ಸಂಸ್ಕೃತ ಭಾಷೆಯಲ್ಲಿ ಒಂದು ಅನುಸ್ವರ - ವಿಸರ್ಗ ಲೋಪ ಮಾತ್ರದಿಂದ ಅರ್ಥ ವ್ಯತ್ಯಯವಾಗ ಬಹುದು. ’ವೇದಸಾರ ಶಿವ ಸ್ತುತಿ’ ಪ್ರವಚನದಲ್ಲಿ ಅಂತದ್ದೊಂದು ಸ್ವಾರಸ್ಯ ಕಂಡು ಬಂತು. ಈ ಸ್ತವದಲ್ಲಿ "ಶಶಾಂಕಾರ್ಧಮೌಲೇ" ಎಂಬ ಒಂದು ಪ್ರಯೋಗವಿದೆ. ಇದರಲ್ಲಿ ಗಮನಿಸ ಬೇಕಾದ ವಿಷಯವೆಂದರೆ "ಅರ್ಧ:" ಎಂಬ ಪುಲ್ಲಿಂಗ ಪದದ ಪ್ರಯೋಗ ಮಾಡಿದರೆ, "ಚೂರು" ಎಂಬ ಅರ್ಥವನ್ನು ನೀಡುತ್ತದೆ. ಅದೇ, "ಅರ್ಧಂ" ಎಂಬ ನಪುಂಸಕ ಪದ ಪ್ರಯೋಗ ಮಾಡಿದರೆ , "ಅರ್ಧ ಭಾಗ" ಎಂಬ ಅರ್ಥ ನೀಡುತ್ತದೆ. ಹೀಗೆ, ಅರ್ಧಃ ಮತ್ತು ಅರ್ಧಂ ಎಂಬ ಕಿಂಚಿತ್ ಪ್ರಯೋಗಾಂತರದಿಂದ ಸಹ ಬೀರೆ ಅರ್ಥ ಸ್ಫುರಿಸ ಬಹುದು.
Sunday, August 30, 2015
Thursday, July 30, 2015
ಗುರು ಪೂರ್ಣಿಮ
ಗುರುರ್ಬ್ರಹ್ಮಾ ಗುರುರ್ವಿಷ್ಣುರ್ಗುರುರ್ದೇವೋ ಮಹೇಶ್ವರಃ |
ಗುರುದೇವ ಪರಂಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಚಿನ್ಮಯಂ ವ್ಯಾಪಿತಂ ಸರ್ವಂ ತ್ರೈಲೋಕ್ಯಂ ಸಚರಾಚರಂ ||
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ |
ಅನೇಕ ಜನ್ಮ ಸಂಪ್ರಾಪ್ತ ಕರ್ಮಬಂಧ ವಿಧಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||
ಮನ್ನಾಥಃ ಶ್ರೀ ಜಗನ್ನಾಥೋ ಮದ್ಗುರುಃ ಶ್ರೀ ಜಗದ್ಗುರುಃ |
ಮಮಾತ್ಮಾ ಸರ್ವಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||
ಬ್ರಹ್ಮಾನಂದಂ ಪರಮಸುಖದಂ ಕೇವಲ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿ ಲಕ್ಷ್ಯಂ |
ಏಕಂ ನಿತ್ಯಂ ವಿಮಲಮಚಲಂ ಸರ್ವಧೀ ಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಂ |
ನಿತ್ಯಬೊಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಂ ||
Tuesday, June 30, 2015
Sunday, May 24, 2015
ಶ್ರೀ ವೇದಸಾರಶಿವಸ್ತವ:
ಪಶೂನಾಂ ಪತಿಂ ಪಾಪನಾಶಂ ಪರೇಶಂ |
ಗಜೇಂದ್ರಸ್ಯ ಕೃತ್ತಿಂ ವಸಾನಂ ವರೇಣ್ಯಂ ||
ಜಟಾಜೂಟ ಮಧ್ಯೇ ಸ್ಫುರದ್ಗಾಂಗವಾರಿಂ |
ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್ ||೧||
ಮಹೇಶಂ ಸುರೇಶಂ ಸುರಾರಾರ್ತಿನಾಶಂ |
ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಂ ||
ವಿರೂಪಾಕ್ಷಮಿಂದ್ವರ್ಕವಹ್ನಿತ್ರಿನೇತ್ರಂ |
ಭವಂ ಭಾಸ್ಕರಂ ಭಸ್ಮನಾ ಭೂಷಿತಾಂಗಂ |
ಭವಾನೀ ಕಲತ್ರಂ ಭಜೇ ಪಂಚವಕ್ತ್ರಮ್ ||೩||
ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ |
ಮಹೇಶಾನ ಶೂಲಿನ್ ಜಟಾಜೂಟಧಾರಿನ್ ||
ತ್ವಮೇಕೋ ಜಗದ್ವಾಪಿಕೋ ವಿಶ್ವರೂಪ: |
ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ ||೪||
ಪರಾತ್ಮಾನಮೇಕಂ ಜಗದ್ಬೀಜಮಾದ್ಯಂ |
ನಿರೀಹಂ ನಿರಾಕಾರಮೋಂಕಾರವೇದ್ಯಮ್ ||
ಯತೋಜಾಯತೇ ಪಾಲ್ಯತೇ ಯೇನ ವಿಶ್ವಂ |
ತಮೀಶಂ ಭಜೇ ಲೀಯತೇ ಯತ್ರ ವಿಶ್ವಮ್ ||೫||
ನ ಭೂಮಿರ್ನ ಚಾಪೋ ನ ವಹ್ನಿರ್ನವಾಯು |
ರ್ನ ಚಾಕಾಶಮಾಸ್ತೇ ನ ತಂದ್ರಾ ನ ನಿದ್ರಾ ||
ನ ಗ್ರೀಷ್ಮೋ ನ ಶೀತಂ ನ ದೇಶೋ ನವೇಶೋ |
ನ ಯಸ್ಯಾಸ್ತಿ ಮೂರ್ತಿಸ್ತ್ರಿಮೂರ್ತಿಂ ತ ಮೀಡೇ ||೬||
ಅಜಂಶಾಶ್ವತಂ ಕಾರಣಂ ಕಾರಣಾನಾಂ |
ಶಿವಂ ಕೇವಲಂ ಭಾಸಕಂ ಭಾಸಕಾನಾಮ್ ||
ತುರೀಯಂ ತಮ:ಪಾರಮಾದ್ಯಂತಹೀನಂ |
ಪ್ರಪದ್ಯೇ ಪರಂ ಪಾವನಂ ದ್ವೈತಹೀನಮ್ ||೭||
ನಮಸ್ತೇ ನಮಸ್ತೇ ವಿಭೋ ವಿಶ್ವಮೂರ್ತೇ |
ನಮಸ್ತೇ ನಮಸ್ತೇ ಚಿದಾನಂದಮೂರ್ತೇ ||
ನಮಸ್ತೇ ನಮಸ್ತೇ ತಪೋಯೋಗಗಮ್ಯ |
ನಮಸ್ತೇ ನಮಸ್ತೇ ಶ್ರುತಿಜ್ಞಾನಗಮ್ಯ ||೮||
ಪ್ರಭೋ ಶೂಲಪಾಣೇ ವಿಭೋ ವಿಶ್ವನಾಥ |
ಮಹಾದೇವ ಶಂಭೋ ಮಹೇಶ ತ್ರಿನೇತ್ರ ||
ಶಿವಾಕಾಂತ ಶಾಂತ ಸ್ಮರಾರೇ ಪುರಾರೇ |
ತ್ವದನ್ಯೋ ವರೇಣ್ಯೋ ನ ಮಾನ್ಯೋ ನ ಗಣ್ಯ: ||೯||
ಶಂಭೋ ಮಹೇಶ ಕರುಣಾಮಯ ಶೂಲಪಾಣೇ |
ಗೌರೀಪತೇ ಪಶುಪತೇ ಪಶುಪಾಶನಾಶಿನ್ ||
ಕಾಶೀಪತೇ ಕರುಣಯಾ ಜಗದೇತದೇಕ- |
ಸ್ತ್ವಂ ಹಂಸಿ ಪಾಸಿ ವಿದಧಾಸಿ ಮಹೇಶ್ವರೋsಸಿ ||೧೦||
ತ್ವತ್ತೋ ಜಗದ್ಭವತಿ ದೇವ ಭವ ಸ್ಮರಾರೇ |
ತ್ವಯ್ಯೇವ ತಿಷ್ಟತಿ ಜಗನ್ಮೃಡ ವಿಶ್ವನಾಥ ||
ತ್ವಯ್ಯೇವ ಗಚ್ಚತಿ ಲಯಂ ಜಗದೇಶದೀಶ |
ಲಿಂಗಾತ್ಮಕೇ ಹರ ಚರಾಚರವಿಶ್ವರೂಪಿನ್ ||೧೧||
|| ಇತಿ ಶ್ರೀ ಶಂಕರಾಚಾರ್ಯ ವಿರಚಿತ ವೇದಸಾರ ಶಿವಸ್ತೋತ್ರಮ್ ||
ಗಜೇಂದ್ರಸ್ಯ ಕೃತ್ತಿಂ ವಸಾನಂ ವರೇಣ್ಯಂ ||
ಜಟಾಜೂಟ ಮಧ್ಯೇ ಸ್ಫುರದ್ಗಾಂಗವಾರಿಂ |
ಮಹಾದೇವಮೇಕಂ ಸ್ಮರಾಮಿ ಸ್ಮರಾರಿಮ್ ||೧||
ಮಹೇಶಂ ಸುರೇಶಂ ಸುರಾರಾರ್ತಿನಾಶಂ |
ವಿಭುಂ ವಿಶ್ವನಾಥಂ ವಿಭೂತ್ಯಂಗಭೂಷಂ ||
ವಿರೂಪಾಕ್ಷಮಿಂದ್ವರ್ಕವಹ್ನಿತ್ರಿನೇತ್ರಂ |
ಸದಾನಂದಮೀಡೇ ಪ್ರಭುಂ ಪಂಚವಕ್ತ್ರಮ್ ||೨||
ಗಿರೀಶಂ ಗಣೇಶಂ ಗಲೇ ನೀಲವರ್ಣಂ |
ಗವೇಂದ್ರಾಧಿರೂಢಂ ಗುಣಾತೀತರೂಪಮ್ ||ಗಿರೀಶಂ ಗಣೇಶಂ ಗಲೇ ನೀಲವರ್ಣಂ |
ಭವಂ ಭಾಸ್ಕರಂ ಭಸ್ಮನಾ ಭೂಷಿತಾಂಗಂ |
ಭವಾನೀ ಕಲತ್ರಂ ಭಜೇ ಪಂಚವಕ್ತ್ರಮ್ ||೩||
ಶಿವಾಕಾಂತ ಶಂಭೋ ಶಶಾಂಕಾರ್ಧಮೌಲೇ |
ಮಹೇಶಾನ ಶೂಲಿನ್ ಜಟಾಜೂಟಧಾರಿನ್ ||
ತ್ವಮೇಕೋ ಜಗದ್ವಾಪಿಕೋ ವಿಶ್ವರೂಪ: |
ಪ್ರಸೀದ ಪ್ರಸೀದ ಪ್ರಭೋ ಪೂರ್ಣರೂಪ ||೪||
ಪರಾತ್ಮಾನಮೇಕಂ ಜಗದ್ಬೀಜಮಾದ್ಯಂ |
ನಿರೀಹಂ ನಿರಾಕಾರಮೋಂಕಾರವೇದ್ಯಮ್ ||
ಯತೋಜಾಯತೇ ಪಾಲ್ಯತೇ ಯೇನ ವಿಶ್ವಂ |
ತಮೀಶಂ ಭಜೇ ಲೀಯತೇ ಯತ್ರ ವಿಶ್ವಮ್ ||೫||
ನ ಭೂಮಿರ್ನ ಚಾಪೋ ನ ವಹ್ನಿರ್ನವಾಯು |
ರ್ನ ಚಾಕಾಶಮಾಸ್ತೇ ನ ತಂದ್ರಾ ನ ನಿದ್ರಾ ||
ನ ಗ್ರೀಷ್ಮೋ ನ ಶೀತಂ ನ ದೇಶೋ ನವೇಶೋ |
ನ ಯಸ್ಯಾಸ್ತಿ ಮೂರ್ತಿಸ್ತ್ರಿಮೂರ್ತಿಂ ತ ಮೀಡೇ ||೬||
ಅಜಂಶಾಶ್ವತಂ ಕಾರಣಂ ಕಾರಣಾನಾಂ |
ಶಿವಂ ಕೇವಲಂ ಭಾಸಕಂ ಭಾಸಕಾನಾಮ್ ||
ತುರೀಯಂ ತಮ:ಪಾರಮಾದ್ಯಂತಹೀನಂ |
ಪ್ರಪದ್ಯೇ ಪರಂ ಪಾವನಂ ದ್ವೈತಹೀನಮ್ ||೭||
ನಮಸ್ತೇ ನಮಸ್ತೇ ವಿಭೋ ವಿಶ್ವಮೂರ್ತೇ |
ನಮಸ್ತೇ ನಮಸ್ತೇ ಚಿದಾನಂದಮೂರ್ತೇ ||
ನಮಸ್ತೇ ನಮಸ್ತೇ ತಪೋಯೋಗಗಮ್ಯ |
ನಮಸ್ತೇ ನಮಸ್ತೇ ಶ್ರುತಿಜ್ಞಾನಗಮ್ಯ ||೮||
ಪ್ರಭೋ ಶೂಲಪಾಣೇ ವಿಭೋ ವಿಶ್ವನಾಥ |
ಮಹಾದೇವ ಶಂಭೋ ಮಹೇಶ ತ್ರಿನೇತ್ರ ||
ಶಿವಾಕಾಂತ ಶಾಂತ ಸ್ಮರಾರೇ ಪುರಾರೇ |
ತ್ವದನ್ಯೋ ವರೇಣ್ಯೋ ನ ಮಾನ್ಯೋ ನ ಗಣ್ಯ: ||೯||
ಶಂಭೋ ಮಹೇಶ ಕರುಣಾಮಯ ಶೂಲಪಾಣೇ |
ಗೌರೀಪತೇ ಪಶುಪತೇ ಪಶುಪಾಶನಾಶಿನ್ ||
ಕಾಶೀಪತೇ ಕರುಣಯಾ ಜಗದೇತದೇಕ- |
ಸ್ತ್ವಂ ಹಂಸಿ ಪಾಸಿ ವಿದಧಾಸಿ ಮಹೇಶ್ವರೋsಸಿ ||೧೦||
ತ್ವತ್ತೋ ಜಗದ್ಭವತಿ ದೇವ ಭವ ಸ್ಮರಾರೇ |
ತ್ವಯ್ಯೇವ ತಿಷ್ಟತಿ ಜಗನ್ಮೃಡ ವಿಶ್ವನಾಥ ||
ತ್ವಯ್ಯೇವ ಗಚ್ಚತಿ ಲಯಂ ಜಗದೇಶದೀಶ |
ಲಿಂಗಾತ್ಮಕೇ ಹರ ಚರಾಚರವಿಶ್ವರೂಪಿನ್ ||೧೧||
|| ಇತಿ ಶ್ರೀ ಶಂಕರಾಚಾರ್ಯ ವಿರಚಿತ ವೇದಸಾರ ಶಿವಸ್ತೋತ್ರಮ್ ||
Sunday, April 26, 2015
ಸಾಧನ ಸೋಪಾನ ಪಂಚಕಂ
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನ್ಠುಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||
ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||
ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||
ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||
ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||
Monday, March 30, 2015
Saturday, February 28, 2015
Friday, January 30, 2015
ಜಾನಕೀ ಜಾನೇ ರಾಮಾ
ಜಾನಕೀ ಜಾನೇ ರಾಮಾ, ಜಾನಕೀ ಜಾನೆ |
ಕದನ ವಿಧಾನಂ ನ ಹಂ ಜಾನೆ|
ಮೋಕ್ಷಕವಾಟಂ ನ ಹಂ ಜಾನೆ, ಜಾನಕೀ ಜಾನೇ ||
ವಿಷಾದ ಕಾಲೇ ಸಖಾ ತ್ವಮೇವ
ಭಯಾಂಧಕಾರೇ ಪ್ರಭಾ ತ್ವಮೇವ
ಭವಾಬ್ಧಿ ನೌಕಾ ತ್ವಮೇವ ದೇವ
ಭಜೇ ಭವಂತಂ ರಾಮಾಭಿ ರಾಮಾ ||
ದಯಾಸಮೇತ ಸುಧಾನಿಕೇತ,
ಚಿನ್ಮಕರಂದ ನತಮುನಿವೃಂದ
ಆಗಮಸಾರ, ಜಿತಸಂಸಾರ
ಭಜೇ ಭವಂತಂ ರಾಮಾಭಿ ರಾಮಾ ||
ಯೂಸುಫ್ ಅಲಿ ಕೇಚೇರಿ ಅವರ ರಚನೆಯನ್ನು ಸ್ವರಬದ್ಧ ಮಾಡಿ ಸಂಗೀತ ನೀಡಿದವರು ನೌಷದ್ ಅಲಿ ಖಾನ್. ಹಾಡಿದವರು ಗಾನಗಂಧರ್ವ ಪದ್ಮಶ್ರೀ ಕೆ.ಜೆ. ಏಸುದಾಸ್. ಮುಂಜಾನೆಯ ವೇಳೆ ಕಲ್ಯಾಣಿ ರಾಗ ಆಧಾರಿತ ಈ ಕೃತಿ ಇಂದಲೇ ಬೆಳಗಾಗುವುದು. ಶ್ರೀ ರಾಮನ ಭಜನೆ ಬರೆದವರು ಯೂಸುಫ್ ಅಲಿ, ಸಂಗೀತ ನೌಷದ್ ಅಲಿ ಹಾಗೂ ಗಾಯನ ಯೇಸುವಿನ ದಾಸನಿಂದ. ಇದುವೇ ಅಲ್ಲವೇ ಭಾರತದ ನಿಜವಾದ ನೈಜ ಐಕ್ಯತೆ? ಜಾತ್ಯತೀತತೆ, ಧರ್ಮನಿರಪೇಕ್ಷತೇ ಎಂದೆಲ್ಲಾ ಅರ್ಥವಿಲ್ಲದೆ ಬೊಬ್ಬೆ ಹೊಡೆಯುವ ಸೆಕ್ಯುಲರ್ ವಾದಿಗಳಿಗೆ ಭಾರತದ ಈ ನೈಜ ಭಾವನೆಗಳು ತಿಳಿಯುವುದೆಂದು?
Wednesday, December 31, 2014
Sunday, December 28, 2014
ಗೋಮಯದಲ್ಲಿ ಲಕ್ಷ್ಮೀ
ಲಕ್ಷ್ಮೀಶ್ಚ ಗೋಮಯೇ ನಿತ್ಯಂ ಪವಿತ್ರಾ ಸರ್ವಮಂಗಲಾ|
ಗೋಮಯಾಲೇಪನಂ ತಸ್ಮಾತ್ಕರ್ತವ್ಯಂ ಪಾಂಡುನಂದನ ||
ಪವಿತ್ರಳೂ, ಸರ್ವಮಂಗಳಪ್ರದಳೂ
ಆದ ಲಕ್ಷ್ಮಿಯು ಗೋಮಯದಲ್ಲಿ ಯಾವಾಗಲೂ ನೆಲೆಸಿರುವಳು. ಆದರಿಂದ ಎಲೈ ಪಾಂಡುಪುತ್ರನೇ, ಗೋಮಯದಿಂದ ಆಲೇಪವನ್ನು ಅಂದರೆ ಸಾರಣೆಯನ್ನು ಮಾಡಬೇಕು.
Saturday, November 29, 2014
Sunday, October 26, 2014
ಗಾವೋ ವಿಶ್ವಸ್ಯ ಮಾತರಃ
ಭುಕ್ತ್ವಾ ತೃಣಾನಿ ಶುಷ್ಕಾನಿ ಪೀತ್ವಾ ತೋಯಂ ಜಲಾಶಯಾತ್ |
ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||
ಗಾವೋ ಮಮಾಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||
ಸುರಭಿಸ್ತ್ವಂ ಜಗನ್ಮಾತಃ ನಿತ್ಯಂ ವಿಷ್ಣುಪದೇ ಸ್ಥಿತಾ |
ಮಾತರ್ಮಯಾಭಿಲಷಿತಂ ಸಫಲಂ ಕುರು ನಂದಿನಿ ||
ಗೋಗ್ರಾಸ ಕೊಡುವಾಗ
ಸುರಭಿರ್ವೈಷ್ಣವೀಮಾತಃ ಸುರಲೋಕೇ ಮಹೀಯಸೇ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಮ್ ||
ಪಂಚಗವ್ಯ ಸ್ವೀಕರಿಸುವಾಗಿನ ಮಂತ್ರ
ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||
*** ಸೂರ್ಯ ಕೇತು ನಾಡಿ ***
ಭಾರತೀಯ ಗೋವಿನ ಬೆನ್ನು ಹುರಿಯಲ್ಲಿ "ಸೂರ್ಯ ಕೇತು ನಾಡಿ" ಎಂಬ ದೈವೀಕ ನಾಡಿಯಿದೆ. ಈ ಸೂರ್ಯ ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವಾಗಿಸುತ್ತದೆ. ಆದ್ದರಿಂದಲೇ ಭಾರತೀಯ ಗೋವಿನ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪಗಳಲ್ಲಿ ಬಂಗಾರದ ಕಣಗಳಿದ್ದು ಕಿಂಚಿತ್ ಹಳದೀ ಬಣ್ಣದಲ್ಲಿ ಕಂಗೊಳಿಸುತ್ತವೆ.
ದುಗ್ಧಂ ದದಾತಿ ಲೋಕೇಭ್ಯಃ ಗಾವೋ ವಿಶ್ವಸ್ಯ ಮಾತರಃ ||
ಗಾವೋ ಮಮಾಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||
ಸುರಭಿಸ್ತ್ವಂ ಜಗನ್ಮಾತಃ ನಿತ್ಯಂ ವಿಷ್ಣುಪದೇ ಸ್ಥಿತಾ |
ಮಾತರ್ಮಯಾಭಿಲಷಿತಂ ಸಫಲಂ ಕುರು ನಂದಿನಿ ||
ಗೋಗ್ರಾಸ ಕೊಡುವಾಗ
ಸುರಭಿರ್ವೈಷ್ಣವೀಮಾತಃ ಸುರಲೋಕೇ ಮಹೀಯಸೇ |
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಮ್ ||
ಪಂಚಗವ್ಯ ಸ್ವೀಕರಿಸುವಾಗಿನ ಮಂತ್ರ
ಯತ್ ತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರಾಶನಂ ಪಂಚಗವ್ಯಸ್ಯ ದಹತ್ಯಗ್ನಿರಿವೇಂಧನಮ್ ||
*** ಸೂರ್ಯ ಕೇತು ನಾಡಿ ***
ಭಾರತೀಯ ಗೋವಿನ ಬೆನ್ನು ಹುರಿಯಲ್ಲಿ "ಸೂರ್ಯ ಕೇತು ನಾಡಿ" ಎಂಬ ದೈವೀಕ ನಾಡಿಯಿದೆ. ಈ ಸೂರ್ಯ ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವಾಗಿಸುತ್ತದೆ. ಆದ್ದರಿಂದಲೇ ಭಾರತೀಯ ಗೋವಿನ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪಗಳಲ್ಲಿ ಬಂಗಾರದ ಕಣಗಳಿದ್ದು ಕಿಂಚಿತ್ ಹಳದೀ ಬಣ್ಣದಲ್ಲಿ ಕಂಗೊಳಿಸುತ್ತವೆ.
Monday, September 29, 2014
ಅಮೃತವಚನ
ಪಂಡಿತ್ ಜಿ ಹೇಳಿದ ಅಮೃತವಚನ
ಜಗತ್ತು ಸಂಘರ್ಷಾತ್ಮಕವಲ್ಲ, ಸ್ರುಜನಾತ್ಮಕ. ಬೀಜವು
ವೃಕ್ಷ ರೂಪದಲ್ಲಿ ಹೊರಬರುವುದು ಸಂಘರ್ಷದ ಉದ್ದೇಶದಿಂದಲ್ಲ, ತನ್ನ
ಸ್ವಂತದ ವಿಕಾಸಕ್ಕಾಗಿ, ಸಾಕ್ಷಾತ್ಕಾರಕ್ಕಾಗಿ. ಅದರ ಜೀವನೋದ್ದೇಶವು
ಇನ್ನಾವುದರ ವಿನಾಶವೂ ಅಲ್ಲ. ಆದರೆ, ಇನ್ನೊಂದಕ್ಕಾಗಿ ತನ್ನನ್ನು
ಸಮರ್ಪಿಸಿಕೊಳ್ಳುವುದೇ ಆಗಿದೆ. ಸಂಪೂರ್ಣ ಸೃಷ್ಟಿಯ ಪರಸ್ಪರ ಸಹಕಾರದಿಂದಲೇ ಮುಂದುವರಿಯುತ್ತದೆ.
ಆದರ ಆಧಾರವು ಸಂಘರ್ಷವಲ್ಲ. ಸಹಯೋಗ. ಪಂಚ ಮಹಾಭೂತಗಳು ಜೊತೆಗೂಡುವುದು ಇನ್ನಾವುದರೊಂದಿಗೆ ಸಂಘರ್ಷ
ಮಾಡಲೆಂದಲ್ಲ. ಆದರೆ ತಮ್ಮ ಪ್ರಕೃತಿಗೆ ತಕ್ಕಂತೆ ನಡೆದುಕೊಂಡು ಆ ಮೂಲಕ ಸೃಷ್ಟಿಯ ಸಾರ್ಥಕತೆಯ
ಇಚ್ಚೇಯನ್ನು ಪೂರ್ಣ ಮಾಡಲೆಂದು!
Wednesday, August 27, 2014
Sunday, July 27, 2014
ಮುಖ ನೋಡಿ ಮಣೆ ಹಾಕು
ಇತ್ತೀಚೆಗೆ ಮುದ್ರಣ ತಂತಜ್ಞಾನ ಪ್ರಗತಿ ಹೊಂದಿದಂತೆಲ್ಲಾ ಪುಸ್ತಕಗಳ ಮುಖಪುಟ ವಿನ್ಯಾಸ ಅದೆಷ್ಟು ಅಂದವಾಗಿರುತ್ತದೆಂದರೆ ಮುಖ ಪುಟ ನೋಡುತ್ತಲೇ ಪುಸ್ತಕ ಕೊಳ್ಳಬೇಕೆಂಬ ಮೋಹ ಹುಟ್ಟುತ್ತದೆ. ಕೊಂಡ ಪುಸ್ತಕ ಓದುತ್ತೇವೋ ಇಲ್ಲವೋ ಆ ಸುಂದರ ವಸ್ತುವನ್ನು ನಮ್ಮದಾಗಿಸಿ ಕೊಳ್ಳಬೇಕೆಂಬ ಮಹಾದಾಸೆ ಪುಸ್ತಕವನ್ನು ಕೊಳ್ಳುವಂತೆ ಮಾಡುತ್ತದೆ. ಇದು ಒಂದು ರೀತಿ ಸಾತ್ವಿಕ ಮೋಹ.
ಆಸ್ಟ್ರೇಲಿಯಾದ ಸಿಡ್ನಿ ಡೌನ್ ಟೌನ್ ನ (Downtown) ಪಿಟ್ಟ್ ಸ್ಟ್ರೀಟ್ ನಲ್ಲಿ (Pitt St.) ಎಲಿಜಬೆತ್ ಪುಸ್ತಕದ ಅಂಗಡಿ ಇದೆ. "ಪುಸ್ತಕವನ್ನು ಮುಖಪುಟದಿಂದ ಅಳಿಯಬೇಡಿ" (Do not judge a book by its cover) - ಎಂಬ ಶೀರ್ಷಿಕೆಯ ಬೋರ್ಡ್ ನೊಂದಿಗೆ ಒಂದು ವಿನೂತನ ಪ್ರಯೋಗವನ್ನು ಅಲ್ಲಿ ಕಂಡೆ. ಒಂದು ಪುಸ್ತಕವನ್ನು ಅಂದವಾಗಿ wrap ಮಾಡಿ, cover ನ ಮೇಲೆ ಪುಸ್ತಕವನ್ನು ವಿವರಿಸುವ ಕೆಲವು ಪದಗಳನ್ನು ಬರೆಯಲಾಗಿತ್ತು. ಉದಾಹರಣೆಗೆ -- "ಇತಿಹಾಸ", " ಎರಡನೇ ವಿಶ್ವ ಯುದ್ಧ", "ತಂತ್ರಜ್ಞಾನ", "ಕಾಂಗರೂ" ಇತ್ಯಾದಿ. ಪುಸ್ತಕದ ಹೆಸರಾಗಲಿ, ಲೇಖಕನ ಹೆಸರಾಗಲೀ, ಮುಖಪುಟವಾಗಲಿ ತೋರಿಕೊಳ್ಳುವುದಿಲ್ಲ. ಪುಸ್ತಕದ ಒಳಗಿನ ವಿಷಯದ ಆಧಾರದ ಮೇಲೆ ಖರೀದಿ ನಡೆಯ ಬೇಕು. ಈ ರೀತಿ ಮಾಡುವುದರಿಂದ ಕೊಂಡ ಪುಸ್ತಕ ಯಾವುದಿರ ಬಹುದು ಎಂಬ ಕುತೂಹಲ ಮೂಡುತ್ತದೆ. ಪುಸ್ತಕ ಕೊಳ್ಳುವ ಪ್ರಕ್ರಿಯೆಯಲ್ಲಿ ಅತಿಶಯ ಸಂತೋಷವು ಆಗಿ ಬರುತ್ತದೆ.
Thursday, June 26, 2014
ಏಕಾತ್ಮಮಾನವತೆ
ಸೃಷ್ಟಿಯಲ್ಲಿ ಸಂಘರ್ಷ ಸ್ಪರ್ಧೆಗಳು ಇರುವಂತೆ ಸಹಕಾರ ಸಹಯೋಗಗಳೂ ಇವೆ. ಜಗತ್ತಿನ ವಿವಿಧ ಅಂಗಗಳ ಪರಸ್ಪರ ಪೂರಕತೆಯನ್ನು ಮನಗಂಡವರು ಭಾರತೀಯ ದಾರ್ಶನಿಕರು. ವ್ಯಕ್ತಿಯೂ ಸಮಾಜವೂ ವಿವಿಧ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಅನುಸರಿಸುವ ಕ್ರಮಗಳು ಘರ್ಷಣೆಗೆ ಎಡೆಗೊಡದಂತೆ ನೋಡಿಕೊಳ್ಳುವ ಸೂತ್ರವೇ ಧರ್ಮ. ವ್ಯಕ್ತಿ ಸ್ವಾರ್ಥಕ್ಕೆ ಪ್ರತಿಯಾದ ಸಮಷ್ಟಿ ದೃಷ್ಟಿಯೇ ಧರ್ಮ -- ಏಕಾತ್ಮಮಾನವತೆ
Saturday, May 31, 2014
Wednesday, April 30, 2014
ಸಂಗೀತ ಜ್ಞಾನ
ತ್ರಿವರ್ಗ ಫಲದಾಃ ಸರ್ವೇ ದಾನಯಜ್ಞ ಜಪಾದಯಃ ।
ಏಕಂ ಸಂಗೀತ ವಿಜ್ಞಾನಂ ಚತುರ್ವರ್ಗ ಫಲಪ್ರದಂ ।।
ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು
ಏಕಂ ಸಂಗೀತ ವಿಜ್ಞಾನಂ ಚತುರ್ವರ್ಗ ಫಲಪ್ರದಂ ।।
ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು
Sunday, March 30, 2014
ಕಾಯೋ ಶ್ರೀ ಗೌರಿ ಕರುಣಾಲಹರಿ
ಕಾಯೋ
ಶ್ರೀ ಗೌರಿ ಕರುಣಾಲಹರಿ
ತೊಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ ಕೊಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ .. ||೧||
ಶುಂಬಾದಿಮ ದಾಮ್ಬೋನಿಧಿ ಕುಮ್ಬಜ ನಿಭ ದೇವಿ
ಜಮ್ಭಾಹಿತ ಸಂಭಾವಿತೆ ಶಾಂಭವಿ ಶುಭವೀ ||೨||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ ||೩||
ತೊಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ ಕೊಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ .. ||೧||
ಶುಂಬಾದಿಮ ದಾಮ್ಬೋನಿಧಿ ಕುಮ್ಬಜ ನಿಭ ದೇವಿ
ಜಮ್ಭಾಹಿತ ಸಂಭಾವಿತೆ ಶಾಂಭವಿ ಶುಭವೀ ||೨||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ ||೩||
Thursday, February 27, 2014
Thursday, January 30, 2014
ಶ್ರೀ ಕೃಷ್ಣ ಸ್ತುತಿ
ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ ದಶಾಶ್ವಮೇಧಾವ ಭ್ರುತೇನ ತುಲ್ಯಃ ।
ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣ ಪ್ರಣಾಮಿ ನ ಪುನರ್ಭವಾಯ ।।
ಶ್ರೀ ಕೃಷ್ಣನಿಗೆ ಮಾಡಿದಂತಹ ಒಂದು ಪ್ರನಾಮವು ಹತ್ತು ಅಶ್ವಮೇಧ ಯಾಗಗಳ ಅವಭೃತ ಸ್ನಾನಕ್ಕೆ ಸಮಾನವಾಗಿದೆ. ಆದರೆ ಈ ಅಶ್ವಮೇಧ ಯಾಗದ ಪುಣ್ಯ ಭೊಗಿಸಿದ ನಂತರ ಮತ್ತೆ ಸಂಸಾರ ಬಂಧನಕ್ಕೆ ಬರುತ್ತಾರೆ. ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದವರು ಮತ್ತೆ ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ.
Tuesday, December 31, 2013
Friday, November 29, 2013
ಸನಾತನ ಧರ್ಮ
ಮಹಾಲಕ್ಷ್ಮೀ ಅಷ್ಟಕ, ಶ್ರೀ ಗುರು ಅಷ್ಟಕ, ಕಾಲಭೈರವಾಷ್ಟಕ ಇತ್ಯಾದಿ ಹಲವಾರು ಅಷ್ಟಕಗಳನ್ನು ಧಾರ್ಮಿಕ ಸಾಹಿತ್ಯದಲ್ಲಿ ಹೇರಳವಾಗಿವೆಯಷ್ಟೇ. ಅದೇ ರೀತಿ ಚಿರಂತನ, ಪ್ರಾಚೀನ ಹಾಗು ಅನಾದಿಯಾದ ಸನಾತನ ಧರ್ಮದ ಕುರಿತು ಒಂದು ಅಷ್ಟಕವನ್ನು ವೇದಾಂತ ಚಕ್ರವರ್ತಿ. ವಿದ್ವಾನ್ ಕೆ. ಜಿ .ಸುಬ್ರಾಯಶರ್ಮ ಅವರು ರಚಿಸಿರುವ "ಧರ್ಮ- ವೇದ - ಬ್ರಹ್ಮ" ಎಂಬ ಪುಸ್ತಿಕೆಯಲ್ಲಿ ನೋಡಿದೆ. ಬಹಳ ಸ್ವಾರಸ್ಯಕರವಾದ, ಉಪಯುಕ್ತವಾದ ಈ ಅಷ್ಟಕವನ್ನು ಓದುಗರಲ್ಲಿ ಹಂಚಿ ಕೊಳ್ಳುತ್ತಿದ್ದೇನೆ.
ಅನಾದಿನಿಧನಂ ಶಾಂತಂ ಸರ್ವಪ್ರಾಣಿ ಶುಭಂಕರಂ
ಋಷಿ ಸಂಪೂಜಿತಂ ದಿವ್ಯಂ ಭಜೇ ವೇದಂ ಸನಾತನಂ ॥೧॥
ಸರ್ವಜ್ಞಂ ಸರ್ವವರದಂ ಸರ್ವಶಾಂತಿಕರಂ ಪ್ರಭುಂ ।
ಸರ್ವಶಾಸ್ತ್ರಸದಾಧಾರಂ ಭಜೇ ವೇದಂ ಸನಾತನಂ ॥೨॥
ಪ್ರವೃತ್ತಿ ಧರ್ಮವಕ್ತಾರಂ ತಥಾ ಭ್ಯುದಯದಾಯಕಂ
ಸರ್ವಸಂತ್ಪ್ರದಂ ಕಾಂತಂ ಭಜೇ ವೇದಂ ಸನಾತನಂ ॥೩॥
ನಿವ್ರುತ್ತಿಮಾರ್ಗವಕ್ತಾರಂ ನಿತ್ಯಾನಂದಪ್ರದಾಯಕಂ ।
ಸರ್ವ ಸಂನ್ಯಾಸಿ ಸಂಪೂಜ್ಯಂ ಭಜೇ ವೇದಂ ಸನಾತನಂ ॥೪॥
ವಿಶ್ವಾಧಾರಾಂ ಧರ್ಮಧರಂ ಧರ್ಮಬ್ರಹ್ಮ ಪ್ರಭೊಧಕಂ
ಹಿರಣ್ಯಗರ್ಭ ಗರ್ಭಸ್ಥಂ ಭಜೇ ವೇದಂ ಸನಾತನಂ ॥೫ ॥
ನಿರ್ದೋಷಂ ಸಗುಣಂ ನಿತ್ಯಂ ಸರ್ವಪಾಪಹರಂ ಶುಭಂ
ಶ್ರುತ್ಯಾಮ್ನಾಯಾದಿನಾಮಾನಂ ಭಜೇ ವೇದಂ ಸನಾತನಂ ॥೬ ॥
ಪರಬ್ರಹ್ಮ ಸ್ವರೂಪಂ ತಂ ಸರ್ವವೇದಾಂತ ವಂದಿತಂ
ಅಪೌರುಷೇಯಂ ಸರ್ವಜ್ಞಂ ಭಜೇ ವೇದಂ ಸನಾತನಂ ॥೭॥
ನಿತ್ಯಶುದ್ಧಂ ನಿತ್ಯಬುದ್ಧಂ ನಿತ್ಯಸತ್ಯಸ್ವಾರೂಪಿಣಂ
ನಿತ್ಯಾನಂದ ಪ್ರದಾತಾರಂ ಭಜೇ ವೇದಂ ಸನಾತನಂ ॥೮॥
ಅನಾದಿನಿಧನಂ ಶಾಂತಂ ಸರ್ವಪ್ರಾಣಿ ಶುಭಂಕರಂ
ಋಷಿ ಸಂಪೂಜಿತಂ ದಿವ್ಯಂ ಭಜೇ ವೇದಂ ಸನಾತನಂ ॥೧॥
ಸರ್ವಜ್ಞಂ ಸರ್ವವರದಂ ಸರ್ವಶಾಂತಿಕರಂ ಪ್ರಭುಂ ।
ಸರ್ವಶಾಸ್ತ್ರಸದಾಧಾರಂ ಭಜೇ ವೇದಂ ಸನಾತನಂ ॥೨॥
ಪ್ರವೃತ್ತಿ ಧರ್ಮವಕ್ತಾರಂ ತಥಾ ಭ್ಯುದಯದಾಯಕಂ
ಸರ್ವಸಂತ್ಪ್ರದಂ ಕಾಂತಂ ಭಜೇ ವೇದಂ ಸನಾತನಂ ॥೩॥
ನಿವ್ರುತ್ತಿಮಾರ್ಗವಕ್ತಾರಂ ನಿತ್ಯಾನಂದಪ್ರದಾಯಕಂ ।
ಸರ್ವ ಸಂನ್ಯಾಸಿ ಸಂಪೂಜ್ಯಂ ಭಜೇ ವೇದಂ ಸನಾತನಂ ॥೪॥
ವಿಶ್ವಾಧಾರಾಂ ಧರ್ಮಧರಂ ಧರ್ಮಬ್ರಹ್ಮ ಪ್ರಭೊಧಕಂ
ಹಿರಣ್ಯಗರ್ಭ ಗರ್ಭಸ್ಥಂ ಭಜೇ ವೇದಂ ಸನಾತನಂ ॥೫ ॥
ನಿರ್ದೋಷಂ ಸಗುಣಂ ನಿತ್ಯಂ ಸರ್ವಪಾಪಹರಂ ಶುಭಂ
ಶ್ರುತ್ಯಾಮ್ನಾಯಾದಿನಾಮಾನಂ ಭಜೇ ವೇದಂ ಸನಾತನಂ ॥೬ ॥
ಪರಬ್ರಹ್ಮ ಸ್ವರೂಪಂ ತಂ ಸರ್ವವೇದಾಂತ ವಂದಿತಂ
ಅಪೌರುಷೇಯಂ ಸರ್ವಜ್ಞಂ ಭಜೇ ವೇದಂ ಸನಾತನಂ ॥೭॥
ನಿತ್ಯಶುದ್ಧಂ ನಿತ್ಯಬುದ್ಧಂ ನಿತ್ಯಸತ್ಯಸ್ವಾರೂಪಿಣಂ
ನಿತ್ಯಾನಂದ ಪ್ರದಾತಾರಂ ಭಜೇ ವೇದಂ ಸನಾತನಂ ॥೮॥
Tuesday, October 29, 2013
ಗೀತಾಂಜಲಿ
ರಾಜಕುಮಾರನ ಪೋಷಾಕು ಧರಿಸಿದ ಪುಟ್ಟ ಕಂದಮ್ಮನಿಗೆ ಕೊರಳ ಸುತ್ತಲೂ ರತ್ನಹಾರದ ಸರಪಳಿ. ಆಡಳದುವೆ ತೊಡರು.ಪ್ರತಿ ಹೆಜ್ಜೆಯನ್ನು ಅಂಕುಷದಲ್ಲಿಡುವ ಆಡಂಬರ . ರಾಜ ಪೋಷಾಕು ಎಲ್ಲಿ ಕೊಳೆಯಾಗುವುದೋ , ಎಲ್ಲಿ ಸುಕ್ಕುಗಟ್ಟುವುದೋ ಎಂಬ ಅಳುಕಿನಲ್ಲಿ ಕದಲಿಕೆಗೆ ಕೂಡ ಭೀತಿ .. ಹೇ ಮಾತೆ, ಭೂಮಿಯ ಪವಿತ್ರ ಧೂಳೀ ಕಣಗಳಿಂದ ದೂರವಿಡುವ ಭವ್ಯ ಬಂಧನದಿಂದ ಏನು ಒಳಿತು. ಜೀವಿತದ ಮಹಾಮೇಳಕ್ಕೆ ಪ್ರವೇಶವನ್ನೇ ಕಸಿದುಕೊಳ್ಳುವ ಸಿರಿವಂತಿಕೆ ಭಾಗ್ಯವಾದೀತೇ?
Sunday, September 29, 2013
ಧರ್ಯ ಮತ್ತು ನಿಯಮ
ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡ. ಅಯೋಧ್ಯೆಯಿಂದ ಅರಣ್ಯದೆಡೆಗೆ ಶ್ರೀ ರಾಮಚಂದ್ರ ತೆರಳುತ್ತಿರುವ ಸಂದರ್ಭ.
ಕೌಸಲ್ಯೆಯು ಶ್ರೀರಾಮನಿಗೆ ಮಂಗಳಾಶೀರ್ವಾದವನ್ನು ಮಾಡುತ್ತ -- "ಯಾವ ಧರ್ಮವನ್ನು ನೀನು ಧೈರ್ಯದಿಂದಲೂ, ನಿಯಮದಿಂದಲೂ ಕಾಪಾಡುತ್ತಿರುವೆಯೊ ಆ ಧರ್ಮವೇ ನಿನ್ನನ್ನು ಕಾಪಾಡಲಿ." ಎಂಬ ಮಾತೃ ವಾಕ್ಯ ಗೋಚರಿಸುತ್ತದೆ.
ಯಂ ಪಾಲಯಸಿ ಧರ್ಮಂ ತ್ವಂ ಧೃತ್ಯಾ ಚ ನಿಯಮೇನ ಚ।
ಸ ವೈ ರಾಘವಶಾರ್ದೂಲ ಧರ್ಮಸ್ತ್ವಾಮಭಿರಕ್ಷತು ॥
ಧರ್ಯ ನಿಯಮ ಇವುಗಳಿಗೆ ಬೆಲೆ ಬರುವುದು.
ಕೌಸಲ್ಯೆಯು ಶ್ರೀರಾಮನಿಗೆ ಮಂಗಳಾಶೀರ್ವಾದವನ್ನು ಮಾಡುತ್ತ -- "ಯಾವ ಧರ್ಮವನ್ನು ನೀನು ಧೈರ್ಯದಿಂದಲೂ, ನಿಯಮದಿಂದಲೂ ಕಾಪಾಡುತ್ತಿರುವೆಯೊ ಆ ಧರ್ಮವೇ ನಿನ್ನನ್ನು ಕಾಪಾಡಲಿ." ಎಂಬ ಮಾತೃ ವಾಕ್ಯ ಗೋಚರಿಸುತ್ತದೆ.
ಯಂ ಪಾಲಯಸಿ ಧರ್ಮಂ ತ್ವಂ ಧೃತ್ಯಾ ಚ ನಿಯಮೇನ ಚ।
ಸ ವೈ ರಾಘವಶಾರ್ದೂಲ ಧರ್ಮಸ್ತ್ವಾಮಭಿರಕ್ಷತು ॥
ಧರ್ಯ ನಿಯಮ ಇವುಗಳಿಗೆ ಬೆಲೆ ಬರುವುದು.
Saturday, August 31, 2013
Tuesday, July 30, 2013
Saturday, June 29, 2013
ನ್ಯಾಯ ಸ್ವಾರಸ್ಯ
ಸಂಸ್ಕೃತ ಭಾಷಾ ಸಾಗರದಲ್ಲಿ ಮಾತನ್ನು ಮಾಣಿಕ್ಯ ಮಾಡುಲು ಸಮರ್ಥವಾದ ಹಲವಾರು "ನ್ಯಾಯ" ಗಳು ಇವೆ. ಉದಾಹರಣೆಗೆ ಹಂಸಕ್ಷೀರ ನ್ಯಾಯ, ಕಾಕತಾಳೀಯ ನ್ಯಾಯ, ಮಂಡೂಕ ತೋಲನ ನ್ಯಾಯ ಇತ್ಯಾದಿ. ನಮ್ಮ ಆಡು ಭಾಷೆಯಲ್ಲಿ ಪ್ರಯೋಗಿಸುವ ಈ ನ್ಯಾಯಗಳಿಂದ ಭಾಷೆಗೆ ಒಂದು ರೀತಿ ಸ್ವಾರಸ್ಯ, ಮೆರುಗು ದೊರೆಯುವುದರಲ್ಲಿ ಸಂಶಯವೇ ಇಲ್ಲ. ಉಪಮೆಗಳ ಸಮ್ಯಗ್ಪ್ರಯೋಗದಿಂದ ಅರ್ಥ ಸ್ಪಷ್ಟತೆ ಕೂಡ ಉಂಟಾಗುತ್ತದೆ. ಕೆಲವು ನ್ಯಾಯಗಳು ಆಡುಭಾಷೆಯ ಹಾಸು ಹೊಕ್ಕಾಗಿವೆ.
ಈಗ ಒಂದೆರಡು ನ್ಯಾಯಗಳನ್ನು ಪರಿಶೀಲಿಸೋಣ:
ಪೀಲು ಪತ್ರ ಫಲ ನ್ಯಾಯ: ಪೀಲು ಎಂಬುದು ಭರತವರ್ಷದಲ್ಲಿ ಕಂಡು ಬರುವ ಒಂದು ಸಸ್ಯ ಜಾತಿಯ ಪ್ರಬೇಧ. ಪೀಲುವಿನಲ್ಲಿ ಎಲೆಗಳು ಬಹಳ ಕಹಿ. ಆದರೆ ಹಣ್ಣುಗಳು ಮಾತ್ರ ಅಷ್ಟೇ ಸಿಹಿ. ಹೀಗೆ ಒಂದೇ ತರುವಿನಲ್ಲಿ ಸಿಹಿ ಮತ್ತು ಕಹಿ ಅಡಕವಾಗಿರುವಾಗ ಪೀಲು ಪತ್ರ ಫಲ ನ್ಯಾಯ ವನ್ನು ಉಲ್ಲೇಖಿಸುತ್ತೆವೆ. ರಾವಣ ವಿಭೀಷಣರು ಒಂದೇ ತಾಯಿ ಮಕ್ಕಳಾಗಿಯೂ ವ್ಯತಿರಿಕ್ತ ಮನೋಭಾವದವರಾಗಿದ್ದ ಹಾಗೆ.
Thursday, May 30, 2013
Tuesday, April 30, 2013
ಶಾಸ್ತ್ರ ಮತ್ತು ಕಲೆ
ಇರುವ ಪದಾರ್ಥಗಳ ಸ್ವರೂಪವನ್ನು ತಿಳಿಯುವುದು ಶಾಸ್ತ್ರ, ಹೊಸದನ್ನು ಸೃಷ್ಟಿ ಮಾಡುವುದು ಕಲೆ.
- ರಾಳ್ಳಪಲ್ಲಿ ಅನಂತ ಕೃಷ್ಣ ಶರ್ಮ
- ರಾಳ್ಳಪಲ್ಲಿ ಅನಂತ ಕೃಷ್ಣ ಶರ್ಮ
Sunday, March 31, 2013
ದಕ್ಷಿಣಾಮೂರ್ತಿ ಸ್ತೋತ್ರ
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಸ್ತೋತ್ರ
ಸಾಹಿತ್ಯದಲ್ಲಿ ಭಕ್ತಿ ಪ್ರಧಾನ ಹಾಗು ವಿಚಾರಪ್ರಧಾನ ಎಂಬ ವಿಂಗಡನೆ ಸಾಧ್ಯ. ವಿಚಾರ
ಸಾಹಿತ್ಯದಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮುಖ್ಯ ಹಾಗು ಅತಿಶ್ರೇಷ್ಟ ಎಂದು
ಪರಿಗಣಿಸಬಹುದು ಇದರಲ್ಲಿ ಕೇವಲ ಹತ್ತು ಶ್ಲೋಕಗಳು ಇದ್ದರೂ ಗಹನ ಅರ್ಥಗರ್ಭಿತವಾಗಿದ್ದು,
ವಿದ್ವಾಂಸರು ಹಲವು ತಿಂಗಳುಗಳ ಕಾಲ ಈ ಸ್ತೋತ್ರದ ಪ್ರವಚನಗಳನ್ನು
ನೀಡಿದ್ದಾರೆ.ಪ್ರಮುಖವಾದ ಹತ್ತು ಉಪನಿಷತ್ತುಗಳ ಸಾರವೇ ಇದರಲ್ಲಿ ಅಡಕವಾಗಿದ್ದು, ಇದು
ವೇದಾಂತ ವಿಷಯದ ಆಗರವಾಗಿದೆ. ಮಾಂಡೂಕ್ಯೋಪನಿಷತ್ತಿನ ಅವಸ್ಥಾತ್ರಯ ಪಕ್ರಿಯೆ,
ಬೃಹದಾರಣ್ಯಕದ ಸರ್ವಾತ್ಮ ಭಾವ, ಛಾಂದೋಗ್ಯದ ಕಾರ್ಯಕಾರಣ ಪಕ್ರಿಯೆ, ತತ್ವಮಸಿ ವಾಕ್ಯಾರ್ಥ
ವಿಚಾರ ಸಾಮಾನ್ಯ ವಿಶೇಷ ಪ್ರಕ್ರಿಯೆ -- ಈ ವಿಚಾರಗಳು ವರ್ಣಿತವಾಗಿವೆ.
ವಿ. ಸೂ : ಮಾರ್ಚ್ ೧೭ ರಿಂದ ಮಾರ್ಚ್ ೨೧ ರ ವರೆಗೆ ಸಚ್ಚಿದಾನಂದ ಅದ್ವೈತಾಶ್ರಮದ ಶ್ರೀ ಶ್ರೀ ಅದ್ವಯಾನಂದೇದ್ರ ಸರಸ್ವತೀ ಸ್ವಾಮಿಗಳು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಯಜ್ಞ ಪಂಚಾಹ ಕಾರ್ಯಕ್ರಮವನ್ನು ರಸಧ್ವನಿ ಕಲಾ ಕೇಂದ್ರದಲ್ಲಿ ನಡೆಯಿತು
ವಿ. ಸೂ : ಮಾರ್ಚ್ ೧೭ ರಿಂದ ಮಾರ್ಚ್ ೨೧ ರ ವರೆಗೆ ಸಚ್ಚಿದಾನಂದ ಅದ್ವೈತಾಶ್ರಮದ ಶ್ರೀ ಶ್ರೀ ಅದ್ವಯಾನಂದೇದ್ರ ಸರಸ್ವತೀ ಸ್ವಾಮಿಗಳು ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಯಜ್ಞ ಪಂಚಾಹ ಕಾರ್ಯಕ್ರಮವನ್ನು ರಸಧ್ವನಿ ಕಲಾ ಕೇಂದ್ರದಲ್ಲಿ ನಡೆಯಿತು
Tuesday, February 26, 2013
ಜಯೋಸ್ತುತೇ ಜಯೋಸ್ತುತೇ
ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ ದೇಹ ತ್ಯಾಗ ಮಾಡಿದ ದಿನ : ೨೬ - ಫೆಬ್ರವರಿ - ೧೯೬೬
ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂ ಪುಣ್ಯ ಭೂಶ್ಚೈವ ಸವೈ ಹಿಂದು ರಿತಿಸ್ಮೃತಃ ||
"ಯಾರು ಭಾರತವನ್ನು ತನ್ನ ಪಿತೃಭೂಮಿ, ಮಾತೃಸ್ವರೂಪ, ಪುಣ್ಯಭೂಮಿ ಅಂತ ಭಾವಿಸುತ್ತಾನೋ, ಅವನು ಎಲ್ಲೇ ಇರಲಿ ಆತ ಹಿಂದೂ, ಭಾರತೀಯ"
Wednesday, January 30, 2013
Thursday, December 27, 2012
ಎನಿತು ಧನ್ಯನೋ ಪಾರ್ಥ!
ಒಮ್ಮೆ ಇಂದ್ರನು ಶ್ರೀ ಕೃಷ್ಣನನ್ನು ಕುರಿತು ಒಂದು ವರವನ್ನು ಪ್ರದಾನ ಮಾಡುವುದಾಗಿ ಹೇಳಿದನು.ಏನು ವರವನ್ನೀಯಲಿ ಎಂದು ವಜ್ರಾಯುಧಧರನು ಮುರಾರಿಯನ್ನು ಕೇಳಲಾಗಿ, ಇಂದ್ರನ ಪುತ್ರನಾದ ಅರ್ಜುನನ ಶಾಶ್ವತ ಸಖ್ಯವನ್ನು ಬೇಡಿದನಂತೆ ಮುರವೈರಿ. ಸಕಲ ಚರಾಚರರ ಒಡೆಯ, ಮುನಿಸಂಕುಲವೆಲ್ಲ ಮೂರು ಕಾಲ ಭಜಿಸುವ ಸ್ವಾಮೀ ತಾನು ಅರ್ಜುನನ ಸ್ನೇಹಕ್ಕೆ ಹಾತೊರೆಯುವುದಾದರೆ, ಎನಿತು ಧನ್ಯನೋ ಪಾರ್ಥ!
Wednesday, November 28, 2012
ಬಿಟ್ಟು ಹೊರಟಿಹ ಠಕ್ಕ
ಬಿಟ್ಟು ಹೊರಟಿಹ ಠಕ್ಕ
ಕಿಟಕಿಯಿಂದಲಿ ಕಾಂಬ
ನಭದೆ ಹೊಳೆಯುವ ಶಶಿಯ
ಝೆನ್ ಕವಿಗಳು ಚಂದ್ರನನ್ನು ಜಾಗೃತ ಚಿತ್ತಕ್ಕೆ ಪ್ರತಿಮೆಯಾಗಿ ಬಹಳಷ್ಟು ಬಾರಿ ಬಳಸುವುದುಂಟು. ಝೆನ್ ಗುರು ರಯೋಕನ್ ಒಮ್ಮೆ ತನ್ನ ಗುಡಿಸಲಿಗೆ ಬಂದಾಗ ಕಳ್ಳನೊಬ್ಬ ಗುಡಿಸಲಿನಲ್ಲಿ ಇದ್ದ ಎಲ್ಲ ವಸ್ತುಗಳನ್ನು ದೋಚಿ ಓಡಿಹೋಗುತ್ತಿದ್ದ. ಅವಸರದಲ್ಲಿ ಒಂದು ಪೀಠವನ್ನು ಉಳಿಸಿ ಓಡಿದನಂತೆ. ಮನೆಯ ಒಳಗೆ ಬಂದ ಝೆನ್ ಗುರು ಆ ಪೀಠವನ್ನೂ ಹೊತ್ತು, ಕಳ್ಳನನ್ನು ಹಿಂಬಾಲಿಸಿ , ಅವನಿಗೆ ಕೊಟ್ಟು ಬಿಟ್ಟನಂತೆ. ಎಲ್ಲವನ್ನೂ ದೋಚಿದರು ಸಹ ಕಿಟಕಿಯಲ್ಲಿ ಬೋಧಿಯ ಸ್ವರೂಪವಾದ ಚಂದ್ರನನ್ನು ದೊಚಲಾದೀತೇ? ಈ ಸಂದರ್ಭದಲ್ಲಿ ಬರೆದ ಹೈಕು ಇದಾಗಿದೆ.
The thief left it behind:
the moon
at my window
Sunday, October 28, 2012
ವಿಜ್ಞಾನ ಮತ್ತು ಕಲೆ
ಭಾರತದ ಪರಮಾಣು ಪಿತಾಮಹ ರೆಂದು ಖ್ಯಾತರಾಗಿರುವ ಹೋಮಿ ಜೆಹಾಂಗೀರ್ ಭಾಭಾ ಅವರು ದೇಶ ಕಂಡ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು. ವಿಜ್ಞಾನ-ತಂತ್ರಜ್ಞಾನವೇ ಅಲ್ಲದೆ, ಭಾಭಾ ಅವರು ಉತ್ತಮ ಆಡಳಿತಕಾರರಾಗಿ ಸಹ ಭಾರತಕ್ಕೆ ಕೊಡುಗೆ ನೀಡಿದರು.ಭಾಭಾ ಅಣು ಸಂಶೋಧನಾ ಕೇಂದ್ರ,ಟಾಟಾ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮುಂತಾದ ಉನ್ನತ ಮಟ್ಟದ ಸಂಸ್ಥೆಗಳನ್ನೂ ಹುಟ್ಟುಹಾಕಿದರು. ೧೯೬೬ ರಲ್ಲಿ ಭಾಭಾ ಅವರ ಅಕಾಲಿಕ ಮರಣ ಸಂಭವಿಸಿದಾಗ ಕಲಾ ಪೋಷಕರಾದ ವಾನ್ ಲೆಯ್ದೆನ್ ಅವರು -- "ಭಾರತದ ಕಲಾ ಪ್ರಪಂಚ ಅನಾಥ ವಾಯಿತು" ಎಂದು ಉದ್ಗರಿಸಿದರು. ಇದೇನು, ಮೇಲು ದರ್ಜೆಯ ವಿಜ್ಞಾನಿ ಇಲ್ಲವಾದರೆ ಕಲಾ ಸಾಮ್ರಾಜ್ಯ ಹೇಗೆ ಬಡವಾಯಿತು ಎಂದು ಪ್ರಶ್ನಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಭಾಭಾ ಅವರ ಬುದ್ಧಿ - ಜ್ಞಾನಗಳು ವಿಜ್ನಾನಿಯದ್ದಾದರೆ, ಹೃದಯವು ಮಾತ್ರ ಅಪ್ಪಟ ಕಲಾವಿದನದ್ದು, ಸಹೃದಯನದ್ದು. ಸರ್. ಸಿ. ವಿ. ರಾಮನ್ ಅವರು ಭಾಭಾರನ್ನು ಲಿಯೋ ನಾರ್ಡೋ ಡಾ ವಿಂಚಿ ಗೆ ಹೋಲಿಸಿದರು. ಹೋಲಿಕೆ ಅತ್ಯಂತ ಸಮಜಸವಾಗಿದೆ. ಡಾ ವಿಂಚಿ ಯಂತೆ ಭಾಭಾ ಸಹ ಬಹುಮುಖ ಪ್ರತಿಭೆ. ಭಾಭಾ ಅವರು ಫಿಲ್ ಹಾರ್ಮಾನಿಕ್ ಆರ್ಕೆಸ್ತ್ರದಲ್ಲಿ ( ವಾದ್ಯ ಗೋಷ್ಠಿ ಯಲ್ಲಿ ) ವಯೋಲಾ ನುಡಿಸುತ್ತಿದ್ದರು. ಕೇಂಬ್ರಿಡ್ಜ್ ನ ನೌಕಾ ತಂಡದಲ್ಲಿ ( ರೆಗಟ್ಟ) ದಲ್ಲಿ ದೋಣಿ ನಡೆಸುವ ಅಂಬಿಕರಾಗಿದ್ದರು, ಇದಲ್ಲದೆ ಮೊಜಾರ್ಟ್ ನ ' ದಿ ಮ್ಯಾರೇಜ್ ಆಫ್ ಫಿಗಾರೊ' ರೂಪಕಕ್ಕೆ ರಂಗ ಸಜ್ಜಿಕೆ ಮತ್ತು ಕುಂಚ ಹಿಡಿದಿದ್ದರು . ವಿಜ್ಞಾನಿಯಾಗಿ ಪರಮಾಣುಗಳ ಒಳಹೊಕ್ಕು ಬೇಧಿಸಿದ ಭಾಭಾ, ಕಲಾವಿದನಾಗಿ ಆಂತರ್ಯದ
ಹೃದಯದಾಳವನ್ನು ಶೋಧಿಸಿದರು. ಕವಿಹೃದಯಿ ಭಾಭಾ ಒಮ್ಮೆ ಹೀಗೆಂದಿದ್ದರು ನನ್ನ ಜೀವಿತದ ಅವಧಿಯನ್ನು ಕಾಲ ಪರಿಮಿತಿಯಿಂದ ಹೆಚ್ಚಿಸಿಕೊಳ್ಳಲಾದು, ಆದರೆ ತೀವ್ರತೆಯನ್ನು ವೃದ್ಧಿಸುವುದರಿಂದ ಅದನ್ನು (ಜೀವಿತವನ್ನು) ವೃದ್ದಿ ಸಿ ಕೊಳ್ಳುತ್ತೇನೆ. ಕಲೆ, ಸಂಗೀತ, ಕಾವ್ಯ - ಇವುಗಳ ವ್ಯವಸ್ಥಿತಿಗಳಿಂದ ನನ್ನ ಒಂದೇ ಧ್ಯೇಯವೆಂದರೆ - ಕಲಾವ್ಯವಸ್ಥಿತಿ ಯಿಂದ ಜೀವನ ತೀವ್ರತೆಯ ಅನುಸಂಧಾನ
Sunday, September 30, 2012
ಪುಟ್ಟಿ
ಶಿಶುವಿಹಾರದಲ್ಲಿ ಚಿಣ್ಣರೆಲ್ಲರೂ ಬಣ್ಣದ ಬಳಪಗಳನ್ನು ಹಿಡಿದು ಚಿತ್ರ ಬಿಡಿಸುವುದರಲ್ಲಿ ಮಗ್ನರಾಗಿದ್ದರು. ಸವಿತಾ ಟೀಚರ್ ತರಗತಿಯನ್ನು ಸುತ್ತು ಹಾಕುತ್ತ, ಯಾವ ಮಗುವಿನ ಕುಂಚ ಏನನ್ನು ಅವತರಿಸುತ್ತಿದೆ ಎಂದು ನೋಡುತ್ತಿದ್ದರು . ಪುಟ್ಟಿಯ ಪಕ್ಕ ನಿಂತು "ಇದೇನು ಪುಟ್ಟಿ, ಏನು ಬಿಡಿಸುತ್ತಿದೀಯ?" ಎಂದ ಕೇಳಿದರು. "ದೇವರನ್ನು ಬಿದುಸುತ್ತಿದೀನಿ" ಎಂದಳು ಪುಟ್ಟಿ. ಆದರೆ ಯಾರೂ ದೇವರನ್ನು ನೋಡಿಯೇ ಇಲ್ಲವಲ್ಲ ಎಂದರು ಸವಿತಾ ಟೀಚರ್ . "ಶ್ ! .. ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರು ನೋಡುವರು ಎಂದಳು ಮುಗ್ಧ ಪುಟ್ಟಿ.
Subscribe to:
Posts (Atom)























