ಯಾವತ್ ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||
-- ಸುಭಾಷಿತರತ್ನಭಂಡಾರಗಾರ
ಒಳ್ಳೆಯ ಕೆಲಸ ಮಾಡಲು ಮೀನ-ಮೇಷ ಎಣಿಸುವುದೇಕೆ? ಶಕ್ತಿ ಇರುವಾಗಲೇ ಸದ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬೇಕು. ಸಂಸಾರ ತಾಪತ್ರಯಗಳು ಯಾರೊಬ್ಬರನ್ನು ಬಿಟ್ಟಿಲ್ಲ; ಹೀಗಿರುವಾಗ ಸರ್ವರಿಗೂ ಹಿತವನ್ನುಂಟು ಮಾಡುವ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಒಳಿತಲ್ಲವೆ. ನಾಳೆ, ನಾಳೆಯೆಂದು ಬಾರದ ನಾಳೆಗೆ ಮಹೋನ್ನತ ಕಾರ್ಯಗಳಾನ್ನು ಬದಿಗೊತ್ತಿ, ನಗಣ್ಯವಾದ ದೈನಂದಿನ ಚಟುವಟಿಕೆಯಲ್ಲಿ ತಳ್ಳಣಿಸುವುದು ಯಾವ ನ್ಯಾಯ ಹೇಳಿ?
Tuesday, November 29, 2011
Friday, October 28, 2011
ನೀರವ

ಒಕ್ಕಣ್ಣ ಝೇನ್ ಗುರು ಶೋಇಚಿ ದಿವ್ಯಪ್ರಭೆಯಿಂದ ತೇಜೋಮಯವಾಗಿ ಶೋಭಿಸುತ್ತಿದ್ದ. ತೋಫ಼ುಕು ದೇವಳದಲ್ಲಿ ತನ್ನ ಶಿಷ್ಯರಿಗೆ ದೀಕ್ಷೆಯನ್ನೀಯುತ್ತಿದ್ದನು. ದಿನ-ರಾತ್ರಿಯೆನ್ನದೆ ದೇವಳದಲ್ಲಿ ಮೌನವಾವರಿಸಿತ್ತು. ಸುತ್ತಲೂ ಪ್ರಶಾಂತ ಮೌನ. ಮಂತ್ರ ಪಠನವನ್ನೂ ಸಹ ಗುರುಗಳು ನಿಷೇಧಿಸಿದ್ದರು. ಧ್ಯಾನವಲ್ಲದೆ ಶಿಷ್ಯರಿಗೆ ಅನ್ಯ ಶ್ರಮವಿಲ್ಲ. ಹೀಗಿರಲು, ಒಂದಾನೊಂದು ದಿನ, ಬಹುಕಾಲದ ಗುರುಗಳ ನೆರೆಯವನೆನಿಸಿದ ವೃದ್ಧನಿಗೆ ದೇವಾಲಯದಿಂದ ಘಂಟಾನಾದ ಮತ್ತು ಸೂತ್ರಪಠನದ ಧ್ವನಿ ಕೇಳಿ ಬಂತು. ಗುರುಗಳು ಹೊರಟರೆಂದು ಆತನರಿತನಷ್ಟೆ!
Wednesday, September 14, 2011
ಪರೋಪಕಾರಾರ್ಥಮಿದಂ ಶರೀರಂ
ಮೊನ್ನೆ ಬೆಂಗಳೂರು- ಮೈಸೂರು ಮಾರ್ಗದಲ್ಲಿರುವ ಜಾನಪದ ಲೋಕದಲ್ಲಿ ’ಬಿದಿರಮ್ಮ ದೇವಿ’ಯ ಕುರಿತಾದ ಜಾನಪದ ಗೀತೆಯೊಂದನ್ನು ನೋಡಿ, ’ಹರಿ ಹರಿ ಗೋವಿನ’ ಹಾಡು ನೆನಪಿಗೆ ಬಂತು. ದಿಟವೆ, ಬಿದಿರಾಗಲಿ, ಗೋವಾಗಲಿ, ನದಿ-ತರುಗಳಾಗಲಿ ತಮ್ಮ ಒಂದೊಂದು ಭಾಗವೂ ಅನ್ಯರಿಗೆ ಉಪಯೋಗುವಾಗುವಂತೆ ಜೀವಿಸುತ್ತವೆ. ನರ ಮಾನವನಾದರೋ ಯಾರಿಗೂ ಬಾರದವನಾಗಿ, ಭೂಮಿಗೆ ಭಾರವಾಗಿ ಜೀವಿಸಿ ತೆರಳುತ್ತಾರೆ.
ಪರೋಪಕಾರಾಯ ಫಲಂತಿ ವೃಕ್ಷಾ: ಪರೋಪಕಾರಾಯ ವಹಂತಿ ನದ್ಯಃ |
ಪರೋಪಕಾರಾಯ ದುಹಂತಿ ಗಾವ: ಪರೋಪಕಾರಾರ್ಥಮಿದಂ ಶರೀರಂ ||
ಪರೋಪಕಾರಕ್ಕಗಿಯೇ ವೃಕ್ಷಗಳು ಫಲವೀಯುತ್ತವೆ, ನದಿಗಳು ಹರಿಯುತ್ತವೆ, ಹಸುವು ಹಾಲೀಯುತ್ತದೆ. ಪರೋಪಕಾರಕ್ಕಾಗಿ ತಾನೆ ಈ ನಮ್ಮ ಶರೀರ. ಗೋವಿನ ಹಾಡನ್ನು ಒಮ್ಮೆ ನೆನೆದು ಸ್ವಲ್ಪವಾದರೂ ಅನ್ಯರಿಗೆ ನೆರವಾಗಿ ಬದುಕೋಣ.
ನೀನಾರಿಗಾದೆಯೋ ಎಲೆ ಮಾನವಾ -- ಕವಿ ಎಸ್.ಜಿ.ನರಸಿಂಹಾಚಾರ್ಯ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು || ಪಲ್ಲವಿ ||
ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ
ಮೇಲ್ಗೆನೆಯ ಕಡೆದರೆ ಬೆಣ್ಣೆಯಾದೆ
ಮೇಲಾದ ತುಪ್ಪವೂ ನಾನಾದೆ ಕಾಸಿದರೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಹಾದಿ ಬೀದಿಯಲ್ಲಿ ಕಸದ ಹುಲ್ಲನು ಮೈದು
ಬಂದು ಮನೆಗೆ ನಾನು ಅಮೃತವನೀವೆ
ಅದನುಂಡು ನನಗೆರಡು ಬಗೆವ ಮಾನವ ನೀನು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಹಾಯೆ ಹರಿಗೋಲಾದೆ ರಾಯ ಬೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ
ಆಯವರಿತು ಹೊಡೆಯೆ ಮಧುರ ಗಾನಕ್ಕಾದೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ದೇಹ ಶುದ್ಧಿಗೆ ನಾನು ಪಂಚ ಗವ್ಯವನೀವೆ
ವಾಹನಕ್ಕೆ ಆಗುವನು ಎನ್ನ ಮಗನು
ಊಹೆಗಸದಳವಹುದು ನನ್ನ ಉಪಕಾರಗಳು
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು
ತುಳಿದು ಕಡ್ಡಿಯ ಕಾಳ ವಿಂಗಡಿಸುವೆ
ಕಳಪೆಯಾಗಿಹ ನೆಲವ ನಗುವ ತೋಪನು ಮಾಳ್ಪೆ
ನೀನಾರಿಗಾದೆಯೋ ಎಲೆ ಮಾನವಾ
ಹರಿ ಹರಿ ಗೋವು ನಾನು ||
Friday, August 19, 2011
ಹೇಮಕೂಟದ ಮೇಲೆ
ಹೇಮಕೂಟದ ಮೇಲೆ ಕನ್ನಡದ ಬಾವುಟ
ಹಾರುತಿದೆ ಮಣಿಯದಕೆ ನೆಟ್ಟಿರಲಿ ಶಾಶ್ವತ
ಶ್ರೀವಿಜಯ ನೃಪತುಂಗ ಕನ್ನಡದ ಶತಶೃಂಗ
ಶಿವಮಾರ ದುರ್ವಿನೀತಾದಿಗಂಗ
ಕಂಡು ಕಂಡರಿಸಿದೆ ಕಡಲ ತಡಿದನಕ
ಬಿತ್ತರಂಗೊಂಡಿತೋ ಸಿರಿ ನಾಡಗಡಿಯೆನುತ...೧
ಜೈನ ತೀರ್ಥಂಕರರು ಶೃಂಗಗಿರಿ ಶಂಕರರು
ಕಲ್ಯಾಣದಣ್ಣಗಳು ಶರಣ ಶರಣೆಯರು
ಹರಿದಾಸರೆಲ್ಲರು ಉಸಿರಿತ್ತು ಪೋಷಿಸಿದ
ಹಸಿರುಡೆಯ ಬೆಳೆನಾಡು ಹಸನಾಯಿತೆಂದು .....೨
ಕೆಳದಿ ದ್ವಾರಾವತಿಯು ಕಿತ್ತೂರು ಕೊಡಗು
ಸ್ವಾದಿ ಬೀಜ್ಜಾವರವು ಮಾಗಡಿಯು ಸೋದೆ
ಮಹಿಶ ಹಾಗಲವಾಡಿ ಸುರಪುರವು ಮತ್ತೆ
ವಿಜಯನಗರಕೆ ಶುಭವ ಕೋರುತಿಹುದೆನುವೆ......೩
ಜಯತು ಕನ್ನಡ ನಾಡು ಜಯತು ಮಂಗಲ ಬೀಡು
ಜಯ ಜಯತು ಜಯ ರಾಜರಾಜೇಶ್ವರಿ
ಜಯವು ಕನ್ನಡ ನುಡಿಗೆ ಜಯವು ಕನ್ನಡ ಜನಕೆ
ಜಯ ನಿನಗೆ ಕರುನಾಡ ಬನಶಂಕರಿ
ಜಯ ನಿನಗೆ ಕರುನಾಡ ಬನಶಂಕರಿ
Sunday, July 17, 2011
ಸಂಖ್ಯಾ ಸ್ವಾರಸ್ಯ
ಷಡ್ರಸಗಳು: ಮಧುರ, ಆಮ್ಲ, ತಿಕ್ತ, ಕಟು, ಕಷಾಯ, ಲವಣ
(ಸಿಹಿ, ಹುಳಿ, ಕಹಿ, ಖಾರ, ಒಗರು, ಉಪ್ಪು)
ಷಡೃತುಗಳು: ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ
ಷಡ್ದರ್ಶನಗಳು: ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ.
ಪ್ರವರ್ತಕರು: ಕಪಿಲ, ಪತಂಜಲ, ಗೌತಮ, ಕಣಾದ, ಜೈಮಿನಿ, ವ್ಯಾಸ
ಷಟ್ಕರ್ಮಗಳು: ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ
ಸಪ್ತಚಿರಂಜೀವಿಗಳು: ಅಶ್ವತ್ತಾಮ, ಬಲಿ , ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ
ಸಪ್ತಸಮುದ್ರ: ಲವಣ,ಇಕ್ಷು, ಸುರಾ, ಸರ್ಪಿಃ,ದಧಿ, ಕ್ಷೀರ , ಶುದ್ಧೋದಕ
ಸಪ್ತಧಾತುಗಳು: ರಸ, ರಕ್ತ,ಮಾಂಸ, ಮೇದಸ್ಸು, ಅಸ್ಥಿ, ವೀರ್ಯ, ಶುಕ್ರ
ಸಪ್ತಲೋಕಃ: ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ
ಸಪ್ತಮಾತೃಕೆಯರು: ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ,ವಾರಾಹೀ,ಇಂದ್ರಾಣೀ, ಚಾಮುಂಡ
ಸಪ್ತಕುದುರೆಗಳು: ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್
ಅಷ್ಟದಿಕ್ಪಾಲಕರು: ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ
ಅವರ ಪತ್ನಿಯರು: ಶಚೀ, ಸ್ವಾಹಾ, ಶ್ಯಾಮಲಾ, ದೀರ್ಘಾ, ಗಂಗಾ, ಅಂಜನಾ, ಚಿತ್ರಲೇಖಾ, ಪಾರ್ವತೀ ದೇವಿಯರು.
ಅಷ್ಟಸಿದ್ಧಿಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ
ಅಷ್ಟಾಂಗಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ
ಅಷ್ಟಾವರಣಗಳು: ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ,ರುದ್ರಾಕ್ಷ, ಮಂತ್ರ.
ನವರಸ: ಶೃಂಗಾರ, ವೀರ, ಕರುಣ, ಅದ್ಬುತ, ಹಾಸ್ಯ, ಭಯಾನಕ, ಬೀಭತ್ಸ, ರೌದ್ರ, ಶಾಂತ
ನವರತ್ನ: ವಜ್ರ, ವೈರೂಢ್ಯ,ಗೋಮೇಧಿಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ, ಮುತ್ತು.
ನವವಿಧ ಭಕ್ತಿ: ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ,ವಂದನ, ದಾಸ್ಯ, ಸಖ್ಯ, ಆತ್ಮಸಮರ್ಪಣ
(ಸಿಹಿ, ಹುಳಿ, ಕಹಿ, ಖಾರ, ಒಗರು, ಉಪ್ಪು)
ಷಡೃತುಗಳು: ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ
ಷಡ್ದರ್ಶನಗಳು: ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ.
