Tuesday, April 30, 2013

ಶಾಸ್ತ್ರ ಮತ್ತು ಕಲೆ

ಇರುವ ಪದಾರ್ಥಗಳ ಸ್ವರೂಪವನ್ನು ತಿಳಿಯುವುದು ಶಾಸ್ತ್ರ, ಹೊಸದನ್ನು ಸೃಷ್ಟಿ ಮಾಡುವುದು ಕಲೆ.

 - ರಾಳ್ಳಪಲ್ಲಿ  ಅನಂತ ಕೃಷ್ಣ ಶರ್ಮ

Sunday, March 31, 2013

ದಕ್ಷಿಣಾಮೂರ್ತಿ ಸ್ತೋತ್ರ

 ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯದಲ್ಲಿ ಭಕ್ತಿ ಪ್ರಧಾನ ಹಾಗು ವಿಚಾರಪ್ರಧಾನ ಎಂಬ ವಿಂಗಡನೆ ಸಾಧ್ಯ. ವಿಚಾರ ಸಾಹಿತ್ಯದಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮುಖ್ಯ ಹಾಗು ಅತಿಶ್ರೇಷ್ಟ ಎಂದು ಪರಿಗಣಿಸಬಹುದು ಇದರಲ್ಲಿ ಕೇವಲ ಹತ್ತು ಶ್ಲೋಕಗಳು ಇದ್ದರೂ ಗಹನ ಅರ್ಥಗರ್ಭಿತವಾಗಿದ್ದು, ವಿದ್ವಾಂಸರು ಹಲವು ತಿಂಗಳುಗಳ ಕಾಲ ಈ ಸ್ತೋತ್ರದ ಪ್ರವಚನಗಳನ್ನು ನೀಡಿದ್ದಾರೆ.ಪ್ರಮುಖವಾದ ಹತ್ತು ಉಪನಿಷತ್ತುಗಳ ಸಾರವೇ ಇದರಲ್ಲಿ ಅಡಕವಾಗಿದ್ದು, ಇದು ವೇದಾಂತ ವಿಷಯದ ಆಗರವಾಗಿದೆ. ಮಾಂಡೂಕ್ಯೋಪನಿಷತ್ತಿನ ಅವಸ್ಥಾತ್ರಯ ಪಕ್ರಿಯೆ, ಬೃಹದಾರಣ್ಯಕದ ಸರ್ವಾತ್ಮ ಭಾವ, ಛಾಂದೋಗ್ಯದ ಕಾರ್ಯಕಾರಣ ಪಕ್ರಿಯೆ, ತತ್ವಮಸಿ ವಾಕ್ಯಾರ್ಥ ವಿಚಾರ  ಸಾಮಾನ್ಯ ವಿಶೇಷ ಪ್ರಕ್ರಿಯೆ -- ಈ ವಿಚಾರಗಳು ವರ್ಣಿತವಾಗಿವೆ.

ವಿ. ಸೂ : ಮಾರ್ಚ್ ೧೭ ರಿಂದ ಮಾರ್ಚ್ ೨೧ ರ ವರೆಗೆ  ಸಚ್ಚಿದಾನಂದ ಅದ್ವೈತಾಶ್ರಮದ  ಶ್ರೀ ಶ್ರೀ ಅದ್ವಯಾನಂದೇದ್ರ ಸರಸ್ವತೀ ಸ್ವಾಮಿಗಳು  ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಯಜ್ಞ ಪಂಚಾಹ ಕಾರ್ಯಕ್ರಮವನ್ನು ರಸಧ್ವನಿ ಕಲಾ ಕೇಂದ್ರದಲ್ಲಿ ನಡೆಯಿತು

Tuesday, February 26, 2013

ಜಯೋಸ್ತುತೇ ಜಯೋಸ್ತುತೇ


ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ ದೇಹ ತ್ಯಾಗ ಮಾಡಿದ ದಿನ : ೨೬ - ಫೆಬ್ರವರಿ - ೧೯೬೬

ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂ ಪುಣ್ಯ ಭೂಶ್ಚೈವ ಸವೈ ಹಿಂದು ರಿತಿಸ್ಮೃತಃ ||

"ಯಾರು ಭಾರತವನ್ನು ತನ್ನ ಪಿತೃಭೂಮಿ, ಮಾತೃಸ್ವರೂಪ, ಪುಣ್ಯಭೂಮಿ ಅಂತ ಭಾವಿಸುತ್ತಾನೋ, ಅವನು ಎಲ್ಲೇ ಇರಲಿ ಆತ ಹಿಂದೂ, ಭಾರತೀಯ"

Wednesday, January 30, 2013

ತ್ಯಾಗರಾಜಂ ಭಜೆ

ವ್ಯಾಸೋ ನೈಗಮಚರ್ಚಯಾ ಮ್ರುದುಗಿರಾ ವಲ್ಮೀಕ ಜನ್ಮಾಮುನಿಃ ।
ವೈರಾಗ್ಯೇ ಶುಕಮಿವ ಭಕ್ತಿ ವಿಷಯೇ ಪ್ರಹ್ಲಾದ ಏವ ಸ್ವಯಂ ॥
ಬ್ರಹ್ಮಾನಾರದ ಏವ ಚಾSಪ್ರತಿಮಯೋಃ ಸಾಹಿತ್ಯ ಸಂಗೇತಯೋಃ ।
ಯೋ ರಾಮಾಮೃತಪಾನ ನಿರ್ಜಿತ ಶಿವಃ ತಂ ತ್ಯಾಗರಾಜಂ ಭಜೆ ॥



Thursday, December 27, 2012

ಎನಿತು ಧನ್ಯನೋ ಪಾರ್ಥ!

ಒಮ್ಮೆ ಇಂದ್ರನು ಶ್ರೀ ಕೃಷ್ಣನನ್ನು ಕುರಿತು ಒಂದು ವರವನ್ನು ಪ್ರದಾನ ಮಾಡುವುದಾಗಿ ಹೇಳಿದನು.ಏನು ವರವನ್ನೀಯಲಿ ಎಂದು ವಜ್ರಾಯುಧಧರನು ಮುರಾರಿಯನ್ನು ಕೇಳಲಾಗಿ, ಇಂದ್ರನ ಪುತ್ರನಾದ ಅರ್ಜುನನ ಶಾಶ್ವತ ಸಖ್ಯವನ್ನು ಬೇಡಿದನಂತೆ ಮುರವೈರಿ. ಸಕಲ ಚರಾಚರರ ಒಡೆಯ, ಮುನಿಸಂಕುಲವೆಲ್ಲ ಮೂರು ಕಾಲ ಭಜಿಸುವ ಸ್ವಾಮೀ ತಾನು ಅರ್ಜುನನ ಸ್ನೇಹಕ್ಕೆ ಹಾತೊರೆಯುವುದಾದರೆ, ಎನಿತು ಧನ್ಯನೋ ಪಾರ್ಥ!


Wednesday, November 28, 2012

ಬಿಟ್ಟು ಹೊರಟಿಹ ಠಕ್ಕ





ಬಿಟ್ಟು ಹೊರಟಿಹ ಠಕ್ಕ
ಕಿಟಕಿಯಿಂದಲಿ ಕಾಂಬ
ನಭದೆ ಹೊಳೆಯುವ ಶಶಿಯ

ಝೆನ್ ಕವಿಗಳು ಚಂದ್ರನನ್ನು ಜಾಗೃತ ಚಿತ್ತಕ್ಕೆ ಪ್ರತಿಮೆಯಾಗಿ ಬಹಳಷ್ಟು ಬಾರಿ ಬಳಸುವುದುಂಟು. ಝೆನ್ ಗುರು ರಯೋಕನ್ ಒಮ್ಮೆ ತನ್ನ ಗುಡಿಸಲಿಗೆ ಬಂದಾಗ ಕಳ್ಳನೊಬ್ಬ ಗುಡಿಸಲಿನಲ್ಲಿ ಇದ್ದ ಎಲ್ಲ ವಸ್ತುಗಳನ್ನು ದೋಚಿ ಓಡಿಹೋಗುತ್ತಿದ್ದ. ಅವಸರದಲ್ಲಿ ಒಂದು ಪೀಠವನ್ನು ಉಳಿಸಿ ಓಡಿದನಂತೆ. ಮನೆಯ ಒಳಗೆ ಬಂದ ಝೆನ್ ಗುರು ಆ ಪೀಠವನ್ನೂ ಹೊತ್ತು, ಕಳ್ಳನನ್ನು ಹಿಂಬಾಲಿಸಿ , ಅವನಿಗೆ ಕೊಟ್ಟು ಬಿಟ್ಟನಂತೆ. ಎಲ್ಲವನ್ನೂ ದೋಚಿದರು ಸಹ ಕಿಟಕಿಯಲ್ಲಿ ಬೋಧಿಯ ಸ್ವರೂಪವಾದ ಚಂದ್ರನನ್ನು ದೊಚಲಾದೀತೇ? ಈ ಸಂದರ್ಭದಲ್ಲಿ ಬರೆದ ಹೈಕು ಇದಾಗಿದೆ.

The thief left it behind:
the moon
at my window

Sunday, October 28, 2012

ವಿಜ್ಞಾನ ಮತ್ತು ಕಲೆ


ಭಾರತದ ಪರಮಾಣು ಪಿತಾಮಹ ರೆಂದು ಖ್ಯಾತರಾಗಿರುವ ಹೋಮಿ ಜೆಹಾಂಗೀರ್ ಭಾಭಾ ಅವರು ದೇಶ ಕಂಡ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು. ವಿಜ್ಞಾನ-ತಂತ್ರಜ್ಞಾನವೇ ಅಲ್ಲದೆ, ಭಾಭಾ ಅವರು ಉತ್ತಮ ಆಡಳಿತಕಾರರಾಗಿ ಸಹ ಭಾರತಕ್ಕೆ ಕೊಡುಗೆ ನೀಡಿದರು.ಭಾಭಾ ಅಣು ಸಂಶೋಧನಾ ಕೇಂದ್ರ,ಟಾಟಾ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮುಂತಾದ ಉನ್ನತ ಮಟ್ಟದ ಸಂಸ್ಥೆಗಳನ್ನೂ ಹುಟ್ಟುಹಾಕಿದರು. ೧೯೬೬ ರಲ್ಲಿ ಭಾಭಾ ಅವರ ಅಕಾಲಿಕ ಮರಣ ಸಂಭವಿಸಿದಾಗ ಕಲಾ ಪೋಷಕರಾದ ವಾನ್ ಲೆಯ್ದೆನ್ ಅವರು -- "ಭಾರತದ ಕಲಾ ಪ್ರಪಂಚ ಅನಾಥ ವಾಯಿತು" ಎಂದು ಉದ್ಗರಿಸಿದರು. ಇದೇನು, ಮೇಲು ದರ್ಜೆಯ ವಿಜ್ಞಾನಿ ಇಲ್ಲವಾದರೆ ಕಲಾ ಸಾಮ್ರಾಜ್ಯ ಹೇಗೆ ಬಡವಾಯಿತು ಎಂದು ಪ್ರಶ್ನಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಭಾಭಾ ಅವರ ಬುದ್ಧಿ - ಜ್ಞಾನಗಳು ವಿಜ್ನಾನಿಯದ್ದಾದರೆ, ಹೃದಯವು ಮಾತ್ರ ಅಪ್ಪಟ ಕಲಾವಿದನದ್ದು, ಸಹೃದಯನದ್ದು. ಸರ್. ಸಿ. ವಿ. ರಾಮನ್ ಅವರು ಭಾಭಾರನ್ನು ಲಿಯೋ ನಾರ್ಡೋ ಡಾ ವಿಂಚಿ ಗೆ ಹೋಲಿಸಿದರು. ಹೋಲಿಕೆ ಅತ್ಯಂತ ಸಮಜಸವಾಗಿದೆ. ಡಾ ವಿಂಚಿ ಯಂತೆ ಭಾಭಾ ಸಹ ಬಹುಮುಖ ಪ್ರತಿಭೆ. ಭಾಭಾ ಅವರು ಫಿಲ್ ಹಾರ್ಮಾನಿಕ್ ಆರ್ಕೆಸ್ತ್ರದಲ್ಲಿ ( ವಾದ್ಯ ಗೋಷ್ಠಿ ಯಲ್ಲಿ ) ವಯೋಲಾ ನುಡಿಸುತ್ತಿದ್ದರು. ಕೇಂಬ್ರಿಡ್ಜ್ ನ ನೌಕಾ ತಂಡದಲ್ಲಿ ( ರೆಗಟ್ಟ) ದಲ್ಲಿ ದೋಣಿ ನಡೆಸುವ ಅಂಬಿಕರಾಗಿದ್ದರು, ಇದಲ್ಲದೆ ಮೊಜಾರ್ಟ್ ನ ' ದಿ ಮ್ಯಾರೇಜ್ ಆಫ್ ಫಿಗಾರೊ' ರೂಪಕಕ್ಕೆ ರಂಗ ಸಜ್ಜಿಕೆ ಮತ್ತು ಕುಂಚ ಹಿಡಿದಿದ್ದರು . ವಿಜ್ಞಾನಿಯಾಗಿ ಪರಮಾಣುಗಳ ಒಳಹೊಕ್ಕು ಬೇಧಿಸಿದ ಭಾಭಾ, ಕಲಾವಿದನಾಗಿ ಆಂತರ್ಯದ
ಹೃದಯದಾಳವನ್ನು ಶೋಧಿಸಿದರು. ಕವಿಹೃದಯಿ ಭಾಭಾ ಒಮ್ಮೆ ಹೀಗೆಂದಿದ್ದರು
ನನ್ನ ಜೀವಿತದ ಅವಧಿಯನ್ನು ಕಾಲ ಪರಿಮಿತಿಯಿಂದ ಹೆಚ್ಚಿಸಿಕೊಳ್ಳಲಾದು, ಆದರೆ ತೀವ್ರತೆಯನ್ನು ವೃದ್ಧಿಸುವುದರಿಂದ ಅದನ್ನು (ಜೀವಿತವನ್ನು) ವೃದ್ದಿ ಸಿ ಕೊಳ್ಳುತ್ತೇನೆ. ಕಲೆ, ಸಂಗೀತ, ಕಾವ್ಯ - ಇವುಗಳ ವ್ಯವಸ್ಥಿತಿಗಳಿಂದ ನನ್ನ ಒಂದೇ ಧ್ಯೇಯವೆಂದರೆ - ಕಲಾವ್ಯವಸ್ಥಿತಿ ಯಿಂದ ಜೀವನ ತೀವ್ರತೆಯ ಅನುಸಂಧಾನ

Sunday, September 30, 2012

ಪುಟ್ಟಿ

ಶಿಶುವಿಹಾರದಲ್ಲಿ ಚಿಣ್ಣರೆಲ್ಲರೂ ಬಣ್ಣದ ಬಳಪಗಳನ್ನು ಹಿಡಿದು ಚಿತ್ರ ಬಿಡಿಸುವುದರಲ್ಲಿ ಮಗ್ನರಾಗಿದ್ದರು. ಸವಿತಾ ಟೀಚರ್ ತರಗತಿಯನ್ನು ಸುತ್ತು ಹಾಕುತ್ತ, ಯಾವ ಮಗುವಿನ ಕುಂಚ ಏನನ್ನು ಅವತರಿಸುತ್ತಿದೆ ಎಂದು ನೋಡುತ್ತಿದ್ದರು . ಪುಟ್ಟಿಯ ಪಕ್ಕ ನಿಂತು "ಇದೇನು ಪುಟ್ಟಿ, ಏನು ಬಿಡಿಸುತ್ತಿದೀಯ?" ಎಂದ ಕೇಳಿದರು. "ದೇವರನ್ನು ಬಿದುಸುತ್ತಿದೀನಿ" ಎಂದಳು ಪುಟ್ಟಿ. ಆದರೆ ಯಾರೂ ದೇವರನ್ನು ನೋಡಿಯೇ ಇಲ್ಲವಲ್ಲ ಎಂದರು ಸವಿತಾ ಟೀಚರ್ . "ಶ್ ! .. ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರು ನೋಡುವರು ಎಂದಳು ಮುಗ್ಧ ಪುಟ್ಟಿ.

Thursday, August 30, 2012

ಆನಂದಂ ಬ್ರಹ್ಮ




ಸಕಲ ಜೀವ ರಾಶಿಗಳು ಅನುಗಾಲ ಆರಿಸುವುದು ಆನಂದವನ್ನೇ. ನಮ್ಮ ಬಹುತೇಕ ಎಲ್ಲ ಚಟುವಟಿಕೆಗಳು ಸುಖ ಸಂಪಾದನೆಯ ಸುತ್ತ ಮುತ್ತಲೇ ಇರುತ್ತವೆ. ಎಲ್ಲವನ್ನು ಬಿಟ್ಟು ಸರ್ವಸಂಘ ಪರ್ತ್ಯಾಗಿ ಆಗಬಯಸುವ ಸನ್ಯಾಸಿಯೂ ಸಹ ಸರ್ವ ತ್ಯಾಗದಿಂದ ತನಗೆ ಸಂತೋಷ ನೆಮ್ಮದಿಗಳು ದೊರೆಯುವುದರಿಂದಲೇ ತ್ಯಾಗಾಸಕ್ತನಾಗುವುದು. ಸುಖ ಒಂದೇ ಜೀವನದ ಮೌಲಯ ಎಂದು ಪರಿಗಣಿಸಿ ಅತಿಯಾದ ವಿಷಯಾಸಕ್ತಿಯಲ್ಲಿ ತೊಡಗಿದರೆ ಅದನ್ನು 'ಹೆಡೋನಿಸಂ' (Hedonism) ಎಂದು ಕರೆಸಿಕೊಂಡರೆ, ಧರ್ಮ ವಿರುದ್ಧವಲ್ಲದ ಸರ್ವಭೂತ ಹಿತೋರಥದ ಸಂತೋಷ- ಸುಖದ ಅರಸಿವಿಕೆ ಹಂತ ಹಂತವಾಗಿ ಬ್ರಹ್ಮಾನಂದ ವನ್ನು ಸಹ ದೊರಕಿಸಿ ಕೊಡುತ್ತದೆ. ನಾ ನಾ ವಿಧವಾದ ಆನಂದ ಮೀಮಾಂಸೆ ಸನಾತನ ಧರ್ಮದಲ್ಲಿ ಇದ್ದು ಆನಂದವನ್ನು ಬ್ರಹ್ಮ ವಸ್ತುವಿಗೆ ಹೋಲಿಸಿದ್ದಾರೆ ನಮ್ಮ ಸನಾತನರು. ಪ್ರಚಲಿತ ಮನೋವಿಜ್ಞಾನಿ ಗಳಲ್ಲಿ ಮಾರ್ಟಿನ್ ಸಲಿಗ್ಮನ್ (Martin Seligman) ಅವರು ಆನಂದದ ಮೂಲವನ್ನು ಹುಡುಕಲು ಹೊರಟು 'PERMA' ಎಂಬ ಪಂಚಾಕ್ಷರ ಸೂತ್ರವನ್ನು ಪ್ರತಿಪಾದಿಸಿದರು. ಈ ಐದು ಬಗೆಯ ಸುಖಪ್ರದ ಸಾಧನಗಳಲ್ಲಿ "ವಸ್ತು ಜನ್ಯ ಸುಖ" - Pleasure ಮೊದಲನೆಯದು. ಈ ವಸ್ತು ಜನ್ಯ ಸುಖ, ಪಂಚೆದ್ರಿಯಗಳಿಗೆ ಮುದದಿಂದ ಉಂಟಾಗುತ್ತದೆ. ಇಂಪಾದ ಗಾನ ಲಾಲಿಸುವುದಾಗಲಿ, ಘಮ ಘಮಿಸುವ ಸುಗಂಧ ದ್ರವ್ಯದ ಸುವಾಸನೆಯಾಗಲಿ , ಸುಗ್ರಾಸ ಭೋಜನದಿಂದಾಗಲಿ , ಇವೆ ಮೊದಲಾದ ವಸ್ತುಜನ್ಯ ಸಂತೋಷವು ಇಲ್ಲಿ ಸೇರಿಕೊಳ್ಳುತ್ತವೆ. "ವ್ಯವಸ್ಥಿತಿ" - Enagagement ಇಂದ ದೊರೆಯುವ ಸಂತಸ ಎರಡನೆಯ ಸ್ತರದ್ದಾಗಿರುತ್ತದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ದೆ, ಉತ್ಸಾಹವಿದ್ದು, ಕಾರ್ಯ ತತ್ಪರತೆ ಇಂದ ದೊರೆಯುವ ಸಂತಸ ಇದಾಗಿರುತ್ತದೆ. ಸಂಪೂರ್ಣವಾಗಿ ಮಗ್ನವಾಗಿ ತನು, ಮನ , ಆತ್ಮಗಳನ್ನು ಒಂದು ಮಾಡಿ ಸಂಪೂರ್ಣವಾಗಿ ತೊಡಗಿಸಿ ಕೊಂದ ಮಾಡಿದ ಕೆಲಸದ ಸಂತಸವೇ ಸಂತಸ. ಸರ್ ಎಂ. ವಿಶ್ವೇಶ್ವರಯ್ಯ ನವರು ಹೇಳುತ್ತಿದ್ದಂತೆ " ಕಸ ಗುಡಿಸುವುದು ನಮ್ಮ ಕೆಲಸವಾದರೆ, ನಾವು ಗುಡಿಸಿದ ರಸ್ತೆ ಜಗತ್ತಿನಲ್ಲೇ ಅತ್ಯಂತ ಸ್ವಚ್ಛ ವಾಗಿರುವ ರಸ್ತೆಯಾಗ ಬೇಕು -- ಹಾಗಿರಬೇಕು ನಮ್ಮ ಕಾರ್ಯ ಶ್ರದ್ದೆ. Relationship - "ಸಂಬಂಧ-ಬಾಂಧವ್ಯ" ಗಳಿಂದ ಪ್ರಾಪ್ತಿಯಾಗುವ ಸಂತೋಷ ಮೂರನೆಯದು. ಮಾನವ ಸಮಾಜ ಜೀವಿ. ಯಾರಿಗೆ ಒಳ್ಳೆಯ ಒಡನಾಟ ದೊರೆಯುವುದೋ ಅವರೇ ಪುಣ್ಯವಂತರು. ಸಲಿಗ್ಮನ್ ಗುರುತಿಸುವ ನಾಲ್ಕನೇ ಪಂಕ್ತಿಯ ಸಂತಸ ವೆಂದರೆ "ಅರ್ಥ ಗ್ರಹಣ" - Meaning . ಜೀವನದಲ್ಲಿ ಎಲ್ಲವೂ ಇದ್ದರೂ "ಏನೋ" ಹೇಳಿಕೊಳ್ಳಲಾರದ ತಾಕಲಾಟ. ಉತ್ತರಗಳಿಲ್ಲ ಪ್ರಶ್ನೆಗಳು ಎಲ್ಲರನ್ನು ಒಮ್ಮೆಯಾದರೂ ಕಾದಿರುವುದು ಸಹಜವೇ. ಈ ಮಾಯಮಯವಾದ ಪ್ರಪಂಚದ ಅರ್ಥ ಗ್ರಹಣವೆ ಒಂದು ಸಂತಸ. ಸಂತಸದ ಐದನೆಯ ಮೂಲವೆಂದರೆ Achievement - "ಸಾಧನೆಯ ಸಂತೃಪ್ತಿ". ಎಷ್ಟೇ ಉಟ್ಟರು ಉಂಡರೂ, ಸಂಸಾರದಲ್ಲಿ ಸಾಮರಸ್ಯ ಇದ್ದರೂ, ಸಾಧನೆಯ ಗಂಧ ವಿರದಿದ್ದರೆ ಜೀವನ ನೀರಸವೇ ಸರಿ.


Friday, July 27, 2012

ಕನಕಧಾರಾ ಸ್ತೋತ್ರಂ

ಅಂಗಂ ಹರೇಃ ಪುಲಕ-ಭೂಷಣಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||1||

ಮುಗ್ಧಾಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾ-ದೃಶೋ-ರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ-ಸಂಭವಾಯಾಃ ||2||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ-
ಮಾನಂದಕಂದಮನಿಮೇಷಮನಂಗತಂತ್ರಂ |
ಆಕೇಕರ-ಸ್ಥಿತ-ಕನೀನಿಕ-ಪಕ್ಷ್ಮ ನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ||3||

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋsಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||4||

ಕಾಲಾಂಬುದಾಲಿ-ಲಲಿತೋರಸಿಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ-ನಂದನಾಯಾಃ ||5||

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ ಪ್ರಭಾವಾತ್
ಮಾಂಗಲ್ಯಭಾಜಿ ಮಧು-ಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ
ಮಂದಾಲಸಂ ಚ ಮಕರಾಲಯಕನ್ಯಕಾಯಾಃ ||6||

ವಿಶ್ವಾಮರೇಂದ್ರ-ಪದವಿಭ್ರಮ-ದಾನದಕ್ಷಂ
ಆನಂದ-ಹೇತುರಧಿಕಂ ಮಧುವಿದ್ವಿಷೋsಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಂ
ಇಂದೀವರೋದರ ಸಹೋದರಮಿಂದಿರಾಯಾಃ ||7||

ಇಷ್ಟಾವಿಶಿಷ್ಟಮತಯೋsಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟಮಮ ಪುಷ್ಕರ-ವಿಷ್ಟರಾಯಾಃ ||8||

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್
ಅಸ್ಮಿನ್ನಕಿಂಚನ-ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮ-ಘರ್ಮಮಪನೀಯ ಚಿರಾಯ ದೂರಾತ್
ನಾರಾಯಣ-ಪ್ರಣಯಿನೀ-ನಯನಾಂಬುವಾಹಃ ||9||

ಗೀರ್ದೇವತೇತಿ ಗರುಡಧ್ವಜ-ಸುಂದರೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||10||

ಶ್ರುತೈ ನಮೋsಸ್ತು ಶುಭಕರ್ಮ-ಫಲಪ್ರಸೂತ್ಯೈ
ರತ್ಯೈ ನಮೋsಸ್ತು ರಮಣೀಯ-ಗುಣಾಶ್ರಯಾಯೈ |
ಶಕ್ಯೈ ನಮೋsಸ್ತು ಶತಪತ್ರ-ನಿಕೇತನಾಯೈ
ಪುಷ್ಟ್ಯೈ ನಮೋsಸ್ತು ಪುರುಷೋತ್ತಮ-ವಲ್ಲಭಾಯೈ ||11||

ನಮೋsಸ್ತು ನಾಲೀಕ-ನಿಭಾನನಾಯೈ
ನಮೋsಸ್ತು ದುಗ್ಧೋದಧಿ-ಜನ್ಮಭೂತ್ಯೈ |
ನಮೋsಸ್ತು ಸೋಮಾಮೃತ-ಸೋದರಾಯೈ
ನಮೋsಸ್ತು ನಾರಾಯಣ-ವಲ್ಲಭಾಯೈ ||12||

ನಮೋsಸ್ತು ಹೇಮಾಂಬುಜ-ಪೀಠಿಕಾಯೈ
ನಮೋsಸ್ತು ಭೂಮಂಡಲನಾಯಿಕಾಯೈ |
ನಮೋsಸ್ತು ದೇವಾದಿ-ದಯಾಪರಾಯೈ
ನಮೋsಸ್ತು ಶಾರ್ಙ್ಗಾಯುಧ-ವಲ್ಲಭಾಯೈ ||13||

ನಮೋsಸ್ತು ದೇವ್ಯೈ ಭೃಗುನಂದನಾಯೈ
ನಮೋsಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋsಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋsಸ್ತು ದಾಮೋದರ-ವಲ್ಲಭಾಯೈ ||14||

ನಮೋsಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋsಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋsಸ್ತು ದೇವಾಧಿಭಿರರ್ಚಿತಾಯೈ
ನಮೋsಸ್ತು ನಂದಾತ್ಮಜ-ವಲ್ಲಭಾಯೈ ||15||

ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ||16||

ಯತ್ಕಟಾಕ್ಷಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸ್ಯೈ-
ಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ ||17||

ಸರಸಿಜನಿಲಯೇ ಸರೋಜಹಸ್ತೇಃ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೆ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||

ದಿಗ್ಘಸ್ತಿಭಿಃ ಕನಕಕುಂಭಮುಖಾವಸೃಷ್ಟ
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಾಧಿನಾಥಗೃಹಿಣೀಮಮೃತಾಬ್ಧಿ ಪುತ್ರೀಮ್ ||19||

ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||20||

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನ-ಮಾತರಂ ರಮಾಂ |
ಗುಣಾಧಿಕಾ ಗುರುತರ-ಭಾಗ್ಯ-ಭಾಗಿನಃ
ಭವಂತಿ ತೇ ಭುವಿ ಬುಧಭಾವಿತಾಶಯಾಃ ||21||

~*~*~*~

Credits: http://oppanna.com/


Saturday, June 30, 2012

ಸಂಪ್ರತಿ ವಾರ್ತಾಃ ಶೄಯಂತಾಂ.



ಆಕಾಶವಾಣಿ ಸುದ್ದಿ ವಿಭಾಗದಿಂದ ಪ್ರತಿ ಮುಂಜಾನೆ ೬:೫೫ ಗೆ ಬಿತ್ತರವಾಗುವ ಸಂಸ್ಕೃತ ವಾರ್ತಾ ಪ್ರಸಾರಕ್ಕಿಂದು ೩೮ ವರ್ಷದ ಸಂಭ್ರಮ. ೧೯೭೪ರಲ್ಲಿ ಇದೇ ಜೂನ್ ೩೦ ರಂದು ಬೆಳಗಿನ ಸಂಸ್ಕೃತ ವಾರ್ತಾ ಪ್ರಸಾರ ಮೊದಲುಗೊಂಡಿತು. "ಬಹುಜನಹಿತಾಯ, ಬಹುಜನಸುಖಾಯ" ಎಂಬ ಆಕಾಶವಾಣಿಯ ಘೋಶವಾಕ್ಯ ಈ ಸಂಸ್ಕೃತ ವಾರ್ತೆಗಳಿಗೆ ಅಕ್ಷರಶಃ ಸರಿಹೊಂದುತ್ತದೆ.

ಮುಂಜಾನೆ ಎದ್ದು ಎಂ.ಎಸ್. ಕಂಠಸಿರಿಯಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಆಲಿಸಿ , ಬಿಸಿ ತಾಜಾ ಫಿಲ್ಟರ್ ಕಾಫಿ ಹೀರುತ್ತ , ಆಕಾಶವಾಣಿಯಲ್ಲಿ " ಇಯಂ ಆಕಾಶವಾಣಿ, ಸಂಪ್ರತಿ ವಾರ್ತಾಃ ಶೄಯಂತಾಂ , ಪ್ರವಾಚಕಃ ಬಲದೇವಾನಂದ ಸಾಗರಃ" -- ಈ ಉದ್ಘೋಶ ಕೇಳಿದರೆ ಸಾಕು ಆ ದಿನ ಮಂಗಳಮಯವಾಗಿ ಆರಂಭವಾಗುವ ಅನುಭೂತಿ.

ಸಂಸ್ಕೃತ ವಾರ್ತೆಗಳನ್ನು ಅಂತರ್ಜಾಲದಲ್ಲೂ ಕೇಳಬಹುದು. ಕೊಂಡಿ ಇಲ್ಲಿದೆ.

http://www.newsonair.com/NSD-Audio-Bulletins-News-Schedule.asp


ಕಳೆದ ೩೮ ವರ್ಷಗಳಿಂದ ಸಂಸ್ಕೃತ ಪ್ರವಾಚಕರಾಗಿರುವ ಡಾ|| ಬಲದೇವಾನಂದಸಾಗರ ಅವರು.

Monday, May 14, 2012

ಆನಂದಲಹರೀ



ಅಯಃ ಸ್ಪರ್ಶೇ ಲಗ್ನಂ ಸಪದಿ ಲಭತೇ ಹೇಮಪದವೀಂ
ಯಥಾ ರಥ್ಯಾಪಾಥಃ ಶುಚಿ ಭವತಿ ಗಂಗೌಘಮಿಲಿತಮ್ |
ತಥಾ ತತ್ತತ್ ಪಾಪೈಃ ಅತಿಮಲಿನಂ ಅಂತರ್ಮಮ ಯದಿ
ತ್ವಯಿ ಪ್ರೇಮ್ಣಾ ಸಕ್ತಂ ಕಥಮಿವ ನ ಜಾಯೇತ ವಿಮಲಂ ||

ತಾತ್ಪರ್ಯ :  ಸ್ಪರ್ಶಮಣಿಯಿಂದ ಸ್ಪರ್ಶಿಸಿದರೆ ಕಬ್ಬಿಣವು ಬಂಗಾರವಾಗುವುದು; ದಾರಿಯ ಮಗ್ಗಲಿನ ಕೊಳಚೆ ನೀರು ಗಂಗೆಯನ್ನು ಸೇರಿದರೆ ಶುದ್ಧವಾಗುವುದು. ಇದರಂತೆ, ಹೇ ಭವಾನಿ, ನನ್ನ ಹೃದಯವು ಅನೇಕ ಪಾಪಗಳಿಂದ ಅತಿ ಮಲಿನವಾಗಿದ್ದರೂ ಕೂಡ, ನಿನ್ನಲ್ಲಿ ಪ್ರೇಮಸ್ವರೂಪದ ಭಕ್ತಿಯನ್ನು ಪಡೆಯಿತೆಂದರೆ, ಹೇಗೆ ತಾನೇ ನಿರ್ಮಲವಾಗುವುದಿಲ್ಲ? 

Thursday, April 26, 2012

ವಿಶ್ವ ಬೌದ್ಧಿಕ ಸಂಪದ ದಿನಾಚರಣೆ

ವಿಶ್ವದೆಲ್ಲೆಡೆ ಏಪ್ರಿಲ್ ೨೬ ೨೦೧೨ ರಂದು ಬೌದ್ಧಿಕ ಸಂಪದ ದಿನಾಚರಣೆ ಆಚರಿಸಲಾಯಿತು. ವಿಶ್ವ ಬೌದ್ಧಿಕ ಸಂಪದ ಸಂಸ್ಥೆ (World Intellectual Property Organisation: WIPO) ಏಪ್ರಿಲ್ ೨೬ ಅನ್ನು ಜಾಗತಿಕ ಮಟ್ಟದಲ್ಲಿ ಬೌದ್ಧಿಕ ಸಂಪದ ದಿನವನ್ನಾಗಿ ಆಚರಿಸುವ ಕರೆ ನೀಡಿದೆ. ೧೫೦ಕ್ಕೂ ಹೆಚ್ಚು ರಾಷ್ಟ್ರಗಳು ಈ WIPO ಸಂಸ್ಥೆಯ ಸದಸ್ಯರಾಗಿದ್ದು, ಈ ಎಲ್ಲಾ ಸದಸ್ಯ ದೇಶಗಳಲ್ಲೂ ಹೊಸ ಚಿಂತನೆಗಳನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಏಪ್ರಿಲ್ ೨೬ ರಂದು ಕಾರ್ಯಕ್ರಮಗಳು ನಡೆದಿವೆ. ಪ್ರತಿವರ್ಷವೂ ಒಂದು ಮೂಲ ವಿಷಯವನ್ನು ಚರ್ಚೆಗೆ ಆಯ್ದು ಕೊಳ್ಳಲಾಗಿ ಈ ಸಾಲಿನಲ್ಲಿ 'ದ್ರಷ್ಟಾರ ಚಿಂತಕರು' (Visionary Innovators) ಎಂಬ ವಿಷಯವನ್ನು ನಿಗದಿ ಪಡಿಸಲಾಗಿದೆ.

Sunday, March 25, 2012

ವಸಂತೋತ್ಸವ




ವಸಂತ ಬಂದ ಋತುಗಳ ರಾಜಾ ತಾ ಬಂದ! ವಸಂತನ ಆಗಮನ ಎಲ್ಲರಲ್ಲೂ ಸಂತಸ ಮೂಡಿಸಿದೆ. ಉತ್ಸವ ಪ್ರೀಯರಾದ ಭಾರತೀಯರು ವಸಂತ ಋತುವಿಗೆ ಸಂಬಂಧಿಸಿದಂತೆ ಆಚರಿಸುವ ಹತ್ತು ಹಲವು ಪರ್ವಗಳಲ್ಲಿ ಕೆಲವು ಸ್ವಾರಸ್ಯಕರ ಉತ್ಸವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಕಾಮಸೂತ್ರ, ಶೃಂಗಾರ ಪ್ರಕಾಶ, ಸರಸ್ವತಿ ಕಂಠಾಭರಣ, ಸಾಹಿತ್ಯ ಮೀಮಾಂಸ, ಭಾವ ಪ್ರಕಾಶನ ಮತ್ತು ಚತುರ್ವರ್ಗ ಚಿಂತಾಮಣಿ ಮುಂತಾದ ಕೃತಿಗಳಲ್ಲಿ ಈ ಹಬ್ಬಗಳ ವಿವರಣೆ ಇದೆ. ಕೆಲ ವಸಂತೋತ್ಸವಗಳಲ್ಲಿ : ಮದನೋತ್ಸವ - ತಿಂಗಳ ಕಾಲ ಪ್ರೇಮ, ಕಲೆ ಮತ್ತು ಪ್ರಕೃತಿ ಉಪಾಸನೆಯು ಪ್ರಮುಖವಾದ ಉತ್ಸವ. ಅಷ್ಠಮಿ ಚಂದ್ರ - ಚಂದ್ರಕಾಂತಿಯಲ್ಲಿ ಸ್ನೇಹಕೂಟ ಏರ್ಪಡುವ ಹಬ್ಬ. ಬಕುಳಾಶೋಕವಿಹೃತಿ - ಬಕುಳ ಮತ್ತು ಅಶೋಕ ಪುಷ್ಪಗಳನ್ನು ಬಿಡಿಸಿ, ಮಾಲೆಗಳಾಗಿ ಹೆಣೆದು, ದೇವತೆಗಳು ಮತ್ತು ಇನಿಯರು ಸಿಂಗರಿಸಿ ಕೊಂಡು ಸಂಭ್ರಮಿಸುವ ಪರ್ವ. ಶಾಲ್ಮಲೀ ಮೂಲ ಖೇಲನಂ -- ವಶಾಲವಾದ ಶಾಲ್ಮಲೀ ವೃಕ್ಷದ ಕೆಳಗೆ ಆಟವಾಡುವ ಹಬ್ಬ, ಅಶೋಕಾಷ್ಠಮಿ - ಅಶೋಕ ವೃಕ್ಷಕ್ಕೆ ಪೂಜಿಸುವ ಪರ್ವ , ಆಂದೋಲನ ಚತುರ್ಥಿ - ಡೋಲೋತ್ಸವ, ಉಯ್ಯಾಲೆ ಹಬ್ಬ. ಭೂತ ಮಾತೃಕ - ವೇಷಭೂಷಣ ಉತ್ಸವ. ಸುವಸಂತಕ - ಇನಿಯರ ಮೇಲೆ ಪುಷ್ಪ ಮತ್ತು ಓಕುಳಿ ಎರಚಿ ಸಂತಸ ಪಡುವ ಹಬ್ಬ.

ಗ್ರಂಥಋಣ: ಶತಾವಧಾನಿ ಡಾ|| ರಾ.ಗಣೇಶ್

Wednesday, February 15, 2012

ಸಂಕ್ಷಿಪ್ತ ರಾಮಾಯಣಂ



ಪೂರ್ವಂ ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ||

ಏಕಶ್ಲೋಕೀ ಮಹಾಭಾರತ

ಆದೌ ಪಾಂಡವ ಧಾರ್ತರಾಷ್ಟ್ರಜನನಂ ಲಾಕ್ಷಾಗೃಹೇ ದಾಹನಮ್
ದ್ಯೂತಂ ಶ್ರೀಹರಣಂ ವನೇವಿಹರಣಂ ಮತ್ಸ್ಯಾಲಯೇ ವರ್ತನಮ್ |
ಲೀಲಾ ಗೋಗ್ರಹಣಂ ರಣೇವಿತರಣಂ ಸಂಧಿಕ್ರಿಯಾಜೃಂಭಣಂ
ಪಶ್ಚಾದ್ಭೀಷ್ಮ ಸುಯೋಧನಾದಿ ನಿಧನಂ ಏತನ್ಮಹಾಭಾರತಮ್ ||

ಏಕಶ್ಲೋಕೀ ಭಾಗವತ

ಆದೌ ದೇವಕಿದೇವಿ ಗರ್ಭ ಜನನಂ ಗೋಪಿ ಗೃಹೇ ವರ್ಧನಂ
ಮಾಯಾಪೂತನೀ ಜೀವಿತಾಪಹಾರಣಂ ಗೋವರ್ಧನೋದ್ಧಾರಣಂ|
ಕಂಸಕ್ಷೇಧನ ಕೌರವಾದಿ ಹನನಂ ಕುಂತೀಸುತ ಪಾಲನಂ
ಏತದ್ಧಿ ಮಹಾಭಾಗವತ ಪುರಾಣ ಪುಣ್ಯ ಖಚಿತಂ ಶ್ರೀಕೃಷ್ಣ ಲೀಲಾಮೃತಂ||

Sunday, January 22, 2012

ಭರತವರ್ಷ


ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ|
ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ ||


ಸಮುದ್ರಕ್ಕೆ ಉತ್ತರದಲ್ಲೂ, ಹಿಮಾಲಯಕ್ಕೆ ದಕ್ಷಿಣದಲ್ಲೂ ಇರುವ ಪ್ರದೇಶವನ್ನು ಭಾರತವೆನ್ನುತ್ತಾರೆ. ಅಲ್ಲಿ ವಾಸಿಸುವವರೇ ಭಾರತೀಯರು.

ಛಪ್ಪನ್ನೈವತ್ತಾರು ದೇಶಗಳು : ಅಂಗ, ವಂಗ, ಕಳಿಂಗ, ಕರ್ಣಾಟ, ಕೇರಳ,ಕಾಮರೂಪ, ಗೌಡ, ವನವಾಸ (ಬನವಾಸಿ),ಕುಂತಲ,ಕೊಂಕಣ,ಮಗಧ,ಸೌರಾಷ್ಟ್ರ,ಮಾಳವ,ಲಾಟ,ಭೋಜ,ವಿರಾಟ,ಶಬರ,ಕಕುರ,ಕುರು,ಅವಂತಿ,ಪಾಂಡ್ಯ,ಮದ್ರ,ಸಿಂಹಲ,ಗುರ್ಜರ,ಪಾರಸಿಕ,ಮಿಥಿಲ,ಪಾಂಚಾಲ,ಕ್ರೂರಸೇನಿ,ಗಾಂಧಾರ,ಬಾಹ್ಲಿಕ,ಹೈಹಯ,ತೌಳವ,ಸಾಲ್ವ,ಪುಂಡ್ರಕ,ಪ್ರಾಗ್ಜೋತಿಷ್ಯ,ಮತ್ಸ್ಯ,ಚೇದಿ,ಬರ್ಬರ,ನೇಪಾಳ,ಗೌಳ,ಕಾಶ್ಮೀರ,ಕನ್ಯಾಕುಬ್ಜ,ವಿದರ್ಭ,ಖುರಸಾಣ,ಮಹಾರಾಷ್ಟ್ರ,ಕೋಸಲ,ಕೇಕಯ,ಅಹಿಚ್ಛತ್ರ,ತ್ರಿಲಿಂಗ,ಪ್ರಯಾಗ,ಕರಹಂಟಕ,ಕಾಂಭೋಜ,ಭೋಟ,ಚೋಳ,ಹೂಣ,ಕಾಶಿ.

Friday, December 30, 2011

ಮಧ್ಯಮ ಮಾರ್ಗ

ನ ಚಾತಿಪ್ರಣಯಃ ಕಾರ್ಯಃ ಕರ್ತ್ವ್ಯೋ ಅಪ್ರಣಯಸ್ಚ ತೆ
ಉಭಯಂ ಹಿ ಮಹಾನ್ ದೋಶಃ ತಸ್ಮಾದಂತರದ್ರುಗ್ಭವ

Tuesday, November 29, 2011

ಇಂದಿನ ದಿನವೇ ಶುಭ ದಿನವು

ಯಾವತ್ ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||
-- ಸುಭಾಷಿತರತ್ನಭಂಡಾರಗಾರ

ಒಳ್ಳೆಯ ಕೆಲಸ ಮಾಡಲು ಮೀನ-ಮೇಷ ಎಣಿಸುವುದೇಕೆ? ಶಕ್ತಿ ಇರುವಾಗಲೇ ಸದ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು. ಸಂಸಾರ ತಾಪತ್ರಯಗಳು ಯಾರೊಬ್ಬರನ್ನು ಬಿಟ್ಟಿಲ್ಲ; ಹೀಗಿರುವಾಗ ಸರ್ವರಿಗೂ ಹಿತವನ್ನುಂಟು ಮಾಡುವ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಒಳಿತಲ್ಲವೆ. ನಾಳೆ, ನಾಳೆಯೆಂದು ಬಾರದ ನಾಳೆಗೆ ಮಹೋನ್ನತ ಕಾರ್ಯಗಳಾನ್ನು ಬದಿಗೊತ್ತಿ, ನಗಣ್ಯವಾದ ದೈನಂದಿನ ಚಟುವಟಿಕೆಯಲ್ಲಿ ತಳ್ಳಣಿಸುವುದು ಯಾವ ನ್ಯಾಯ ಹೇಳಿ?

Friday, October 28, 2011

ನೀರವ



ಒಕ್ಕಣ್ಣ ಝೇನ್ ಗುರು ಶೋಇಚಿ ದಿವ್ಯಪ್ರಭೆಯಿಂದ ತೇಜೋಮಯವಾಗಿ ಶೋಭಿಸುತ್ತಿದ್ದ. ತೋಫ಼ುಕು ದೇವಳದಲ್ಲಿ ತನ್ನ ಶಿಷ್ಯರಿಗೆ ದೀಕ್ಷೆಯನ್ನೀಯುತ್ತಿದ್ದನು. ದಿನ-ರಾತ್ರಿಯೆನ್ನದೆ ದೇವಳದಲ್ಲಿ ಮೌನವಾವರಿಸಿತ್ತು. ಸುತ್ತಲೂ ಪ್ರಶಾಂತ ಮೌನ. ಮಂತ್ರ ಪಠನವನ್ನೂ ಸಹ ಗುರುಗಳು ನಿಷೇಧಿಸಿದ್ದರು. ಧ್ಯಾನವಲ್ಲದೆ ಶಿಷ್ಯರಿಗೆ ಅನ್ಯ ಶ್ರಮವಿಲ್ಲ. ಹೀಗಿರಲು, ಒಂದಾನೊಂದು ದಿನ, ಬಹುಕಾಲದ ಗುರುಗಳ ನೆರೆಯವನೆನಿಸಿದ ವೃದ್ಧನಿಗೆ ದೇವಾಲಯದಿಂದ ಘಂಟಾನಾದ ಮತ್ತು ಸೂತ್ರಪಠನದ ಧ್ವನಿ ಕೇಳಿ ಬಂತು. ಗುರುಗಳು ಹೊರಟರೆಂದು ಆತನರಿತನಷ್ಟೆ!

Wednesday, September 14, 2011

ಪರೋಪಕಾರಾರ್ಥಮಿದಂ ಶರೀರಂ




ಮೊನ್ನೆ ಬೆಂಗಳೂರು- ಮೈಸೂರು ಮಾರ್ಗದಲ್ಲಿರುವ ಜಾನಪದ ಲೋಕದಲ್ಲಿ ’ಬಿದಿರಮ್ಮ ದೇವಿ’ಯ ಕುರಿತಾದ ಜಾನಪದ ಗೀತೆಯೊಂದನ್ನು ನೋಡಿ, ’ಹರಿ ಹರಿ ಗೋವಿನ’ ಹಾಡು ನೆನಪಿಗೆ ಬಂತು. ದಿಟವೆ, ಬಿದಿರಾಗಲಿ, ಗೋವಾಗಲಿ, ನದಿ-ತರುಗಳಾಗಲಿ ತಮ್ಮ ಒಂದೊಂದು ಭಾಗವೂ ಅನ್ಯರಿಗೆ ಉಪಯೋಗುವಾಗುವಂತೆ ಜೀವಿಸುತ್ತವೆ. ನರ ಮಾನವನಾದರೋ ಯಾರಿಗೂ ಬಾರದವನಾಗಿ, ಭೂಮಿಗೆ ಭಾರವಾಗಿ ಜೀವಿಸಿ ತೆರಳುತ್ತಾರೆ.

ಪರೋಪಕಾರಾಯ ಫಲಂತಿ ವೃಕ್ಷಾ: ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ: ಪರೋಪಕಾರಾರ್ಥಮಿದಂ ಶರೀರಂ ||

ಪರೋಪಕಾರಕ್ಕಗಿಯೇ ವೃಕ್ಷಗಳು ಫಲವೀಯುತ್ತವೆ, ನದಿಗಳು ಹರಿಯುತ್ತವೆ, ಹಸುವು ಹಾಲೀಯುತ್ತದೆ. ಪರೋಪಕಾರಕ್ಕಾಗಿ ತಾನೆ ಈ ನಮ್ಮ ಶರೀರ. ಗೋವಿನ ಹಾಡನ್ನು ಒಮ್ಮೆ ನೆನೆದು ಸ್ವಲ್ಪವಾದರೂ ಅನ್ಯರಿಗೆ ನೆರವಾಗಿ ಬದುಕೋಣ.

ನೀನಾರಿಗಾದೆಯೋ ಎಲೆ ಮಾನವಾ
-- ಕವಿ ಎಸ್‌.ಜಿ.ನರಸಿಂಹಾಚಾರ್ಯ

ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||

ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||

ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||




Friday, August 19, 2011

ಹೇಮಕೂಟದ ಮೇಲೆ


ಹೇಮಕೂಟದ ಮೇಲೆ ಕನ್ನಡದ ಬಾವುಟ
ಹಾರುತಿದೆ ಮಣಿಯದಕೆ ನೆಟ್ಟಿರಲಿ ಶಾಶ್ವತ

ಶ್ರೀವಿಜಯ ನೃಪತುಂಗ ಕನ್ನಡದ ಶತಶೃಂಗ
ಶಿವಮಾರ ದುರ್ವಿನೀತಾದಿಗಂಗ
ಕಂಡು ಕಂಡರಿಸಿದೆ ಕಡಲ ತಡಿದನಕ
ಬಿತ್ತರಂಗೊಂಡಿತೋ ಸಿರಿ ನಾಡಗಡಿಯೆನುತ...೧

ಜೈನ ತೀರ್ಥಂಕರರು ಶೃಂಗಗಿರಿ ಶಂಕರರು
ಕಲ್ಯಾಣದಣ್ಣಗಳು ಶರಣ ಶರಣೆಯರು
ಹರಿದಾಸರೆಲ್ಲರು ಉಸಿರಿತ್ತು ಪೋಷಿಸಿದ
ಹಸಿರುಡೆಯ ಬೆಳೆನಾಡು ಹಸನಾಯಿತೆಂದು .....೨

ಕೆಳದಿ ದ್ವಾರಾವತಿಯು ಕಿತ್ತೂರು ಕೊಡಗು
ಸ್ವಾದಿ ಬೀಜ್ಜಾವರವು ಮಾಗಡಿಯು ಸೋದೆ
ಮಹಿಶ ಹಾಗಲವಾಡಿ ಸುರಪುರವು ಮತ್ತೆ
ವಿಜಯನಗರಕೆ ಶುಭವ ಕೋರುತಿಹುದೆನುವೆ......೩

ಜಯತು ಕನ್ನಡ ನಾಡು ಜಯತು ಮಂಗಲ ಬೀಡು
ಜಯ ಜಯತು ಜಯ ರಾಜರಾಜೇಶ್ವರಿ
ಜಯವು ಕನ್ನಡ ನುಡಿಗೆ ಜಯವು ಕನ್ನಡ ಜನಕೆ
ಜಯ ನಿನಗೆ ಕರುನಾಡ ಬನಶಂಕರಿ
ಜಯ ನಿನಗೆ ಕರುನಾಡ ಬನಶಂಕರಿ

Sunday, July 17, 2011

ಸಂಖ್ಯಾ ಸ್ವಾರಸ್ಯ

ಷಡ್ರಸಗಳು: ಮಧುರ, ಆಮ್ಲ, ತಿಕ್ತ, ಕಟು, ಕಷಾಯ, ಲವಣ
(ಸಿಹಿ, ಹುಳಿ, ಕಹಿ, ಖಾರ, ಒಗರು, ಉಪ್ಪು)
ಷಡೃತುಗಳು: ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ
ಷಡ್ದರ್ಶನಗಳು: ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ.
ಪ್ರವರ್ತಕರು: ಕಪಿಲ, ಪತಂಜಲ, ಗೌತಮ, ಕಣಾದ, ಜೈಮಿನಿ, ವ್ಯಾಸ
ಷಟ್ಕರ್ಮಗಳು: ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ


ಸಪ್ತಚಿರಂಜೀವಿಗಳು: ಅಶ್ವತ್ತಾಮ, ಬಲಿ , ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ
ಸಪ್ತಸಮುದ್ರ: ಲವಣ,ಇಕ್ಷು, ಸುರಾ, ಸರ್ಪಿಃ,ದಧಿ, ಕ್ಷೀರ , ಶುದ್ಧೋದಕ
ಸಪ್ತಧಾತುಗಳು: ರಸ, ರಕ್ತ,ಮಾಂಸ, ಮೇದಸ್ಸು, ಅಸ್ಥಿ, ವೀರ್ಯ, ಶುಕ್ರ
ಸಪ್ತಲೋಕಃ: ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ
ಸಪ್ತಮಾತೃಕೆಯರು: ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ,ವಾರಾಹೀ,ಇಂದ್ರಾಣೀ, ಚಾಮುಂಡ
ಸಪ್ತಕುದುರೆಗಳು: ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್

ಅಷ್ಟದಿಕ್ಪಾಲಕರು: ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ
ಅವರ ಪತ್ನಿಯರು: ಶಚೀ, ಸ್ವಾಹಾ, ಶ್ಯಾಮಲಾ, ದೀರ್ಘಾ, ಗಂಗಾ, ಅಂಜನಾ, ಚಿತ್ರಲೇಖಾ, ಪಾರ್ವತೀ ದೇವಿಯರು.
ಅಷ್ಟಸಿದ್ಧಿಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ
ಅಷ್ಟಾಂಗಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ
ಅಷ್ಟಾವರಣಗಳು: ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ,ರುದ್ರಾಕ್ಷ, ಮಂತ್ರ.

ನವರಸ: ಶೃಂಗಾರ, ವೀರ, ಕರುಣ, ಅದ್ಬುತ, ಹಾಸ್ಯ, ಭಯಾನಕ, ಬೀಭತ್ಸ, ರೌದ್ರ, ಶಾಂತ
ನವರತ್ನ: ವಜ್ರ, ವೈರೂಢ್ಯ,ಗೋಮೇಧಿಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ, ಮುತ್ತು.
ನವವಿಧ ಭಕ್ತಿ: ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ,ವಂದನ, ದಾಸ್ಯ, ಸಖ್ಯ, ಆತ್ಮಸಮರ್ಪಣ

Monday, June 27, 2011

ಭಾಷೆ ಮತ್ತು ಕ್ರಾಂತಿ




ಈಗೊಮ್ಮೆ ತತ್ತಕ್ಷಣ ಈ ಭಾಷೆಯನು
ಅರ್ಥೈಸಿಕೊಳ್ಳವ ಪ್ರಯತ್ನ ಬಿಟ್ಟು --
ಸುತ್ತ ಆವರಿಸಿದ ರಕ್ತ ಸ್ನಿಗ್ದ
ಗಾಳಿಗೆ ಮಾತನಾಡಲು ಅನುವು ಮಾಡಿಕೊಟ್ಟು,
ಮತ್ತಷ್ಟೂ ಕಿವಿಗಳು ದಂಗೆದ್ದು
ನಮ್ಮ ನಿನ್ನೆಯ ಬುಡ-ಬೇರುಗಳನ್ನು
ಗಟ್ಟಿಯಾಗಿಸುವ ತನಕ.

ಮೂಕ ಜಡ ವಾಸ್ತವಕ್ಕೆ
ಜಂಗಮ ವಾಗ್ಝರಿಯನೇಕೆ ಆರೋಪಿಸಲಿ?
ಬಳಸದ ಬಾಯ್ಗಳ ತುಕ್ಕುಗಟ್ಟಿದ ತುಟಿಗಳಿಗೇಕೆ
ಸಂಧಾನದ ಪಾರುಪತ್ಯವನ್ನೀಯಲಿ?
ಒಳಿತನೆಲ್ಲವ ಹೊರದೂಡಿ ನಡೆವ
ಕಿವುಡು ಕಿವಿಗಳಿಗಾವ ಮಹತ್ವವನೀಯಲಿ?

ಸಾಕು.
ಇನ್ನರ್ಥೈಸುವ ಗೀಳಿಗಿತ್ತಾಯ್ತು ತರ್ಪಣ.
ಗಂಟುಹಾಕಿದ ಹುಬ್ಬು ಮೋರೆಯ
ದಂಗೆದ್ದ ಕಿವಿಳಿಂತಿರಲಿ.
ಬರಡು ಬರಡಾದ ಹೃದಯಗಳಿಗೆನೆನ್ನುವಿರಿ?

Tuesday, May 31, 2011

ಸುಧರ್ಮ - ಸಂಸ್ಕೃತ ದಿನ ಪತ್ರಿಕೆ


ಮೈಸೂರಿನಿಂದ ಪ್ರಕಟವಾಗುವ ಸುಧರ್ಮ ಸಂಸ್ಕೃತ ದಿನ ಪತ್ರಿಕೆ ನಿಜಕ್ಕೂ ಅದ್ವಿತೀಯ . ಕಳೆದ ೪೭ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಪತ್ರಿಕೆಗೆ ವಾರ್ಷಿಕ ಚಂದ ಕೇವಲ ೩೦೦ ರೂಪಾಯಿಗಳು. ಪ್ರಸಕ್ತ ವಿದ್ಯಮಾನಗಳಲ್ಲದೆ ಸುಭಾಷಿತ ಇತ್ಯಾದಿ ಸ್ವಾರಸ್ಯ ಪೂರ್ಣ ಲೇಖನಗಳನ್ನು ಒಳಗೊಂಡ ಸುಧರ್ಮ ಸುಸಂಸ್ಕೃತ ಕುಟುಂಬಗಳ ಒಡನಾಡಿ.

http://sudharma.epapertoday.com



_______

Thursday, April 28, 2011

ಪ್ರಧಾನಿಗೊಂದು ಕಿವಿಮಾತು.


ಮಹಾಭಾರತದಲ್ಲಿ ಗುರು ಶುಕ್ರಾಚಾರ್ಯರು ವೃಷಪರ್ವನಿಗೆ ಉಪದೇಶಿಸುವ ಸಂದರ್ಭ. ಗುರುಗಳು ಹೀಗೆನ್ನುತ್ತಾರೆ -- " ರಾಜನ್! ಅಧರ್ಮವನಾಚರಿಸಿದರೆ ಅದು ಹಸುವಿನಂತೆ ಕೂಡಲೆ ಫಲವನ್ನೆಯುವುದಿಲ್ಲ. ಅದು ಮೆಲ್ಲನೆ ತಿರುಗಿ, ಅಧರ್ಮಿಯ ಬುಡವನ್ನೇ ಕದಿದುಹಾಕುತ್ತದೆ.

ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ |
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃತಂತಿ ||
-- ಮಹಾಭಾರತ, ಆದಿ, ೮೦-೨

ಪ್ರಸ್ತುತ ರಾಷ್ಟ್ರೀಯ ರಾಜಕಾರಣದಲ್ಲಿ ಹಗರಣಗಳದ್ದೆ ಕಾರುಬಾರು. ಲಕ್ಷಕೋಟಿ ಹಗರಣಗಳು ಸರ್ವೇಸಾಮಾನ್ಯವಾಗಿವೆ. ೨ಜಿ ಹಗರಣ, ಕಾಮನ್ ವೆಲ್ಥ್ ಹಗರಣ (ಸಮೂಹ ಐಶ್ವರ್ಯ!), "ಆದರ್ಶ" ಹಗರಣ, ಹೀಗೆ ಒಂದೇ, ಎರಡೇ... ರಾಜನಾದವನು ಸ್ವತಃ ಸದ್ಚಾರಿತ್ರನು, ಆದರೆ ಮಂತ್ರಿ ವರ್ಗದಲ್ಲಿ ಭ್ರಷ್ಟರು ಎಂದು ಸಮಜಾಯಿಶಿ ಹೇಳಿ , ಭ್ರಷ್ಟ್ರಾಚಾರದ ವಿರುದ್ದ ಭುಗಿಲೆದ್ದ ಬೆಂಕಿಯನ್ನು ತಣ್ಣಗಾಗಿಸಳು ಸಾಧ್ಯವಿಲ್ಲ. ಅದು ನಾಯಕ ಲಕ್ಷಣವಲ್ಲ. ರಾಜನೀತಿಯ ಬಗ್ಗೆ ರಾಮಾಯಣ ಹೀಗೆನ್ನುತ್ತದೆ --

ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ|
ಧರ್ಮ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ||
- ರಾಮಾಯಣ, ಅರಣ್ಯ, ೫೦-೧೦

ರಾಜನೇ ಧರ್ಮಕಾಮಗಳಿಗೆ ಪ್ರವರ್ತಕ, ಅವನೇ ಅರ್ಥಕ್ಕೆ ನಿಧಿ. ಧರ್ಮವಾಗಲಿ, ಒಳ್ಳೆಯದಾಗಲಿ, ಕೆಟ್ಟದಾಗಲಿ - ರಾಜನ ಪ್ರೇರಣೆಯಿಂದ ನಡೆಯುತ್ತದೆ.

ರಾಜಮೂಲವು ಇಂತಿರುವಾಗ ಸುತ್ತ ಹರಡಿರುವ ಭ್ರಷ್ಟ ಸಂತತಿಯನ್ನು ತಮ್ಮದೆಂದು ಸ್ವೀಕರಿಸಿ, ಅದನ್ನು ಬುಡಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ರಾಜಸಂಕಲ್ಪವಾಗಲಿ.

Wednesday, March 23, 2011

ನಮನ



ಇಂದು ೨೩ನೇ ಮಾರ್ಚ್ ೨೦೧೧, ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರ ಬಲಿದಾನ ದಿನ. ಎಲ್ಲೆಡೆ ಬ್ರಷ್ಟಾಚಾರ, ಅರಾಜಕತೆ, ನೈತಿಕತೆಯ ಅಭಾವ ಕಾಡುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ, ಈ ಮಹನೀಯರ ಬಲಿದಾನದ ಕಥೆ ನಮ್ಮ ದೇಶದ ಯುವಕರನ್ನು ಒಳ್ಳೆಯ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಲಿ. ನಮ್ಮ ನೇತಾರರಿಗೆ ’ತ್ಯಾಗ’ ಎಂದರೆ ಏನು ಎಂಬುದರ ಬಗ್ಗೆ ನೆನಪಿಸಲಿ.

Wednesday, March 02, 2011

ಲವ ಲೇಶ

ದಮ್ಮಯ್ಯ ! ನನ್ನ ಬಳಿಗೆ ಸಂಪೂರ್ಣ ಸತ್ಯವನು ತರಲು ಬೇಡಿರಯ್ಯ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ

Saturday, February 12, 2011

ಶ್ರೀಕರ ಆಮೋದಿನಿ




ನಂಜನಗೂಡಿನ ಸದ್ವೈದ್ಯಶಾಲಾ ಕರುನಾಡಿನಲ್ಲಿ ಮನೆಮಾತು. ಆಯುರ್ವೇದ-ಪ್ರಕೃತಿಚಿಕಿತ್ಸೆಗಳನ್ನು ಮನೆಮನೆಗೆ ತಲಪಿಸುವಲ್ಲಿ ಶ್ರೀಯುತರಾದ ಬಿ.ವಿ.ಪಂಡಿತರ ಸೇವೆ ಮಹತ್ತರವಾದುದು. ಸದ್ವೈದ್ಯಶಾಲೆಯಿಂದ ಗಾಯಕ-ವಾಚಕ ವರ್ಗಕ್ಕೆ ವರದಾನದಂತಿರುವುದು ಶ್ರೀ ಕರ ಆಮೋದಿನಿ . ಆಮೋದಿನಿಯ ಗುಳಿಗೆ ಸೇವಿಸುವುದರಿಂದ ಧ್ವನಿ ತೆರೆದು ಕೊಳ್ಳುತ್ತದೆ. ಕಚೇರಿಯ ಅಥವಾ ಪ್ರವಚನದ ಮುಂಚೆ ಒಂದು ಗುಳಿಗೆ ಬಾಯಿನಲ್ಲಿ ಹಾಕಿಕೊಂದರೆ ಸುಮಾರು ಹೊತ್ತು ಹಾಡಿ-ಮಾತನಾಡಿದರು ಗಂಟಲಿನಲ್ಲಿ ಆಯಾಸ ಅಥವಾ ನೋವು ತಿಳಿಯುವುದಿಲ್ಲ. ಅದಲ್ಲದೆ ಸ್ವರವು ಸರಿಯಾಗಿ ಹೊರಹೊಮ್ಮುವಂತೆ ಸಹಕಾರವನ್ನೀಯುತ್ತದೆ. ಆದ್ದರಿಂದಲೆ ಬಹಳಷ್ಟು ಗಾಯಕರ ಕೈಚೀಲಗಳಲ್ಲಿ ಆಮೋದಿನಿ ಶೋಭಿಸುತ್ತಿರುತ್ತದೆ. ಮಧುಕ, ಕುಂಕುಮಕೇಸರ ಗಳನ್ನೊಳಗೊಂಡ ಶ್ರೀಕರ ಆಮೋದಿನಿ ಸ್ವರಬೇಧ, ಸ್ವರಭಂಗ, ನಾಸಗಥ ರೋಗ, ಗಲರೋಗಗಳಿಗೆ ರಾಮಬಾಣ.
ಶ್ರೀಕರ ಆಮೋದಿನಿ - ಗಾಯಕ ವಾಚಕರ ಪಾಲಿನ ಸಂಜೀವಿನಿ.

Friday, February 11, 2011

ಒಂದು ಹಂತದ ನಂತರ

ತೃಪ್ತಿ ತರಿಸದ
ಸಾವಿರಾರು ಸಾಧನೆಗಳನು
ಹೇರಿ, ಗುಡ್ಡೆ ಹಾಕಿಕೊಂಡ ನಂತರ...

ತಿದ್ದಿಕೊಳಲು ಸಾಲ್ಗಟ್ಟಿ ನಿಂದ ಹಿಂದಿನ
ಸೋಲುಗಳ ಸರಪಳಿಯ ನಡುವಿರುವ ಅಂತರ ....

ಮುಂಬರುವ ಸೋಲುಗಳನು
ಮುತುವರ್ಜಿಯಿಂದ ಆಯ್ದು, ಹೆಕ್ಕಿ
ಸೋಲನಪ್ಪಿಕೊಳಲು ಸಜ್ಜಾಗುತಿರುವೆವೆ ನಿರಂತರ ? ..
ಒಂದು ಹಂತದ ನಂತರ... ಒಂದು ಹಂತದ ನಂತರ

Sunday, January 16, 2011

ಧನ್ವಂತ್ರಿ ವನ




ಙ್ನಾನಭಾರತಿಯ ಆವರಣದಲ್ಲಿ ೩೭ ಎಕರೆ ಧನ್ವಂತ್ರಿವನವಿದೆ. ಇದೊಂದು ನೈಸರ್ಗಿಕ ದವಾಖಾನೆ. ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲು ಈ ವನ ಸಿದ್ದವಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ೧೯೮೭ರಲ್ಲಿ ಔಷಧೀಯ ಸಸ್ಯಗಳ ವನವನ್ನು ಬೆಳಸಲಾಯಿತು. ಇಲ್ಲಿ ಇರುವ ಪ್ರತಿಯೊಂದು ಗಿಡ, ಮರ, ಬೇರು, ಎಲೆ ಔಷಧೀಯ ಗುಣ ಹೊಂದಿದೆ. ಇಲ್ಲಿ ಸಸಿಗಳು ಗರಿಷ್ಟ ೩ ರೂಪಾಯಿಗೆ ದೊರೆಯುತ್ತವೆ. ಈ ಸಸಿಗಳನ್ನು ತಂದು ಸಣ್ಣಪುಟ್ಟ ಪಾಟುಗಳಲ್ಲಿ, ಹೂದಾನಿಗಳಲ್ಲಿ ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳಬಹುದು.

ಸಸ್ಯಗಳ ಔಷಧೀಯ ಗುಣ: ಬಿಳಿಹಿಂಡಿ ಗಿಡದ ಬೇರನ್ನು ೩೦ ದಿನ ಬಳಸುವುದರಿಂದ ಕಿಡ್ನಿ ಸ್ಟೋನ್ ಕರಗಿಸಬಹುದು, ಮಧುನಾಶಿನಿ ಎಲೆಯಿಂದ ಸಕ್ಕರೆ ಖಾಯಿಲೆ ಹತೋಟಿಗೆ ತರಬಹುದು, ಬಾಯಿಹುಣ್ಣಿಗೆ ಬಸಲೆ ಎಲೆ, ರೋಗನಿರೋಧಕ ಶಕ್ತಿಗೆ ಶ್ರೀತುಳಸಿ, ಎಲ್ಲ ವಿಧವಾದ ಅಲರ್ಜಿಗೆ ದೊಡ್ಡಪತ್ರೆ ಸೊಪ್ಪು, ಸುಸ್ತು- ಜ್ವರ ಇತ್ಯಾದಿಗೆ ಅಮೃತಬಳ್ಳಿ, ಙ್ನಾಪಕಶಕ್ತಿಗೆ ಒಂದೆಲಗ. ಉಷ್ಣನಿವಾರಿಸಲು ಸೊಗದೆ ಬೇರು, ರಕ್ತಹೀನತೆ ನಿವಾರಣಗೆ ಚಕ್ರಮುನಿ ಸೊಪ್ಪು, ಕೆಮ್ಮು ನಿವಾರಣೆಗೆ ಆಡುಸೋಗೆ ಸೊಪ್ಪು...ಹೀಗೆ ಪಟ್ಟಿ ಬೆಳೆಯುತ್ತಲೆ ಇರುತ್ತದೆ.

ಇನ್ನೇಕೆ ತಡ ? ನಿಮ್ಮ ನೈಸರ್ಗಿಕ ತೋಟವನ್ನು ಪ್ರಾರಂಭಿಸಿ. ಸಂಪರ್ಕ: ಚಂದ್ರಕಾಂತ್, ವಲಯ ಅರಣ್ಯಾಧಿಕಾರಿ - ೯೪೪೮೫೧೯೩೪೭

ಕೃಪೆ: ವಿಜಯಕರ್ನಾಟಕ. ೪ ಜನವರಿ ೨೦೧೧

Tuesday, December 28, 2010

ರಾಗರಸಧಾರ


ಗಾನವಾರಿಧಿ ವಿದ್ವಾನ್ ಎಸ್.ಶಂಕರ್ ಅವರು ಅರವತ್ತು ವಸಂತಗಳು ಪೂರೈಸಿದ ಸಂದರ್ಭ, ಅರವತ್ತು ರಾಗಗಳನ್ನು ಒಳಗೊಂಡ ದೇವಿ ಕೃತಿಗಳ ರಾಗಮಾಲಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಪರಿಕಲ್ಪನೆ, ಸಂಗೀತ, ನಿರ್ದೇಶನ ಮತ್ತು ಗಾಯನ ವಿದ್ವಾನ್.ಎಸ್.ಶಂಕರ್ ಅವರದಾದರೆ, ವಾಗ್ಗೇಯಕಾರರಾಗಿ ಅಷ್ಟಾವಧಾನಿ ಆರ್. ಶಂಕರ್ ಉತ್ತಮ ಕೃತರತ್ನವನ್ನು ಸಹೃದಯರಿಗೆ ದಯಪಾಲಿಸಿದ್ದಾರೆ.

Monday, November 29, 2010

ರಾಮಾಯಣದಲ್ಲಿ ರಾಜನೀತಿ

ಶ್ರೀ ರಾಮಚಂದ್ರನು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಭರತನಿಗೆ ಉಪದೇಶಿಸುತ್ತಾ ಹದಿನಾಲ್ಕು ರಾಜದೋಶಗಳ ಬಗ್ಗೆ ಹೀಗೆಂದಿದ್ದಾನೆ:

ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ|
ಅದರ್ಶನಂ ಙ್ನಾನವತಾಮಾಲಸ್ಯಂ ಪಂಚವೃತ್ತಿತಾಂ||
ಏಕಚಿತನಮಥಾರ್ನಾಮನರ್ಥಙ್ನೈಶ್ಚ ಮಂತ್ರಣಂ|
ನಿಸ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ||
ಮಂಗಲಸ್ಯಾಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತ:|
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ||
ರಾಮಾಯಣ, ಅಯೋಧ್ಯಾ ೧೦೦ - ೬೫,೬೬,೬೭

ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಙ್ನರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚನೆ ನಡೆಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರ ಶುಭಕಾರ್ಯವನ್ನು ಮಾಡದಿರುವುದು, ಎಲ್ಲ ಶತೃಗಳ ಮೇಲೂ ಏಕಕಾಲಕ್ಕೆ ಯುದ್ಧಾರಂಭ -- ಈ ಹದಿನಾಲ್ಕು ದೋಷಗಳಿಗೆ ಅವಕಾಶ ಕೊಡಬೇಡವೆಂದು ಭರತನಿಗೆ ಉಪದೇಶಿಸಿದನು.

ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರಗಿಟ್ಟಿಸಿದ ಇಂದಿನ ಕಿಶ್ಕಿಂದಾ ಪ್ರದೇಶದ ಸರ್ಕಾರ, ರಾಮ ಭರತನಿಗೆ ಮಾಡಬೇಡ ಎಂದು ಆದೇಶಿದ ಎಲ್ಲ ೧೪ ರಾಜದೋಷಗಳನ್ನೂ ಚಾಚೂ ತಪ್ಪದೆ ಮಾಡಿತೋರಿಸಿದೆ. ರಾಮನೇ ನಾಚುವ ರೀತಿ ಸೃಜನಾತ್ಮಕವಾಗಿ, ರಾಮನೂ ಯೋಚಿಸಿರದ ಹತ್ತು ಹಲವು ಹೊಸ ದೋಷಗಳನ್ನು ಹೊದ್ದು ಮೆರೆದಿದೆ. ಸ್ವಯಂ ಸೇವಕ ಸಂಘ ಅಂದರೆ ನಮ್ಮ "ಸೇವೆ" ಸ್ವಯಂ ನಾವೇ ಮಾಡಿಕೊಳ್ಳುವುದು ಎಂಬಷ್ಟು ಹೀನಾಯ ಸ್ಥಿತಿ ತಲುಪಿರುವುದು ನಿಜಕ್ಕೂ ವಿಶಾದನೀಯ. ಇನ್ನು ಮಂತ್ರಿಮಂಡಲದಲ್ಲಂತೂ ಅರಿಷ್ಡ್ವರ್ಗಂಗಳನು ಗೆದ್ದ ಅತಿರಥ ಮಹಾರಥರೆ ಇದ್ದಾರೆ. ನಾವು ಆರಿಸಿ ಕಳುಹಿಸಿದ ಈ ಜನಪ್ರತಿನಿಧಿಗಳಿಗೆ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳು ಯಾವವೂ ತಿಳಿಯದು. ಕಾಮವನ್ನು ಗೆದ್ದ ರೇಣುಕಾಚಾರ್ಯ - ಹಾಲಪ್ಪನಂತವರು, ಕ್ರೋಧವನ್ನು ಗೆದ್ದ ಬಚ್ಚೆಗೌಡರು, ಮದವನ್ನು ಗೆದ್ದು - ರಾಜ್ಯಪಾಲರು, ಲೋಕಾಯುಕ್ತರನ್ನು ಒಮ್ಮೆಲೆ ಅತಿಯಾಗಿ ಗೌರವಿಸುವ ಮುಖ್ಯಮಂತ್ರಿಗಳು, ಲೋಭ ಗೆದ್ದ ಶೋಭ, ಮೋಹವೇ ಅರಿಯದ, ಪುತ್ರ ವ್ಯಾಮೋಹ ಅರಿಯದ ಕಟ್ಟಾ ಮತ್ತು ಮುಖ್ಯಮಂತ್ರಿಗಳು, ಮತ್ಸರದ ಕಿಡಿಯೂ ಸುಳಿಯದ ರೆಡ್ಡಿ ಸೋದರರು -- ಇನ್ನೂ ಹೀಗೆ ಹತ್ತು ಹಲವು ತೋಜೋ ಮಣಿಗಳಿಂದ ಕಂಗೊಳಿಸುವ ಕಮಲ ಸಾಂರಾಜ್ಯವನ್ನು ಚುನಾಯಿಸಿ ಕಳುಹಿಸಿದ ನಾವು ಗಳು ಎಷ್ಟು ಧನ್ಯರು ಎಂದು ನೆನೆದರೆ ಹೇಳಿಕೊಳ್ಳಲಾರದ ಹೆಮ್ಮೆ ಎನಿಸುತ್ತದೆ. ಒಂದು ವ್ಯವಸ್ಥೆಯಲ್ಲೇ ವಿಶ್ವಾಸ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಹಗರಣಗಳು ನಡೆದಿವೆ. ರಾಮನ ಪಕ್ಷಕ್ಕೆ ಮತ ಹಾಕಿದ ಮತದಾರನ ಮುಖಭಂಗವಾಗಿದೆ.ಸುತ್ತಲೂ ನಡೆಯುತ್ತಿರುವ ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಲುಕಿ ದನಿಗಾಣದೆ ಏಳು ಸುತ್ತಿನ ಕೋಟೆಯಲ್ಲಿ ಅಸಹಾಯಕನಾಗಿ ಶ್ರೀಸಾಮಾನ್ಯ ಅವಿತು ಕುಳಿತಿದ್ದಾನೆ. ಎಂದು ಈ ಸುಪ್ತ ಜ್ವಾಲಾಮುಖಿ ಸಿಡಿದು ನಿಲ್ಲುವುದೂ ಆ ದಿನ ನಾನು - ತಾನು , ರಾಮ - ರಹೀಮ ಯಾರೊಬ್ಬರನೂ ನೋಡದೆ ಎಲ್ಲರನ್ನೂ ಆಹುತಿ ತೆಗೆದು ಕೊಳ್ಳುತ್ತದೆ.

ಸೂ: ನಾನು ಈ ಬ್ಲಾಗ್ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆದಿರುವುದು ಅತ್ಯಂತ ಕಡಿಮೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯ"ಮಾನ"ಗಳ ಬಗ್ಗೆ ಬಹುವಾಗಿ ನೊಂದು ರಾಮನ ಹೆಸರು ಹೇಳಿ ಇನ್ನಾದರೂ ಧರ್ಮವನ್ನು ರಕ್ಷಿಸು ಎಂದು ಪ್ರಾಥಿಸಿ ಈ ಸಾಲುಗಳನ್ನು ಇಲ್ಲಿ ಪೋಸ್ಟಿಸಿದೆ.

Sunday, October 31, 2010

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ

ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ ||

Sunday, September 26, 2010

ರಾಶೊಮಾನ್ ಮತ್ತಿತರ ಕಥೆಗಳು




ನ್ಯಾಯಾಧೀಶರು ಮರಕಡಿಯುವವನನ್ನು ಪ್ರಶ್ನಿಸಿದಾಗ ಕೊಟ್ಟ ಹೇಳಿಕೆ:

ಹೌದು ಮಹಾಸ್ವಾಮಿ. ಖಂಡಿತವಾಗಿಯೂ ನಾನೆ ಮೃತದೇಹವನ್ನು ನೋಡಿದ್ದು. ಬೆಳಗಿನ ಸಮಯ ಎಂದಿನಂತೆ ಮರಕಡಿಯಲು ಹೋದಾಗ ಮೃತದೇಹವನ್ನು ಆ ಗಿರಿ ಕಂದರದ ತೊಪ್ಪಲ್ಲಲ್ಲಿ, ಒಂದು ಪೊದೆಯಲ್ಲಿ ನೋಡಿದೆ. ಸ್ಥಳ ಅಂತೀರಾ? ಯಾಮಶಿನ ರಸ್ತೆಯಿಂದ ಸುಮಾರು ೧೫೦ ಅಂಗುಲ ದೂರವಿದ್ದಿರಬಹುದು. ದಾರಿಗೆ ತುಸು ಪಕ್ಕದಲ್ಲಿನ ಬಿದಿರು ಪೊದೆ ಅದು.

ಹೆಣವು ನೀಲಿ ನಿಲುವಂಗಿ ಕಿಮೋನೊ ಮತ್ತು ಕ್ಯೋಟೊ ಶೈಲಿಯ ಮುದುರಿದ ತೋಪಿಯನ್ನುಟ್ಟು ಅಂಗಾತ ಮಲಗಿತ್ತು. ಒಂದೇ ಕತ್ತಿಯ ಸೀಳು ಎದೆಯನ್ನು ಸೀಳಿ ಘಾತಿಸಿತ್ತು. ಅತ್ತಿತ್ತ ಬಿದ್ದಿದ್ದ ಬಿದುರಿನ ತರುಗೆಲೆಗಳು ರಕ್ತಸಿಕ್ತವಾಗಿ ಕೆಂಪನೆ ಹುವಾಡಿಸಿತ್ತು. ಇಲ್ಲ, ರಕ್ತ ಇನ್ನು ಸುರಿಯುತ್ತಿರಲಿಲ್ಲ. ಗಾಯ ಆರಿದ್ದಿರಬೇಕು. ನಾನು ಬಂದದ್ದನು ಗಮನಿಸದೆ ನೊಣ ಒಂದು ಅಲ್ಲೆ ಅಂಟಿ ಕುಳಿತಿತ್ತು. ಅಲ್ಲಿ ಖಡ್ಗ ಇತ್ಯಾದಿ ಎನಾದ್ರು ಇತ್ತು ಅಂತೀರ? ಎಲ್ಲಿ ಆ ರೀತಿ ಯಾವುದೂ ಇರಲಿಲ್ಲ. ಇಲ್ಲ ಮತ್ತಿನ್ನೇನು ಇರಲಿಲ್ಲ ಮಹಾಸ್ವಾಮಿ. ಅಲ್ಲಿ ಮರದ ಬುಡದಲ್ಲಿ ಒಂದು ಹಗ್ಗವನ್ನು ಮಾತ್ರ ಗಮನಿಸಿದೆ. ಮತ್ತೆ.... ಹಗ್ಗದವನ್ನು ಬಿಟ್ಟರೆ ಅಲ್ಲಿ ಒಂದು ಬಾಚಣಿಗೆ ನೋಡಿದೆ. ಅಷ್ಟೆ ಅಲ್ಲಿದ್ದದ್ದು. ಬಹುಶಃ ಕೊಲೆಯಾಗುವಿದಕ್ಕೆ ಮುಂಚೆ ಹೊರಾಡಿ ಒದ್ದಾಡಿರ ಬೇಕು, ಯಾಕೆಂದ್ರೆ ಅಲ್ಲಿದ್ದ ಗರಿಕೆ-ಹುಲ್ಲುಗಳು, ಕೆಳಗೆ ಬಿದ್ದ ಬಿದುರಿನ ಎಲೆಗಳು ಎಲ್ಲವೂ ಚದುರಿದ್ದವು.

"ಹತ್ತಿರದಲ್ಲಿ ಕುದುರೇ ಏನಾದ್ರು?"
ಇಲ್ಲ ಸ್ವಾಮಿ. ಮನುಷ್ಯನು ಹೋಗುವುದೇ ಕಷ್ಟ ಅಲ್ಲಿ. ಇನ್ನು ಕುದುರೆ ಎಲ್ಲಿಂದ ಬರಬೇಕು.

ನ್ಯಾಯಾಧೀಶರಿಗೆ ಬೌದ್ಧ ಪರಿವ್ರಾಜಕನು ಕೊಟ್ಟ ಹೇಳಿಕೆ:

ಹೊತ್ತು? ನೆನ್ನೆ ಮಧ್ಯಾಹ್ನದ ವೇಳೆ ಸ್ವಾಮಿ. ಆ ನತದೃಶ್ಟ ಸೇಕಿಯಾಮದಿಂದ ಯಾಮಶಿನ ಹಾದಿ ಹಿಡಿದ್ದಿದ್ದ. ಸೇಕಿಯಾಮ ಕಡೆಗೆ ಕುದುರೆ ಮೇಲೆ ಸವಾರಿಮಾಡುತ್ತ, ಒಬ್ಬಳು ಹೆಂಗಸಿನ ಜೊತೆ ಸಾಗಿದ್ದ. ಈಗ ಅವಳು ಅವನ ಪತ್ನಿ ಎಂಬುದು ತಿಳಿದಿದೆ. ಸೆರಗು ಅಡ್ಡ ಹಾಯ್ದದ್ದರಿಂದ ಮುಖ ಕಾಣಿಸುತ್ತಿರಲ್ಲಿಲ್ಲ. ನನಗೆ ಅವಳ ಬಟ್ಟೆಯ ರಂಗೊಂದೆ ಕಂಡದ್ದು -- ಕಂದು ಬಣ್ಣದ ನಿಲುವಂಗಿ. ನೀಳವಾದ ಕೇಸರ ಗಳುಳ್ಳ ಅಶ್ವಾರೂಢಳಗಿದ್ದಳು. ಆ ಮಹಿಳೆಯ ಎತ್ತರ? ಒಹ್! ಸುಮಾರು ನಾಲ್ಕು ಅಡಿ ಐದು ಅಂಗುಲ. ನಾನು ಬೌದ್ಧ ಭಿಕ್ಷುವಾಗಿರುವುದರಿಂದ ಅವಳ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ಮನುಷ್ಯ ಖಡ್ಗಧರಿಸಿ ಸಶಸ್ತ್ರನಾಗಿರದೆ ಬಿಲ್ಲು ಬಾಣಗಳನ್ನು ಸಹ ಹೊತ್ತಿದ್ದ. ಮತ್ತೆ ಹೇಳುವುದಾದರೆ ಸರಿಸುಮಾರು ಇಪ್ಪತ್ತು ಬಿಲ್ಲಿಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿದ್ದ.
ಆತನು ಇಂತಹ ದುರ್ವಿಧಿಯನ್ನು ಸಂಧಿಸುತ್ತಾನೆಂದು ನಾನು ಎಣಿಸಿರಲಿಲ್ಲ. ನಿಜಕ್ಕು ಮಾನವ ಜೀವನ ಬೆಳಗಿನ ಮಂಜಿನಷ್ಟೆ ಸಾಶ್ವತ, ಮಿಂಚಿನ ಬಳ್ಳಿಯಷ್ಟೆ ಚಿರಾಯು. ಅವನ ಮೇಲಿನ ನನ್ನ ಸಹಾನುಭೂತಿಗೆ ಪದಗಳು ಸಾಕಾಗುವುದಿಲ್ಲ.

Sunday, August 15, 2010

ಕಲಿಕೆ

ನಾನಾ ಭಾವೋಪ ಸಂಪನ್ನಂ ನಾನಾ ಅವಸ್ಥಾಂತರಾತ್ಮಕಂ
ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ

ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ
ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ -- ಜಯಂತ ಭಟ್ಟ

ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ

Saturday, August 07, 2010

ಯಾತ್ರೆ ಮುಗಿಸಿದ ’ನಡೆದಾಡುವ ಕಾವ್ಯಕೋಶ’



ದ.ರಾ.ಬೇಂದ್ರೆ ಕಾವ್ಯ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಹಲೋಕ ತ್ಯಜಿಸುವ ಕೆಲ ಘಂಟೆಗಳ ಮುನ್ನ ’ನಡೆದಾಡುವ ಕಾವ್ಯ ಕೋಶ’ ಎಂದು ಖ್ಯಾತರಾಗಿರುವ - ಕಿ.ರಂ. ನಾಗರಾಜ.

ಕಿತ್ತಾನೆ ರಂಗಪ್ಪ ನಾಗರಾಜ (ಕಿ.ರಂ.ನಾಗರಾಜ) ಇನ್ನಿಲ್ಲ. ನೆನ್ನೆಯಷ್ಟೆ ಸಂಚಯ ಮತ್ತು ಸುಚಿತ್ರ ಕಲಾ ಕೇಂದ್ರ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಸಹೃದಯರನ್ನು ಬೇಂದ್ರೆ ಕಾವ್ಯದಲ್ಲಿ ತಲ್ಲೀನರಾಗಿಸಿದ್ದ ಗಾರುಡಿಗ ಇಲ್ಲವೆಂದರೆ ನಜಕ್ಕೂ ನಂಬಲಾಗತ್ತಿಲ್ಲ. ’ಜೋಗಿ’ ಪದ್ಯವನ್ನು ಓದಬೇಕೆಂದು ಅವರು ಗುರುತು ಹಾಕಿಕೊಂಡು ಬಂದಿದ್ದರೂ, ಅವರ ನೆನ್ನೆಯ ಮನೋಧರ್ಮಕ್ಕೆ ಕಾಕತಾಲೀಯವೆಂಬಂತೆ ಒಲಿದು ಬಂದದ್ದು ಬೇಂದ್ರೆಯವರ ’ಸೃಷ್ಟಿ - ಪ್ರಳಯ’ ಕವನ. ಪ್ರತಿಯೊಂದು ಕ್ಷಣದಲ್ಲಿಯೂ ಸೃಷ್ಟಿ ಮತ್ತು ಪ್ರಳಯಗಳು ಬದಿ ಬದಿಯಲ್ಲಿಯೇ ಹೇಗೆ ಸುಳಿದಾಡುವವು ಎಂದು ತಮ್ಮ ಜೀವನದ ಅಂತಿಮ ಉಪನ್ಯಾಸದಲ್ಲಿ ಕಿ.ರಂ. ಮಾರ್ಮಿಕವಾಗಿ ನುಡಿದಿದ್ದರು. ಆ ಕ್ಷಣದಲ್ಲಿ ಶ್ರುಷ್ಟಿಯಾದ ಕಾವ್ಯ ವೃಷ್ಟಿ, ಇನ್ನು ಕೆಲವ ಘಂಟೆಗಳಲ್ಲಿ ಲಯವಾಗಿ, ಪ್ರಳಯವಾಗುತ್ತದೆಂದು ಕನಸು ಮನಸುನಲ್ಲೂ ನೆನೆಸಿರಲಿಲ್ಲ. ಕಾವ್ಯವನ್ನು ಅನುಭವಿಸಬೇಕೆಂದಿದ್ದರಷ್ಟೆ. ಸೃಷ್ಟಿ ಪ್ರಳಯಗಳ ಅನುಭವ ಮಾಡಿಸಿ ತೀರಿಕೊಂಡರು. ಉಪನ್ಯಾಸದ ಕೊನೆಯಲ್ಲಿ, -- " ನಾನು ನಿಮಗೆ ಹೇಳಬೇಕಾದುದು ಏನೂ ಇಲ್ಲ. ಈ ಕೆಲ ಘಂಟೆಗಳಲ್ಲಿ ನನ್ನ ಭಾವಮಂಡಲದಲ್ಲಿ ಸುಳಿದಾಡಿದ ಹಲವು ಲಹರಿಗಳ ಕುರಿತಾಗಿ ನನಗೆ ನಾನೆ ಮಾತನಾಡಿಕೊಂಡಿದ್ದೇನೆ. you people have just overheard " ಎಂದು ನುಡಿದಿದ್ದರು.

.

Saturday, July 31, 2010

ಅಪರಿಗ್ರಹ


ನಾಡು ಕಂಡಂಥ ಅತ್ಯಂತ ಉನ್ನತ ಶ್ರೇಣಿಯ ಚಿತ್ರಕಾರ, ಶಿಲ್ಪಿ, ಕಲಾ ತಪಸ್ವಿ ಶ್ರೀಯುತ ಕೆ.ವೆಂಕಟ್ಟಪ್ಪನವರು. ಇಲ್ಲಿ ’ಕಲಾ ತಪಸ್ವಿ’ ಎಂಬ ಪದಪ್ರಯೋಗ ಅತಿಶಯೋಕ್ತಿಯಾಗಲಿ, cliche ಯಾಗಲಿ ಅಲ್ಲದೆ ಸಂಧಬೋಚಿತವಾಗಿದೆ. ತಮ್ಮ ಜೀವನವನ್ನು ಕಲೆಗಾಗಿಯೇ ಮುಣುಪಾಗಿಟ್ಟು ಭೀಶ್ಮ ಪ್ರತಿಙ್ಜ್ನೆಯಂತೆ ಜೀವನ್ದುದ್ದಕ್ಕೂ ಅಖಂಡ ಬ್ರಹ್ಮಚರ್ಯೆ ಮತ್ತು ಅಪರಿಗ್ರಹದ ವ್ರತವನ್ನು ಸಾಧಿಸಿದ ಧೀಮಂತರು. ೧೯೧೩ ರಲ್ಲಿ ಅವರು ಹಿಮಾಲಯದ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಪರಿಗ್ರಹದ ದೀಕ್ಷೆ ಸ್ವೀಕರಿಸಿದರು. ಯಾರಿಂದಲು ಯಾವುದೇ ರೀತಿಯ ಸಹಾಯವಾಗಲಿ, ಉಡುಗೊರೆಯಾಗಲಿ ಏನನ್ನೂ ಸ್ವೀಕರಿಸದ ವ್ರತವದಾಗಿತ್ತು.

೧೯೪೨ ರಲ್ಲಿ ದಿವಾನ್ ಬಹಾದ್ದೂರ್ ಪಿ. ರಾಘವೇಂದ್ರ ರಾಯರ ಮನೆಗೆ ಹೋಗಿದ್ದರು. ದಿವಾನರು ವೆಂಕಟ್ಟಪ್ಪನವರಿಗೆ ಬೀಳ್ಕೊಡುವಾಗ ತಾಂಬೂಲಾದಿಗಳನ್ನು ಸ್ವೀಕರಿಸಲು ಹೇಳಿದರು. ಆದರೆ ವೆಂಕಟಪ್ಪನವರು ಅಪರಿಗ್ರಹ ವ್ರತದಿಂದ ತಾಂಬೂಲವನ್ನೂ ಸ್ವೀಕರಿಸಲಿಲ್ಲ. ಕೊನೆಗೆ ದಿವಾನರ ಒತ್ತಾಯದ ಮೇರೆಗೆ, ಬೇರೆ ಇನ್ನಾರಿಗಾದರೂ ವೆಂಕಟಪ್ಪನವರು ತಾಂಬೂಲವನ್ನು ದಾನಮಾಡಲು ಅನುವು ಮಾಡಿಕೊಟ್ಟರೆ ತೆಗೆದುಕೊಳ್ಳುವುದಾಗಿ ಹೇಳಿದರು. ( ಶ್ರೀಯುತರ ದಿನಚರಿಯ ೧೭ ಸೆಪ್ಟೆಂಬರ್ ೧೯೪೨ ದಾಖಲಿಸಲಾಗಿದೆ.)

ಅಂತೆಯೆ ೧೯೫೦ ವಿನಾಯಕ ಚತುರ್ಥಿಗೆ ವೆಂಕಟ್ಟಪ್ಪನವರ ತಂಗಿ ಮೋದಕಗಳನ್ನು ತಂದುಕೊಡಲು ಅವರು ರೂಪಾಯಿ ದಕ್ಷಿಣೆ ಕೊಟ್ಟೆ ಅದನ್ನು ಸ್ವೀಕರಿಸಿದರು. ಮೋದಕವು ಹಾಗಿರಲಿ, ಒಮ್ಮೆ ವೆಂಕಟಪ್ಪವನರಿಗೆ ರುಚಿಸುವ ಹೇರಳೇಕಾಯಿ ಉಪ್ಪಿನಕಾಯನ್ನು ಅವರ ತಂಗಿ ತಂದುಕೊಟ್ಟರೆ, ಒಂದು ಶೀಶೆ ಉಪ್ಪಿನಕಾಯಿಗೆ ಮುಕ್ಕಾಲು ಸೇರು ಗೋಧಿಯನ್ನು ಕೊಟ್ಟು ತೆಗೆದುಕೊಂಡರು. ( ದಿನಚರಿ ದಾಖಲು: ೨೩ ಅಕ್ಟೋಬರ್ ೧೯೫೦)

ಈ ತಲೆಮಾರಿನ ಕಲಾವಿದರಿಗೆ (ಯಾರಿಗೆ ಆಗಲಿ) ಈ ಮಟ್ಟದ ನಿಸ್ಪೃಹತೆ ಇರಲು ಸಾಧ್ಯವೇ?

Monday, June 21, 2010

ಮಸಾಲಾಪುರಿ ಮತ್ತು ಅಷ್ಟಾವಧಾನ

೧೫ ಡಿಸೆಂಬರ್ ೧೯೯೧ರ ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಸಂಪೂರ್ಣ ಶತಾವಧಾನದಲ್ಲಿ ಶತಾವಧಾನಿ. ಡಾ | ರಾ. ಗಣೇಶ್ ಅವರು ಕನ್ನಡ ದತ್ತಪದಿಯಲ್ಲಿ , ’ಮಸಾಲ ಪೂರಿ’ ಮತ್ತು ’ಪಾನಿ ಪುರಿ’ ಪದಗಳನ್ನು ಬಳಸಿ ರಚಿಸಿದ ಊರ್ಮಿಳೆ ಬಗೆಗಿನ ಪದ್ಯ

ವಿದೇಹನರಪಾಟವೀಕುಸುಮಮಸಾಲವಲ್ಲೀಸಮಳ್
ಸದಾ ನಿಯಮನಿಷ್ಠುರಳ್ ಸುಶಮೆ ಪೂರಿತಳ್ ಪ್ರೇಮದಿಂ |
ಚಿದಂಶೆ ರಘುಜಾನುಜಪ್ರಿಯೆ ಮನಃಕೃಪಾನೀರದಳ್
ಮದಾಪಹರೆ ಮೈಥಿಲೀತಪನಪೂರಿತಳ್ ಪ್ರೇರಿತಳ್ ||

ಸಾಲ = ಮರ ; ನೀರದ = ಮೋಡ
-----------
ಇನ್ನೊಂದು ಉದಾಹರಣೆಯಲ್ಲಿ ಖಾನಾ, ಪೀನಾ , ಸೋನಾ, ಗಾನಾ ಉಪಯೋಗಿಸಿ ಜೀವನ್ಮುಕ್ತ ವರ್ಣನೆ

ವಿಷಯ ವಿಮುಖಾ ನಾನಾತ್ವೋದ್ಭಾಸಕೇಪಿ ಜಗತ್ತ್ರಯೇ
ಸದಮಲಚಿದಾನಂದಾಪೀನಾತ್ಮತತ್ವಪರಾಯಣಾಃ |
ಸರಸಮನಸೋ ನಾಟ್ಯಾಲೋಕಿಕ್ರಮೇಣ ನಿರಂತರಂ
ಪ್ರಣಯನಪರಾ ಯೋಗಾನಾಗಾ ಜಯಂತಿ ಮುನೀಶ್ವರಾಃ ||

Thursday, May 20, 2010

ವಿದ್ಯಾರಣ್ಯ ಜಯಂತಿ



ಇಂದು ವಿದ್ಯಾರಣ್ಯ ಜಯಂತಿ. ವಿಭೂತಿ ಪುರುಷರಾದ ವಿದ್ಯಾರಣ್ಯರು, ದೇಶ ಮತ್ತು ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ, ಜಗತ್ತಿನ ಉದ್ದಗಲಕ್ಕೂ ತನ್ನ ಹಿರಿಮೆಯನ್ನು ಮೆರೆವ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದರು

Tuesday, March 16, 2010

ಪ್ರೊ. ಎಂ. ಹಿರಿಯಣ್ಣ



ಪ್ರಾತಃ ಸ್ಮರಣೀಯರಾದಂತಹ ಆಚಾರ್ಯ ಮೈಸೂರು ಹಿರಿಯಣ್ಣನವರ ಭಾವಚಿತ್ರವು ಅಂತರ್ಜಾಲದಲ್ಲೆಲ್ಲೂ ಸಿಗಲಿಲ್ಲ. ಅವರ ಪಟವು ಅಂತರ್ಜಾಲದಲ್ಲಿದ್ದರೆ, ಅಂತರ್ಜಾಲಕ್ಕೇ ಶೋಭೆ ಅಂದು, ಗೋಖಲೆ ಸಾರ್ವಗನಿಕ ಸಂಸ್ಥೆಯವರು ಹೊರತಂದಿರುವ ಸಿ.ಡಿ. ಯೊಂದರ ಮುಖಪುಟದಲ್ಲಿದ್ದ ಹಿರಿಯಣ್ಣನವರ ಚಿತ್ರವನ್ನು ಅಂತರ್ಜಾಲಕ್ಕೆ ಏರಿಸಿದ್ದೇನೆ.

ಚಿತ್ರ ಕೃಪೆ: ಗೋಖಲೆ ಸಾರ್ವಜನಿಕ ಸಂಸ್ಥೆ

Sunday, March 14, 2010

ವಿದ್ಯಾಲಂಕಾರ ಪ್ರೋ. ಸಾ.ಕೃ.ರಾಮಚಂದ್ರ ರಾಯರು



Prof.S.K.Ramachandra Rao



ವಿದ್ಯಾಲಂಕಾರ ಪ್ರೋ. ಸಾ.ಕೃ.ರಾಮಚಂದ್ರ ರಾಯರು




ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ಸಂಗೀತಕಲಾರತ್ನ, ವಾಚಸ್ಪತಿ ಮುಂತಾದ ಸಾರ್ಥಕ ಅಭಿಧಾನಗಳಿಂದ ಅಲಂಕೃತರಾಗಿರುವ ಪ್ರೋ. ಸಾ. ಕೃ . ರಾಮಚಂದ್ರ ರಾಯರು ನಮ್ಮ ನಾಡಿನ ಬಹುಶೃತ ವಿದ್ವಾಂಸರಲ್ಲಿ ಪ್ರಮುಖರು.ವೇದ,ದರ್ಶನ,ತಂತ್ರ,ಜೈನ,ಬೌದ್ಧ,ಸಂಗೀತ,ಸಾಹಿತ್ಯ, ಚಿತ್ರ,ಶಿಲ್ಪ,ಆಯುರ್ವೇದ ಮುಂತಾದ ಹತ್ತು ಹಲವು ಶಾಖೆಗಳಲ್ಲಿ ಪರಿಣಿತರು. ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕೃತಿಗಳು ಇವರಿಂದ ಹೊರಮೊಮ್ಮಿದವು.

Sunday, February 28, 2010

ಗೋಖಲೆ ಸಾರ್ವಜನಿಕ ಸಂಸ್ಥೆ

ಗೋಖಲೆ ಸಾರ್ವಜನಿಕ ಸಂಸ್ಥೆ ಹೊರತಂದಿರುವ ಧ್ವನಿ ಸುರಳಿಗಳಲ್ಲಿ ಈ ಕೆಳಕಂಡ ಎಂ.ಪಿ. ಗಳು ನನ್ನ ಬಳಿ ಇವೆ. ಆಸಕ್ತರೆಲ್ಲರು ಸೇರಿ ಒಂದು ಶ್ರಾವ್ಯ ಸಂಗ್ರಹಾಲಯ (ಆಡಿಯೋ ಲೈಬ್ರರಿ) ಮಾಡಬಹುದು. ಇದಕ್ಕೆ ಕೈ ಜೋಡಿಸಬೇಕೆಂದಿರುವವರು ನನ್ನನ್ನು ಸಂಪರ್ಕಿಸಿ.

ಪಾಶುಪತಾಸ್ತ್ರ ಪ್ರದಾನ - ಕಾವ್ಯವಾಚನ ಮತ್ತು ವ್ಯಾಖ್ಯಾನ - ಭಾಗ ೧,೨. ಮೂರ್ತಿದ್ವಯರು.
ಅನಂದವರ್ಧನನ ಧ್ವನ್ಯಾಲೋಕ.
ಆನಂದಮಯ ಜೀವನ
ಶಾಕುಂತಲಂ
ಕಾಳಿದಾಸನ ಮೇಘದೂತಂ
ಕುಮಾರಸಂಭವ.
ಮೃತ್ ಶಕಟಿಕ
ರಾಮಾಯಣದ ಕೆಲವು ಸ್ವಾರಸ್ಯಗಳು.
ವಿಭೂತಿಪುರುಷ ವಿದ್ಯಾರಣ್ಯ.
ವೇದಮಂತ್ರ ಪರಿಚಯ.
ವಿವೇಕ ಚೂಡಾಮಣಿ - ಭಾಗ - ೧
ಭಾರತೀಯ ಸಂಸ್ಕೃತಿಗೆ ಯಾಙ್ನ್ಯವಲ್ಕ್ಯರ ಕೊಡುಗೆ.
೨೧. ಭೈರಪ್ಪನವರ ಕಾದಂಬರಿಗಳು
೨೨. ಬುದ್ಧನ ಜೀವನ ದರ್ಶನ.
೨೩.ಶ್ರೀಮದ್ಭಾಗವತ - ಶ್ರೀ ನಾರಾಯಣಾಚಾರ್ಯ.
೨೪. ಸಂಸ್ಕೃತ ಕವಿಗಳ ಕೃಷ್ಣಕಾವ್ಯ.
೨೫.ಮಹಾಭಾರತ - ಉದ್ಯೋಗಪರ್ವ
ಜೈಮಿನಿ ಭಾರತ - ವಾಚನ ವ್ಯಾಖ್ಯಾನ - ಡಾ|| ನಾಗವಲ್ಲಿ ನಾಗರಾಜ್ ಪ್ರೊ. ಅ.ರಾ. ಮಿತ್ರ.
ವಿವೇಕ ಚೂಡಾಮಣಿ - ಭಾಗ - ೨
ಭಾರತೀಯ ಸಂಸ್ಕೃತಿಯಲ್ಲಿ ಶಾಸ್ತ್ರ - ಪುರಾಣ-ಕಲೆ-ದರ್ಶನ.
೫.ರಾಗಾನುರಾಗ - ಭಾಗ - ೧,೨,೩,೪.
೬. ಕೆಲವು ಸಂಸ್ಕೃತ ನಾಟಕಗಳು.
೭. ಡಿ.ವಿ.ಜಿ. ಯವರ ಗೇಯ ಕೃತಿಗಳ ಗಾಯನ.
೮.ಶಿವಾಪರಾಧ ಕ್ಷಮಾಪಣ ಸ್ತೋತ್ರ - ವಿದ್ವಾನ್. ಗಣೇಶ ಭಟ್ಟ ಹೋಬಳಿ
೯. ಅಕ್ಷಯವಸ್ತ್ರ ಪ್ರದಾನ - ಕಾವ್ಯವಾಚನ ಮತ್ತು ವ್ಯಾಖ್ಯಾನ
ತ್ಯಾಗರಾಜರ ಕೃತಿಗಳಲ್ಲಿ ಆಧ್ಯಾತ್ಮ.
ಬುದ್ಧನ ಜೀವನ ದರ್ಶನ.
ಮಹಾಭಾರತ - ಉದ್ಯೋಗಪರ್ವ
ಸಂಸ್ಕೃತ ಕವಿಗಳ ಕೃಷ್ಣಕಾವ್ಯ.
ಪ್ರೋ. ಎಂ. ಹಿರಿಯಣ್ಣ : ಒಂದು ಕಿರುಪರಿಚಯ

Saturday, January 30, 2010

ಓ ಸೂರ್ಯಕಾಂತಿ!

ವಿಲ್ಯಂ ಬ್ಲೇಕ್ ಕವಿಯ Ah! Sunflower ಕವಿತೆಯನ್ನು ನಾನು ಕನ್ನಡದಲ್ಲಿ ಕೊಲೆ ಮಾಡಿರುವ ಬಗೆ.

ಓ ಸೂರ್ಯಕಾಂತಿ! ಕಾಲನ ಅಧೀನನೆ.
ಸೂರ್ಯ ಸೋಪಾನದ ಜಾಡು ಹಿಡಿದು:
ಆ ಸುಮಧುರ ಸುವರ್ಣ ಸಗ್ಗಕೆ
ಲಗ್ಗೆ ಇಟ್ಟು ಪಯಣಿಗರು ಯಾತ್ರೆ ಮುಗಿಸುವಲ್ಲಿಗೆ

ಆಸೆಗಳ ಸಂಕೋಲೆಯಿಂದ ಬಸವಳಿದ ಜವ್ವನನು
ತುಹಿನದಿಂದಾವರಿಸಿ ಬಾಡಿದ ನವಸುಮವು
ಸುಪ್ತಾವಸ್ಥೆಯಿಂದ ಸಿಡಿದೆದ್ದು ಹಾತೊರೆದು ಹೊರಡುತಿವೆ
ಎನ್ನ ಸೂರ್ಯಕಾಂತಿ ಚಲಿಸುವಲ್ಲಿಗೆ!


Ah ! Sun-flower weary of time.
Who countest the steps of the Sun:
Seeking after that sweet golden clime
Where the travellers journey is done

Where the Youth pined away with desire,
And the pale Virgin shrouded in snow:
Arise from their graves and aspire,
Where my Sun-flower wishes to go!


- William Blake : Songs of Experience in 1794.

Tuesday, December 29, 2009

ರಸಋಷಿಗೆ ಶ್ರೀಸಾಮಾನ್ಯನ ನಮನ


ಶ್ರೀಸಾಮಾನ್ಯ, ನೇಗಿಲಯೋಗಿ , ಬೆಳ್ಳಿಹಬ್ಬ, ಸುತ್ತೋಲೆ - ದಿನನಿತ್ಯದ ಬಳಕೆಯ ಈ ಪದಗಳಲ್ಲಿ ಒಂದು ಸೋಜಿಗದ ಸ್ವಾರಸ್ಯವಿದೆ. ಅದೇನೆಂದು ನಿಮಗೆ ಗೊತ್ತೇ? ಈ ಪದಗಳನ್ನು ಕನ್ನಡಕ್ಕೆ ನೀಡಿದವರು ಕುವೆಂಪು.ಇವೆಲ್ಲ ಪದಸೃಷ್ಟಿಗಳ ಜನಕನಿಗಿಂದು ಜನುಮದಿನ. ಈ ಬ್ಲಾಗಿನಲ್ಲಿ ಶ್ರೀಸಾಮನ್ಯನೆಂದು ನಾಮಕರಣ ಮಾಡಿಕೊಂಡಿರುವ ನಾನು ಪದಜನಕನಿಗೆ ಶ್ರದ್ಧಾಂಜಲಿ ಕೊರಲೇ ಬೇಕಲ್ಲವೇ.

ಕುವೆಂಪು ಅವರ ವಿಶ್ವಮಾನವ ಸಂದೇಶ

ಮನುಜ ಮತ , ವಿಶ್ವ ಪಥ, ಸರ್ವೋದಯ, ಸಮನ್ವಯ ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಸಂಕುಚಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ

Monday, October 26, 2009

ಎರವಲು

ನನ್ನದಲ್ಲದ ಜೀವಿತವ
ನನದೆಂದು ನಾ ತಿಳಿದು
ದಿನ ದಿನವು ನನ್ನಿಯನೆ
ನನ್ನೆದೆಗೆ ಉಣಿಸಿ

ಒಲ್ಲದಾತ್ಮನ ತಣಿಸೆ
ಬಗೆಬಗೆಯ ಅಮಿಷವ
ಒಡ್ಡುತಲಿ ದಡ್ಡತನದಿ
ಬದುಕಲೆಂತಾಗುವುದು ತಿಳಿಸಿ

Tuesday, September 29, 2009

ಮುಗ್ಧತೆಯ ಮಾರಣಹೋಮ

--- Still in Draft Phase ---

ನನ್ನ ಜೀವನದಲ್ಲಿ ಒಂದು ಕಾಲ ಇತ್ತು -- ಸೌಂದರ್ಯ ಅನ್ನೊದಕ್ಕೆ ತನ್ನದೆ ಆದ ವಿಶಿಷ್ಟ ಸ್ಥಾನ ಇದ್ದ ಕಾಲ ಅದು.ಬಹುಶಃ ನನಗಾಗ ಆರೇಳು ವರ್ಷ ಇದ್ದಿರಬಹುದು.ಆ ಅನಾಥಾಶ್ರಮ ನನ್ನನ ಶಾಶ್ವತವಾಗಿ ಮುಪ್ಪಿಗೇರ್ಸಕ್ಕಿಂತ ಕೆಲ ವಾರ ಅಥವಾ ತಿಂಗಳಿಗೆ ಹಿಂದಿನ ಮಾತು ಇದು.ಪ್ರತಿ ಮುಂಜಾನೆ ಬಲಮಗ್ಗಲಲ್ಲಿ ಎದ್ದು,ಒಬ್ಬ ಸಿಪಾಯಿಯ ಹಾಗೆ ಹಾಸಿಗೆಯನ್ನು ಮಡಿಮಾಡಿ,ನೇರ ಮೈದಾನದಲ್ಲಿ ಸಾಲು ಸಾಲಾಗಿ ಗಂಜಿಗೆ ನಿಲ್ಲುತ್ತಿದೆ. ಆ ಶನಿವಾರದ ದಿನ ಟಿಫನ್ ಮಾಡಿ ಮತ್ತೆ ನನ್ನ ಕೊಠಡಿಗೆ ಬಂದು ಇನ್ನೇನು ಕೂರಬೇಕು, ಅಷ್ಟ್ರಲ್ಲಿ ನಮ್ಮ ವಾರ್ಡನ್ ಒಂದು ಹಿಂಡು ರಾಜಾಚಿಟ್ಟೆಗಳನ್ನ ಅಟ್ಟಿಸಿಕೊಂಡು ಹೋಗಿ ಮೈದಾನದ ಹೊರಗೆ ಅಟ್ಟತಾ ಇದ್ದ. ಅಲ್ಲೆ ಅವಿತುಕಂಡು ನೋಡ್ತಾ ಇದ್ದೆ ನಾನು -- ಈ ಪ್ರಾಣಿ ಏನ್ ಮಾಡ್ಥಾನೆ ಅಂತ.ಒಂದೊಂದಾಗಿ ಆ ಸುಂದರ ಚಿಟ್ಟೆಗಳನ್ನ ನೆಟ್ ಇಂದ ತೆಗೆದು ಅವುಗಳ ತಲೆ, ರೆಕ್ಕೆಗಳಿಗೆ ಪಿನ್ನ್ ಗಳನ್ನು ಚುಚ್ಚಿ ಶಿಲುಬೇಗೆ ಏರಿಸ್ತಾ ಇದ್ದ ಆ ಪಾಪಿ. ಒಂದು ಕಾರ್ಡ್ಬೋರ್ಡ್ ತುಂಬ ಅರೆಬರೆ ಸತ್ತ ಚಿಟ್ಟೆಗಳನ್ನ ಸಿಕ್ಕಿಸಿಟ್ಟಿದ್ದ.ಅಷ್ಟು ಸುಂದರವಾಗಿರೋದನ್ನ ಹೇಗಾದರು ಕೊಲ್ಲೋಕ್ಕೆ ಮನಸ್ಸುಬಂತೋ ಆ ದೂರ್ತಂಗೆ! ಆ ಮುರಿದ ರೆಕ್ಕೆಗೆ ನನ್ನ ಉಗುಳು ಹಚ್ಚಿ ಅಂಟು ಹಾಕಕ್ಕೆ ನೋಡಿದೆ.ಮತ್ತೆ ಅದು ಹಾರಿ ಹೋಗಿ ನೀಲಾಕಾಶ ಸೇರಲಿ ಅಂತ.ಆದರೆ ರೆಕ್ಕೆ ಮತ್ತೆ ಅಂಟಲೇ ಇಲ್ಲ. ಅಷ್ಟರಲ್ಲಿ ನನ್ನ ತಲೆಯ ಮೇಲೆ ಏನೋ ಬಡಿದಹಾಗೆ ಆಯ್ತು.ತಲೆ ಎತ್ತಿ ನೋಡಿದರೆ ಆ ರಾಕ್ಷಸ ಬಂದು ನಿಂತಿದ್ದ.ಅದೆ ಕಾರ್ಡಬೋರ್ಡನ್ನ ತಗೆದು ನನ್ನ ತಲೆಗೆ ಎರೆಡು ಏಟು ಹಾಕಿ ಅರಚಾಡಿದ.ನಾನು ಏನೂ ಮಾಡಿಲ್ಲ ಅಂತ ಎಷ್ಟು ಹೇಳಿದರೂ ನನ್ನನ ನಂಬಲಿಲ್ಲ. ತಲೆಗೆ ಹೊಡೆದ ರಭಸದಲ್ಲಿ ಚಿಟ್ಟೆ ತುಂಡುಗಳೆಲ್ಲ ಚಲ್ಲಾಪಿಲ್ಲಿಯಾದ್ವು.ಅಲ್ಲಿ ಬಿದ್ದಿದ್ದ ಕಸವನ್ನ ಎತ್ತಿ ಕಸದತೊಟ್ಟಿಗೆ ಹಾಕಿ ಬರಲು ಹೇಳಿ ಅವನು ಹೋರಟು ಹೋದ.ಅಲ್ಲಿದ್ದ ರಾಶಿಯಲ್ಲಿ ಬಹಳ ಹೊತ್ತು ಕೂತು ಎಲ್ಲ ಚಿಟ್ಟೆಗಳನ್ನು ಮತ್ತೆ ಒಟ್ಟಿಗೆ ಜೋಡಿಸಿ ಒಮ್ಮೆಲೆ ಮಣ್ಣು ಮಾಡುವ ಎಂದು ಯೋಚ್ಸಿದೆ.ಆದರೆ ಆಗಲಿಲ್ಲ.ಅವುಗಳ ಸಲುವಾಗಿ ಪ್ರಾರ್ಥನೆ ಮಾಡಿ ನನ್ನ ಹಳೆ ಚೀಲದಲ್ಲಿ ಹಾಕಿ ಮಣ್ಣು ಮಾಡಿದೆ.ಪ್ರತಿವರುಷವೂ ಚಿಟ್ಟೆಗಳು ನಮ್ಮ ಅನಾಥಾಲಕ್ಕೆ ಬಂದಾಗ ನಾನೇ ಅವುಗಳನ್ನು ಹೊರದೂಡುವೆ.ಈ ಸ್ಥಳ ಬದುಕುವುದಕ್ಕೆ ಒಳ್ಳೆಯದಲ್ಲ -- ಸಾಯುವುದಕ್ಕಂತು ಅಲ್ಲವೇ ಅಲ್ಲ ಅನ್ನುವುದು ಆ ಬಡಪಾಯಿಗಳಿಗೆ ಇನ್ನು ತಿಳಿದಿಲ್ಲ.

Thursday, July 30, 2009

ಉಲ್ಬಣ

ಚಿವುಟಿ ಸ್ರವಿಸಬೇಕೆನಿಲ್ಲ
ಹೆಪ್ಪುಗಟ್ಟಿದ ನೋವನ್ನು.
ಒಳಕಾವೇರಿ ಉಕ್ಕುಕ್ಕಿ
ಕೀವು ಕಟ್ಟಿ ತನ್ತಾನೆ
ತೊಟ್ಟಿಕ್ಕುತಿರಲು,
ಚಿವುಟಬೇಕೆನಿಲ್ಲ.

Saturday, June 27, 2009

ಮುದ್ದಣ್ಣ ಕಂಡ ಕವಿ

ಬಕನ ಗುಣವೊಂದು ಮರ್ಕತನದೊಂದಜನ ಮೂ
ಶಕನ ಲಕ್ಷಣಗಲೋಳಗೊಂದೊಂದು ಮೆನ್ ಪಿಪೀ
ಲಿಕನ ಶುನಕನ ಮಾನ ಸುಕಸನ ಚಿತ್ರಕಾಯನ ಗುನಗಲೋಳಗದೊಂದು
ಪಿಕನ ಚಿತ್ರಿಕನ ಮರುಲನ ವಿದೂಷಕನ ವ
ರ್ತಕನ ಸಲ್ಲಕ್ಷನಗಲೊಂದೆರದನ್ದೆಸೆಯ
ಲಕಲಂಕ ಕೀರ್ತಿಯಿಮ್ದೊಪ್ಪಿರ್ಪನಾ ಕವಿಯೇ ಲೋಕಮಿರ್ಪನ್ನೆವರೆಗಂ
- ನಂದಳಿಕೆ ಲಕ್ಷ್ಮೀ ನಾರಣಪ್ಪ


'ರವಿ ಕಾಣದ್ದನ್ನು ಕವಿ ಕಂಡ' ; 'ಬ್ರಹ್ಮನದ್ದು ಸೃಷ್ಟಿ ಕವಿಯದ್ದು ಮರು ಸೃಷ್ಟಿ' -- ಇಂತೆಲ್ಲ ಕವಿವರ್ಯರನ್ನು ಹಾಡಿ ಹೊಗಳಿ ಬ್ರಹ್ಮಾದಿತ್ಯಾದಿಗಳಿಗಿಂತ ಉನ್ನತ ಹೇಮಪೇಠದಲ್ಲಿಟ್ಟು ಕೊಂಡಾಡಿದ್ದಾರೆ. ಆದರೆ ಮುದ್ದಣ್ಣನವರು ಕವಿಯನ್ನು ಕಪಿ,ಬಕ ಮುಂತಾದ ಪ್ರಾಣಿ ಪಕ್ಷಿಗಳಿಗೆ ಹೋಲಿಸಿರುವುದು ಈ ಮೇಲಿನ ಪದ್ಯದ ಸ್ವಾರಸ್ಯ.

Wednesday, May 27, 2009

ಪುರುಷಪ್ರಗತಿಯಂತು ಮಂಕುತಿಮ್ಮ

ಅಸುರರು ಅಮ್ರುತತ್ವವನ್ನು ಅರಸಿ ಬ್ರಹ್ಮಾದಿ ದೇವತೆಗಳಿಂದ ನಾನಾ ವಿಧವಾದ ವರಗಳನ್ನು ಪಡೆದು ಸಾವನ್ನೇ ಗೆಲ್ಲುವ ವ್ಯರ್ಥ ಪ್ರಯತ್ನಕ್ಕಿಳಿದ ಪ್ರಸಂಗಗಳನ್ನು ನಾವು ಭಸ್ಮಾಸುರ,ತಾರಕಾಸುರ, ಹಿರಣ್ಯರ ವೃತ್ತಾಂತದಲ್ಲಿ ಕಂಡಿದ್ದೇವೆ. ಪ್ರಾಚೀನ ಗ್ರೀಕರಲ್ಲಿ ಸಿಸಿಫಸನೆಂಬುವವನು ಛಲ ಕಪಟ ಗಳಿಗೆ ಹೆಸರುವಾಸಿಯಾಗಿದ್ದನು. ನಮ್ಮಲ್ಲಿ ಯಮನಿರುವಂತೆ ಗ್ರೀಕರ ಮೃತ್ಯು ದೇವತೆಯನ್ನೇ ಸೆರೆಹಿಡಿದ್ದಿದ್ದ ಭೂಪ ಇವನು. ಇವನ ಕಪಟದ ಕುಚೇಷ್ಟೆಗಳನ್ನು ತಾಳಲಾರದ ದೇವತೆಗಳು ಇತನಿಗೊಂದು ಶಾಪವನ್ನಿತ್ತರು. ಗಿರಿಯೊಂದರ ಮೇಲೆ ಸಿಸಿಫಸನು ಗೋಲಾಕಾರದ ಬಂಡೆಯೊಂದನು ತಳ್ಳುತ್ತ ಸಾಗಿಸುವುದು. ಬಂಡೆ ಇನ್ನೇನು ಶಿಖರ ಮುಟ್ಟಿತು ಎನ್ನುವಷ್ಟರಲ್ಲಿ ಸರಕ್ಕನೆ ಜಾರಿ ಮತ್ತೆ ಪಾತಾಳ ಸೇರುವುದು. ಸರಿ ಮತ್ತೆ ಪ್ರಾರಂಭವಾಗುವುದು ಸಿಸಿಫಸನು ಬಂಡೆ ಹೊರುವ ಕಾಯಕ. ಹೀಗೆ ಆಚಂದ್ರಾರ್ಕವಾಗಿ ಬಂಡೆ ಹೊರುವ ಕಸ ಅವನ ಪಾಲಾಯಿತು. ಅಂತ್ಯವಿಲ್ಲದೆ,ನಿರರ್ತಕ ಮತ್ತು ವ್ಯರ್ಥವೆನಿಸುವ ಕಾಯಕಕ್ಕೆ ಸಿಸಿಫಸನ ಕಥೆಯು ರೂಪಕ ವಾಯಿತು.

ಕಗ್ಗದಲ್ಲಿ ಗುಂಡಪ್ಪನವರು ಇಂತೆಂದಿದ್ದಾರೆ.

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ।।
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು ಮಂಕುತಿಮ್ಮ ।।

ಪ್ರಸ್ತುತ ಬಿಜಾಪುರದ ರವೀಂದ್ರ ಡಿ ನಂದೀಪನ್ನನವರ್ ಎಂಬುವವರು ದಿನಾಲು ಡಿ.ಸಿ. ಕಛೇರಿಯ ಮುಂದೆ ಎಂಟರಿಂದ ಒಂದು ಘಂಟೆ ಮಧ್ಯಾನ್ಹದ ವರೆಗೂ ಹದಿನೈದು ಕೆ.ಜಿ. ತೂಕದ ಕಲ್ಲು ಹೊತ್ತು ನಿಂತಿರುವರಂತೆ. ಇವರ ಅಳಲು ಏನೆಂದರೆ ಭಾರತದಲ್ಲಿ ರಾಷ್ಟ್ರಪತಿ ಮಾದರಿಯ ಪ್ರಜಾಪ್ರಭುತ್ವ ಜಾರಿಗೆ ಬರಬೇಕು. ಅದಕ್ಕಾಗಿ ಸಂವಿಧಾನಕ್ಕೆ ಸೂಕ್ತ ರೀತಿಯಲ್ಲಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಈ ಕ್ರಮವಂತೆ. ಅಯ್ಯಾ ! ಆರ್ಥಿಕ ಹಿಂಜರಿತ ಮತ್ತು ಭಯೋತ್ಪಾದನೆಯ ಅಟ್ಟಹಾಸದಲ್ಲಿ ಸರ್ಕಾರವನ್ನು ಮರುಚುನಾವಣೆ ಮಾಡಿ ಗದ್ದುಗೆಗೆ ಏರಿಸಿದ ದೇಶ ಇದು. ಇಂತಹುದರಲ್ಲಿ ನಿಮಗೆ ಯಾಕ ಸಿಸಿಫಸನ ಶೋಕಿ.

Friday, April 17, 2009

ಪ್ರಜಾಪ್ರಭುತ್ವ


ತೋರು ಬೆರಳ ಮೇಲೆ ಸಣ್ಣ ಕಪ್ಪದೊಂದು ಗುರುತು
ಪ್ರಜೆಯು ತಾನು ಪ್ರಭುವೆಂಬುದ ಸಾರುತಿಹುದು ಕುಳಿತು.
ಕರ್ತವ್ಯದ ಕರೆಯಿದುವೆ ಹಕ್ಕಿನ ಘನ ಗೆರೆಯಿದುವೆ
ಎದ್ದು ನಿಂತು ಮತವ ನೀಡು ತಾಮಸವನು ಮರೆತು

ಚುನಾವಣೆಯ ಸಮಯ - ನಿಮ್ಮ ಮತ ಚಲಾಯಿಸಲು ಮರೆಯದಿರಿ!

“At the bottom of all the tributes paid to democracy is the little man, walking into the little booth, with a little pencil, making a little cross on a little bit of paper – no amount of rhetoric or voluminous discussion can possibly diminish the overwhelming importance of that point.”
- Sir.Winston Churchill

Friday, April 10, 2009

ರಸಪ್ರವಾಹ

ಬಿರ್ಕಾಶಾ ದೇಶದ ರಾಜ ಸಭೆಗೆ ಲಾವಣ್ಯವತಿಯೂ ಬಹುಶೃತಳೂ ಆದ ಸ್ವರ್ಣಮಾಲಿನಿ ಎಂಬ ನರ್ತಕಿಯು ತನ್ನ ಚಾರಣ ವೃಂದದೊಂದಿಗೆ ಆಗಮಿಸಿದಳು. ರಾಜಕುಮಾರನ ಸಮಕ್ಷಮದಲ್ಲಿ ವೀಣಾಭೇರಿ ಮೃದಂಗಾದಿಗಳ ಗೋಷ್ಠಿಗಂಗೆಯಲ್ಲಿ ಲೀನವಾಗಿ, ಲಾಸ್ಯವೇ ತಾನೆಂಬಂತೆ ನರ್ತಿಸಿದಳು. ಸ್ವರ್ಣಮಾಲಿನಿ ಜ್ವಾಲಮಾಲೆಯಾಗಿ ಜ್ವಾಲೆಯ ನರ್ತನ, ನಕ್ಷತ್ರಾಕಾಶಗಳ ನರ್ತನ -- ಹೀಗೆ ಎಲ್ಲವನ್ನೂ ಚಿತ್ರಬಿಡಿಸಿದಂತೆ ಕಣ್ಣುಕಟ್ಟುವ ಹಾಗೆ ಚಿತ್ರಿಸಿದಳು.ತದನಂತರ ರಾಜಕುಮಾರನ ಬಳಿ ಬಂದು ತಲೆಬಾಗಿ ನಮಸ್ಕರಿಸಿದಳು. ರಾಜಕುಮಾರನು ಇಂತೆಂದನು " ನರ್ತನನಿಧಿಯೇ -- ಲಾಸ್ಯ ಲಾವಣ್ಯಗಳ ಪುತ್ರಿಯಂತಿರುವ ನಿನಗೆ ಈ ಕಲೆಯು ಹೇಗೆ ಒಲಿಯಿತು. ಎಲ್ಲಿಂದ ಅವತರಿಸಿತು? ಪಂಚಭೂತಗಳನ್ನೂ ನಿನ್ನ ಹಾವಭಾವಗಳಲ್ಲಿಯೇ ಹೇಗೆ ಅಡಕವಾಗಿಟ್ಟಿರುವೆ?" ಇದರ ಗುಟ್ಟೇನೆಂದು ಕೆಳಲಾಗಿ, ಸ್ವರ್ಣಮಾಲಿನಿಯು ಇಂತೆಂದಳು -- "ಮಹಾಸ್ವಾಮಿ, ನಿಮ್ಮ ಸವಾಲುಗಳಿಗೆ ನನ್ನ ಬಳಿ ಸಮಂಜಸ ಉತ್ತರಗಳು ಇಲ್ಲ. ಆದರೆ ನನಗೆ ತಿಳಿದಿರುವುದು ಇಷ್ಟೆ: ಒಬ್ಬ ದಾರ್ಶನಿಕನ ಆತ್ಮ ಹೇಗೆ ಶಿರೋಭಾಗದಲ್ಲಿ ಸ್ಥಿತವಾಗಿರುತ್ತದೆಯೋ, ಕಾವ್ಯಾತ್ಮನಾದ ಕವಿಯ ಆತ್ಮವು ಹ್ರುದ್ಭಾಗದಲ್ಲಿ ನೆಲೆಸಿರುತ್ತದೆಯೋ, ಗಾಯಕಮಾನ್ಯರ ಸರ್ವಸ್ವವೂ ಕಂಠದಲ್ಲಿ ಸ್ಥಾಪಿತವಾಗಿದೆಯೋ,ಹಾಗೆ ನರ್ತಕನ ಆತ್ಮವು ಅಣು ಅಣುವಿನಲ್ಲೂ ರಸಪ್ರವಾಹವಾಗಿ ಸಂಚರಿಸುತ್ತದೆ."

---
** ಭಾವಾನುವಾದ Adapted from Kahlil Gibran.

Sunday, March 22, 2009

ನನ್ನ ಉಡುಪು ನಿನ್ನದು...ನಿನ್ನ ಉಡುಪು ನನ್ನದು....

****
ಪ್ರಥಮ ಪರಾರ್ಧದ ಕಡೆಯ ಕಲ್ಪದಲ್ಲಿನ ಮಧ್ಯದ ಮನ್ವಂತರದ ಒಂದು ದಿನ. ಸೌಂದರ್ಯದ ಅಭಿಮಾನಿ ದೇವತೆ ಮತ್ತು ಕುರೂಪದ ಅಭಿಮಾನಿದೇವತೆಗಳು ನೈಮಿಶಾರಣ್ಯದ ಸುವಿಶಾಲವಾದ ಸರೋವರದ ಬಳಿ ಕೂಟ ಏರ್ಪಡಿಸಿದರು. ಪುಶ್ಕಳವಾಗಿ ತಿಂದು-ಕುಡಿದು ಮೀಯಲೆಂದು ನಿರ್ವಸ್ತ್ರರಾಗಿ ಪುಶ್ಪ ಸರೋವರಕ್ಕೆ ಧುಮುಕಿದರು. ಮೂರು ಯಾಮಗಳ ಕಾಲ ಜಲಕ್ರೇಡೆಯನಾಡಿದರು. ಹೀಗಿರಲು, ಕುರೂಪದ ಅಭಿಮಾನಿದೇವತೆ ಕಪಟದಿಂದ ಹೊರಬಂದು ಅಲ್ಲೆ ಪೊದೆಯ ಬಳಿ ಕಳಚಿಬಿದ್ದಿದ್ದ ಸೌಂದರ್ಯ ದೇವತೆಯ ಪೋಶಾಕುಗಳನ್ನು ಧರಿಸಿ ನಿಂತಲ್ಲೆ ಮಾಯವಾಯಿತು. ಸೌಂದರ್ಯದೇವತೆಯು ಪುಷ್ಪಸರೋವರ ದಿಂದ ಹೊರಬಂದು ನೋಡಿದಾಗ ಸ್ವವಸ್ತ್ರಗಳು ಕಾಣೆಯಾಗಿದ್ದವು. ನಿರ್ವಸ್ತ್ರಳಾಗಿ ನಾಚಿಕೆಯಿಂದ ಅಲ್ಲೆ ಬಿದ್ದದ್ದ ಕುರೂಪಿಯ ಬಟ್ಟೆಗಳನ್ನೆ ಉಟ್ಟು ತೆರಳಿದಳು. ತದನಂತರ ಈ ದಿನದ ವರೆಗೂ ಲೋಕದಲ್ಲಿ ಎಷ್ಟೋ ಮೂಢಯೋನಿಜರು ತೋರಿಕೆಯ ಸೌಂದರ್ಯನ್ನೆ ನಿಜವೆಂದೂ -- ಹೊರನೋಟಕ್ಕೆ ಸುಂದರವಲ್ಲದ್ದರ ಆಂತರಿಕ ಸೌಂದರ್ಯವನ್ನು ಅರಿಯದೆ ವರ್ತಿಸುತ್ತಿರುವರು.
****

An Adaptation from Kahlil Gibran's "The Wanderer" - His Parables and His Sayings

Monday, February 16, 2009

ಹೀಗೊಂದು ವೀರಗಲ್ಲು


ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು.ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ೩ ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.


೨೬/೧೧ ಮುಂಬೈ ಯುದ್ಧದಲ್ಲಿ ಹೋರಾಡಿ ವೀರಮರಣ ಹೊಂದಿದ ವೀರ ಸೇನಾನಿ ಮೇಜರ್.ಸಂದೀಪ ಉನ್ನಿಕೃಷ್ಣನ್ ಸ್ಮರಣಾರ್ತವಾಗಿ ನಮ್ಮ ಮನೆಯ(ಇಸ್ರೋ ಬಡಾವಣೆಯಲ್ಲಿ)ಬಳಿ ಕರ್ನಾಟಕ ರಕ್ಷಣಾ ವೇದಿಕೆಯವರ ಸಹಕಾರದಲ್ಲಿ ಕೇವಲ ಒಂದೇ ತಿಂಗಳಿನಲ್ಲಿ ಸ್ಥಾಪಿಸಿರುವ ವೀರಗಲ್ಲು. ವೀರ ಸೇನಾನಿ ಸಂದೀಪನಿಗೆ ಸಂದಂತಹ ಸನ್ಮಾನ, ಅವರ ಪರ್ವ್ರಿವಾರ ವರ್ಗದವರಿಗೆ ಜನಸಮೂಹ ನೀಡಿದಂತ ಭರವಸೆ -- ಸಂದೀಪನ ಹಾಗೆ ಹೋರಾಡಿ ಮಡಿದ ಅದೇಷ್ಟೋ ದಪೇದಾರರು, ಹೆಸರುಳಿಯದೆ ಅಳಿದ ಗಣ್ಯವಾಗಬೇಕಿದ್ದ ನಗಣ್ಯರೀಗೂ ದೊರಕಲಿ.

****

Monday, January 26, 2009

ರುದ್ರಪಟ್ನದಲ್ಲಿ ನಾದ ತಾಂಡವ



ಹಾಸನ ಜಿಲ್ಲೆಯ ರುದ್ರಪಟ್ನ ಕರ್ನಾಟಕ ಸಂಗೀತದ ವಲಯದಲ್ಲಿ ಮನೆಮಾತು. ನಾಡಿನ ಶ್ರೇಷ್ಟಶ್ರೇಣಿಯ ಹಲವಾರು ಕಲಾವಿದರು ರುದ್ರಪಟ್ಟಣದ ಮೂಲದವರೆ. ಈ ಕ್ಷೇತ್ರದಲ್ಲಿ ನಾದಬ್ರಹ್ಮ ಮತ್ತು ವೇದಬ್ರಹ್ಮ ಒಂದೆಡೆ ನೆಲೆಸಿದ್ದಾರೆ.ಸಂಗೀತಗ್ರಾಮ ರುದ್ರಪಟ್ಟಣದಲ್ಲಿ ಗಾನಕಲಾಭೂಷಣ ವಿದ್ವಾನ್. ಶ್ರೀ ಆರ್.ಕೆ.ಪದ್ಮನಾಭ ಅವರ ನೇತೃತ್ವದಲ್ಲಿ ವಿಶಿಷ್ಟವಾದ ತಂಬೂರಿ ಆಕಾರದ ಸಪ್ತಸ್ವರಮಂದಿರ ನಿರ್ಮಿಸಿದ್ದಾರೆ. ಕನಕ, ಪುರಂದರ, ವಾದಿರಾಜರಲ್ಲದೆ -- ತ್ಯಾಗಯ್ಯ,ದೀಕ್ಷಿತರು,ಶ್ಯಾಮಶಾಸ್ತ್ರಿಗಳು ಮತ್ತು ವಾಗ್ದೇವಿಗೆ ನಿತ್ಯ ಗಾನಪೂಜೆ ನಡೆಯುತ್ತದೆ.ಇದಲ್ಲದೆ ಪ್ರತಿಯೊಂದು ಮೇಳಕರ್ತ ರಾಗಕ್ಕೆ ಒಂದು ಎಂಬಂತೆ ನಿವೇಶನವನ್ನು ರಚಿಸಿ ’ನಾದಲೋಕ’ ಎಂಬ ಗ್ರಾಮವನ್ನೆ ಸೃಶ್ಟಿಸಿದ್ದಾರೆ. ಇಲ್ಲಿನ ಎಲ್ಲವೂ ಒಂದು ರೀತಿ ವಿಶಿಷ್ಟವೆ. ತಂಬೂರಿ ರೂಪದ ಸಪ್ತ ಸ್ವರಮಂದಿರವಾಗಲಿ, ಗಾನ ಪೂಜೆಯಾಗಲಿ, ವಿನೂತನ ವಸತಿ ಸಮುಚ್ಚಯವಾಗಲಿ - ಎಲ್ಲವೂ ವಿಶೇಷವೇ.

Thursday, December 25, 2008

ಶ್ರೀ ಗುರೋರಷ್ಟಕಂ



ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ಇರುವ ಮಹತ್ವವು ಎಲ್ಲರಿಗೂ ತಿಳಿದಿರುವ ವಿಷಯವೆ. ಗುರುವಿನ ಗುಲಾಮನಾಗುವ ತನಕ ಮುಕುತಿ ಸಿಗದು ಎಂದು ದಾಸರು ಪಾಡಿದರೆ, ತ್ಯಾಗರಾಜರು ’ಗುರು ಲೇಕ ಏಟುವಂಟಿ?’ ಎಂದು ಹಾಡಿದ್ದಾರೆ. ಶ್ರೀ ಆದಿ ಶಂಕರಾಚಾರ್ಯರ ಕೃತ ಗುರು ಅಷ್ಟಕದಲ್ಲಿ ಪೂಜ್ಯರು ಗುರು ಪ್ರಸಾದ ಸಿದ್ಧಿಯಾಗದೆ -- ಯಾವ ಐಶ್ವರ್ಯ,ಅಂತಸ್ತು,ಬುದ್ಧಿ,ಕಳತ್ರ,ಪುತ್ರ ಪೌತ್ರಾದಿ ಲಬ್ಧಿಗಳಿದ್ದರೂ ಏನು ಪ್ರಯೋಜನ ಎಂದು ಮತ್ತೆ ಮತ್ತೆ ಪೃಚ್ಚಿಸಿ ಗುರುದೇವನ ಮಾಹಾತ್ಮ್ಯವನ್ನು ಸಾರಿ ಹೇಳಿದ್ದಾರೆ. ಇದೇ ಡಿಸೆಂಬರ್ ೯ ರಂದು ಗುರುಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದ್ದು, ತತ್ಸಂಬಂಧ ಈ ಗುರು ಅಷ್ಟಕದ ಪಠನೆಯಿಂದ ಗುರು ಕೃಪಾ ಕಟಾಕ್ಷ ದೊರೆಯುವುದು.

******
ಶರೀರಂ ಸುರೂಪಂ ತಥಾ ವ ಕಳತ್ರಂ
ಯಶಃ ಚಾರು ಚಿತ್ರಂ ಧನಂ ಮೇರು ತುಲ್ಯಂ
ಮನಃ ಚೆನ ಲಗ್ನಂ ಗುರೋರಂಘ್ರಿ ಪದ್ಮೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ |೧|

ಕಳತ್ರಂ ಧನಂ ಪುತ್ರ ಪೌತ್ರಾದಿ ಸರ್ವಂ
ಗೃಹಂ ಬಾಂಧವಂ ಸರ್ವಮೆತಾದಿ ಜಾತಂ |೨|

ಶಡಂಗಾನಿ ವೇದೊ ಮುಖೇಶಾಸ್ತ್ರ ವಿದ್ಯ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |೩|

ವಿದೇಶೇಶು ಮಾನ್ಯ ಸ್ವದೇಶೇಶು ಧನ್ಯ
ಸದಾಚಾರ ವೃತ್ತೇಶು ಮಥೋ ನ ಚ ಅನ್ಯ |೪|

ಕ್ಷಂಮಂಡಲೆ ಭೂಪ ಭೂಪಾಲ ವೃಂದೈ
ಸದಾ ಸೇವಿತಂ ಯಸ್ಯ ಪಾದಾರವಿಂದಂ |೫|

ಯಶೋ ಮೆ ಗಥಂ ಭಿಕ್ಷು ದಾನ ಪ್ರತಾಪ
ಜಗದ್ವಾಥುಸರ್ವಂ ಕರೆ ಯಃ ಪ್ರಸಾದಾತ್ |೬|

ನ ಭೋಗೆ ನ ಯೋಗೆ ನ ವಾ ವಾಜಿರಾಜೌ
ನ ಕಾಂತಾ ಸುಖೆ ನೈವ ವಿತ್ತೇಶು ಚಿತ್ತಂ |೭|

ಅರಣ್ಯೇ ನ ವಾ ಸ್ವಸ್ಯಾ ಗೇಹೆ ನ ಕಾರ್ಯೆ
ನ ದೇಹೆ ಮನೊ ವರ್ಥತೆಮತ್ ವನಾರ್ಘ್ಯೆ |೮|

ಗುರೋರಷ್ಟಕಂ ಯ ಪಠೇತ್ ಪುಣ್ಯ ದೇಹಿ
ಯತಿರ್ಭೂಪಥಿರ್ಬ್ರಹ್ಮಚಾರಿ ಚ ಗೇಹಿ
ಲಭೇತ್ ವಾಂಚಿತಂ ಪದಂ ಬ್ರಹ್ಮ ಸಂಗ್ನಾಂ
ಗುರೊರುಕ್ತ ವಾಕ್ಯೆ ಮನೊ ಯಸ್ಯ ಲಗ್ನಂ

Saturday, December 20, 2008

ದಶರಥ ಕೃತ ಶನೇಶ್ವರ ಸ್ತೋತ್ರಂ

’ಚಾಪಲಾಯ ಪ್ರಚೋದಿತಃ’ ಎಂಬಂತೆ ನನ್ನ ಹುಚ್ಚು ಮನಸ್ಸಿನ ಹತ್ತಾರು ಮುಖಗಳಲ್ಲಿ ಒಂದು ಮುಖ ಇತ್ತೀಚೆಗೆ ವೇದಾಂಗಗಳಲ್ಲಿ ಒಂದಾದ ಜೋತಿಷ್ಯದ ಕಡೆಗೆ ತಿರುಗಿದೆ. ಈ ವಿಶಾಲವಾದ ಭೂಮಂಡಲದಲ್ಲಿ ಇರುವ ವೈಪರೀತ್ಯಗಳನ್ನು ಕಂಡು - ಅರಿತು ನನ್ನ ಮನಸ್ಸಿಗೆ ಸರಿ ಹೊಂದುವ, ಸಮಂಜಸವೆನಿಸುವ, reconcile ಮಾಡಿಕೊಳ್ಳ ಬಹುದಾದಂತಹ worldview ರೂಪಿಸಿಕೊಳ್ಳಲು ನ್ಯಾಯ, ತರ್ಕ ಹೀಗೆ ಹತ್ತು ಹಲವು ಮಾರ್ಗೋಪಾಯಗಳು ಇದ್ದಿರ ಬಹುದು. ಸತ್ಯಾನ್ವೇಷಣೆಗೆ ಜೋತಿಷ್ಯವೂ ಒಂದು ಹೊಸ ದೃಶ್ಟಿಕೋಣವಾಗಲಿ ಎಂಬ ಇಂಗಿತದಿಂದ ಓಂ ಪ್ರಥಮವಾದ ಜೋತಿಷ್ಯಾಧ್ಯಯನ ಸಮಯದಲ್ಲಿ ನಾನು ಎದುರುಗೊಂಡ ಕೆಲ ಸ್ವಾರಸ್ಯ ಗಳನ್ನು ಹಂಚಿಕೊಳ್ಳುತಿದ್ದೇನೆ. ಓದುಗರಿಗೆ ಇದು ಕಾಗೆ - ಗೂಬೆ ಕಥೆ ಅನಿಸಿದರೆ ನನ್ನ ಕ್ಷಮೆ ಇರಲಿ. .

ಶನೇಶ್ವರನೆಂದರೆ ಸಾಮಾನ್ಯ ಜನರಿಗೇನು, ಅಸಮಾನ್ಯರಿಗೂ ಧಿಗಿಲೆಬ್ಬಿಸುವನು. ಶನೇಶ್ವರನ ಪಾಶದಿಂದ ಪಾರಾದವರು ಬೆರಳೆಣಿಕೆಯಷ್ಟೆ.ಶನೇಶ್ವರನು ೩೦ ವರುಶಗಳಿಗೊಮ್ಮೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವನಂತೆ. ಈ ಸಮಯದಲ್ಲಿ ರಾಜ ಮಹರಾಜರಿಗೆ ವಿಶೇಷ ಸಂಕಷ್ಟಗಳು ಮಾತ್ರವೇ ಅಲ್ಲ, ಗಂಡಾಂತರಗಳು ಎದುರಾಗುತ್ತವೆಯಂತೆ.ದಶರಥ ಮಹಾರಾಜರ ಆಳ್ವಿಕೆಯ ಸಮಯದಲ್ಲೂ ಸಹ ಛಾಯಪುತ್ರನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವವನಿದ್ದ. ಆಗ ಶ್ರೀರಾಮಪಿತೃವು ಶನೇಶ್ವರನನ್ನು ಉದ್ದೇಶಿಸಿ ಸ್ತೋತ್ರವನ್ನು ರಚಿಸಿ ವಿಪತ್ತಿನಿಂದ ಪಾರಾದರಂತೆ. ಆದ್ದರಿಂದ ಈ ದಶರಥ ಮಹಾರಾಜ ಕೃತ ಶನೇಶ್ವರ ಸ್ತೋತ್ರವು ಶನಿಬಾಧೆಯಲ್ಲಿ ಇರುವವರಿಗೆ ಸಂಕಷ್ಟವನ್ನು ಉಪಶಮನ ಮಾಡುವಲ್ಲಿ ಅಪ್ರತಿಮ ಸಾಧನ.


ಧ್ಯಾತ್ವಾ ಸರಸ್ವತೀಂ ದೇವೀಂ ಗಣನಾಥಂ ವಿನಾಯಕಂ|
ರಾಜಾ ದಶರಥಃ ಸ್ತೋತ್ರಂ ಸೌರೆರಿದಮಥಾಕರೋತ್ ||

ನಮೋ ನೀಲಮಯೂಖಾಯ ನೀಲೊತ್ಫಲನಿಭಾಯ ಚ|
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಷೃಜಟಾಯ ಚ||
ನಮೋ ವಿಶಾಲನೇತ್ರಾಯ ಶುಷ್ಕೋದರಾಯ ಭಯಾನಕ|
ನಮಃ ಪುರುಷಗಾತ್ರಾಯ ಸ್ಥೂಲರೋಮಾಯ ವೈ ನಮಃ||

ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತಪ್ತಾಯ ವೈ ನಮಃ|
ನಮಃ ಕಾಲಾಗ್ನಿರೂಪಾಯ ಕೃತಾಂತಕ ನಮೋಸ್ತುತೆ||
ನಮಸ್ತೆ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ|
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಲಿನೆ||

ನಮಸ್ತೆ ಸರ್ವಭಕ್ಷಾಯ ವಲೀಮುಖ ನಮೋಸ್ತುತೆ|
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೆ ಭಯದಾಯಕ||
ಅಧೋದೃಶ್ಟೆ ನಮಸ್ತುಭ್ಯಂ ವಪುಃಷ್ಯಾಮ ನಮೋಸ್ತುತೆ|
ನಮೋ ಮಂದಗತೆ ತುಭ್ಯಂ ನಿಸ್ತ್ರಿಂಶಾಯ ನಮೋ ನಮಃ||

ತಪಸಾ ದಗ್ದದೇಹಾಯ ನಿತ್ಯಂ ಯೋಗರತಾಯ ಚ|
ನಮಸ್ತೆ ಙ್ನಾನನೇತ್ರಾಯ ಕಶ್ಯಪಾತ್ಮಜಸೂನವೆ||
ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್ಕ್ಷಣಾತ್|
ದೇವಾಸುರಮನುಷ್ಯಾಸ್ಚ ಪಶುಪಕ್ಷಿಸರೀಸೃಪಾಃ||

ತ್ವಯಾ ವಿಲೋಕಿತಾಃ ಸೌರೆ ದೈನ್ಯಮಾಶು ವ್ರಜಂತಿ ಚ|
ಬ್ರಹ್ಮಾ ಶಕ್ರೋ ಯಮಶ್ಚೈವ ಋಷಯಃ ಸಪ್ತತಾರಕಾಃ||
ರಾಜ್ಯಭ್ರಷ್ಠಾಷ್ಚ ತೆ ಸರ್ವೆ ತವ ದೃಶ್ಟ್ಯಾ ವಿಲೋಕಿತಾಃ|
ದೇಶಾ ನಗರಗ್ರಾಮಾ ದ್ವೀಪಾಶ್ಚೈವಾದ್ರಯಸ್ತಥಾ||

ರೌದ್ರದೃಷ್ಟ್ಯಾ ತು ಯೆ ದೃಷ್ಟಾಃ ಕ್ಷಯಂ ಗಚ್ಚಂತಿ ತತ್ಕ್ಷಕ್ಷಣಂ|
ಪ್ರಸಾದಂ ಕುರು ಮೆ ಸೌರೇ ವರಾರ್ಥೇಹಂ ತವಾಶ್ರಿತಃ
ಸೌರೆ ಕ್ಷಮಸ್ವಾಪರಾಧಂ ಸರ್ವಭೂತಹಿತಾಯ ಚ|

ಕತ್ತಲೆ ಬೆಳಕು



ಮೇಲಿನ ಚಿತ್ರ ಬೆಳಕು ಕತ್ತಲೆಯ ಆಟವನ್ನು ಸೋಗಸಾಗಿ ಚಿತ್ರಿಸಿದೆ ಅಲ್ಲವೆ ಮಿತ್ರರೆ? ಆಳವಾಗಿ ಗಮನಿಸಿದರೆ ಈ ಚಿತ್ರವು ಇನ್ನೂ ಬಹಳಷ್ಟು ಹೇಳುತ್ತಿದೆ. ಕಾಲಸರ್ಪದ ಶೀರ್ಷೋತಳಾದಿಯಾಗಿ ರಾಹು-ಕೇತುಗಳನ್ನು ಚಿತ್ರಿಸಲಾಗಿದೆ. ರುಂಡ-ಮುಂಡಗಳಿಲ್ಲದ ಛಾಯಾಗ್ರಹಗಳಾದ ರಾಹು-ಕೇತುಗಳು ಜಾತಕನ ಭಾವಗಳ ಮೇಲೆ ಬೀರುಬಹುದಾದ ಪರಿಣಾಮವನ್ನು ಸಾರಿ ಹೇಳುತ್ತಿದೆ ಈ ಚಿತ್ರ. ನೈಸರ್ಗಿಕವಾಗಿ ಕೄರಗ್ರಹವಾದ ರಾಹುವು ಅನುಗ್ರಹವನ್ನೀಯ್ದರೆ ಆಗುವ ಅಧ್ಯಾತ್ಮಿಕ ಏಳಿಗೆ ಮತ್ತು ಕೇತುವಿನ ಧೂಮಸಮಾನ ಚೇಷ್ಟೆಯನ್ನು ವ್ಯಾಗ್ರದ ಮುಖಭಾಗದಲ್ಲಿನ ಬೆಳಕು ಕತ್ತಲೆಗಳು ಸೂಚಿಸುತ್ತವೆ.

ಸಮುದ್ರ ಮಥನದ ಸಮಯದಲ್ಲಿ ಅಸುರನಾದ ರಾಹುವು ಅಮೃತವನ್ನು ಸೇವಿಸಿದನಂತೆ.ಆದರೆ ಅಮೃತವು ಇನ್ನೂ ಕಂಠದಿಂದ ಕೆಳಗಿಳಿಯುವ ಮೊದಲೇ ಮೋಹಿನೀ ರೂಪತಳೆದ್ದಿದ್ದ ಮಹಾವಿಷ್ಣುವು ರಕ್ಕಸನ ಶಿರಶ್ಛೇದನ ಮಾಡುತ್ತಾನೆ. ಆದರೆ ಅಮೃತದ ಪ್ರಭಾವದಿಂದ ಅಸುರನ ಶಿರೋಭಾಗ ಅಮೃತತ್ತ್ವವನ್ನು ಪಡೆಯಿತು. ಜ್ಯೋತಿಷ್ಯದಲ್ಲಿ ರಾಹುವು ಯಾವ ಭಾವವನ್ನು ನಿಯಂತ್ರಿಸುತ್ತಾನೆಯೋ ಅಲ್ಲಿ ಹಾನಿ,ಖೇದ ಇತ್ಯಾದಿಗಳನ್ನು ಉಂಟುಮಾಡಬಲ್ಲವನಾಗಿರುತ್ತಾನೆ. ವಿಶಯಾಸಕ್ತಿ, ಲೋಭ ಪ್ರವೃತ್ತಿ, ಅನಿಷ್ಚಿತ ವಾತವಾರಣ ಇವೆಲ್ಲವನ್ನೂ ದಯ ಪಾಲಿಸುತ್ತಾನೆ.ರಾಹುವಿನ ಕುದೃಷ್ಟಿಗೆ ಸಮಾಧಾನವೆಂದರೆ ಶ್ರೀಆದಿಶಂಕರ ಕೃತ ಕಾಲಭೈರವ ಅಷ್ಟಕ.


ದೇವರಾಜ ಸೇವ್ಯಮಾನ ಪವನನ್ಘ್ರಿಪಂಕಜಂ
ವ್ಯಾಲಯಗ್ಯಸೂತ್ರಮಿಂದು ಶೇಖರಂ ಕೃಪಾಕರಂ
ನಾರದಾದಿಯೋಗಿ ವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೧||

ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂಪರಂ
ನೀಳಕಂಠ ಮೀಪ್ಸಿತಾರ್ಥದಾಯಕಂ ತ್ರಿಲೋಚನಂ
ಕಾಲಕಾಲಮಂಬುಜಾಕ್ಷಮಕ್ಷಶೂಲಮಕ್ಷರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೨||

ಶೂಲತನ್ಕಪಾಶದನ್ದಪಾನಿಮಾದಿಕಾರನಮ
ಶ್ಯಾಮಕಾಯಮಾದಿದೆವಮಕ್ಷರಂ ನಿರಾಮಯಂ
ಭೀಮವಿಕ್ರಮಂ ಪ್ರಭುಂ ವಿಚಿತ್ರತಾಂಡವಪ್ರಿಯಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೩||

ಭುಕ್ತಿಮುಕ್ತಿದಾಯಕಂ ಪ್ರಶಸ್ತಚಾರುವಿಗ್ರಹಂ
ಭಕ್ತವತ್ಸಲಂಸ್ಥಿರಂ ಸಮಸ್ತಲೋಕವಿಗ್ರಹಂ
ನಿಕ್ವಣನ್ಮನೊಗ್ಯಹೆಮಕಿನ್ಕಿನೀಲಸತ್ಕಠಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೪||

ಧರ್ಮಸೆತುಪಾಲಕಂ ಸ್ವಧರ್ಮಮಾರ್ಗನಾಶನಂ
ಕರ್ಮಪಾಶಮೊಚಕಂ ಸುಶರ್ಮಧಾಯಕಂ ವಿಭುಂ
ಸ್ವರ್ಣವರ್ಣಕೇಶಪಾಶಶೊಭಿತಾಂಗನಿರ್ಮಲಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೫||

ರತ್ನಪಾದುಕಾಪ್ರಭಾಭಿರಾಮಪಾದಯುಗ್ಮಕಂ
ನಿತ್ಯಮದ್ವಿತೀಯಮಿಷ್ಟದೈವತಂ ನಿರಂಜನಂ
ಮ್ರುತ್ಯುದರ್ಪನಾಶನಂ ಕರಾಳದಂಷ್ಟ್ರಭೂಶಣಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೬||

ಅಟ್ಟಹಾಸಭಿನ್ನಪದ್ಮಜಾಂಡಕೊಶಸಂತತಿಂ
ದ್ರುಷ್ತಿಪಾತ್ತನಷ್ತಪಾಪಜಾಲಮುಗ್ರಶಾಸನಮ್
ಅಷ್ಟಸಿದ್ಧಿದಾಯಕಂ ಕಪಾಳಮಾಲಿಕಾಧರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೭||

ಭೂತಸಂಘನಾಯಕಂ ವಿಶಾಳಕೀರ್ತಿದಾಯಕಂ
ಕಾಶಿವಾಸಲೋಕಪುಣ್ಯಪಾಪಶೋಧಕಂ ವಿಭುಂ
ನೀತಿಮಾರ್ಗಕೊವಿದಂ ಪುರಾತನಂ ಜಗತ್ಪತಿಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೆ ||೮||

|| ಫಲಶೃತಿ ||
ಕಾಲಭೈರವಾಷ್ಟಕಂ ಪಠಂತಿ ಏ ಮನೋಹರಂ
ಗ್ಯಾನಮುಕ್ತಿಸಾಧನಂ ವಿಚಿತ್ರಪುನ್ಯವರ್ಧನಂ
ಶೋಕಮೊಹದೈನ್ಯಲೋಭಕೊಪತಾಪನಾಶನಂ
ತೇ ಪ್ರಯಾಂತಿ ಕಾಲಭೈರವಾಮ್ಘ್ರಿಸಂನಿಧಿಂ ಧ್ರುವಂ

Wednesday, November 12, 2008

|| ಶ್ರೀ ಹನುಮಾನ ಚಾಲೀಸಾ ||


ದೋಹಾ

--
ಶ್ರೀ ಗುರುಚರಣ ಸರೋಜ ರಜ ನಿಜ ಮನು ಮುಕುರು ಸುಧಾರಿ|
ಬರನವು ರಘುಬರ ಬಿಮಲ ಜಸು ಜೋ ದಾಯಕು ಫಲ ಚಾರಿ ||
ಬುದ್ಧಿ ಹೀನ ತನು ಜಾನಿಕೆ ಸುಮಿರೌ ಪವನಕುಮಾರ|
ಬಲ ಬುದ್ಧಿ ಬಿದ್ಯಾ ದೇಹು ಮೋಹಿ ಹರಹು ಕಲೇಸ ಬಿಕಾರ ||

ಚೌಪಾಯಿ

--
ಜಯ ಹನುಮಾನ ಙ್ನಾನಗುನ ಸಾಗರ|
ಜಯ ಕಪೀಸ ತಿಹು ಲೋಕ ಉಜಾಗರ||೧||
ರಾಮ ದೂತ ಅತುಲಿತ ಬಲಧಾಮ|
ಅಂಜನಿಪುತ್ರ ಪವನಸುತ ನಾಮಾ||೨||
ಮಹಾಬೀರ ಬಿಕ್ರಮ ಬಜರಂಗೀ|
ಕುಮತಿ ನಿವಾರ ಸುಮತಿಕೆ ಸಂಗೀ||೩||
ಕಂಚನ ಬರನ ಬಿರಾಜ ಸುಬೆಸಾ|
ಕಾನನ ಕುಂಡಲ ಕುಂಚಿತ ಕೇಸಾ||೪||
ಹಾತ ಬಜ್ರ ಔರ ಧ್ವಜಾ ಬಿರಾಜೈ|
ಕಾಂಧೆ ಮೂಂಜ ಜನೇಊ ಸಾಜೈ||೫||
ಸಂಕರ ಸುವನ ಕೇಸರೀ ನಂದನ|
ತೇಜ ಪ್ರತಾಪ ಮಹಾ ಜಗಬಂದನ||೬||
ಬಿದ್ಯಾವಾನ ಗುನೀ ಅತಿ ಚಾತುರ|
ರಾಮಕಾಜ ಕರಿಬೇಕೋ ಆತುರ||೭||
ಪ್ರಭು ಚರಿತ್ರ ಸುನಿಬೇಕೋ ರಸಿಯಾ|
ರಾಮಲಖನ ಸೀತಾ ಮನ ಬಸಿಯಾ||೮||
ಸೂಕ್ಷ್ಮರೂಪ ಧರಿ ಸಿಯಹಿಂ ದಿಖಾವಾ|
ಬಿಕಟ ರೂಪ ಧರಿ ಲಂಕ ಜರಾವಾ||೯||
ಭೀಮ ರೂಪಧರಿ ಅಸುರ ಸಂಹಾರೆ|
ರಾಮಚಂದ್ರ ಕೆ ಕಾಜ ಸವಾರೆ||೧೦||
ಲಾಯ ಸಜೀವನ ಲಖನ ಜಿಯಾಯೆ|
ಶ್ರೀ ರಘುಬೀರ ಹರಷಿ ಉರ ಲಾಯೆ||೧೧||
ರಘುಪತಿ ಕೀನ್ಹೀ ಬಹುತ ಬಾಢಾಈ|
ತುಮ ಮಮ ಪ್ರಿಯ ಭರತಹಿ ಸಮ ಭಾಯಿ||೧೨||
ಸಹಸ ಬದನ ತುಮ್ಹರೋ ಜಸ ಗಾವೈ|
ಅಸ ಕಹಿ ಶ್ರೀಪತಿ ಕಂಠ ಲಗಾವಯ್||೧೩||
ಸನಕಾದಿಕ ಬ್ರಹ್ಮಾದಿ ಮುನೀಸಾ|
ನಾರದ ಸಾರದ ಸಹಿತ ಅಹೀಸಾ||೧೪||
ಜಮ ಕುಬೇರ ದಿಗಪಾಲ ಜಹಾಂ ತೆ|
ಕಬಿ ಕೋಬಿದ ಕಹಿ ಸಕೆ ಕಹಾ ತೆ||೧೫||
ತುಮಉಪಕಾರ ಸುಗ್ರೀವಹಿಂ ಕೀನ್ಹಾ|
ರಾಮ ಮಿಲಾಯ ರಾಜ ಪದ ದೀನ್ಹಾ||೧೬||
ತುಮ್ಹರೋ ಮಂತ್ರ ಬಿಭೀಶನ ಮಾನಾ|
ಲಂಕೇಸ್ವರ ಭಎ ಸಬ ಜಗ ಜಾನಾ||೧೭||
ಜುಗ ಸಹಸ್ರ ಜೋಜನ ಪರ ಭಾನೂ|
ಲೀಲ್ಯೋ ತಾಹಿ ಮಧುರ ಫಲ ಜಾನೂ||೧೮||
ಪ್ರಭು ಮುದ್ರಿಕಾ ಮೆಲಿ ಮುಖ ಮಾಹೀಂ|
ಜಲಧಿ ಲಾಂಘಿ ಗಯೆ ಅಚರಜ ನಾಹೀಂ||೧೯||
ದುರ್ಗಮ ಕಾಜ ಜಗತ ಕೆ ಜೆತೆ|
ಸುಗಮ ಅನುಗ್ರಹ ತುಮ್ಹಾರೆ ತೇತೆ||೨೦||
ರಾಮ ದುವಾರೆ ತುಮ ರಖವಾರೆ|
ಹೋತ ನ ಅಙ್ನಾ ಬಿನು ಪೈಸಾರೆ||೨೧||
ಸಬಸುಖ ಲಹೈ ತುಮ್ಹಾರೀ ಸರನಾ|
ತುಮ ರಚ್ಛಕ ಕಾಹೂಂ ಕೋ ಡರನ||೨೨||
ಆಪನ ತೇಜ ಸಮ್ಹಾರೋ ಆಪೈ|
ತೀನೊಂ ಲೋಕ ಹಾಂಕ ತೆಂ ಕಾಪೈಂ||೨೩||
ಭೂತ ಪಿಸಾಚ ನಿಕಟ ನಹಿಂ ಆವೈ|
ಮಹಾಬೀರ ಜಬ ನಾಮ ಸುನಾವೈ||೨೪||
ನಾಸೈ ರೋಗ ಹರೈ ಸಬ ಪೀರಾ|
ಜಪತ ನಿರಂತರ ಹನುಮತ ಬೀರಾ||೨೫||
ಸಂಕಟ ತೆಂ ಹನುಮಾನ ಛುಡಾವೈ|
ಮನ ಕ್ರಮ ಬಚನ ಧ್ಯಾನ ಜೊ ಲಾವೈ||೨೬||
ಸಬಪರ ರಾಮ ತಪಸ್ವೀ ರಾಜ|
ತಿನಕೆ ಕಾಜ ಸಕಲ ತುಮ ಸಾಜಾ||೨೭||
ಔರ ಮುನೋರಥ ಜೋ ಕೋಯಿ ಲಾವೈ|
ಸೋಈ ಅಮಿತ ಜೀವನ ಫಲ ಪಾವೈ||೨೮||
ಚಾರೊ ಜುಗ ಪರತಾಪ ತುಮ್ಹಾರ|
ಹೈ ಪರಸಿದ್ಧ ಜಗತ ಉಜಿಯಾರಾ||೨೯||
ಸಾಧು ಸಂತಕೆ ತುಮ ರಖವಾರೆ|
ಅಸುರ ನಿಕಂದನ ರಾಮ ದುಲಾರೆ||೩೦||
ಅಷ್ಟ ಸಿದ್ಧಿ ನೌ ನಿಧಿಕೆ ದಾತ|
ಅಸ ಬರ ದೀನ ಜಾನಕೀ ಮಾತಾ||೩೧||
ರಾಮ ರಸಾಯನ ತುಮ್ಹರೆ ಪಾಸಾ|
ಸದಾ ರಹೊ ರಘುಪತಿ ಕೆ ದಾಸಾ||೩೨||
ತುಮ್ಹರೆ ಭಜನ ರಾಮ ಕೊ ಪಾವೈ|
ಜನಮ ಜನಮ ಕೆ ದುಖ ಬಿಸರಾವೈ||೩೩||
ಅಂತಕಾಲ ರಘುಬರ ಪುರ ಜಾಯಿ|
ಜಹಾ ಜನಮ ಹರಿಭಕ್ತ ಕಹಾಈ||೩೪||
ಔರ ದೇವತಾ ಚಿತ್ತ ನ ಧರಈ|
ಹನುಮತ ಸೆಈ ಸರ್ಬ ಸುಖ ಕರಈ||೩೫||
ಸಂಕಟ ಕಟೈ ಮಿಟೈ ಸಬ ಪೀರಾ|
ಜೋ ಸುಮಿರೈ ಹನುಮತ ಬಲಬೀರ||೩೬||
ಜೈ ಜೈ ಜೈ ಹನುಮಾನ ಗೋಸಾಯೀ|
ಕೃಪಾ ಕರಹು ಗುರು ದೇವ ಕೀ ನಾಈಂ||೩೭||
ಜೋ ಸತ ಬಾರ ಪಾಠ ಕರ ಕೋಯಿ|
ಛೂಟಹಿ ಬಂದಿ ಮಹಾ ಸುಖ ಹೋಈ||೩೮||
ಜೋ ಯಹ ಪಡೆ ಹನುಮಾನ ಚಾಲೀಸಾ|
ಹೋಯ ಸಿದ್ಧಿ ಸಾಖೀ ಗೌರೀಸಾ||೩೯||
ತುಲಸೀದಾಸ ಸದಾ ಹರಿ ಚೆರಾ|
ಕೀಜೈ ನಾಥ ಹೃದಯ ಮಹ ಡೆರಾ||೪೦||

ದೋಹಾ

--
ಪವನತನಯ ಸಂಕಟ ಹರನ ಮಂಗಲ ಮೂರತಿ ರೂಪ|
ರಾಮ ಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ ||

****

ದೂರ್ವಾಸ ಸ್ಥಾಪಿತಂ ದೇವಂ ಜನಮೇಜಯ ಸುಪೂಜಿತಂ |
ಭಕ್ತಾಭೀಷ್ಟಪ್ರದಂ ದೇವಂ ಬಾಲ ಹನುಮ ನಮೋಸ್ತುತೇ ||

****

Thursday, October 30, 2008

ಒಂದು ಹಬ್ಬದ ಸುತ್ತ



ಅಕ್ಟೋಬರ್ ತಿಂಗಳ ಕಡೆಯ ದಿನದಂದು ಹ್ಯಾಲೋವೀನ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಆಚರಿಸಿತ್ತಾರೆ. ಕೆಲ್ಟಿಕ್ ಜನಾಂಗದ ಸಂಹೇನ್ ಎಂಬ ಸುಗ್ಗಿಯ ಪರ್ವದಿಂದ ರೂಪುಗೊಂಡ ಹ್ಯಾಲೋವೀನ್,ಗ್ರಾಮ್ಯರಿಂದ ಮೊದಲು ಗೊಂಡು ನವನಾಗರೀಕರಿಗೂ ಹರಡಿದೆ. ಶೀತವಲಯದ ದೇಶಗಳಲ್ಲಿ ಚಳಿಗಾಲ ಪ್ರಾರಂಭವಾಗುವ ಮುನ್ನ ಕೃಷಿಕರು ಕೋಯ್ಲು ಮುಗಿಸಿ ಆಚರಿಸುವ ಧಾರ್ಮಿಕ ಪರ್ವವಿದಾಗಿತ್ತು. ಉತ್ತರ ಐರೋಪ್ಯ ಪ್ರಾಂತ್ಯಗಳಲ್ಲಿ ಇದನ್ನು ಹೊಸ ವರ್ಶವಾಗಿಯೂ ಆಚರಿಸುತ್ತಿದ್ದರು.ಗೇಲಿಕ್ ಜನಾಂಗದವರು ಈ ಪರ್ವದ ಸಮಯದಲ್ಲಿ ಪರ ಮತ್ತು ಅಪರ ಪ್ರಪಂಚದ ನಡುವಿನ ಅಂತರ ಮುರಿದುಬಿದ್ದು, ಭೂತ ಪ್ರೇತಗಳು ಧರೆಗೆ ಅವತರಿಸುತ್ತವೆ ಏನ್ನುವ ಪ್ರತೀತಿಯನ್ನು ಹೊಂದಿದ್ದರು.ಆದರಿಂದಲೆ ಉರುವಲ ಸಾಮಗ್ರಿಗಳನ್ನು ಸಂಗ್ರಹಿಸಿ ದಹಿಸುವುದು (bonfires), ಈ ಅತಿಮಾನುಷರನ್ನು ಪ್ರೇತಗಳನ್ನು ಸಂಹರಿಸಿ/ಶಾಂತಿಗೊಳಿಸುವ ಪ್ರತೀಕಗಳು ಈ ಪರ್ವದ ಆಚರಣಾ ವಿಧಾನಗಳಲ್ಲಿ ಒಳಹೊಕ್ಕವು. ಹ್ಯಾಲೋವೀನ್ ಸಂದರ್ಭದಲ್ಲಿ ಧಿಗಿಲೆಬ್ಬಿಸುವ ಮುಖವಾಡ ವಸ್ತ್ರ ವೇಶಭೂಷಣಗಳನ್ನು ಧರಿಸುವುದು ವಾಡಿಕೆಯಾಗಿದೆ.ಈ ದಿನ ಕುಂಬಳಕಾಯಿಯಿ ಒಳ ತಿರುಳನ್ನು ತೆರೆದು,ಒಂದು ಮಡಿಕೆಯೆ ಆಕೃತಿಯಲ್ಲಿ ಕಡಿದು,ಮುಖವಾಡ ಮಾಡಿ,ಮುಖವಾಡದ ಒಳಗೆ ಒಂದು ಮೋಂಭತ್ತಿಯನ್ನು ಹತ್ತಿಸುವುದನ್ನು ಕಾಣಬಹುದು.ಈ ಮುಖವಾಡಕ್ಕೆ ಜ್ಯಾಕ್-ಓ-ಲಾಂಟರ್ನ್ (Jack-O-Lantern)ಎಂದು ಹೆಸರು. ಈಡಿ ಆಚರಣೆಗೆ ಭಯದ ವಾತವರಣದ ಲೇಪವಿದ್ದರೂ,ಕೆಲ ಅಂಶಗಳನ್ನು ಗಮನಿಸಿದರೆ, ಈ ಹ್ಯಾಲೋವೀನ್ ಅನೇಕ ಭಾರತೀಯ ಪರ್ವಗಳ ಒಂದೊಂದು ಅಂಶಗಳನ್ನು ಒಳಗೊಂಡಿದೆ ಅನ್ನಿಸುತ್ತದೆ.

ಸುಗ್ಗಿಯ ಸಂದರ್ಭದಲ್ಲಿ ಆಚರಿಸುವ ಇದನ್ನು ಸಂಕ್ರಾಂತಿ ಎನ್ನೋಣವೇ. ಇಲ್ಲ, ದುಷ್ಟ ದಹನ ಮಾಡುವುದರಿಂದ ಇದನ್ನು ಹೋಳಿಕಾ ದಹನಕ್ಕೆ ಹೋಲಿಸಿ, ಹೋಳಿ ಎನ್ನೋಣವೇ? ಮನೆಗಳ ಮುಂದೆ ಕ್ಯಾಂಡಲ್ಲು ಗಳು ಕಂಗೊಳಿಸುವುದರಿಂದ ದೀಪಾವಳಿಗೆ ಹತ್ತಿರವಾದರೆ, ಚಿಣ್ಣರು ವಿಧ ವಿಧ ವಸ್ತ್ರಗಳನ್ನೊಳಗೊಂಡ ಫಾನ್ಸಿ ಡ್ರೆಸ್ ಧರಿಸುವುದರಿಂದ, ಕೃಷ್ಣಾಷ್ಟಮಿಯಂದು ರಾಧೆ-ಕೃಷ್ಣೆಯರ ಅಲಂಕಾರ ತೊಟ್ಟ ಮಕ್ಕಳಿಗೆ ಹೋಲಿಸ ಬಹುದು. ಯುಗಾದಿಯಂದು ನಾವು ಮಾವು-ಬೇವು ತರುವ ಹಾಗೆ, ಫಾಲ್ Fall( ಶಿಶಿರ?) ಋತುವು ಮುಗಿದ ಈ ಸಮಯದಲ್ಲಿ ಓಕ್ ಎಲೆಗಳನ್ನು ( Oak Leaves) ತಂದು ಸಿಂಗರಿಸುವುದರಿಂದ ಇದನ್ನು ಯುಗಾದಿ ಎನ್ನೋಣವೆ? ಐರೋಪ್ಯ ಪ್ರಾಂತ್ಯ್ದಲ್ಲಿ ನವವರ್ಶವಾಗಿ ಆಚರಿಸುತ್ತಿದ್ದರಿಂದ ಇದನ್ನು ಯೂಗಾದಿ ಎಂದರೆ ತಪ್ಪೇನಿಲ್ಲ ಬಿಡಿ.ಹಬ್ಬಗಳಿಗೂ ಋತುಗಳಿಗೂ ಇರುವ ನಂಟನ್ನು ಗಮನಿಸಿ. 'ವಸಂತ ಬಂದ ಋತುಗಳ ರಾಜ' ಎಂದು, ವಸಂತನ ಆಗಮವನ್ನು ಯುಗಾದಿಯ ಸಮಯ ಮಾವು ತೋರನ ದಿಂದ ಸ್ವಾಗತಿಸಿದರೆ , ಇತ್ತ ಚಳಿಗಾಲದಲ್ಲಿ ವೃಕ್ಷ ತರುಗಳು ಬಟ್ಟೆ ಕಳಚಿ ಹೊರಬಿದ್ದ ಓಕ್ ಎಲೆಗಲಿಂದಲೇ ಅಲಂಕಾರ.

ಅವಿವಾಹಿತ ಕನ್ಯೆಯರು ಹ್ಯಾಲೋವೀನ ರಾತ್ರಿಯಂದು ಕತ್ತಲೆ ಕೊಣೆಯಲ್ಲಿ ಕುಳಿತು ಕನ್ನಡಿಯಲ್ಲಿ ದಿಟ್ಟಿಸಿ ನೋಡಿದರೆ ತಮ್ಮ ಭಾವಿಪತಿಯ ದರ್ಶನ ವಾಗುವುದು ಎಂಬ ನೊಂಬಿಕೆ ಇದ್ದಿತು. ಇದು ಭೀಮನಮಾವಾಸ್ಯೆಯ ನಮ್ಮ ಪತಿಸಂಜೀವನಿ ವ್ರತದಂತೆ ತೋರುವುದಲ್ಲವೆ?

ಅಂತು ಪ್ರಾಚ್ಯ ಪಾಶ್ಚಿಮಾತ್ಯಗಳೆನ್ನದೆ ಹಬ್ಬಗಳ ಆಚರಣೆಗಳಲ್ಲಿ ವೈವಿಧ್ಯತೆ - ಸಾಮ್ಯತೆಗಳು ಕಾಣಬಹುದು.



ಹಾಲೊವೀನ್ ಸಂದರ್ಭದಲ್ಲಿ 'ರೂಪ'ದರ್ಶಿ ಪುಟ್ಟಕುಂಬಳಕಾಯಿ ಕು ||'ಸಾಹಿತ್ಯ' ವೇಷಧರಿಸಿರುವ ಬಗೆ

Wednesday, September 24, 2008

ಪ್ರಸ್ತುತ ಪ್ರಪಂಚದಲ್ಲಿ ಪ್ರತಾಪಭಾನು....

ವಾಮದೇವನು ಪಾರ್ವತೀದೇವಿಯನ್ನುದ್ದೇಷಿಸಿ ಹೇಳಿದಂತ ಪ್ರಾಚಿನಗಾಥೆಯೊಂದನ್ನು ಕೇಳಿ.ಪೂರ್ವಕಾಲದಲ್ಲಿ ಧರ್ಮಾತ್ಮನೂ, ಬಲಶಾಲಿಯೂ, ಸುಶೀಲನೂ ಆದ ಸತ್ಯಕೇತನೆಂಬ ರಾಜನಿದ್ದನು. ಆತನಿಗೆ ಪ್ರತಾಪಭಾನು ಮತ್ತು ಅರಿಮರ್ಧನರೆಂಬ ಸುಪುತ್ರರಿದ್ದರು. ಸದ್ಗುಣ ಸಂಪನ್ನರೂ ಧರ್ಮನಿಷ್ಠರೂ ಆದ ಅವರಿಬ್ಬರಲ್ಲಿ ಅಪೂರ್ವವಾದ ಐಕ್ಯಮತವಿದ್ದಿತು. ಅವರಲ್ಲಿ ಎಂದೆಂದಿಗೂ ಕಲಹಾದಿ ಅಹಿತಕರ ಕಲಾಪಗಳು ನಡೆಯುತ್ತಿರಲಿಲ್ಲ. ಇಂತಿರಲು ಸತ್ಯಕೇತನು ಪ್ರತಾಪಭಾನುವಿಗೆ ರಾಜ್ಯವನ್ನೆರೆದು, ವಾನಪ್ರಸ್ತಾಶ್ರಮವನ್ನು ಸ್ವೀಕರಿಸಿ ಘೋರಾರಣ್ಯಗಳನ್ನು ಸೇರಿದನು. ಇತ್ತ ಪ್ರತಾಪಭಾನುವಿಗಾದರೋ ರಾಜನೀತಿಯಲ್ಲಿ ಶುಕ್ರಾಚಾರ್ಯರ ಸರಿ ತೂಗಬಲ್ಲ ಧರ್ಮರುಚಿಯೆಂಬ ಅಮಾತ್ಯನ ಶ್ರೀರಕ್ಷೆಯಿದ್ದಿತು. ಚದುರಂಗಬಲ ಸೇನೆ ಮತ್ತು ಎಡಬಲಗಳಂತೆ, ಅರಿಮರ್ಧನ ಮತ್ತು ಧರ್ಮರುಚಿಯ ಸಹಾಯದಿಂದ ಪ್ರತಾಪಭಾನುವು ಸಪ್ತದ್ವೀಪಗಳನ್ನೂ, ನಭೂತೋ ನಭವಿಷ್ಯತಿಯೆಂಬ ಹಾಗೆ ರಾಜ್ಯಭಾರ ನಿರ್ವಹಿಸಿಕೊಂಡು ಹೋಗುತ್ತಿದ್ದನು. ಪ್ರಜೆಗಳೆಲ್ಲರು ಸತ್ಯಸಂಧರಾಗಿ ಸಂತೃಪ್ತಿಯಿಂದ ಬಾಳ್ವೆ ನಡೆಸಿಕೊಂಡು ಹೋಗುತ್ತಿದ್ದರು.

ಹೀಗಿರಲು ಒಂದಾನೊಂದು ದಿನ ಪ್ರತಾಪಭಾನುವು ಮೃಗಯಾ ನಿಮಿತ್ತ ಅರಣ್ಯಕ್ಕೆ ತೆರೆಳಿದನು. ಅಲ್ಲಿ ಶಾಸ್ತ್ರರೀತ್ಯ ವಧ್ಯಾರ್ಹ ಪ್ರಾಣಿಗಳನ್ನು ಬೇಟೆಯಾಡಿ ಬರುವಷ್ಟರಲ್ಲಿ ಅವನ ಕಣ್ಣಿಗೆ ಒಂದು ಕಾಡುಹಂದಿ ಕಾಣಿಸಿತು. ಧನುರ್ಬಾಣಗಳಿಂದ ಅದನ್ನು ಬೇಟೆಯಾಡಲು ಮುಂದಾದನು. ಅಪ್ರತಿಮ ಯೋಧನಾದ ಅವನಿಗೆ ಯಃಕಶ್ಚಿತ್ ಒಂದು ಕಾಡುಹಂದಿ ವಶವಾಗದೆ ಉಳಿಯಿತು. 'ಎಲಾ, ಕ್ಷುಲ್ಲಕ ಪ್ರಾಣಿಯೇ' ಎಂದು ಪ್ರತಾಪಭಾನುವು ಅದರ ಬೆನ್ನಟ್ಟಿ ಗೊಂಡಾರಣ್ಯದ ಒಳಹೊಕ್ಕನು. ಆ ಜಂತುವಾದರೂ ಬಿಡದೆ ನಿಗೂಢವೂ ಗಾಡಾಂಧಕಾರವೂ ಆದ ಗುಹಾಂತರದಲ್ಲಿ ಹೋಗಿ ಅವಿತು ಕುಳಿತು ಕೊಂಡಿತು. ರಾಜಭಟ್ಟರಿಂದ ದೂರನಾಗಿದ್ದ ರಾಜನಾದರೋ ದಣಿವು ಬಾಯಾರಿಕೆಗಳಿಂದ ಬಳಲಿ ಅಲ್ಲಿಯೇ ಕಾನನದ ಪುಷ್ಪತರುಗಳ ಮಧ್ಯೆ ಪ್ರಜ್ಞಾಹೀನನಾಗಿ ಕುಸಿದು ಬಿದ್ದ.

ಅದೃಷ್ಟವಶಾತ್ ಅಲ್ಲಿಯೇ ಮಾರ್ಗಮಧ್ಯದಲ್ಲಿ ಓರ್ವ ಕುಹನ ಸಂನ್ಯಾಸಿಯ ಆಶ್ರಮವಿದ್ದಿತು. ಈ ಕಪಟ ಸಂನ್ಯಾಸಿಯಾದರೋ ಪೂರ್ವಾಶ್ರಮದಲ್ಲಿ ಪ್ರತಾಪಭಾನುವಿನಿಂದಲೆ ಪರಾಜಿತನಾದ ಓರ್ವ ರಾಜನಾಗಿರುತ್ತಾನೆ. ಪ್ರತಾಪಭಾನುವಿಗೆ ಕುಹನ ಸಂನ್ಯಾಸಿಯ ಪರಿಚಯ ಸಿಗದಿದ್ದರೂ, ಅಂತಃ ಶತೃತ್ವದಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಆ ದುಷ್ಟನಿಗೆ ಪ್ರತಾಪಭಾನುವಿನ ಪೂರ್ಣಪರಿಚಯವಿದ್ದಿತು. ಅತಿವಿನಯದಿಂದ (ಧೂರ್ತಲಕ್ಷಣವೇ ಸರಿ) ಮಧುಸಮಾನ ಹಿತವಚನಗಳನ್ನು ನುಡಿದು, ವೇದಘೋಷಗಳನ್ನು ಮೊಳಗಿಸಿ ತನ್ನ ಬಾಹ್ಯಚರ್ಯೆಯಿಂದ ನಿಷ್ಕಪಟಿಯಾದ ಪ್ರತಾಪಭಾನುವನ್ನು ಸಂಪೂರ್ಣ ಮರುಳು ಮಾಡುತ್ತಾನೆ. ಈ ಕುಹನ ಸಂನ್ಯಾಸಿಯೇ ಅಪ್ರತಿಮ ಪಂಡಿತನು, ಮಹಾಮಹಿಮನು ಎಂದು ಪ್ರತಾಪಭಾನುವು ಭಾವಿಸುತ್ತಾನೆ. ಇಂತಿರಲು ಕಪಟ ಸಂನ್ಯಾಸಿಯು ತಾನು ಏಕತನುವೆಂದು ನುಡಿಯುತ್ತಾನೆ. ಪ್ರತಾಪಭಾನುವು 'ಏಕತನು ಎಂದರೇನು?' ಎಂದು ಕೇಳಲಾಗಿ, ಸಂನ್ಯಾಸಿಯು ಇಂತೆಂದು ಉತ್ತರಿಸಿದನು -- "ನಾನು ಸೃಷ್ಟಿಕಾಲದಿಂದಲೂ ಇದೇ ಶರೀರದಲ್ಲಿ ಇದ್ದೇನೆ. ಶರೀರ ತ್ಯ್ಗಾಗವನ್ನು ಮಾಡಿಯೇ ಇಲ್ಲ. ಆದರಿಂದ ನಾನು ಏಕತನುವೆಂದು ಗುರುತಿಸಲ್ಪಡುತ್ತೇನೆ" -- ಎಂಬುದಾಗಿ ವಿವರಿಸುತ್ತಾ ತಪಃ ಶಕ್ತಿಯಿಂದ ಏನನ್ನು ಬೇಕಾದರು ಸಾಧಿಸಬಹುದು ಎಂದು ಹೇಳುತ್ತಾನೆ. ಧರ್ಮದುರಂಧರನೂ ಅಪ್ರತಿಮ ರಾಜನೂ ಆದ ಪ್ರತಾಪಭಾನುವಿನ ಮನಸ್ಸಿನಲ್ಲಿ ಈ ಮಾತನ್ನು ಕೇಳುತ್ತಿದ್ದ ಹಾಗೆ ಪ್ರಲೋಭನೆ ಉಂಟಾಗುತ್ತದೆ. "ಗುರುಗಳೇ ತಪಃ ಶಕ್ತಿಯಿಂದ ನನ್ನ ಶರೀರವು ಜರಾಮರಣ ರಹಿತವಾಗುವಂತೆ ಅನುಗ್ರಹಿಸಿ. ಶತಕಲ್ಪ ಪರ್ಯಂತ ಭೂಮಂಡಲದ ಏಕಚಕ್ರಾಧಿಪತ್ಯ ದೊರೆಯುವಂತೆ ಆಶೀರ್ವದಿಸಿ" -- ಎಂಬ ಪ್ರಲೋಭನೆಯ ಮಾತನ್ನು ಆಡುತ್ತಾನೆ. ಭೂಪಾಲನನ್ನು ದಾರಿತಪ್ಪಿಸುವಲ್ಲಿ ಗೆದ್ದೆನೆಂದು ಮನದಲ್ಲೇ ತುಸು ನಕ್ಕು, ಸಂನ್ಯಾಸಿಯು -- 'ತಥಾಸ್ತು!' ಎಂದು ಅನುಗ್ರಹಿಸುತ್ತಲೇ ಒಂದು ಚೇತಾವನಿಯನ್ನು ನೀಡುತ್ತಾನೆ. ನಿನ್ನ ಯಮರಾಜನೂ ಸಹ ಜರಾಮರಣಗಳಿಂದ ಪೀಡಿಸಲಾರನು, ಆದರೆ ವಿಪ್ರೋತ್ತಮರ ಶಾಪ ತಗುಲದಂತೆ ನೋಡಿಕೋ ಎಂದು ಎಚ್ಚರಿಸುತ್ತಾನೆ. ವಿಪ್ರರ ತಪಃಶಕ್ತಿಗೆ ಅತೀವ ಬಲವಿರುತ್ತದೆ. ಆದ್ದರಿಂದ ವಿಪ್ರರಿಂದ ಶಾಪಗ್ರಸ್ತನಾಗದಿದ್ದರೆ ಶತಕಲ್ಪಗಳವರೆಗೂ ನೀನು ಭೂಮಂಡಲದ ಏಕಚಕ್ರಾಧಿಪತ್ಯ ಹೊಂದುತ್ತೀಯೆ ಎಂದು ಹೇಳಿದನು. ಇದಕ್ಕೆ ಮಹಾರಾಜನು -- "ಮುನಿವರ್ಯ, ಸದಾಕಾಲ ವಿಪ್ರೋತ್ತಮರ ಮನ ಒಲಿಸಿಕೊಳ್ಳಲು ಸೂಕ್ತ ಮಾರ್ಗೋಪಾಯವನ್ನು ನೀವೇ ಸೂಚಿಸಿ" ಎಂದು ಅಂಗಲಾಚುತ್ತಾನೆ. ಅದಕ್ಕೆ ಆ ಸಂನ್ಯಾಸಿಯು ಶತಸಹಸ್ರ ಯೋಗ್ಯ ವಿಪ್ರರಿಗೆ ಒಂದು ಸಂವತ್ಸರ ಪರ್ಯಂತ ದಿನಾಲೂ ಅನ್ನದಾನ ಮಾಡಬೇಕೆಂದು ಸೂಚಿಸುತ್ತಾನೆ. ಎಂಥಾ ರಾಜಾಧಿರಾಜನಿಗೇ ಆಗಲಿ ಕಷ್ಟಸದೃಶವಾದ ಈ ವ್ರತವನ್ನು, ಪ್ರತಾಪಭಾನುವಿಗೆ ತನ್ನ ಮಾಯಶಕ್ತಿಯ ಸಹಕಾರದಿಂದ ಮಾಡಿಸುವುದಾಗಿ ಕಪಟಿಯು ಅಶ್ವಾಸನೆಯನ್ನು ನೀಡುತ್ತಾನೆ.

ನಾಡಿಗೆ ಹಿಂದಿರುಗಿದ ಮಹಾರಾಜನು ಸುತ್ತೋಲೆಗಳನ್ನೂ, ಡಂಗೂರಗಳನ್ನು ಸೂಕ್ತ ರೀತಿಯಲ್ಲಿ ಪ್ರಚಾರಗೈದು ಶತ ಸಹಸ್ರ ವಿಪ್ರೋತ್ತಮರನ್ನು ಒಂದೆಡೆ ಅನ್ನದಾನಕ್ಕಾಗಿ ಸೇರಿಸುತ್ತಾನೆ. ಕಾಡುಹಂದಿಯ ರೂಪ ತಾಳಿ ರಾಜನನ್ನು ಆ ದಿನ ದಾರಿತಪ್ಪಿಸಿದ ಕಪಟ ಸಂನ್ಯಾಸಿಯ ಮಿತ್ರನಾದ ಕಾಲಕೇಟ ರಾಕ್ಷಸನು ತನ್ನ ಮಾಯೆಯಿಂದ ನೆರೆದ ವಿಪ್ರೋತ್ತಮರಿಗೆಲ್ಲ ಮೃಷ್ಠಾನ್ನ ಭೋಜನ ತಯಾರು ಮಾಡುತ್ತಾನೆ. ಆದರೆ ದುಷ್ಟನಾದ ಅವನು ಕಪಟ ಸಂನ್ಯಾಸಿಯ ಒಡಗೂಡಿ ಭೋಜ್ಯಗಳಲ್ಲಿ ನರಮಾಂಸವನ್ನು ವಿಪ್ರರಿಗೆ ಉಣಬಡಿಸಿ ಘೋರಪಾಪವೆಸುಗುತ್ತಾರೆ. ದ್ವಿಜರು ಒಂದು ತುತ್ತು ತಿನ್ನುವಷ್ಟರಲ್ಲಿ ಆಕಾಶದಲ್ಲಿ ಒಂದು ಅಶರೀರವಾಣಿಯು ಖಾದ್ಯಗಳು ಅಪವಿತ್ರವಾಗಿರುವುದರ ಬಗ್ಗೆ ಘೋಷಿಸುತ್ತದೆ. ಕಪಟದಿಂದ ನರಮಾಂಸಭಕ್ಷಣೆ ಮಾಡಿಸಿದುದಕೆ ಕುಪಿತಗೊಂಡ ವಿಪ್ರೋತ್ತಮರು ಪ್ರತಾಪಭಾನುವನ್ನು ಬಹಳವಾಗಿ ಶಪಿಸುತ್ತಾರೆ. ಇನ್ನು ಒಂದು ಸಂವತ್ಸರದಲ್ಲಿ ನಿನ್ನ ಪರಿವಾರ ಸಮೇತ ಧ್ವಂಸವಾಗಿ ನಿನ್ನ ತರ್ಪಣಕ್ರಿಯೆಗೂ ಉತ್ತರಾಧಿಕಾರಿಗಳು ಇರದಂತೆ ಆಗಲಿ ಎಂದು ಘೋರವಾಗಿ ಶಪಿಸುತ್ತಾರೆ. ಆಕಾಶವಾಣಿಯು ಈ ವೃತ್ತಾಂತದಲ್ಲಿ ಮಹಾರಾಜನ ಕೈವಾಡವಿಲ್ಲವೆಂದು ಹೇಳಿದರೂ, ಒಮ್ಮೆ ಶಾಪಗ್ರಸ್ಥನಾದರೆಂದರೆ ಕಾಲವಿಧಿನಿಯಮದಂತೆ ಅನುಭವಿಸಿಯೇ ತೀರಬೇಕು ಎಂದು ಹೇಳಿ ವಿಪ್ರರೆಲ್ಲರು ಸಭೆಯನ್ನು ತ್ಯಜಿಸಿ ಹೊರನಡೆಯುತ್ತಾರೆ. ಅದೇ ಶಾಪದಂತೆ ಪ್ರಲೋಭನೆ ಮತ್ತು ದುರ್ವ್ಯಾಪ್ತಿಗೆ ಒಳಗಾದ ಪ್ರತಾಪಭಾನುವು ವರ್ಷಾಂತ್ಯದಲ್ಲಿ ಕಾಲಕೇಟ ರಾಕ್ಷಸ ಮತ್ತು ವೇಷ ಕಳಚಿದ ಕಪಟ ಸಂನ್ಯಾಸಿಯ ಉಭಯ ಸೈನ್ಯಗಳಿಂದ ಹತನಾಗುತ್ತಾನೆ. ಧರ್ಮನಿರತನೂ ಸದ್ಗುಣಸಂಪನ್ನನೂ ಆದರೂ ಮಹಾರಾಜನು ವ್ಯಾಪ್ತಿಗಿಂತ ಮೇಲೆ ಹೋಗಲು ಇಚ್ಚ್ಚಿಸಿದ. ಸಾಕಷ್ಟು ಪ್ರಭಾವಿಯಾಗಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದರೂ ಪ್ರಕೃತಿಸಹಜವಾಗಿಲ್ಲದಿದ್ದ ಸಂಪತ್ತು - ಸ್ಥಿತಿ - ಬೆಳವಣಿಗೆಯನ್ನು ಅಪೇಕ್ಷಿಸಿ ಅಸ್ತಂಗತನಾದ. ಕಾಲಂತರದಲ್ಲಿ ಇದೇ ಪ್ರತಾಪಭಾನುವು ತ್ರೇತಾಯುಗದಲ್ಲಿ ರಾವಣನಾಗಿ, ಅರಿಮರ್ಧನನು ಕುಂಭಕರ್ಣನಾಗಿ ಮತ್ತು ಮಂತ್ರಿ ಧರ್ಮರುಚಿಯು ವಿಭೀಷಣನಾಗಿ ಜನಿಸಿದರು ಎಂಬಲ್ಲಿಗೆ ಪಾರ್ವತಿ ಪರಮೇಶ್ವರರ ಸಂವಾದದಲ್ಲಿಿ ದುರ್ವ್ಯಾಪ್ತಿಯ ಕೆಡುಕುಗಳನ್ನು ಸಾರಿಹೇಳುವ ಪ್ರತಾಪಭಾನು-ಅರಿಮರ್ಧನರ ಕಥೆಯು ಸಮಾಪ್ತವಾಗಲಿಲ್ಲ.

ಆನಾದಿಕಾಲದಿಂದಲೂ ಇಂತಹ ಕಥೆಗಳು ನಡೆದಿವೆ, ಇಂದಿಗೂ ನಡೆಯುತ್ತಲೇ ಇವೆ. ಕೃತಯುಗದ ಪ್ರತಾಪಭಾನು-ಅರಿಮರ್ಧನರ ಕಥೆ ಹಾಗಿರಲಿ, ಪ್ರಸ್ತುತ ವಾರ್ತೆಗಳಲ್ಲಿ ಕೇಳಿಬರುತ್ತಿರುವ ಲೀಮನ್ ಭ್ರಾತೃಗಳ ಕಥೆ ಕೇಳಿ. ಪ್ರಕೃತಿ ಸಹಜವಲ್ಲದ ವಾರ್ಷಿಕ ಆದಾಯ-ಅಭಿವೃದ್ಧಿ ಪ್ರತಿವರ್ಷವೂ ಆಗಲೇಬೇಕು (year-on-year growth). ಅದು ಯಾವ ಪಣತೆತ್ತಾದರೂ ಸರಿ ಅಭಿವೃದ್ಧಿಯ ಮೆಟ್ಟಲು ಏರಲೇಬೇಕು ಎಂಬ ಧೋರಣೆ. ಇಡೀ ಉದ್ಯಮ ಐದು ಪ್ರತಿಶತ ಬೆಳೆದರೆ ನನ್ನ ಕಂಪನಿ ಇಪ್ಪತ್ತೈದರಷ್ಟು ಬೆಳೆಯ ಬೇಕೆಂಬ ದುರುತ್ಸಾಹ. ಎಲ್ಲರಿಗಿಂತ ನಾನು ಮುಂದು ಇರಬೇಕೆಂಬ ಹಂಬಲ ತಪ್ಪಲ್ಲ. ಅದೇ ಪ್ರಗತಿಗೆ ಪ್ರೇರಕ -- ಆದರೆ ಸಹಜವೆನಿಸದಷ್ಟು ಬೆಳವಣಿಗೆ ಕಾಣ ಬೇಕೆಂಬುದು ದುರ್ವ್ಯಾಪ್ತಿಯ ಪರಮಾವಧಿ. ಜಗತ್ತಿನ ಮೇಧಾವಿಗಳೆಲ್ಲ (ಇನ್ವೆಸ್ಟ್ಮೆಂಟ್ ಬ್ಯಾಂಕರ್ ಗಳು) ಒಂದೆಡೆ ಸೇರಿ ಬೆಳೆಸಿದ ಕಂಪನಿ. ಸೋಲು ಕಂಡಿಲ್ಲದ ಸರದಾರರು ಗೆಲ್ಲಲ್ಲು ಏನು ಬೇಕಾದರೂ ರಿಸ್ಕ್ (risk) ತೆಗೆದು ಕೊಳ್ಳಲು ಶಕ್ತರು. ಹೀಗೆ ನಾಗಲೋಟದ ಬೆಳವಣಿಗೆಗೆ ಉರುವಲು ನೀಡಲು ಅದೆಷ್ಟು ಅಸಹಜ ನಡೆಗಳನ್ನು ಬೇಕಾದರೂ ಹಾಕುವರು. ಇಂದಿನ ಲೀಮನ್ ಬ್ರದರ್ಸ್ ಮುಂತಾದ ಕಂಪನಿಗಳಾಗಲಿ, ಅಂದಿನ ಪ್ರತಾಪಭಾನುವಾಗಲಿ ಮೂಲತಃ ಒಳ್ಳೆಯವರೇ, ಶಕ್ತಿ ಶಾಲಿಗಳೇ, ಮೇಧಾವಿಗಳೇ -- ಆದರೆ ವ್ಯಾಪ್ತಿಯನ್ನು ಮೀರಿ ಅಪೇಕ್ಷಿಸಿದ್ದರಿಂದ ಅವನತಿ ಕಂಡವರು!

****

Related News Item:

The High Cost of Growth:

The collapse of these financial giants has been stunning in both its speed and severity.These fallen companies were overlevered, overconfident, and too slow to either realize or admit that they were in serious jeopardy. But these companies all shared one additional trait that foreshadowed their downfall. They pursued a strategy of growth at any cost -- and it ultimately cost them dearly.Year after year, these companies targeted double-digit growth, despite much slower growth in their core markets.What wasn't being asked strenuously enough was what risks the companies were taking to maintain this supranormal growth rate. This problem isn't unique to financial companies; they're just the most recent high-profile examples.Unless a company has a sustainable competitive advantage, growth rates that outpace the rest of its industry can be a signal of accounting shenanigans or aggressive business practices.

***