Thursday, December 25, 2008

ಶ್ರೀ ಗುರೋರಷ್ಟಕಂ



ಸನಾತನ ಧರ್ಮದಲ್ಲಿ ಗುರು ಪರಂಪರೆಗೆ ಇರುವ ಮಹತ್ವವು ಎಲ್ಲರಿಗೂ ತಿಳಿದಿರುವ ವಿಷಯವೆ. ಗುರುವಿನ ಗುಲಾಮನಾಗುವ ತನಕ ಮುಕುತಿ ಸಿಗದು ಎಂದು ದಾಸರು ಪಾಡಿದರೆ, ತ್ಯಾಗರಾಜರು ’ಗುರು ಲೇಕ ಏಟುವಂಟಿ?’ ಎಂದು ಹಾಡಿದ್ದಾರೆ. ಶ್ರೀ ಆದಿ ಶಂಕರಾಚಾರ್ಯರ ಕೃತ ಗುರು ಅಷ್ಟಕದಲ್ಲಿ ಪೂಜ್ಯರು ಗುರು ಪ್ರಸಾದ ಸಿದ್ಧಿಯಾಗದೆ -- ಯಾವ ಐಶ್ವರ್ಯ,ಅಂತಸ್ತು,ಬುದ್ಧಿ,ಕಳತ್ರ,ಪುತ್ರ ಪೌತ್ರಾದಿ ಲಬ್ಧಿಗಳಿದ್ದರೂ ಏನು ಪ್ರಯೋಜನ ಎಂದು ಮತ್ತೆ ಮತ್ತೆ ಪೃಚ್ಚಿಸಿ ಗುರುದೇವನ ಮಾಹಾತ್ಮ್ಯವನ್ನು ಸಾರಿ ಹೇಳಿದ್ದಾರೆ. ಇದೇ ಡಿಸೆಂಬರ್ ೯ ರಂದು ಗುರುಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದ್ದು, ತತ್ಸಂಬಂಧ ಈ ಗುರು ಅಷ್ಟಕದ ಪಠನೆಯಿಂದ ಗುರು ಕೃಪಾ ಕಟಾಕ್ಷ ದೊರೆಯುವುದು.

******
ಶರೀರಂ ಸುರೂಪಂ ತಥಾ ವ ಕಳತ್ರಂ
ಯಶಃ ಚಾರು ಚಿತ್ರಂ ಧನಂ ಮೇರು ತುಲ್ಯಂ
ಮನಃ ಚೆನ ಲಗ್ನಂ ಗುರೋರಂಘ್ರಿ ಪದ್ಮೆ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಂ |೧|

ಕಳತ್ರಂ ಧನಂ ಪುತ್ರ ಪೌತ್ರಾದಿ ಸರ್ವಂ
ಗೃಹಂ ಬಾಂಧವಂ ಸರ್ವಮೆತಾದಿ ಜಾತಂ |೨|

ಶಡಂಗಾನಿ ವೇದೊ ಮುಖೇಶಾಸ್ತ್ರ ವಿದ್ಯ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |೩|

ವಿದೇಶೇಶು ಮಾನ್ಯ ಸ್ವದೇಶೇಶು ಧನ್ಯ
ಸದಾಚಾರ ವೃತ್ತೇಶು ಮಥೋ ನ ಚ ಅನ್ಯ |೪|

ಕ್ಷಂಮಂಡಲೆ ಭೂಪ ಭೂಪಾಲ ವೃಂದೈ
ಸದಾ ಸೇವಿತಂ ಯಸ್ಯ ಪಾದಾರವಿಂದಂ |೫|

ಯಶೋ ಮೆ ಗಥಂ ಭಿಕ್ಷು ದಾನ ಪ್ರತಾಪ
ಜಗದ್ವಾಥುಸರ್ವಂ ಕರೆ ಯಃ ಪ್ರಸಾದಾತ್ |೬|

ನ ಭೋಗೆ ನ ಯೋಗೆ ನ ವಾ ವಾಜಿರಾಜೌ
ನ ಕಾಂತಾ ಸುಖೆ ನೈವ ವಿತ್ತೇಶು ಚಿತ್ತಂ |೭|

ಅರಣ್ಯೇ ನ ವಾ ಸ್ವಸ್ಯಾ ಗೇಹೆ ನ ಕಾರ್ಯೆ
ನ ದೇಹೆ ಮನೊ ವರ್ಥತೆಮತ್ ವನಾರ್ಘ್ಯೆ |೮|

ಗುರೋರಷ್ಟಕಂ ಯ ಪಠೇತ್ ಪುಣ್ಯ ದೇಹಿ
ಯತಿರ್ಭೂಪಥಿರ್ಬ್ರಹ್ಮಚಾರಿ ಚ ಗೇಹಿ
ಲಭೇತ್ ವಾಂಚಿತಂ ಪದಂ ಬ್ರಹ್ಮ ಸಂಗ್ನಾಂ
ಗುರೊರುಕ್ತ ವಾಕ್ಯೆ ಮನೊ ಯಸ್ಯ ಲಗ್ನಂ

No comments: