ಭಕ್ತನ ತಪಸ್ಸಿಗೆ ಒಲಿದ ಮುಕ್ಕಣನು, ಆಲಿಂಗಿಸಿ ಅಭಯ ತೊರಿದ ಕಾರಣ ನಾಗಪಟ್ಟಣದ ಮಹೇಶ್ವರಸ್ವಾಮಿಗೆ ಕಾಯಾರೋಹಣೇಶ್ವರ ಎಂದು ಕರೆಯುವ ವಾಡಿಕೆ , ಐತಿಹ್ಯ.ಮುತ್ತುಸ್ವಾಮಿ ದೀಕ್ಷಿತರು ನಾಗಪಟ್ಟಣದ ಕ್ಷೇತ್ರಪುರಾಣ ವಿವರಿಸುತ್ತ ಕರ್ನಾಟಕ ದೇವಗಾಂಧಾರ ರಾಗದಲ್ಲಿ ಕಾಯಾರೋಹಣೇಶ್ವರನನ್ನು ಕೊಂಡಾಡಿದ್ದಾರೆ.
ಸತ್ಯೋಜಾತ,ಅಘೋರ,ತತ್ಪುರುಷ,ಈಶಾನಂ,ವಾಮದೇವಸಂಯುಕ್ತ ಪಂಚಾನನ ಸ್ವಾಮಿಯ ವರ್ಣನೆ ಭಕ್ತಿಪೂರ್ವಕವಾಗಿಯೂ,ಕಲಿ ಕಲ್ಮಷನಾಶೋಪಕಾರಿಯೂ ಆಗಿದೆ.ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'.
ನನ್ನ ಇಂದಿನ ಗುನುಗುವಿಕೆ -- 'ಕಾಯಾರೋಹಣೇಶಂ ಭಜರೇ ಮಾನಸ'
ರಚನೆ: ಗುರುವರ್ಯ ಶ್ರೀಮುತ್ತುಸ್ವಾಮಿ ದೀಕ್ಷಿತರು.
ರಾಗ: ಕರ್ನಾಟಕ ದೇವಗಾಂಧಾರ - ೨೨ ನೇ ಮೇಳಕರ್ತ ಖರಹರಪ್ರಿಯ ಜನ್ಯ.
ತಾಳ : ರೂಪಕ.
ಕಾಯಾರೋಹಣೇಶಂ ಭಜರೇ ಮಾನಸ
ಕಲಿಕಲ್ಮಷಾಪಹಂ ಶಿವರಾಜಧಾನಿ ಕ್ಷೇತ್ರಸ್ಥಿತಂ |ಪ |
ಭಯಾಪಹಂ ದಿಕ್ಪಾಲಾಕಾಧಿ ವಿನುತ ಮಹೇಶ್ವರಂ
ಮಾಯಾಮಯ ಜಗದಾಧಾರಂ ಗುರುಗುಹೋಪಚಾರಂ |ಅನು|
ನೀಲಾಯತಾಕ್ಷಿ ಮನೊಲ್ಲಾಸ ಕಾರಣಂ
ನಿತ್ಯ ಶುದ್ಧ ಸತ್ವಗುಣಂ ಭುಕ್ತಿ ಮುಕ್ತಿ ಪ್ರಧ ನಿಪುಣಂ
ಪಾಲಿತ ಭಕ್ತಂ ಪಂಚಾನನಂ ಪ್ರಣತ ಗಜಾನನಂ
ಬಾಲಚಂದ್ರ ಶೇಖರ ಭಾವಪಾಷಮೊಚನಂ ತ್ರಿನಯನಂ |ಚ|
ಶ್ರೀ ಗುರುಗುಹಾರ್ಪಣಮಸ್ತು ||
.
2 comments:
ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯವೈ ನಮೋ ನಮಃ - ಶ್ರೀರುದ್ರನಿಗೆ ಪಂಚಾಮೃತ ಅಭಿಷೇಕ ಮಾಡುವಾಗ ಈ ಐದೂ ನಾಮಾವಳಿಗಳನ್ನು ಉಪಯೋಗಿಸುವೆವು.
ಮುಕ್ಕಣ್ಣನು ನಾಗಪಟ್ಟಣದಲ್ಲಿ ದಯೆ ತೋರಿದ ಆ ಶ್ರೇಷ್ಠ ಭಕ್ತನ್ಯಾರು? ಬೇಡರ ಕಣ್ಣಪ್ಪನೇ? ಬಹಳ ಉತ್ತಮ ಕೃತಿಯನ್ನು ನೆನಪಿಗೆ ತಂದುದ್ದಕ್ಕೆ ವಂದನೆಗಳು.
ಈಗ ನಾಗಪಟ್ಟಣದ ಹೆಸರು ಬದಲಾಗಿ ಈ ಸ್ಥಳದ ಮಹಾತ್ಮೆ ಗೌಣವಾಗುತ್ತಿದೆಯೆನ್ನಿಸುತ್ತಿದೆ.
ಶ್ರೀನಿವಾಸ ರಾಯರು ಬ್ಲಾಗಾಯಣದ ಎಲ್ಲ ಪೋಸ್ಟುಗಳನ್ನು ಓದಿ , ಮಾರ್ಗದರ್ಶನ - ಪ್ರೋತ್ಸಾಹ ನೀಡುತ್ತಿರುವುದ್ದಕ್ಕೆ ಧನ್ಯವಾದಗಳು.
ಕಣ್ಣಪ್ಪನೇ ಇರಬೇಕು ಆ ಮಹಾಭಕ್ತ. ಅಮ್ತರ್ಜಾಲದಲ್ಲೆ ಎಲ್ಲೊ ಕಂಡ ವಿಷಯವನ್ನು ಇಲ್ಲಿ ಸೂಚಿಸಿದೆನೆ ವಿನಃ ನನಗೆ ಈ ಕ್ಷೇತ್ರ ಪುರಾಣದ ಬಗೆಗೆ ನನಗೆ ಅರಿವಿಲ್ಲ.
Post a Comment