Saturday, April 25, 2020

ನ ವೈದ್ಯಃ ಪ್ರಭುರಾಯುಷಃ

ವ್ಯಾಧೇಸ್ತತ್ತ್ವ ಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ |
ಏತದ್ವೈದ್ಯಸ್ಯ ವೈದ್ಯತ್ವಂ ನ ವೈದ್ಯಃ ಪ್ರಭುರಾಯುಷಃ ||

ಬ್ರಹ್ಮವೈವರ್ತ ಪುರಾಣದಲ್ಲಿ ಆಯುರ್ವೇದ ಶಾಸ್ತ್ರಗಳು ಭಾರತದಲ್ಲಿ ಬೆಳೆದು ಬಂದ ಬಗೆಯನ್ನು ವಿವರಿಸುತ್ತ, ವೈದ್ಯನೆಂದರೆ ಯಾರು? ಅವನಿಗಿರಬೇಕಾದ ಲಕ್ಷಣಗಳೇನು? ಎಂಬುದನ್ನು ತಿಳಿಸುವುದು ಈ ಶ್ಲೋಕ.

ಮೊದಲನೆಯದಾಗಿ ವೈದ್ಯರಿಗೆ ವ್ಯಾಧಿಯ ತತ್ತ್ವ, ಸ್ವರೂಪದ ತಿಳಿವಳಿಕೆ ಇರಬೇಕು. ರೋಗಿಗೆ ವ್ಯಾಧಿಯಿಂದ ಉಂಟಾಗುತ್ತಿರುವ ನೋವನ್ನು ತಡೆಯುವುದು ತಿಳಿದಿರಬೇಕು. ಇವೆರಡೂ ವೈದ್ಯನಿಗೆ ತಿಳಿದಿರಬೇಕಾದ ವೈದ್ಯತತ್ತ್ವ. ಆದರೆ, ವೈದ್ಯನು ತಾನು ಆಯುಷ್ಯವನ್ನು ನಿರ್ಧರಿಸುವ ದೇವರಲ್ಲ ಎಂಬುದೂ ಪ್ರಧಾನವಾಗಿ ತಿಳಿದಿರಬೇಕು.

(ಸಂಗ್ರಹ )

No comments: