Wednesday, April 30, 2014

ಸಂಗೀತ ಜ್ಞಾನ

ತ್ರಿವರ್ಗ ಫಲದಾಃ ಸರ್ವೇ ದಾನಯಜ್ಞ ಜಪಾದಯಃ ।
ಏಕಂ ಸಂಗೀತ ವಿಜ್ಞಾನಂ ಚತುರ್ವರ್ಗ ಫಲಪ್ರದಂ ।।

ಶಿವಸರ್ವದಲ್ಲಿ ಹೀಗೆಂದಿದ್ದಾರೆ :
ದಾನ ಮಾಡುವುದು, ಯಜ್ಞ ಯಾಗಾದಿ ಕರ್ಮಾಚರಣೆ, ಜಪ ರೂಪದಲ್ಲಿ ಮಂತ್ರ ಪುರಸ್ಚರಣೆ -- ಇವುಗಳಿಂದ ಧರ್ಮ, ಅರ್ಥ , ಕಾಮ -- ಈ ಮೂರು ಫಲಗಳು ಲಭ್ಯವಾಗುವವು. ಸಂಗೀತ ಜ್ಞಾನವಾದರೋ ಈ ಮೂರರ ಜತೆಗೆ ಮೋಕ್ಷವನ್ನೂ ಕೊಡಬಲ್ಲದು 

Sunday, March 30, 2014

ಕಾಯೋ ಶ್ರೀ ಗೌರಿ ಕರುಣಾಲಹರಿ



ಕಾಯೋ ಶ್ರೀ ಗೌರಿ ಕರುಣಾಲಹರಿ
ತೊಯಜಾಕ್ಷಿ ಶಂಕರೀಶ್ವರಿ
ವೈಮಾನಿಕ ಭಾಮಾರ್ಚಿತ ಕೊಮಲಕರ ಪಾದೇ
ಶ್ರೀಮಾನ್ವಿತ ಭೂಮಾಸ್ಪದೆ ಕಾಮಿತ ಫಲದೇ .. ||||
ಶುಂಬಾದಿಮ ದಾಮ್ಬೋನಿಧಿ ಕುಮ್ಬಜ ನಿಭ ದೇವಿ
ಜಮ್ಭಾಹಿತ ಸಂಭಾವಿತೆ ಶಾಂಭವಿ ಶುಭವೀ ||||
ಶ್ರೀ ಜಯಚಾಮುಂಡಿಕೆ ಶ್ರೀ ಜಯಚಾಮೆಂದ್ರ
ನಾಮಾಂಕಿತ ಭೂಮೀಂದ್ರ ಲಲಾಮನ ಮುದದೆ ||||

Thursday, January 30, 2014

ಶ್ರೀ ಕೃಷ್ಣ ಸ್ತುತಿ



ಏಕೋಪಿ ಕೃಷ್ಣಸ್ಯ ಕೃತಃ ಪ್ರಣಾಮಃ ದಶಾಶ್ವಮೇಧಾವ ಭ್ರುತೇನ ತುಲ್ಯಃ ।
ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣ  ಪ್ರಣಾಮಿ ನ ಪುನರ್ಭವಾಯ ।।

 ಶ್ರೀ ಕೃಷ್ಣನಿಗೆ ಮಾಡಿದಂತಹ ಒಂದು ಪ್ರನಾಮವು ಹತ್ತು ಅಶ್ವಮೇಧ ಯಾಗಗಳ ಅವಭೃತ ಸ್ನಾನಕ್ಕೆ ಸಮಾನವಾಗಿದೆ. ಆದರೆ  ಈ ಅಶ್ವಮೇಧ ಯಾಗದ ಪುಣ್ಯ ಭೊಗಿಸಿದ ನಂತರ ಮತ್ತೆ ಸಂಸಾರ ಬಂಧನಕ್ಕೆ  ಬರುತ್ತಾರೆ. ಶ್ರೀ ಕೃಷ್ಣನಿಗೆ ನಮಸ್ಕಾರ ಮಾಡಿದವರು ಮತ್ತೆ ಸಂಸಾರ ಬಂಧನಕ್ಕೆ ಒಳಗಾಗುವುದಿಲ್ಲ.

Friday, November 29, 2013

ಸನಾತನ ಧರ್ಮ

 ಮಹಾಲಕ್ಷ್ಮೀ ಅಷ್ಟಕ, ಶ್ರೀ ಗುರು ಅಷ್ಟಕ, ಕಾಲಭೈರವಾಷ್ಟಕ ಇತ್ಯಾದಿ ಹಲವಾರು ಅಷ್ಟಕಗಳನ್ನು ಧಾರ್ಮಿಕ ಸಾಹಿತ್ಯದಲ್ಲಿ ಹೇರಳವಾಗಿವೆಯಷ್ಟೇ. ಅದೇ ರೀತಿ ಚಿರಂತನ, ಪ್ರಾಚೀನ ಹಾಗು ಅನಾದಿಯಾದ ಸನಾತನ ಧರ್ಮದ ಕುರಿತು ಒಂದು ಅಷ್ಟಕವನ್ನು ವೇದಾಂತ ಚಕ್ರವರ್ತಿ. ವಿದ್ವಾನ್ ಕೆ. ಜಿ .ಸುಬ್ರಾಯಶರ್ಮ ಅವರು ರಚಿಸಿರುವ  "ಧರ್ಮ- ವೇದ - ಬ್ರಹ್ಮ" ಎಂಬ ಪುಸ್ತಿಕೆಯಲ್ಲಿ ನೋಡಿದೆ. ಬಹಳ ಸ್ವಾರಸ್ಯಕರವಾದ, ಉಪಯುಕ್ತವಾದ ಈ ಅಷ್ಟಕವನ್ನು ಓದುಗರಲ್ಲಿ ಹಂಚಿ ಕೊಳ್ಳುತ್ತಿದ್ದೇನೆ.

ಅನಾದಿನಿಧನಂ  ಶಾಂತಂ ಸರ್ವಪ್ರಾಣಿ ಶುಭಂಕರಂ
ಋಷಿ ಸಂಪೂಜಿತಂ ದಿವ್ಯಂ ಭಜೇ ವೇದಂ ಸನಾತನಂ ॥೧॥

ಸರ್ವಜ್ಞಂ ಸರ್ವವರದಂ ಸರ್ವಶಾಂತಿಕರಂ ಪ್ರಭುಂ ।
ಸರ್ವಶಾಸ್ತ್ರಸದಾಧಾರಂ ಭಜೇ ವೇದಂ ಸನಾತನಂ ॥೨॥

ಪ್ರವೃತ್ತಿ ಧರ್ಮವಕ್ತಾರಂ ತಥಾ ಭ್ಯುದಯದಾಯಕಂ
ಸರ್ವಸಂತ್ಪ್ರದಂ ಕಾಂತಂ ಭಜೇ ವೇದಂ ಸನಾತನಂ ॥೩॥

ನಿವ್ರುತ್ತಿಮಾರ್ಗವಕ್ತಾರಂ ನಿತ್ಯಾನಂದಪ್ರದಾಯಕಂ ।
ಸರ್ವ ಸಂನ್ಯಾಸಿ ಸಂಪೂಜ್ಯಂ ಭಜೇ ವೇದಂ ಸನಾತನಂ ॥೪॥

ವಿಶ್ವಾಧಾರಾಂ ಧರ್ಮಧರಂ ಧರ್ಮಬ್ರಹ್ಮ ಪ್ರಭೊಧಕಂ
ಹಿರಣ್ಯಗರ್ಭ ಗರ್ಭಸ್ಥಂ ಭಜೇ ವೇದಂ ಸನಾತನಂ ॥೫ ॥

ನಿರ್ದೋಷಂ ಸಗುಣಂ ನಿತ್ಯಂ ಸರ್ವಪಾಪಹರಂ ಶುಭಂ
ಶ್ರುತ್ಯಾಮ್ನಾಯಾದಿನಾಮಾನಂ ಭಜೇ ವೇದಂ ಸನಾತನಂ ॥೬ ॥

ಪರಬ್ರಹ್ಮ ಸ್ವರೂಪಂ ತಂ ಸರ್ವವೇದಾಂತ ವಂದಿತಂ
ಅಪೌರುಷೇಯಂ ಸರ್ವಜ್ಞಂ ಭಜೇ ವೇದಂ ಸನಾತನಂ ॥೭॥

ನಿತ್ಯಶುದ್ಧಂ ನಿತ್ಯಬುದ್ಧಂ ನಿತ್ಯಸತ್ಯಸ್ವಾರೂಪಿಣಂ
ನಿತ್ಯಾನಂದ ಪ್ರದಾತಾರಂ ಭಜೇ ವೇದಂ ಸನಾತನಂ ॥೮॥





Tuesday, October 29, 2013

ಗೀತಾಂಜಲಿ

ರಾಜಕುಮಾರನ ಪೋಷಾಕು ಧರಿಸಿದ ಪುಟ್ಟ ಕಂದಮ್ಮನಿಗೆ ಕೊರಳ ಸುತ್ತಲೂ ರತ್ನಹಾರದ ಸರಪಳಿ. ಆಡಳದುವೆ ತೊಡರು.ಪ್ರತಿ ಹೆಜ್ಜೆಯನ್ನು ಅಂಕುಷದಲ್ಲಿಡುವ ಆಡಂಬರ .   ರಾಜ ಪೋಷಾಕು ಎಲ್ಲಿ ಕೊಳೆಯಾಗುವುದೋ , ಎಲ್ಲಿ ಸುಕ್ಕುಗಟ್ಟುವುದೋ ಎಂಬ ಅಳುಕಿನಲ್ಲಿ ಕದಲಿಕೆಗೆ ಕೂಡ ಭೀತಿ .. ಹೇ ಮಾತೆ, ಭೂಮಿಯ ಪವಿತ್ರ ಧೂಳೀ ಕಣಗಳಿಂದ ದೂರವಿಡುವ ಭವ್ಯ ಬಂಧನದಿಂದ ಏನು ಒಳಿತು. ಜೀವಿತದ ಮಹಾಮೇಳಕ್ಕೆ ಪ್ರವೇಶವನ್ನೇ ಕಸಿದುಕೊಳ್ಳುವ ಸಿರಿವಂತಿಕೆ ಭಾಗ್ಯವಾದೀತೇ? 

Sunday, September 29, 2013

ಧರ್ಯ ಮತ್ತು ನಿಯಮ

ವಾಲ್ಮೀಕಿ ರಾಮಾಯಣದ ಅರಣ್ಯ ಕಾಂಡ. ಅಯೋಧ್ಯೆಯಿಂದ ಅರಣ್ಯದೆಡೆಗೆ ಶ್ರೀ ರಾಮಚಂದ್ರ ತೆರಳುತ್ತಿರುವ ಸಂದರ್ಭ.
ಕೌಸಲ್ಯೆಯು ಶ್ರೀರಾಮನಿಗೆ ಮಂಗಳಾಶೀರ್ವಾದವನ್ನು ಮಾಡುತ್ತ -- "ಯಾವ ಧರ್ಮವನ್ನು ನೀನು ಧೈರ್ಯದಿಂದಲೂ, ನಿಯಮದಿಂದಲೂ ಕಾಪಾಡುತ್ತಿರುವೆಯೊ ಆ ಧರ್ಮವೇ ನಿನ್ನನ್ನು ಕಾಪಾಡಲಿ."  ಎಂಬ ಮಾತೃ ವಾಕ್ಯ ಗೋಚರಿಸುತ್ತದೆ.

ಯಂ ಪಾಲಯಸಿ  ಧರ್ಮಂ ತ್ವಂ ಧೃತ್ಯಾ ಚ ನಿಯಮೇನ ಚ।
ಸ ವೈ ರಾಘವಶಾರ್ದೂಲ ಧರ್ಮಸ್ತ್ವಾಮಭಿರಕ್ಷತು ॥

ಧರ್ಯ ನಿಯಮ ಇವುಗಳಿಗೆ ಬೆಲೆ ಬರುವುದು.

Saturday, August 31, 2013

ರಾಮಾಯಣ ಮಾಹಾತ್ಮ್ಯಂ



ಶ್ರೀರಾಮಾಯಣಹೇಮಾದ್ರಿರ್ನೃಸತ್ತ್ವಮಣಿಶೇಖರಃ ।
ಧರ್ಮ ಸ್ರವಂತೀಮಹಿತಃ ಶೋಭತೇ ಸರ್ವಶೋಭನಃ ॥ 

Saturday, June 29, 2013

ನ್ಯಾಯ ಸ್ವಾರಸ್ಯ



ಸಂಸ್ಕೃತ ಭಾಷಾ ಸಾಗರದಲ್ಲಿ ಮಾತನ್ನು ಮಾಣಿಕ್ಯ ಮಾಡುಲು  ಸಮರ್ಥವಾದ  ಹಲವಾರು "ನ್ಯಾಯ" ಗಳು ಇವೆ. ಉದಾಹರಣೆಗೆ ಹಂಸಕ್ಷೀರ ನ್ಯಾಯ, ಕಾಕತಾಳೀಯ ನ್ಯಾಯ, ಮಂಡೂಕ ತೋಲನ ನ್ಯಾಯ ಇತ್ಯಾದಿ. ನಮ್ಮ ಆಡು ಭಾಷೆಯಲ್ಲಿ ಪ್ರಯೋಗಿಸುವ  ಈ ನ್ಯಾಯಗಳಿಂದ ಭಾಷೆಗೆ ಒಂದು ರೀತಿ ಸ್ವಾರಸ್ಯ, ಮೆರುಗು ದೊರೆಯುವುದರಲ್ಲಿ ಸಂಶಯವೇ ಇಲ್ಲ. ಉಪಮೆಗಳ ಸಮ್ಯಗ್ಪ್ರಯೋಗದಿಂದ ಅರ್ಥ ಸ್ಪಷ್ಟತೆ ಕೂಡ ಉಂಟಾಗುತ್ತದೆ. ಕೆಲವು ನ್ಯಾಯಗಳು ಆಡುಭಾಷೆಯ ಹಾಸು ಹೊಕ್ಕಾಗಿವೆ.

ಈಗ ಒಂದೆರಡು ನ್ಯಾಯಗಳನ್ನು ಪರಿಶೀಲಿಸೋಣ:
ಪೀಲು ಪತ್ರ ಫಲ ನ್ಯಾಯ: ಪೀಲು ಎಂಬುದು ಭರತವರ್ಷದಲ್ಲಿ ಕಂಡು ಬರುವ ಒಂದು ಸಸ್ಯ ಜಾತಿಯ ಪ್ರಬೇಧ. ಪೀಲುವಿನಲ್ಲಿ ಎಲೆಗಳು ಬಹಳ ಕಹಿ. ಆದರೆ ಹಣ್ಣುಗಳು ಮಾತ್ರ ಅಷ್ಟೇ ಸಿಹಿ. ಹೀಗೆ ಒಂದೇ ತರುವಿನಲ್ಲಿ ಸಿಹಿ ಮತ್ತು ಕಹಿ ಅಡಕವಾಗಿರುವಾಗ ಪೀಲು ಪತ್ರ ಫಲ ನ್ಯಾಯ ವನ್ನು ಉಲ್ಲೇಖಿಸುತ್ತೆವೆ. ರಾವಣ ವಿಭೀಷಣರು ಒಂದೇ ತಾಯಿ ಮಕ್ಕಳಾಗಿಯೂ ವ್ಯತಿರಿಕ್ತ ಮನೋಭಾವದವರಾಗಿದ್ದ ಹಾಗೆ.


Tuesday, April 30, 2013

ಶಾಸ್ತ್ರ ಮತ್ತು ಕಲೆ

ಇರುವ ಪದಾರ್ಥಗಳ ಸ್ವರೂಪವನ್ನು ತಿಳಿಯುವುದು ಶಾಸ್ತ್ರ, ಹೊಸದನ್ನು ಸೃಷ್ಟಿ ಮಾಡುವುದು ಕಲೆ.

 - ರಾಳ್ಳಪಲ್ಲಿ  ಅನಂತ ಕೃಷ್ಣ ಶರ್ಮ

Sunday, March 31, 2013

ದಕ್ಷಿಣಾಮೂರ್ತಿ ಸ್ತೋತ್ರ

 ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಸ್ತೋತ್ರ ಸಾಹಿತ್ಯದಲ್ಲಿ ಭಕ್ತಿ ಪ್ರಧಾನ ಹಾಗು ವಿಚಾರಪ್ರಧಾನ ಎಂಬ ವಿಂಗಡನೆ ಸಾಧ್ಯ. ವಿಚಾರ ಸಾಹಿತ್ಯದಲ್ಲಿ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಮುಖ್ಯ ಹಾಗು ಅತಿಶ್ರೇಷ್ಟ ಎಂದು ಪರಿಗಣಿಸಬಹುದು ಇದರಲ್ಲಿ ಕೇವಲ ಹತ್ತು ಶ್ಲೋಕಗಳು ಇದ್ದರೂ ಗಹನ ಅರ್ಥಗರ್ಭಿತವಾಗಿದ್ದು, ವಿದ್ವಾಂಸರು ಹಲವು ತಿಂಗಳುಗಳ ಕಾಲ ಈ ಸ್ತೋತ್ರದ ಪ್ರವಚನಗಳನ್ನು ನೀಡಿದ್ದಾರೆ.ಪ್ರಮುಖವಾದ ಹತ್ತು ಉಪನಿಷತ್ತುಗಳ ಸಾರವೇ ಇದರಲ್ಲಿ ಅಡಕವಾಗಿದ್ದು, ಇದು ವೇದಾಂತ ವಿಷಯದ ಆಗರವಾಗಿದೆ. ಮಾಂಡೂಕ್ಯೋಪನಿಷತ್ತಿನ ಅವಸ್ಥಾತ್ರಯ ಪಕ್ರಿಯೆ, ಬೃಹದಾರಣ್ಯಕದ ಸರ್ವಾತ್ಮ ಭಾವ, ಛಾಂದೋಗ್ಯದ ಕಾರ್ಯಕಾರಣ ಪಕ್ರಿಯೆ, ತತ್ವಮಸಿ ವಾಕ್ಯಾರ್ಥ ವಿಚಾರ  ಸಾಮಾನ್ಯ ವಿಶೇಷ ಪ್ರಕ್ರಿಯೆ -- ಈ ವಿಚಾರಗಳು ವರ್ಣಿತವಾಗಿವೆ.

ವಿ. ಸೂ : ಮಾರ್ಚ್ ೧೭ ರಿಂದ ಮಾರ್ಚ್ ೨೧ ರ ವರೆಗೆ  ಸಚ್ಚಿದಾನಂದ ಅದ್ವೈತಾಶ್ರಮದ  ಶ್ರೀ ಶ್ರೀ ಅದ್ವಯಾನಂದೇದ್ರ ಸರಸ್ವತೀ ಸ್ವಾಮಿಗಳು  ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಯಜ್ಞ ಪಂಚಾಹ ಕಾರ್ಯಕ್ರಮವನ್ನು ರಸಧ್ವನಿ ಕಲಾ ಕೇಂದ್ರದಲ್ಲಿ ನಡೆಯಿತು

Tuesday, February 26, 2013

ಜಯೋಸ್ತುತೇ ಜಯೋಸ್ತುತೇ


ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್ ದೇಹ ತ್ಯಾಗ ಮಾಡಿದ ದಿನ : ೨೬ - ಫೆಬ್ರವರಿ - ೧೯೬೬

ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|
ಪಿತೃಭೂ ಪುಣ್ಯ ಭೂಶ್ಚೈವ ಸವೈ ಹಿಂದು ರಿತಿಸ್ಮೃತಃ ||

"ಯಾರು ಭಾರತವನ್ನು ತನ್ನ ಪಿತೃಭೂಮಿ, ಮಾತೃಸ್ವರೂಪ, ಪುಣ್ಯಭೂಮಿ ಅಂತ ಭಾವಿಸುತ್ತಾನೋ, ಅವನು ಎಲ್ಲೇ ಇರಲಿ ಆತ ಹಿಂದೂ, ಭಾರತೀಯ"

Wednesday, January 30, 2013

ತ್ಯಾಗರಾಜಂ ಭಜೆ

ವ್ಯಾಸೋ ನೈಗಮಚರ್ಚಯಾ ಮ್ರುದುಗಿರಾ ವಲ್ಮೀಕ ಜನ್ಮಾಮುನಿಃ ।
ವೈರಾಗ್ಯೇ ಶುಕಮಿವ ಭಕ್ತಿ ವಿಷಯೇ ಪ್ರಹ್ಲಾದ ಏವ ಸ್ವಯಂ ॥
ಬ್ರಹ್ಮಾನಾರದ ಏವ ಚಾSಪ್ರತಿಮಯೋಃ ಸಾಹಿತ್ಯ ಸಂಗೇತಯೋಃ ।
ಯೋ ರಾಮಾಮೃತಪಾನ ನಿರ್ಜಿತ ಶಿವಃ ತಂ ತ್ಯಾಗರಾಜಂ ಭಜೆ ॥



Thursday, December 27, 2012

ಎನಿತು ಧನ್ಯನೋ ಪಾರ್ಥ!

ಒಮ್ಮೆ ಇಂದ್ರನು ಶ್ರೀ ಕೃಷ್ಣನನ್ನು ಕುರಿತು ಒಂದು ವರವನ್ನು ಪ್ರದಾನ ಮಾಡುವುದಾಗಿ ಹೇಳಿದನು.ಏನು ವರವನ್ನೀಯಲಿ ಎಂದು ವಜ್ರಾಯುಧಧರನು ಮುರಾರಿಯನ್ನು ಕೇಳಲಾಗಿ, ಇಂದ್ರನ ಪುತ್ರನಾದ ಅರ್ಜುನನ ಶಾಶ್ವತ ಸಖ್ಯವನ್ನು ಬೇಡಿದನಂತೆ ಮುರವೈರಿ. ಸಕಲ ಚರಾಚರರ ಒಡೆಯ, ಮುನಿಸಂಕುಲವೆಲ್ಲ ಮೂರು ಕಾಲ ಭಜಿಸುವ ಸ್ವಾಮೀ ತಾನು ಅರ್ಜುನನ ಸ್ನೇಹಕ್ಕೆ ಹಾತೊರೆಯುವುದಾದರೆ, ಎನಿತು ಧನ್ಯನೋ ಪಾರ್ಥ!


Wednesday, November 28, 2012

ಬಿಟ್ಟು ಹೊರಟಿಹ ಠಕ್ಕ





ಬಿಟ್ಟು ಹೊರಟಿಹ ಠಕ್ಕ
ಕಿಟಕಿಯಿಂದಲಿ ಕಾಂಬ
ನಭದೆ ಹೊಳೆಯುವ ಶಶಿಯ

ಝೆನ್ ಕವಿಗಳು ಚಂದ್ರನನ್ನು ಜಾಗೃತ ಚಿತ್ತಕ್ಕೆ ಪ್ರತಿಮೆಯಾಗಿ ಬಹಳಷ್ಟು ಬಾರಿ ಬಳಸುವುದುಂಟು. ಝೆನ್ ಗುರು ರಯೋಕನ್ ಒಮ್ಮೆ ತನ್ನ ಗುಡಿಸಲಿಗೆ ಬಂದಾಗ ಕಳ್ಳನೊಬ್ಬ ಗುಡಿಸಲಿನಲ್ಲಿ ಇದ್ದ ಎಲ್ಲ ವಸ್ತುಗಳನ್ನು ದೋಚಿ ಓಡಿಹೋಗುತ್ತಿದ್ದ. ಅವಸರದಲ್ಲಿ ಒಂದು ಪೀಠವನ್ನು ಉಳಿಸಿ ಓಡಿದನಂತೆ. ಮನೆಯ ಒಳಗೆ ಬಂದ ಝೆನ್ ಗುರು ಆ ಪೀಠವನ್ನೂ ಹೊತ್ತು, ಕಳ್ಳನನ್ನು ಹಿಂಬಾಲಿಸಿ , ಅವನಿಗೆ ಕೊಟ್ಟು ಬಿಟ್ಟನಂತೆ. ಎಲ್ಲವನ್ನೂ ದೋಚಿದರು ಸಹ ಕಿಟಕಿಯಲ್ಲಿ ಬೋಧಿಯ ಸ್ವರೂಪವಾದ ಚಂದ್ರನನ್ನು ದೊಚಲಾದೀತೇ? ಈ ಸಂದರ್ಭದಲ್ಲಿ ಬರೆದ ಹೈಕು ಇದಾಗಿದೆ.

The thief left it behind:
the moon
at my window

Sunday, October 28, 2012

ವಿಜ್ಞಾನ ಮತ್ತು ಕಲೆ


ಭಾರತದ ಪರಮಾಣು ಪಿತಾಮಹ ರೆಂದು ಖ್ಯಾತರಾಗಿರುವ ಹೋಮಿ ಜೆಹಾಂಗೀರ್ ಭಾಭಾ ಅವರು ದೇಶ ಕಂಡ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು. ವಿಜ್ಞಾನ-ತಂತ್ರಜ್ಞಾನವೇ ಅಲ್ಲದೆ, ಭಾಭಾ ಅವರು ಉತ್ತಮ ಆಡಳಿತಕಾರರಾಗಿ ಸಹ ಭಾರತಕ್ಕೆ ಕೊಡುಗೆ ನೀಡಿದರು.ಭಾಭಾ ಅಣು ಸಂಶೋಧನಾ ಕೇಂದ್ರ,ಟಾಟಾ ಮೂಲ ವಿಜ್ಞಾನ ಸಂಶೋಧನಾ ಕೇಂದ್ರ ಮುಂತಾದ ಉನ್ನತ ಮಟ್ಟದ ಸಂಸ್ಥೆಗಳನ್ನೂ ಹುಟ್ಟುಹಾಕಿದರು. ೧೯೬೬ ರಲ್ಲಿ ಭಾಭಾ ಅವರ ಅಕಾಲಿಕ ಮರಣ ಸಂಭವಿಸಿದಾಗ ಕಲಾ ಪೋಷಕರಾದ ವಾನ್ ಲೆಯ್ದೆನ್ ಅವರು -- "ಭಾರತದ ಕಲಾ ಪ್ರಪಂಚ ಅನಾಥ ವಾಯಿತು" ಎಂದು ಉದ್ಗರಿಸಿದರು. ಇದೇನು, ಮೇಲು ದರ್ಜೆಯ ವಿಜ್ಞಾನಿ ಇಲ್ಲವಾದರೆ ಕಲಾ ಸಾಮ್ರಾಜ್ಯ ಹೇಗೆ ಬಡವಾಯಿತು ಎಂದು ಪ್ರಶ್ನಿಸಬಹುದು. ಸ್ವಾರಸ್ಯದ ಸಂಗತಿಯೆಂದರೆ ಭಾಭಾ ಅವರ ಬುದ್ಧಿ - ಜ್ಞಾನಗಳು ವಿಜ್ನಾನಿಯದ್ದಾದರೆ, ಹೃದಯವು ಮಾತ್ರ ಅಪ್ಪಟ ಕಲಾವಿದನದ್ದು, ಸಹೃದಯನದ್ದು. ಸರ್. ಸಿ. ವಿ. ರಾಮನ್ ಅವರು ಭಾಭಾರನ್ನು ಲಿಯೋ ನಾರ್ಡೋ ಡಾ ವಿಂಚಿ ಗೆ ಹೋಲಿಸಿದರು. ಹೋಲಿಕೆ ಅತ್ಯಂತ ಸಮಜಸವಾಗಿದೆ. ಡಾ ವಿಂಚಿ ಯಂತೆ ಭಾಭಾ ಸಹ ಬಹುಮುಖ ಪ್ರತಿಭೆ. ಭಾಭಾ ಅವರು ಫಿಲ್ ಹಾರ್ಮಾನಿಕ್ ಆರ್ಕೆಸ್ತ್ರದಲ್ಲಿ ( ವಾದ್ಯ ಗೋಷ್ಠಿ ಯಲ್ಲಿ ) ವಯೋಲಾ ನುಡಿಸುತ್ತಿದ್ದರು. ಕೇಂಬ್ರಿಡ್ಜ್ ನ ನೌಕಾ ತಂಡದಲ್ಲಿ ( ರೆಗಟ್ಟ) ದಲ್ಲಿ ದೋಣಿ ನಡೆಸುವ ಅಂಬಿಕರಾಗಿದ್ದರು, ಇದಲ್ಲದೆ ಮೊಜಾರ್ಟ್ ನ ' ದಿ ಮ್ಯಾರೇಜ್ ಆಫ್ ಫಿಗಾರೊ' ರೂಪಕಕ್ಕೆ ರಂಗ ಸಜ್ಜಿಕೆ ಮತ್ತು ಕುಂಚ ಹಿಡಿದಿದ್ದರು . ವಿಜ್ಞಾನಿಯಾಗಿ ಪರಮಾಣುಗಳ ಒಳಹೊಕ್ಕು ಬೇಧಿಸಿದ ಭಾಭಾ, ಕಲಾವಿದನಾಗಿ ಆಂತರ್ಯದ
ಹೃದಯದಾಳವನ್ನು ಶೋಧಿಸಿದರು. ಕವಿಹೃದಯಿ ಭಾಭಾ ಒಮ್ಮೆ ಹೀಗೆಂದಿದ್ದರು
ನನ್ನ ಜೀವಿತದ ಅವಧಿಯನ್ನು ಕಾಲ ಪರಿಮಿತಿಯಿಂದ ಹೆಚ್ಚಿಸಿಕೊಳ್ಳಲಾದು, ಆದರೆ ತೀವ್ರತೆಯನ್ನು ವೃದ್ಧಿಸುವುದರಿಂದ ಅದನ್ನು (ಜೀವಿತವನ್ನು) ವೃದ್ದಿ ಸಿ ಕೊಳ್ಳುತ್ತೇನೆ. ಕಲೆ, ಸಂಗೀತ, ಕಾವ್ಯ - ಇವುಗಳ ವ್ಯವಸ್ಥಿತಿಗಳಿಂದ ನನ್ನ ಒಂದೇ ಧ್ಯೇಯವೆಂದರೆ - ಕಲಾವ್ಯವಸ್ಥಿತಿ ಯಿಂದ ಜೀವನ ತೀವ್ರತೆಯ ಅನುಸಂಧಾನ

Sunday, September 30, 2012

ಪುಟ್ಟಿ

ಶಿಶುವಿಹಾರದಲ್ಲಿ ಚಿಣ್ಣರೆಲ್ಲರೂ ಬಣ್ಣದ ಬಳಪಗಳನ್ನು ಹಿಡಿದು ಚಿತ್ರ ಬಿಡಿಸುವುದರಲ್ಲಿ ಮಗ್ನರಾಗಿದ್ದರು. ಸವಿತಾ ಟೀಚರ್ ತರಗತಿಯನ್ನು ಸುತ್ತು ಹಾಕುತ್ತ, ಯಾವ ಮಗುವಿನ ಕುಂಚ ಏನನ್ನು ಅವತರಿಸುತ್ತಿದೆ ಎಂದು ನೋಡುತ್ತಿದ್ದರು . ಪುಟ್ಟಿಯ ಪಕ್ಕ ನಿಂತು "ಇದೇನು ಪುಟ್ಟಿ, ಏನು ಬಿಡಿಸುತ್ತಿದೀಯ?" ಎಂದ ಕೇಳಿದರು. "ದೇವರನ್ನು ಬಿದುಸುತ್ತಿದೀನಿ" ಎಂದಳು ಪುಟ್ಟಿ. ಆದರೆ ಯಾರೂ ದೇವರನ್ನು ನೋಡಿಯೇ ಇಲ್ಲವಲ್ಲ ಎಂದರು ಸವಿತಾ ಟೀಚರ್ . "ಶ್ ! .. ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರು ನೋಡುವರು ಎಂದಳು ಮುಗ್ಧ ಪುಟ್ಟಿ.