Monday, November 12, 2007

ಸವ್ಯಸಾಚಿ

--
ಸವ್ಯಸಾಚಿ,
ಎರಡೂ ಕೈ ಚಾಚಿ,
ನಾಚದೆ
ಬಾಚಿ ಬಾಚಿ,
ಕಾಳು ಗೀಳು ಹಾಳು ಮೂಳು ತಿಂದು,
ಆವರಿಸಿದೆ ಕಫ ವಾತ ಪಿತ್ತ;

ಅವನೇನು ಮಾಡಲಾದೀತು
ಮೂಡಿದರೆ ವಾತ ಪಿತ್ತ.
ಕಿಟ್ಟಪ್ಪ ನುಡಿದಿರಲು:
"ಮಗನೇ, ನೀ ಮಾತ್ರ ನಿಮಿತ್ತ"
---

ಹಿನ್ನೆಲೆ:

'ಸವ್ಯಸಾಚಿ' ಅಂದರೆ ಎರಡೂ ಕೈಗಳನ್ನು ಸಮಶಕ್ತಿಯಿಂದ ಬಳಸಲು ಶಕ್ತಿವುಳ್ಳವ.ಮಹಾಭಾರತದ ಅರ್ಜುನ. ಏಡಬಲಗಳೆನ್ನದೆ ಬಾಣಪ್ರಯೋಗ ಮಾಡಬಲ್ಲ ಸಾಹಸಿ. ಶ್ರೀ ಕೃಷ್ಣ, ಅರ್ಜುನನ್ನನ್ನು ಕುರಿತು: 'ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್" ಎಂದು ಗೀತೆಯಲ್ಲಿ ಉಪದೇಶಿಸುತ್ತಾನೆ. ನಮ್ಮ ಚುಟುಕದ ಸವ್ಯಸಾಚಿ, ಏಡಗೈ, ಬಲಗೈ ಭೇದ ತೋರದೆ, ಸಿಕ್ಕಿದ್ದೆಲ್ಲ ನುಂಗಿ, ನೀರು ಕುಡಿದು, ವಾತ-ಪಿತ್ತ ಬರಿಸಿಕೊಳ್ತಾನೆ. ಪಿತ್ತವಾದ್ರು, ಅವನು ನಿಮಿತ್ತ ಮಾತ್ರ ಅನ್ನೊ ಭಾವ ಹಿಡಿದು ಗೀಚಿದ ಅಣಕ ಚುಟುಕ.

--

No comments: