವಾತ್ಮ-ಪರಮಾತ್ಮ; ಅಥವ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ" ಯಾವುದೇ ಚೇತನದ ತಹತಹಿಕೆಯನ್ನು ಗ್ರಹಿಸುವುದು ಈ ಕವನದ ಉದ್ದೇಶ. ಪ್ರೇಮ, ಅದರ ಉತ್ಕಟಸ್ಥಿತಿಯಲ್ಲಿ ಆಧ್ಯಾತ್ಮ ತಾನೇ? ಮನಸ್ಸಿನಲ್ಲಿ ಹೀಗೇ ಕವನ ರೂಪುಗೊಳ್ಳುತ್ತಿದ್ದಾಗ ನಾನು ಕೇಳುತ್ತಿದ್ದ ರಾಗದ ಹೆಸರು (ಕಾಕತಾಳೀಯವಾಗಿ) "ಗಮನಶ್ರಮ" (ಪೂರ್ವಿ ಕಲ್ಯಾಣಿ ರಾಗದ ಮೇಳ ರಾಗ). ಸಂಗೀತದಲ್ಲಿ ಷಡ್ಜ-ಪಂಚಮಗಳು ಸಹಜವಾಗೇ ಒಂದು ಅಪೂರ್ವ ಸಾಮರಸ್ಯ ಹೊಂದಿದೆ (made for each other kind of hormoney ಅನ್ನೋಣ). ಆದರೆ ತಾರ ಷಡ್ಜ - ಮಂದ್ರ ಪಂಚಮಗಳ ಅಂತರ ಸಹಜವಾಗೇ ಈ ಸಮಾಗಮಕ್ಕೆ ಅಡ್ಡವಾಗಿದೆ, ಇದು ಯಾವುದೇ ಅಗಲಿಕೆಯ ಮನಸ್ಥಿತಿಯನ್ನು ಸೂಚಿಸುತ್ತದೆ. these two notes can not meet each other from such distance with discrete rendition. ಆದರೆ ಗಮಕ (glide movement)ಗಳ ಬಳಕೆಯಿಂದ ಈ ದೈವೀ ಸಮಾಗಮ ಸಾಧ್ಯ. ಆದ್ದರಿಂದ ಈ ಗಮಕವನ್ನು ದೇವಯಾನ ವಿಮಾನ ಎಂದಿದ್ದೇನೆ. ಮತ್ತೂ ಈ ಗಮಕಗಳು ಮೇಲಿನಿಂದ ಬಂದರೇ ಚೆನ್ನ, ಅಥವ, ಮೇಲಿನಿಂದ ಇಳಿದು, ತಗ್ಗಿನಿಂದ ಮತ್ತೆ ಮೇಲೇರಿದರೆ ಇನೂ ಸೊಗಸು. ಮತ್ತೆ, "ಪಂಚಮ" ಒಂದು ತಗ್ಗಿನ, ಅಸೃಷ್ಯ ಜಾತಿಯನ್ನು ಸಹ ಸೂಚಿಸುವುದರಿಂದ, ಮಂದ್ರ ಹಾಗೂ ಪಂಚಮ ಪದಗಳು ಪರಸ್ಪರ ಆ ದೈನ್ಯ ಸ್ಥಿತಿಯ ಅರ್ಥವನ್ನು ಗಾಢವಾಗಿಸುತ್ತದೆ. ಹಾಗೇ ತಾರೆಯು ನಿಲುಕದ ನಕ್ಷತ್ರವಾದರೂ ಸೈ. "
..
---
ನೀನು
---
ನೀ ಗಗನ ತಾರಾ,
ನಾ ಮಂದ್ರ
ಪಂಚಮ;
ನಡುವಿನಂತರದ ಗಾಂಧಾರ-
ದಾಚೆಯ ದಾರಿ
ಗಮನಶ್ರಮ.
ನೀ ಬಾಗಿ ಎನ್ನ ಸೋಂಕಿಸಬಾರದು,
ನಾ ಎಟುಕಿ ನಿನ್ನ ಪಿಡಿಯುವುದಾಗದು;
ಆದರೂ ಇದು ಸಾಧ್ಯ.
ಅಲ್ಲಿಂದ ನೀನಿಲ್ಲಿಗವತರಿಸಬಹುದು,
ಅಥವ
ಎನ್ನ ನೀನಿಲ್ಲಿಂದ ಉದ್ಧರಿಸಿಕೊಳಬಹುದು;
ಎರಡೂ ಪಾವನ.
ತಾನಗಳ ಗಮಕಿಸುವ
ದೇವಯಾನ ವಿಮಾನ
ವಿರೆ
ಯಾವುದಾಗದು ಹೇಳು
ಸ್ವರ್ಗ ಗಾನ?
---
ಅಬ್ಬಾ ಎಂಥ ಕವನ!
ಮಂಜುನಾಥ ಅವರ ನುಡಿಯಲ್ಲಿ ಈ ಕವನದ ಟಿಪ್ಪಣಿ :
" ಕನ್ನಡದಲ್ಲಿ ಸಂಗೀತ, ಆಧ್ಯಾತ್ಮಗಳ ಪ್ರತಿಮೆಯನ್ನು ಕಾವ್ಯಕ್ಕೆ ಬಳಸಿಕೊಳ್ಳುವ ಪ್ರಯೋಗವನ್ನು ಬೇಂದ್ರೆ, ಕುವೆಂಪು, ಅಡಿಗ ಹೀಗೆ ಸಾಕಷ್ಟು ಜನ ಮಾಡಿದ್ದಾರೆ, ಇದೊಂದು ಸಣ್ಣ ಪ್ರಯತ್ನ.
ಪ್ರಿಯ-ಪ್ರಿಯತಮೆ; ಜೀವಾತ್ಮ-ಪರಮಾತ್ಮ; ಅಥವ "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ" ಯಾವುದೇ ಚೇತನದ ತಹತಹಿಕೆಯನ್ನು ಗ್ರಹಿಸುವುದು ಈ ಕವನದ ಉದ್ದೇಶ. ಪ್ರೇಮ, ಅದರ ಉತ್ಕಟಸ್ಥಿತಿಯಲ್ಲಿ ಆಧ್ಯಾತ್ಮ ತಾನೇ? ಮನಸ್ಸಿನಲ್ಲಿ ಹೀಗೇ ಕವನ ರೂಪುಗೊಳ್ಳುತ್ತಿದ್ದಾಗ ನಾನು ಕೇಳುತ್ತಿದ್ದ ರಾಗದ ಹೆಸರು (ಕಾಕತಾಳೀಯವಾಗಿ) "ಗಮನಶ್ರಮ" (ಪೂರ್ವಿ ಕಲ್ಯಾಣಿ ರಾಗದ ಮೇಳ ರಾಗ). ಸಂಗೀತದಲ್ಲಿ ಷಡ್ಜ-ಪಂಚಮಗಳು ಸಹಜವಾಗೇ ಒಂದು ಅಪೂರ್ವ ಸಾಮರಸ್ಯ ಹೊಂದಿದೆ (made for each other kind of hormoney ಅನ್ನೋಣ). ಆದರೆ ತಾರ ಷಡ್ಜ - ಮಂದ್ರ ಪಂಚಮಗಳ ಅಂತರ ಸಹಜವಾಗೇ ಈ ಸಮಾಗಮಕ್ಕೆ ಅಡ್ಡವಾಗಿದೆ, ಇದು ಯಾವುದೇ ಅಗಲಿಕೆಯ ಮನಸ್ಥಿತಿಯನ್ನು ಸೂಚಿಸುತ್ತದೆ. these two notes can not meet each other from such distance with discrete rendition. ಆದರೆ ಗಮಕ (glide movement)ಗಳ ಬಳಕೆಯಿಂದ ಈ ದೈವೀ ಸಮಾಗಮ ಸಾಧ್ಯ. ಆದ್ದರಿಂದ ಈ ಗಮಕವನ್ನು ದೇವಯಾನ ವಿಮಾನ ಎಂದಿದ್ದೇನೆ. ಮತ್ತೂ ಈ ಗಮಕಗಳು ಮೇಲಿನಿಂದ ಬಂದರೇ ಚೆನ್ನ, ಅಥವ, ಮೇಲಿನಿಂದ ಇಳಿದು, ತಗ್ಗಿನಿಂದ ಮತ್ತೆ ಮೇಲೇರಿದರೆ ಇನೂ ಸೊಗಸು. ಮತ್ತೆ, "ಪಂಚಮ" ಒಂದು ತಗ್ಗಿನ, ಅಸೃಷ್ಯ ಜಾತಿಯನ್ನು ಸಹ ಸೂಚಿಸುವುದರಿಂದ, ಮಂದ್ರ ಹಾಗೂ ಪಂಚಮ ಪದಗಳು ಪರಸ್ಪರ ಆ ದೈನ್ಯ ಸ್ಥಿತಿಯ ಅರ್ಥವನ್ನು ಗಾಢವಾಗಿಸುತ್ತದೆ. ಹಾಗೇ ತಾರೆಯು ನಿಲುಕದ ನಕ್ಷತ್ರವಾದರೂ ಸೈ. "
..
|
Monday, April 30, 2007
ಕೋಪ
ಮುನಿಸಿಕೊಂಡ ಮಾನಿನಿಯ ಮೌನದ ರೂಪ
ತುಂಬಿ ನಿಂದ ಇಂಬಿಗೀಯ್ದ ಕೋಪದ ಲೇಪ
ಮಧುರಭಾವ ಉತ್ಪಲವನದೆ ತೊಳಲಿದ ತಾಪ
ಮುನಿಸಮೆರುಗು ಪಡೆದ ಪ್ರೇಮ ನಂದದ ದೀಪ
to be continued.....
ತುಂಬಿ ನಿಂದ ಇಂಬಿಗೀಯ್ದ ಕೋಪದ ಲೇಪ
ಮಧುರಭಾವ ಉತ್ಪಲವನದೆ ತೊಳಲಿದ ತಾಪ
ಮುನಿಸಮೆರುಗು ಪಡೆದ ಪ್ರೇಮ ನಂದದ ದೀಪ
to be continued.....
Sunday, March 25, 2007
ವರ
ಇರದುದರ ಗುಂಗಿನಲಿ ಮರುಗುತಿಹನಿಲ್ಲೋಬ್ಬ
ಕಳೆದುದರ ನೆನಪಿನಲಿ ಕೊರಗುತಿಹ ಮಗದೊಬ್ಬ
ಇರುವದರ ವರವನರಿಯದ ಹರಿಯ ಅರಿಗಳಿವರೆಂದರಿಯೊ - ಶ್ರೀಸಾಮಾನ್ಯ.
ಕಳೆದುದರ ನೆನಪಿನಲಿ ಕೊರಗುತಿಹ ಮಗದೊಬ್ಬ
ಇರುವದರ ವರವನರಿಯದ ಹರಿಯ ಅರಿಗಳಿವರೆಂದರಿಯೊ - ಶ್ರೀಸಾಮಾನ್ಯ.
Saturday, February 24, 2007
ಖುಷಿ !!!
ನಮ್ಮೀರ್ವರ ನಡುವಣ
ಸಹಚರ್ಯದ ಸವಿಯಲೆಗಳ
ಸಹಸ್ಪಂದನ
ಮೃದುಬಂಧನ ಆಲಿಂಗನ
ಚಿಂತನ ಮಂಥನ
ದೈವಾನುಸಂಧಾನ
ಸತ್ವಪ್ರೇಮ ನಿತ್ಯಕೃಷಿ
ಶರದ್ದಶತಾಯುಷಿ
ಅಹರ್ನಿಷಿ
ಸಾಗಲೆಂಬ
ಅಭಿಲಾಶೆಯೇ - ಖುಷಿ !
ಪ್ರತಿಯೊಂದು ರಾಗಕ್ಕೆ ಜೀವಸ್ವರವಿರುವುದಂತೆ. ಅದೇ ರೀತಿ ಈ ನನ್ನ ಗೀಚುವಿಕೆಯ ಜೀವಸ್ವರ , ಜೀವಬಿಂದು ಈ ಒಂದು ಪದಗುಚ್ಚ - 'ಸತ್ವಪ್ರೇಮ ನಿತ್ಯಕೃಷಿ '.
ಸಹಚರ್ಯದ ಸವಿಯಲೆಗಳ
ಸಹಸ್ಪಂದನ
ಮೃದುಬಂಧನ ಆಲಿಂಗನ
ಚಿಂತನ ಮಂಥನ
ದೈವಾನುಸಂಧಾನ
ಸತ್ವಪ್ರೇಮ ನಿತ್ಯಕೃಷಿ
ಶರದ್ದಶತಾಯುಷಿ
ಅಹರ್ನಿಷಿ
ಸಾಗಲೆಂಬ
ಅಭಿಲಾಶೆಯೇ - ಖುಷಿ !
ಪ್ರತಿಯೊಂದು ರಾಗಕ್ಕೆ ಜೀವಸ್ವರವಿರುವುದಂತೆ. ಅದೇ ರೀತಿ ಈ ನನ್ನ ಗೀಚುವಿಕೆಯ ಜೀವಸ್ವರ , ಜೀವಬಿಂದು ಈ ಒಂದು ಪದಗುಚ್ಚ - 'ಸತ್ವಪ್ರೇಮ ನಿತ್ಯಕೃಷಿ '.
Tuesday, January 30, 2007
ಕಾಳಿದಾಸನ ಕಗ್ಗೊಲೆ !
ಚುಟುಕದ ಹೆಸರು ಕಾಳಿದಾಸನ ಕಗ್ಗೊಲೆ ! - Glimpse of nonsense verse in kannaDa !
ಓ ನನ್ನ ಪ್ರಿಯೆ,
ನೀನೆ ನನ್ನ ಜೀವಾಳ,
ಅಂತರಾಳ
ದಾಸವಾಳ,
ಮಡಿವಾಳ,
ಎಲ್ಲವೂ ನೀನೆ ಪ್ರಿಯೆ!
ನೀನೆ ನನ್ನ ಸಾಧನೆಯ ಸೆಲೆ,
ಬಾಳಿನ ನೆಲೆ
ಕಟ್ಟಿಗೆ ಒಲೆ
ಕಾಳಿದಾಸನ ಕಗ್ಗೊಲೆ!
ಎಲ್ಲವೂ ನೀನೆ ಪ್ರಿಯೆ!
^^ ಟೈಂ ಪಾಸ್ ಗೆ ಬರ್ದಿದ್ದು! ..no meaning! no nothing ! ..hey , wait! actually last line has meaning..., - lots , infact.
'ಎಲ್ಲವೂ ನೀನೆ ಪ್ರಿಯೆ!' - I mean it.
.
ಓ ನನ್ನ ಪ್ರಿಯೆ,
ನೀನೆ ನನ್ನ ಜೀವಾಳ,
ಅಂತರಾಳ
ದಾಸವಾಳ,
ಮಡಿವಾಳ,
ಎಲ್ಲವೂ ನೀನೆ ಪ್ರಿಯೆ!
ನೀನೆ ನನ್ನ ಸಾಧನೆಯ ಸೆಲೆ,
ಬಾಳಿನ ನೆಲೆ
ಕಟ್ಟಿಗೆ ಒಲೆ
ಕಾಳಿದಾಸನ ಕಗ್ಗೊಲೆ!
ಎಲ್ಲವೂ ನೀನೆ ಪ್ರಿಯೆ!
^^ ಟೈಂ ಪಾಸ್ ಗೆ ಬರ್ದಿದ್ದು! ..no meaning! no nothing ! ..hey , wait! actually last line has meaning..., - lots , infact.
'ಎಲ್ಲವೂ ನೀನೆ ಪ್ರಿಯೆ!' - I mean it.
.
Wednesday, January 24, 2007
ದಿಗ್ದಿಗಂತದ ಕಡೆಗೆ !!!
ಶಕ್ತನಿಗೆ ಶಾಶ್ವತಿಯು ಒಮ್ಮೆ ಶ್ಯಾಮಲೆಯಾಗಿ ತೋರಿದರೆ ಮಗದೊಮ್ಮೆ ಸಾಧನೆಯಾಗಿ ಅವತರಿಸುತ್ತಾಳೆ. ಸಾದನಾಕಾಂಕ್ಷಿಯಾದ ಶಕ್ತನು ತನ್ನ ಶಾಶ್ವತಿ ಜೊತೆಗಿದ್ದರೆ, ಸಾಧನೆಯ ದಿಗ್ದಿಗಂತದ ತನಕ ಪಯಣ ಬೆಳೆಸುವೆನು ಎಂದು ಘೊಷಿಸುತಾನೆ. ಬದಿಗೆ ಶ್ಯಾಮಲೆಯ ನಗು ಮೊಗವು ಒಂದಿದ್ದರೆ ಸಾಕು , ಶಕ್ತನು ದಣಿವೆನದೆ ದುಡಿದು ಬಾಳಹಾದಿಯನ್ನು ಹದವಾದ ಪುಷ್ಪಪಥವಾಗಿಸುತ್ತಾನಂತೆ.
ಇದೇ ಭಾವವನ್ನು ಶಕ್ತನು ಇಂತೆಂದು ಶಾಶ್ವತಿಯಲ್ಲಿ ತೋಡಿಕೊಳ್ಳುತಾನೆ
ಶಕ್ತ :
ನಡೆವ ಬಾ , ಕೈ ಹಿಡಿದು
ದಿಗ್ದಿಗಂತದ ಕಡೆಗೆ..
ಎಡೆಬಿಡದೆ ನಾ ನಡೆವೆ
ದಣಿವಿರದೆ, ಒಲವೇ!
ಮುದದ ನಗುಮೊಗವಿರಲು,
ಬದಿಗೆ ಸಖಿ ನೀನಿರಲು,
ಹಾದಿಯದು ಹದದ
ಸುಮಪಥವೆಂಬೆ , ಚೆಲುವೆ!
ಇದೇ ಭಾವವನ್ನು ಶಕ್ತನು ಇಂತೆಂದು ಶಾಶ್ವತಿಯಲ್ಲಿ ತೋಡಿಕೊಳ್ಳುತಾನೆ
ಶಕ್ತ :
ನಡೆವ ಬಾ , ಕೈ ಹಿಡಿದು
ದಿಗ್ದಿಗಂತದ ಕಡೆಗೆ..
ಎಡೆಬಿಡದೆ ನಾ ನಡೆವೆ
ದಣಿವಿರದೆ, ಒಲವೇ!
ಮುದದ ನಗುಮೊಗವಿರಲು,
ಬದಿಗೆ ಸಖಿ ನೀನಿರಲು,
ಹಾದಿಯದು ಹದದ
ಸುಮಪಥವೆಂಬೆ , ಚೆಲುವೆ!
Saturday, January 20, 2007
ಕಾಯಾರೋಹಣೇಶಂ
ಭಕ್ತನ ತಪಸ್ಸಿಗೆ ಒಲಿದ ಮುಕ್ಕಣನು, ಆಲಿಂಗಿಸಿ ಅಭಯ ತೊರಿದ ಕಾರಣ ನಾಗಪಟ್ಟಣದ ಮಹೇಶ್ವರಸ್ವಾಮಿಗೆ ಕಾಯಾರೋಹಣೇಶ್ವರ ಎಂದು ಕರೆಯುವ ವಾಡಿಕೆ , ಐತಿಹ್ಯ.ಮುತ್ತುಸ್ವಾಮಿ ದೀಕ್ಷಿತರು ನಾಗಪಟ್ಟಣದ ಕ್ಷೇತ್ರಪುರಾಣ ವಿವರಿಸುತ್ತ ಕರ್ನಾಟಕ ದೇವಗಾಂಧಾರ ರಾಗದಲ್ಲಿ ಕಾಯಾರೋಹಣೇಶ್ವರನನ್ನು ಕೊಂಡಾಡಿದ್ದಾರೆ.
ಸತ್ಯೋಜಾತ,ಅಘೋರ,ತತ್ಪುರುಷ,ಈಶಾನಂ,ವಾಮದೇವಸಂಯುಕ್ತ ಪಂಚಾನನ ಸ್ವಾಮಿಯ ವರ್ಣನೆ ಭಕ್ತಿಪೂರ್ವಕವಾಗಿಯೂ,ಕಲಿ ಕಲ್ಮಷನಾಶೋಪಕಾರಿಯೂ ಆಗಿದೆ.ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'.
ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'
ರಚನೆ: ಗುರುವರ್ಯ ಶ್ರೀಮುತ್ತುಸ್ವಾಮಿ ದೀಕ್ಷಿತರು.
ರಾಗ: ಕರ್ನಾಟಕ ದೇವಗಾಂಧಾರ - ೨೨ ನೇ ಮೇಳಕರ್ತ ಖರಹರಪ್ರಿಯ ಜನ್ಯ.
ತಾಳ : ರೂಪಕ.
ಕಾಯಾರೋಹಣೇಶಂ ಭಜರೇ ಮಾನಸ
ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ |ಪ |
ಭಯಾಪಹಂ ದಿಕ್ಪಾಲಾಕಾಧಿ ವಿನುತ ಮಹೇಶ್ವರಂ
ಮಾಯಾಮಯ ಜಗದಾಧಾರಂ ಗುರುಗುಹೋಪಚಾರಂ |ಅನು|
ನೀಲಾಯತಾಕ್ಷಿ ಮನೊಲ್ಲಾಸ ಕಾರಣಂ
ನಿತ್ಯ ಶುದ್ಧ ಸತ್ವಗುಣಂ ಭುಕ್ತಿ ಮುಕ್ತಿ ಪ್ರಧ ನಿಪುಣಂ
ಪಾಲಿತ ಭಕ್ತಂ ಪಂಚಾನನಂ ಪ್ರಣತ ಗಜಾನನಂ
ಬಾಲಚಂದ್ರ ಶೇಖರ ಭಾವಪಾಷಮೊಚನಂ ತ್ರಿನಯನಂ |ಚ|
ಶ್ರೀ ಗುರುಗುಹಾರ್ಪಣಮಸ್ತು ||
.
ಸತ್ಯೋಜಾತ,ಅಘೋರ,ತತ್ಪುರುಷ,ಈಶಾನಂ,ವಾಮದೇವಸಂಯುಕ್ತ ಪಂಚಾನನ ಸ್ವಾಮಿಯ ವರ್ಣನೆ ಭಕ್ತಿಪೂರ್ವಕವಾಗಿಯೂ,ಕಲಿ ಕಲ್ಮಷನಾಶೋಪಕಾರಿಯೂ ಆಗಿದೆ.ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'.
ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'
ರಚನೆ: ಗುರುವರ್ಯ ಶ್ರೀಮುತ್ತುಸ್ವಾಮಿ ದೀಕ್ಷಿತರು.
ರಾಗ: ಕರ್ನಾಟಕ ದೇವಗಾಂಧಾರ - ೨೨ ನೇ ಮೇಳಕರ್ತ ಖರಹರಪ್ರಿಯ ಜನ್ಯ.
ತಾಳ : ರೂಪಕ.
ಕಾಯಾರೋಹಣೇಶಂ ಭಜರೇ ಮಾನಸ
ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ |ಪ |
ಭಯಾಪಹಂ ದಿಕ್ಪಾಲಾಕಾಧಿ ವಿನುತ ಮಹೇಶ್ವರಂ
ಮಾಯಾಮಯ ಜಗದಾಧಾರಂ ಗುರುಗುಹೋಪಚಾರಂ |ಅನು|
ನೀಲಾಯತಾಕ್ಷಿ ಮನೊಲ್ಲಾಸ ಕಾರಣಂ
ನಿತ್ಯ ಶುದ್ಧ ಸತ್ವಗುಣಂ ಭುಕ್ತಿ ಮುಕ್ತಿ ಪ್ರಧ ನಿಪುಣಂ
ಪಾಲಿತ ಭಕ್ತಂ ಪಂಚಾನನಂ ಪ್ರಣತ ಗಜಾನನಂ
ಬಾಲಚಂದ್ರ ಶೇಖರ ಭಾವಪಾಷಮೊಚನಂ ತ್ರಿನಯನಂ |ಚ|
ಶ್ರೀ ಗುರುಗುಹಾರ್ಪಣಮಸ್ತು ||
.
Tuesday, January 16, 2007
ಸ್ತಭ್ದ
ಶಕ್ತ :
ನೀಲಿ ಭಾನು ನಿಂತ ಮೇಘ
ಜೀವ ಯಾನ ಸ್ತಭ್ದ ವೇಗ
ತುಂಬು ಪ್ರೀತಿ ನಿಂತ ರೀತಿ
ತಡೆಯಲಿಂತು ನನ್ನ ಗೆಳತಿ
ಮೋಡ ಬಿರಿದು ಮಳೆಯು ಸುರಿದು
ಜೀವ ಬಿಂದು ಧರಣಿ ಮಿಂದು
ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?
--
ಶಾಶ್ವತಿಯು ಶಕ್ತನ ಪ್ರೇಮವನ್ನು ಅಲ್ಲಗೆಳದಿರಲಿಲ್ಲ ... ಆದರೆ , ಶಕ್ತನಿಗೆ ಒಪ್ಪಿಗೆಯ ಸ್ಪಷ್ಟನುಡಿಯೂ ದೊರೆತಿರಲಿಲ್ಲ.ಒಪ್ಪಿಗೆಯ ಅಪ್ಪುಗೆ ಇನ್ನೂ ದೊರೆಯದ್ದಿದ್ದ ಪ್ರಿಯತಮನಿಗೆ ತನ್ನ ಪ್ರೇಮದ ಪಾವಿತ್ರ್ಯತೆಯ ಬಗ್ಗೆ ಸಂಪೂರ್ಣ ನಂಬಿಕೆ. ಪ್ರೇಮಾಭಿಸಾರಿಕೆಯ ಪ್ರಸಂಗದ ಮುಂಚಿತ ಕಳೆಯಬೇಕಿರುವ ನೀರವ ಸಮಯವನ್ನು ಶಕ್ತನು -- 'ಸ್ಥಭ್ದ' -- ಎಂದು ಬಣ್ಣಿಸುತ್ತಾನೆ. ತನ್ನ ಜೀವನವೆಂಬ ನೀಲಾಕಾಶದಲ್ಲಿ , ಸ್ಥಭ್ದವಾಗಿ ನಿಂತ ಮೇಘದ ರೀತಿ ತೋರುತ್ತಿತ್ತು ಆ ಸಮಯ. ಆದರೆ ತುಂಬು ಪ್ರೀತಿಯನ್ನು ಶಾಶ್ವತಿಯು ತಡೆಯಲಾರಳು. ಮೋಡ ಬಿರಿದು , ಪ್ರೇಮಾಮೃತವರ್ಶಿಣಿ ಭೋರ್ಗರೆದು , ವಸುಂಧರೆಯನ್ನು ತಣಿಸಿ, ಪ್ರಿಯತಮೆಯ ಹೃದಯದಿಂದ ಪ್ರೇಮದ ಹೊನಲು ಹರಿದು , ಸಾಗರ ಸಮಾನವಾದ ತನ್ನ ಪ್ರಣಯಾಂಬುಧಿಯನ್ನು ಸೇರುವುದು ಎಂದು ಶಕ್ತನು ಈ ಸ್ವಗತದಲ್ಲಿ ಹೇಳ ಬಯಸಿದ್ದಾನೆ.
^^ ಕಾಲ್ಪನಿಕ ಅಷ್ಟೆ :)
ನೀಲಿ ಭಾನು ನಿಂತ ಮೇಘ
ಜೀವ ಯಾನ ಸ್ತಭ್ದ ವೇಗ
ತುಂಬು ಪ್ರೀತಿ ನಿಂತ ರೀತಿ
ತಡೆಯಲಿಂತು ನನ್ನ ಗೆಳತಿ
ಮೋಡ ಬಿರಿದು ಮಳೆಯು ಸುರಿದು
ಜೀವ ಬಿಂದು ಧರಣಿ ಮಿಂದು
ನದಿಯು ಕಡಲ ಬೆರೆವುದೇ ?
ನಮ್ಮ ಪ್ರಣಯ ಫಲಿಪುದೇ?
--
ಶಾಶ್ವತಿಯು ಶಕ್ತನ ಪ್ರೇಮವನ್ನು ಅಲ್ಲಗೆಳದಿರಲಿಲ್ಲ ... ಆದರೆ , ಶಕ್ತನಿಗೆ ಒಪ್ಪಿಗೆಯ ಸ್ಪಷ್ಟನುಡಿಯೂ ದೊರೆತಿರಲಿಲ್ಲ.ಒಪ್ಪಿಗೆಯ ಅಪ್ಪುಗೆ ಇನ್ನೂ ದೊರೆಯದ್ದಿದ್ದ ಪ್ರಿಯತಮನಿಗೆ ತನ್ನ ಪ್ರೇಮದ ಪಾವಿತ್ರ್ಯತೆಯ ಬಗ್ಗೆ ಸಂಪೂರ್ಣ ನಂಬಿಕೆ. ಪ್ರೇಮಾಭಿಸಾರಿಕೆಯ ಪ್ರಸಂಗದ ಮುಂಚಿತ ಕಳೆಯಬೇಕಿರುವ ನೀರವ ಸಮಯವನ್ನು ಶಕ್ತನು -- 'ಸ್ಥಭ್ದ' -- ಎಂದು ಬಣ್ಣಿಸುತ್ತಾನೆ. ತನ್ನ ಜೀವನವೆಂಬ ನೀಲಾಕಾಶದಲ್ಲಿ , ಸ್ಥಭ್ದವಾಗಿ ನಿಂತ ಮೇಘದ ರೀತಿ ತೋರುತ್ತಿತ್ತು ಆ ಸಮಯ. ಆದರೆ ತುಂಬು ಪ್ರೀತಿಯನ್ನು ಶಾಶ್ವತಿಯು ತಡೆಯಲಾರಳು. ಮೋಡ ಬಿರಿದು , ಪ್ರೇಮಾಮೃತವರ್ಶಿಣಿ ಭೋರ್ಗರೆದು , ವಸುಂಧರೆಯನ್ನು ತಣಿಸಿ, ಪ್ರಿಯತಮೆಯ ಹೃದಯದಿಂದ ಪ್ರೇಮದ ಹೊನಲು ಹರಿದು , ಸಾಗರ ಸಮಾನವಾದ ತನ್ನ ಪ್ರಣಯಾಂಬುಧಿಯನ್ನು ಸೇರುವುದು ಎಂದು ಶಕ್ತನು ಈ ಸ್ವಗತದಲ್ಲಿ ಹೇಳ ಬಯಸಿದ್ದಾನೆ.
^^ ಕಾಲ್ಪನಿಕ ಅಷ್ಟೆ :)
Sunday, January 14, 2007
ಜಗದಾನಂದಕಾರಕ
ಸದ್ಗುಗುರು ಶ್ರೀ ತ್ಯಾಗರಾಜಸ್ವಾಮಿ ವಿರಚಿತ ನಾಟ ರಾಗದ ಘನಪಂಚರತ್ನಕೃತಿ 'ಜಗದಾನಂದಕಾರಕ' ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮೇರುಕೃತಿ. ನಾದೋಪಾಸನೆಯಿಂದ ಬ್ರಹ್ಮಸ್ವರೂಪದ ಸಾಕ್ಷಾತ್ಕಾರಕ್ಕೆ ಅಣುವಾಗುವಂತೆ ತ್ಯಾಗಬ್ರಹ್ಮರು ಕೃತಿರಚನೆ ಮಾಡಿ ಪಾಮರರಿಗೆ ಮೋಕ್ಷಪ್ರಧ ಸುಲಭಮಾರ್ಗ ತೋರಿಸಿಕೊಟ್ಟಿದ್ದಾರೆ. ಜಗದಾನಂದಕಾರಕದ ಬ್ರಹ್ಮಾನಂದದ ಸಾತ್ವಿಕಾಲೆಗಳಲ್ಲಿ ಸಾಕಷ್ಟು ಬಾರಿ ಮಿಂದರೂ ನನಗೆ ಇದರ ಸಗುಣಭಕ್ತಿ ಸ್ವರೂಪದ ಅರಿವಾಗಿರಲಿಲ್ಲ. ರಾಮ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಸಜ್ಜನರೊಬ್ಬರು ನನಗೆ ಇದರ ಅರಿವು ಮಾಡಿಕೊಟ್ಟರು. ಮೇಲ್ನೋಟಕ್ಕೆ ಕಾಣದ ಸ್ವಾರಸ್ಯಕರವಾದ ವಿಷಯ ಇಂತಿದೆ.
ಹತ್ತು ಚರಣಗಳುಳ್ಳ ಈ ಕೃತಿಯ ಪ್ರತಿ ಸಾಲನ್ನು ಬಿಡಿಸಿ , ಪದಪುಂಜಗಳನ್ನು ಜೋಡಿಸಿದರೆ ಆಷ್ಟ್ಟೋತ್ತರ ಶತನಾಮಾವಳಿಯು ಅಡಕವಾಗಿರುವುದು ಗೋಚರವಾಗುವುದು !!!
ಓಂ ಜಗದಾನಂದಕಾರಕಾಯ ನಮಃ
ಓಂ ಜಯ ಜಾನಕಿ ಪ್ರಾಣನಾಥಯ ನಮಃ
ಓಂ ಗಗನಾಧಿಪಸತ್ಕುಲಜಾಯ ನಮಃ .... ಇತ್ಯಾದಿ.
ಹೀಗೆ , ನಾದೋಪಾಸನ ಸಂಪ್ರದಾಯದ ನಿರ್ಗುಣಬ್ರಹ್ಮಾರಾಧನೆ ಒಂದು ಆಯಾಮವಾದರೆ , ಆಷ್ಟ್ಟೋತ್ತರ ನಾಮಸಂಕೀರ್ತನ ಒಳಗೊಂಡ ಸಗುಣಬ್ರಹ್ಮ ಸ್ವರೂಪದ ಬಣ್ಣನೆ ಇನ್ನೊಂದೆಡೆ. ಮಾಹತ್ಮರಾದ ತ್ಯಾಗಬ್ರಹ್ಮರ ಕ್ರಿತಿಗಳು ಹೀಗೆಯೆ; ಎಷ್ಟು ಬಾರಿ ಕೇಳಿದರೂ ಒಂದು ಹೊಸ ಆಯಾಮ ತಿಳಿದುಬರುತ್ತದೆ.
.
ಹತ್ತು ಚರಣಗಳುಳ್ಳ ಈ ಕೃತಿಯ ಪ್ರತಿ ಸಾಲನ್ನು ಬಿಡಿಸಿ , ಪದಪುಂಜಗಳನ್ನು ಜೋಡಿಸಿದರೆ ಆಷ್ಟ್ಟೋತ್ತರ ಶತನಾಮಾವಳಿಯು ಅಡಕವಾಗಿರುವುದು ಗೋಚರವಾಗುವುದು !!!
ಓಂ ಜಗದಾನಂದಕಾರಕಾಯ ನಮಃ
ಓಂ ಜಯ ಜಾನಕಿ ಪ್ರಾಣನಾಥಯ ನಮಃ
ಓಂ ಗಗನಾಧಿಪಸತ್ಕುಲಜಾಯ ನಮಃ .... ಇತ್ಯಾದಿ.
ಹೀಗೆ , ನಾದೋಪಾಸನ ಸಂಪ್ರದಾಯದ ನಿರ್ಗುಣಬ್ರಹ್ಮಾರಾಧನೆ ಒಂದು ಆಯಾಮವಾದರೆ , ಆಷ್ಟ್ಟೋತ್ತರ ನಾಮಸಂಕೀರ್ತನ ಒಳಗೊಂಡ ಸಗುಣಬ್ರಹ್ಮ ಸ್ವರೂಪದ ಬಣ್ಣನೆ ಇನ್ನೊಂದೆಡೆ. ಮಾಹತ್ಮರಾದ ತ್ಯಾಗಬ್ರಹ್ಮರ ಕ್ರಿತಿಗಳು ಹೀಗೆಯೆ; ಎಷ್ಟು ಬಾರಿ ಕೇಳಿದರೂ ಒಂದು ಹೊಸ ಆಯಾಮ ತಿಳಿದುಬರುತ್ತದೆ.
.
|
Friday, January 12, 2007
ಕನಸು .. ಕಾರ್ಮುಗಿಲು ...
ಬಾಂದಳದ ಆಯದಲಿ ಕಾರಿರುಳ ಗವಸು
ಪರಿವೆ ಪರಧಿಯ ಮೀರಿ ಮರುಗಿಹುದು ಮನಸು
ತರಣಿಗೊದಗಿದ ಗ್ರಹಣ ಪಟಲವಂಬರದಿ
ಪದುಳ ಕ್ಷೀಣಿಸುತಿಹುದು ವರವಿಲ್ಲ ಮನದಿ
ಬಾಳಿನೊಗಟೆಯ ಘಾತಿಸಲಾಗದಾ ಧುರೆಯೋ
ಕ್ಷಿತಿಕಂಪದೆಲರಲ್ಲಿ ಸಿಲುಕಿರುವ ಧರೆಯೋ
ಮನದ ಎಳಸಿಕೆ ವಿಲಯ ವಿಧಿಯ ನಿರ್ಘಾತ
ಮಿಸುಕು ಜೀವಿತಕಿನ್ನು ಹೊಂಗನಸು ಶೋಣಿತ
ಭವರೋಗ ಭೇಷಜವೆ ಗರಲವಾರಿಧಿಯಾಗೆ
ಮುಕುರ ಮೂರ್ಚೂರಾಯ್ತು ಬರಡಾಯ್ತು ಒಳಿತೆಸಗೆ
--
ಟಿಪ್ಪಣಿ :
ಸನ್ಮಾರ್ಗದರ್ಶಿಗಳು ,ಹಿರಿಯರು ಆದ ತ.ವಿ.ಶ್ರೀ ಅವರು 'ಕನಸು.. ಕಾರ್ಮುಗಿಲು..' ಪ್ರಯತ್ನಕ್ಕೆ ನನ್ನ ಟಿಪ್ಪಣಿ ಜೋಡಿಸಿ , ಬ್ಲಾಗಿಸಬೇಕೆಂದು ಆಗ್ನಾಪಿಸಿದರು. ಇಂತಿದೆ ನನ್ನ ಮಾತು - ಕಥೆ , ಈ ನನ್ನ ಕಿರು ಪ್ರಯತ್ನದ ಬಗ್ಗೆ :
'ಕನಸು..ಕಾರ್ಮುಗಿಲು..' - - ಈ ಪದ್ಯದಲ್ಲಿ ನೊಂದ ಮನವನ್ನು ಪ್ರಳಯಕಾಲದ ಆಗಸಕ್ಕೆ ಹೋಲಿಸಲಾಗಿದೆ. ಆಕಾಶದ ಉದ್ದಗಲಕ್ಕೂ ಕಾರುತ್ತಿರುವ ಇರುಳು ಪ್ರಳಯ ಕಾಲದಲ್ಲಿ ವ್ಯಾಪಿಸಿದ ಹಾಗೆ , ನೊಂದ ಮನವನ್ನು ನೊವು ವ್ಯಾಪಿಸಿದೆ. ಗವಸು ಎಂದರೆ ಹೋದಿಕೆ. ಮುಖ ಮತ್ತು ಶಿರೋಭಾಗವನ್ನು ಹೊದ್ದು ಮಲಗಿದ ರೀತಿ , ಮನವನ್ನು ನೊವು ಮುಚ್ಚಿದೆ.ಗ್ರಹಣಗ್ರಸ್ತ ಸೂರ್ಯನನ್ನು ರಾಹು-ಕೇತುಗಳು ಕ್ರಮೇಣ ಆವರಿಸುವಂತೆ,ಮನದಲ್ಲಿನ್ನ ನೆಮ್ಮದಿಯನ್ನು ವಿಧಿಯು ಕಬಳಿಸುತ್ತಿದೆ ಎಂಬ ಅರ್ಥ.ಭೂಕಂಪದ ಸಮದಲ್ಲಿ ಧರಣಿದೇವಿಯು ನಡುಗುವಂತೆ , ಬಾಳಿನ ಒಗಟನ್ನು ಬಿಡಿಸಲಾಗದ ಮಾನವನ ಮನವು ಕಂಪಿಸುತ್ತಿದೆ.ಭೂಕಂಪನಕ್ಕೆ ಮುಂಚಿತವಾಗಿ ಬೀಸುವ ಕೆಟ್ಟ ಗಾಳಿಯನ್ನು ಮನದಲ್ಲಿ ಸುಳಿಯುತ್ತಿರುವ ಕೆಟ್ಟ ಲಹರಿಗಳಿಗೆ ಹೋಲಿಸಲಾಗಿದೆ.ಮುಂದಿನ ಸಾಲುಗಳಲ್ಲಿ,ಮನದಾಸೆಗಳು ವಿಲಯವಾಗಿ ಹೊಂಗನಸು ರಕ್ತ ಸ್ನಿಘ್ದವಾಗಿರುವುದನು ಸೂಚಿಸುತ್ತದೆ. ಭವರೋಗಕ್ಕೆ ಯಾವುದು ಮದ್ದು ಎಂಬ ಗಣನೆ ಇದ್ದಿತೊ , ಆ ದ್ರವ್ಯವೇ ವಿಷ ಸಮಾನವಾಗಿದೆ. ನಾವು ಏನನ್ನು ಒಲಿತೆಸಗೆ ಎಂದು ಭಾವಿಸಿದೆವೋ ಅದುವೇ ನಮ್ಮನ್ನು ಕಾಡಿತಿನ್ನುತ್ತಿದೆ. ಹೀಗಿರಲು ಕನಸಿನ ಕನ್ನಡಿ ಮುರಿದು ಮೂರುಚೂರಾಗಿದೆ ಎಂಬ ಅರ್ಥ.
ಇಲ್ಲಿ ಕೆಲವು poetic devices ಅಳವಡಿಸಲು ಸಣ್ಣ ಪ್ರಯತ್ನ ಮಾಡಿರುತ್ತೇನೆ:
೧. ಪದ್ಯದಲ್ಲಿ ಘೋರವಾದ ಭಾವ-ಭಾವನೆಗಳು ಮೂಡಿ ಬರಲಿ ಎಂದು - ಮಹಾಪ್ರ್ರಾಣ ಮತ್ತು ಕರ್ಕಶ ವರ್ಣಗಳ ಪ್ರಯೋಗವಾಗಿದೆ. - to create a phonetic background
೨. ಇಲ್ಲಿ ಗ್ರಹಣ,ಭೂಕಂಪನ,ವಿಷಸಮುದ್ರ,ರಕ್ತಸ್ನಿಗ್ಧ ಕನಸು ಇತ್ಯಾದಿಗಳನ್ನು ಸೂಚಿಸಲು ಅಳವಡಿಸಲಾಗಿದೆ. - Visual imagery
೩. ಮನವನ್ನು ಇರುಳು ಕವಿದ ಆಗಸ, ಕಂಪಿಸುತ್ತಿರುವ ಭೂಮಿ, ಗ್ರಹಣಗಗ್ರಸ್ತ ಸೂರ್ಯ - ಹೀಗೆ ಕರಾಳ ಉಪಮೆಗಳ ಸಾಂಗತ್ಯ ನೀಡಲಾಗಿದೆ. - Simile , Metaphor , Symbolism
ಕಠಿಣ ಪದಗಳ ಅರ್ಥ :)
ಬಾಂದಳ - ಬಾನಿನ ಅಂಗಳ.
ಆಯ - ವಿಸ್ತಾರ.
ಗವಸು - ಹೊದಿಕೆ.
ಪರಿಧಿ - ಎಲ್ಲೆ. ; limit.
ತರಣಿ - ಸೂರ್ಯ.
ಪದುಳ - ನೆಮ್ಮದಿ.
ಕ್ಷಿತಿಕಂಪ- ಭೂಕಂಪ.
ಎಲರು - ಗಾಳಿ
ಕ್ಷಿತಿಕಂಪದೆಲರಲ್ಲಿ : in the baleful winds preceeding the catastrophic earthquake.
ಭೀಷಜ - ಔಷದಿ
ಗರಲ - ವಿಷ.
ವಾರಿಧಿ - ಸಮುದ್ರ.
ಮುಕುರ - ಕನ್ನಡಿ. vision
.
ಪರಿವೆ ಪರಧಿಯ ಮೀರಿ ಮರುಗಿಹುದು ಮನಸು
ತರಣಿಗೊದಗಿದ ಗ್ರಹಣ ಪಟಲವಂಬರದಿ
ಪದುಳ ಕ್ಷೀಣಿಸುತಿಹುದು ವರವಿಲ್ಲ ಮನದಿ
ಬಾಳಿನೊಗಟೆಯ ಘಾತಿಸಲಾಗದಾ ಧುರೆಯೋ
ಕ್ಷಿತಿಕಂಪದೆಲರಲ್ಲಿ ಸಿಲುಕಿರುವ ಧರೆಯೋ
ಮನದ ಎಳಸಿಕೆ ವಿಲಯ ವಿಧಿಯ ನಿರ್ಘಾತ
ಮಿಸುಕು ಜೀವಿತಕಿನ್ನು ಹೊಂಗನಸು ಶೋಣಿತ
ಭವರೋಗ ಭೇಷಜವೆ ಗರಲವಾರಿಧಿಯಾಗೆ
ಮುಕುರ ಮೂರ್ಚೂರಾಯ್ತು ಬರಡಾಯ್ತು ಒಳಿತೆಸಗೆ
--
ಟಿಪ್ಪಣಿ :
ಸನ್ಮಾರ್ಗದರ್ಶಿಗಳು ,ಹಿರಿಯರು ಆದ ತ.ವಿ.ಶ್ರೀ ಅವರು 'ಕನಸು.. ಕಾರ್ಮುಗಿಲು..' ಪ್ರಯತ್ನಕ್ಕೆ ನನ್ನ ಟಿಪ್ಪಣಿ ಜೋಡಿಸಿ , ಬ್ಲಾಗಿಸಬೇಕೆಂದು ಆಗ್ನಾಪಿಸಿದರು. ಇಂತಿದೆ ನನ್ನ ಮಾತು - ಕಥೆ , ಈ ನನ್ನ ಕಿರು ಪ್ರಯತ್ನದ ಬಗ್ಗೆ :
'ಕನಸು..ಕಾರ್ಮುಗಿಲು..' - - ಈ ಪದ್ಯದಲ್ಲಿ ನೊಂದ ಮನವನ್ನು ಪ್ರಳಯಕಾಲದ ಆಗಸಕ್ಕೆ ಹೋಲಿಸಲಾಗಿದೆ. ಆಕಾಶದ ಉದ್ದಗಲಕ್ಕೂ ಕಾರುತ್ತಿರುವ ಇರುಳು ಪ್ರಳಯ ಕಾಲದಲ್ಲಿ ವ್ಯಾಪಿಸಿದ ಹಾಗೆ , ನೊಂದ ಮನವನ್ನು ನೊವು ವ್ಯಾಪಿಸಿದೆ. ಗವಸು ಎಂದರೆ ಹೋದಿಕೆ. ಮುಖ ಮತ್ತು ಶಿರೋಭಾಗವನ್ನು ಹೊದ್ದು ಮಲಗಿದ ರೀತಿ , ಮನವನ್ನು ನೊವು ಮುಚ್ಚಿದೆ.ಗ್ರಹಣಗ್ರಸ್ತ ಸೂರ್ಯನನ್ನು ರಾಹು-ಕೇತುಗಳು ಕ್ರಮೇಣ ಆವರಿಸುವಂತೆ,ಮನದಲ್ಲಿನ್ನ ನೆಮ್ಮದಿಯನ್ನು ವಿಧಿಯು ಕಬಳಿಸುತ್ತಿದೆ ಎಂಬ ಅರ್ಥ.ಭೂಕಂಪದ ಸಮದಲ್ಲಿ ಧರಣಿದೇವಿಯು ನಡುಗುವಂತೆ , ಬಾಳಿನ ಒಗಟನ್ನು ಬಿಡಿಸಲಾಗದ ಮಾನವನ ಮನವು ಕಂಪಿಸುತ್ತಿದೆ.ಭೂಕಂಪನಕ್ಕೆ ಮುಂಚಿತವಾಗಿ ಬೀಸುವ ಕೆಟ್ಟ ಗಾಳಿಯನ್ನು ಮನದಲ್ಲಿ ಸುಳಿಯುತ್ತಿರುವ ಕೆಟ್ಟ ಲಹರಿಗಳಿಗೆ ಹೋಲಿಸಲಾಗಿದೆ.ಮುಂದಿನ ಸಾಲುಗಳಲ್ಲಿ,ಮನದಾಸೆಗಳು ವಿಲಯವಾಗಿ ಹೊಂಗನಸು ರಕ್ತ ಸ್ನಿಘ್ದವಾಗಿರುವುದನು ಸೂಚಿಸುತ್ತದೆ. ಭವರೋಗಕ್ಕೆ ಯಾವುದು ಮದ್ದು ಎಂಬ ಗಣನೆ ಇದ್ದಿತೊ , ಆ ದ್ರವ್ಯವೇ ವಿಷ ಸಮಾನವಾಗಿದೆ. ನಾವು ಏನನ್ನು ಒಲಿತೆಸಗೆ ಎಂದು ಭಾವಿಸಿದೆವೋ ಅದುವೇ ನಮ್ಮನ್ನು ಕಾಡಿತಿನ್ನುತ್ತಿದೆ. ಹೀಗಿರಲು ಕನಸಿನ ಕನ್ನಡಿ ಮುರಿದು ಮೂರುಚೂರಾಗಿದೆ ಎಂಬ ಅರ್ಥ.
ಇಲ್ಲಿ ಕೆಲವು poetic devices ಅಳವಡಿಸಲು ಸಣ್ಣ ಪ್ರಯತ್ನ ಮಾಡಿರುತ್ತೇನೆ:
೧. ಪದ್ಯದಲ್ಲಿ ಘೋರವಾದ ಭಾವ-ಭಾವನೆಗಳು ಮೂಡಿ ಬರಲಿ ಎಂದು - ಮಹಾಪ್ರ್ರಾಣ ಮತ್ತು ಕರ್ಕಶ ವರ್ಣಗಳ ಪ್ರಯೋಗವಾಗಿದೆ. - to create a phonetic background
೨. ಇಲ್ಲಿ ಗ್ರಹಣ,ಭೂಕಂಪನ,ವಿಷಸಮುದ್ರ,ರಕ್ತಸ್ನಿಗ್ಧ ಕನಸು ಇತ್ಯಾದಿಗಳನ್ನು ಸೂಚಿಸಲು ಅಳವಡಿಸಲಾಗಿದೆ. - Visual imagery
೩. ಮನವನ್ನು ಇರುಳು ಕವಿದ ಆಗಸ, ಕಂಪಿಸುತ್ತಿರುವ ಭೂಮಿ, ಗ್ರಹಣಗಗ್ರಸ್ತ ಸೂರ್ಯ - ಹೀಗೆ ಕರಾಳ ಉಪಮೆಗಳ ಸಾಂಗತ್ಯ ನೀಡಲಾಗಿದೆ. - Simile , Metaphor , Symbolism
ಕಠಿಣ ಪದಗಳ ಅರ್ಥ :)
ಬಾಂದಳ - ಬಾನಿನ ಅಂಗಳ.
ಆಯ - ವಿಸ್ತಾರ.
ಗವಸು - ಹೊದಿಕೆ.
ಪರಿಧಿ - ಎಲ್ಲೆ. ; limit.
ತರಣಿ - ಸೂರ್ಯ.
ಪದುಳ - ನೆಮ್ಮದಿ.
ಕ್ಷಿತಿಕಂಪ- ಭೂಕಂಪ.
ಎಲರು - ಗಾಳಿ
ಕ್ಷಿತಿಕಂಪದೆಲರಲ್ಲಿ : in the baleful winds preceeding the catastrophic earthquake.
ಭೀಷಜ - ಔಷದಿ
ಗರಲ - ವಿಷ.
ವಾರಿಧಿ - ಸಮುದ್ರ.
ಮುಕುರ - ಕನ್ನಡಿ. vision
.
ಮೌನದ ಮಡಿಲಲ್ಲಿ
ಇನಿಯರಾಡೊ ಮಧುರ ಮಾತು ತಳಿರುತೋರಣ
ದನಿಗೂಡದೆ ಎದೆಯಲುಂಟು ದಟ್ಟ ಕಾನನ
ಎರಡು ಮಾತು ನೂರು ಭಾವ ಇದುವೆ ಜೀವನ
ಮಾತು ಸೋತು ಮೌನಹಾಡಿತಿಂತು ತನನನ
to be continued..
ದನಿಗೂಡದೆ ಎದೆಯಲುಂಟು ದಟ್ಟ ಕಾನನ
ಎರಡು ಮಾತು ನೂರು ಭಾವ ಇದುವೆ ಜೀವನ
ಮಾತು ಸೋತು ಮೌನಹಾಡಿತಿಂತು ತನನನ
to be continued..
Thursday, January 11, 2007
ಸಂತಸ - ಸಹಜಸ್ಥಿತಿ
ಕಾರ್ಯಲಯದಲ್ಲಿ ವಿಶೇಷವಾಗಿ ಸಂತುಷ್ಟನಾಗಿಲ್ಲದಿದ್ದ ನನ್ನ ಸ್ನೇಹಿತನೊಬ್ಬ ಪ್ರಫುಲ್ಲಮನಸ್ಕನಾಗಿದ್ದುದನ್ನು ಬೆಳಗಿನಿಂದಲೂ ನಾನು ಗಮನಿಸಿದೆ.ಮಧ್ಯಾಹ್ನದ ವೇಳೆ , ಊಟದ ಸಮಯ. ಮಾತು ಮಾತಿನಲ್ಲಿ ಅವನು ಇಂತೆಂದನು : 'अरे यार् - खुश् रेहने की कोयी वजेह् नही , बस् आदत् पड् गया है !' ಈ ಮಾತುಗಳಲ್ಲಿ ಜೀವನ ಸತ್ಯವೇ ಅಡಕವಾಗಿದೆ ಎಂದು ನನಗೆ ಅನಿಸಿತು. ಕಲಿತು ನಡೆಯಲು , ತಿಳಿಸಿ ಬೆಳೆಸಲು ದೊಡ್ಡ ವೇದಾಂತಿಯಾಗಲಿ , ಮಹೋನ್ನತ ಕೃತಿಯೋ ಆಗಬೇಕಿಲ್ಲ. ದಿನನಿತ್ಯದ ವ್ಯವಹಾರದಲ್ಲಿ , ನಮ್ಮ - ನಿಮ್ಮಂತಹ ಸಾಧರಣ ಮರ್ತ್ಯರು ಜೀವನ ಸತ್ಯವನ್ನು ಗೋಚರಿಸ ಬಹುದು.
ಸಾಂದರ್ಭಿಕವಾಗಿ , ಸಂತಸವನ್ನು ಸಹಜ ಸ್ಥಿತಿಯನಾಗಿಸುವ ಕುರಿತು ನನ್ನ ಅಂತರಂಗದಲ್ಲಿ ಮೂಡಿಬಂದ ಚುಟುಕ:
ಸಂತಸವೆಂಬುದು ಅರಿಕೆಯಲಿಲ್ಲ ಬಾಳಿದನರಿತು ಮಂದಮತಿ
ಅರಿಕೆಗೆ ಸಿಲುಕದ ವರವಿದು ಇದನು ಆಗಿಸು ನಿನ್ನೆಯ ಸಹಜಸ್ಥಿತಿ
.
ಸಾಂದರ್ಭಿಕವಾಗಿ , ಸಂತಸವನ್ನು ಸಹಜ ಸ್ಥಿತಿಯನಾಗಿಸುವ ಕುರಿತು ನನ್ನ ಅಂತರಂಗದಲ್ಲಿ ಮೂಡಿಬಂದ ಚುಟುಕ:
ಸಂತಸವೆಂಬುದು ಅರಿಕೆಯಲಿಲ್ಲ ಬಾಳಿದನರಿತು ಮಂದಮತಿ
ಅರಿಕೆಗೆ ಸಿಲುಕದ ವರವಿದು ಇದನು ಆಗಿಸು ನಿನ್ನೆಯ ಸಹಜಸ್ಥಿತಿ
.
Wednesday, January 10, 2007
ಅಂತರ್ಜಾಲದ ಅಲೆಮಾರಿಗಳು
ಸಂಬಂಧಗಳು ಮತ್ತು ಸಹಸ್ಪಂದನ.
ಕಳೆದ ಸಂವತ್ಸರ ನಾನು ಅಂತರ್ಜಾಲದಲ್ಲಿ ಅಲೆದಾಡುತ್ತ ಹಲವು ಮಂದಿ ಹೊಸ ಸ್ನೇಹಿತರನ್ನು ಸಂಪಾದಿಸಿದೆ. ಈ ಸಂಬಂಧಗಳ ಸಂಕೋಲೆ ಬಹಳ ಸೋಜಿಗವೂ ಮತ್ತು ಸ್ವಾರಸ್ಯಕರವೂ ಆಗಿದೆ. ನನ್ನ ಒಡನಾಟಕ್ಕೆ ಸಿಕ್ಕ ಹಲವು ಮಂದಿಯ ಮುಖ ಪರಿಚಯ ಸಹ ನನಗೆ ಇಲ್ಲ. ಇಂತಿದ್ದರು, ಇವರುಗಳು ನನ್ನ ಜೀವನದಲ್ಲಿ ಈ ದಿನ ಹಾಸು ಹೊಕ್ಕು. ಇವರಲ್ಲಿ ಉಭಯಕುಶಲೋಪರಿ ವಿಚಾರಿಸದ ದಿನವೇ ಇಲ್ಲ. ಏತ್ತಣ ಮಾಮರ ; ಏತ್ತಣ ಕೋಗಿಲೆ -- ಆದರೂ ಅನುಬಂಧವಿರುವಂತೆ , ನಮ್ಮ ಮೈತ್ರಿ ಅಂಕುರಿಸಿ ಸಂಬಂಧಗಳು ಬೆಳೆಯುತ್ತಲೇ ಇವೆ. ಕಾರ್ಯ ನಿಮಿತ್ತ ನಾ ಹಿಂದೆಂದೂ ಕಾಣದ ಊರುಗಳಿಲ್ಲಿ ಸಂಚರಿಸುವ ಸಂದರ್ಭದಲ್ಲಿ ಇವರುಗಳ ಮನ - ಮನೆ - ಮಂದಿರದಲ್ಲೇ ಸಹ ಮೈತ್ರಿ ಭೋಜ್ಯ - ಸಹ ಮಿತ್ರ ವಾಸ. ಮಿತ್ರರು ಒಂದೆಡೆಯಾದರೆ , ಅಂತರ್ಜಾಲದಲ್ಲಿ ನಾ ಕಂಡ ಸಜ್ಜನರು ಈಗ ನನ್ನ ಒಲವಿನ ಭಾವನವರಾಗಿ ಮನೆಯ ಸದಸ್ಯರೇ ಆಗಿದ್ದಾರೆ.ಜೀವನವೀಡಿ ಪರಿಚಯವಿದ್ದರೂ ನಮ್ಮವರಲ್ಲದಂತೆ ವರ್ತಿಸುವ ಹಲವಾರು ಜನಗಳ ನಡುವೆ , ಕೆಲವೇ ದಿನಗಳ ಒಡನಾಟದಲ್ಲಿ ವಿಶ್ವಾಸದ ಮಾತುಗಳನ್ನು ಆಡಿ ನನ್ನ ದಿನಚರಿಯನ್ನು ಸುಗಮವೆನ್ನಿಸುವ ಇವರುಗಳಿಗೆ ನಾನು ಚಿರಋಣಿ.
ಈ ಸ್ನೇಹಸೇತುವನ್ನು ನಾನು ನೆನೆದಾಗ ಅಂತರಾಳದಲ್ಲಿ ಮೂಡಿಬಂದ ಸ್ವಗತ :
ಅಲೆಮಾರಿಗಳು , ನಾವು ಅಂತರ್ಜಾಲದ ಅಲೆಮಾರಿಗಳು
ಪುಟದಿಂದ ಪುಟಕ್ಕೆ ,ತಾಣದಿಂದ ತಾಣಕ್ಕೆ
ಜಿಗಿದು ,ನೆಗೆದು ,ಕುಣಿದು ,ಹೊಸ ಬೆಸುಗೆ ಬೆಸೆದು,
ಕಾಣದವರ ನಮ್ಮವರನಾಗಿಸುವ ಕಲೆಯ ನೆಲೆಯ
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು
ಅಪರಿಚಿತರಾದರೂ ಚಿರಪರಿಚಿತರು
ಮುಖಪರಿಚಯವಿಲ್ಲದ ಅಶರೀರಭ್ರಾತೃಗಳು
ಸ್ನೇಹ ಸಂಬಂಧಗಳ ಸಹಸ್ಪಂದನವನು
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು
As always - ಇದು ಪದ್ಯ, ಲಹರಿ ,ಕವನ , ಕಾವ್ಯ -- ಇದ್ಯಾವ್ದು ಅಲ್ಲ . ಇದು ಸುಮ್ನೆ ಹಾಗೆ , ಸ್ವಗತ!
.
ಕಳೆದ ಸಂವತ್ಸರ ನಾನು ಅಂತರ್ಜಾಲದಲ್ಲಿ ಅಲೆದಾಡುತ್ತ ಹಲವು ಮಂದಿ ಹೊಸ ಸ್ನೇಹಿತರನ್ನು ಸಂಪಾದಿಸಿದೆ. ಈ ಸಂಬಂಧಗಳ ಸಂಕೋಲೆ ಬಹಳ ಸೋಜಿಗವೂ ಮತ್ತು ಸ್ವಾರಸ್ಯಕರವೂ ಆಗಿದೆ. ನನ್ನ ಒಡನಾಟಕ್ಕೆ ಸಿಕ್ಕ ಹಲವು ಮಂದಿಯ ಮುಖ ಪರಿಚಯ ಸಹ ನನಗೆ ಇಲ್ಲ. ಇಂತಿದ್ದರು, ಇವರುಗಳು ನನ್ನ ಜೀವನದಲ್ಲಿ ಈ ದಿನ ಹಾಸು ಹೊಕ್ಕು. ಇವರಲ್ಲಿ ಉಭಯಕುಶಲೋಪರಿ ವಿಚಾರಿಸದ ದಿನವೇ ಇಲ್ಲ. ಏತ್ತಣ ಮಾಮರ ; ಏತ್ತಣ ಕೋಗಿಲೆ -- ಆದರೂ ಅನುಬಂಧವಿರುವಂತೆ , ನಮ್ಮ ಮೈತ್ರಿ ಅಂಕುರಿಸಿ ಸಂಬಂಧಗಳು ಬೆಳೆಯುತ್ತಲೇ ಇವೆ. ಕಾರ್ಯ ನಿಮಿತ್ತ ನಾ ಹಿಂದೆಂದೂ ಕಾಣದ ಊರುಗಳಿಲ್ಲಿ ಸಂಚರಿಸುವ ಸಂದರ್ಭದಲ್ಲಿ ಇವರುಗಳ ಮನ - ಮನೆ - ಮಂದಿರದಲ್ಲೇ ಸಹ ಮೈತ್ರಿ ಭೋಜ್ಯ - ಸಹ ಮಿತ್ರ ವಾಸ. ಮಿತ್ರರು ಒಂದೆಡೆಯಾದರೆ , ಅಂತರ್ಜಾಲದಲ್ಲಿ ನಾ ಕಂಡ ಸಜ್ಜನರು ಈಗ ನನ್ನ ಒಲವಿನ ಭಾವನವರಾಗಿ ಮನೆಯ ಸದಸ್ಯರೇ ಆಗಿದ್ದಾರೆ.ಜೀವನವೀಡಿ ಪರಿಚಯವಿದ್ದರೂ ನಮ್ಮವರಲ್ಲದಂತೆ ವರ್ತಿಸುವ ಹಲವಾರು ಜನಗಳ ನಡುವೆ , ಕೆಲವೇ ದಿನಗಳ ಒಡನಾಟದಲ್ಲಿ ವಿಶ್ವಾಸದ ಮಾತುಗಳನ್ನು ಆಡಿ ನನ್ನ ದಿನಚರಿಯನ್ನು ಸುಗಮವೆನ್ನಿಸುವ ಇವರುಗಳಿಗೆ ನಾನು ಚಿರಋಣಿ.
ಈ ಸ್ನೇಹಸೇತುವನ್ನು ನಾನು ನೆನೆದಾಗ ಅಂತರಾಳದಲ್ಲಿ ಮೂಡಿಬಂದ ಸ್ವಗತ :
ಅಲೆಮಾರಿಗಳು , ನಾವು ಅಂತರ್ಜಾಲದ ಅಲೆಮಾರಿಗಳು
ಪುಟದಿಂದ ಪುಟಕ್ಕೆ ,ತಾಣದಿಂದ ತಾಣಕ್ಕೆ
ಜಿಗಿದು ,ನೆಗೆದು ,ಕುಣಿದು ,ಹೊಸ ಬೆಸುಗೆ ಬೆಸೆದು,
ಕಾಣದವರ ನಮ್ಮವರನಾಗಿಸುವ ಕಲೆಯ ನೆಲೆಯ
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು
ಅಪರಿಚಿತರಾದರೂ ಚಿರಪರಿಚಿತರು
ಮುಖಪರಿಚಯವಿಲ್ಲದ ಅಶರೀರಭ್ರಾತೃಗಳು
ಸ್ನೇಹ ಸಂಬಂಧಗಳ ಸಹಸ್ಪಂದನವನು
ಅರಿತು ನಡೆವ..ಅಲೆಮಾರಿಗಳು,
ನಾವು ಅಂತರ್ಜಾಲದ ಅಲೆಮಾರಿಗಳು
As always - ಇದು ಪದ್ಯ, ಲಹರಿ ,ಕವನ , ಕಾವ್ಯ -- ಇದ್ಯಾವ್ದು ಅಲ್ಲ . ಇದು ಸುಮ್ನೆ ಹಾಗೆ , ಸ್ವಗತ!
.
Subscribe to:
Posts (Atom)