ಪ್ರವರ್ತಕರು: ಕಪಿಲ, ಪತಂಜಲ, ಗೌತಮ, ಕಣಾದ, ಜೈಮಿನಿ, ವ್ಯಾಸ
ಷಟ್ಕರ್ಮಗಳು: ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ
ಸಪ್ತಚಿರಂಜೀವಿಗಳು: ಅಶ್ವತ್ತಾಮ, ಬಲಿ , ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ
ಸಪ್ತಸಮುದ್ರ: ಲವಣ,ಇಕ್ಷು, ಸುರಾ, ಸರ್ಪಿಃ,ದಧಿ, ಕ್ಷೀರ , ಶುದ್ಧೋದಕ
ಸಪ್ತಧಾತುಗಳು: ರಸ, ರಕ್ತ,ಮಾಂಸ, ಮೇದಸ್ಸು, ಅಸ್ಥಿ, ವೀರ್ಯ, ಶುಕ್ರ
ಸಪ್ತಲೋಕಃ: ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ
ಸಪ್ತಮಾತೃಕೆಯರು: ಬ್ರಾಹ್ಮೀ, ಮಾಹೇಶ್ವರೀ, ಕೌಮಾರಿ, ವೈಷ್ಣವೀ,ವಾರಾಹೀ,ಇಂದ್ರಾಣೀ, ಚಾಮುಂಡ
ಸಪ್ತಕುದುರೆಗಳು: ಗಾಯತ್ರೀ, ತ್ರಿಷ್ಟುಪ್, ಜಗತೀ, ಅನುಷ್ಟುಪ್, ಪಂಕ್ತಿಃ, ಬೃಹತೀ, ಉಷ್ಣಿಕ್
ಅಷ್ಟದಿಕ್ಪಾಲಕರು: ಇಂದ್ರ, ಅಗ್ನಿ, ಯಮ, ನಿಋತಿ, ವರುಣ, ವಾಯು, ಕುಬೇರ, ಈಶಾನ
ಅವರ ಪತ್ನಿಯರು: ಶಚೀ, ಸ್ವಾಹಾ, ಶ್ಯಾಮಲಾ, ದೀರ್ಘಾ, ಗಂಗಾ, ಅಂಜನಾ, ಚಿತ್ರಲೇಖಾ, ಪಾರ್ವತೀ ದೇವಿಯರು.
ಅಷ್ಟಸಿದ್ಧಿಗಳು: ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಶಿತ್ವ
ಅಷ್ಟಾಂಗಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ
ಅಷ್ಟಾವರಣಗಳು: ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಭಸ್ಮ,ರುದ್ರಾಕ್ಷ, ಮಂತ್ರ.
ನವರಸ: ಶೃಂಗಾರ, ವೀರ, ಕರುಣ, ಅದ್ಬುತ, ಹಾಸ್ಯ, ಭಯಾನಕ, ಬೀಭತ್ಸ, ರೌದ್ರ, ಶಾಂತ
ನವರತ್ನ: ವಜ್ರ, ವೈರೂಢ್ಯ,ಗೋಮೇಧಿಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ, ಮುತ್ತು.
ನವವಿಧ ಭಕ್ತಿ: ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ,ವಂದನ, ದಾಸ್ಯ, ಸಖ್ಯ, ಆತ್ಮಸಮರ್ಪಣ
Monday, June 27, 2011
ಭಾಷೆ ಮತ್ತು ಕ್ರಾಂತಿ

ಈಗೊಮ್ಮೆ ತತ್ತಕ್ಷಣ ಈ ಭಾಷೆಯನು
ಅರ್ಥೈಸಿಕೊಳ್ಳವ ಪ್ರಯತ್ನ ಬಿಟ್ಟು --
ಸುತ್ತ ಆವರಿಸಿದ ರಕ್ತ ಸ್ನಿಗ್ದ
ಗಾಳಿಗೆ ಮಾತನಾಡಲು ಅನುವು ಮಾಡಿಕೊಟ್ಟು,
ಮತ್ತಷ್ಟೂ ಕಿವಿಗಳು ದಂಗೆದ್ದು
ನಮ್ಮ ನಿನ್ನೆಯ ಬುಡ-ಬೇರುಗಳನ್ನು
ಗಟ್ಟಿಯಾಗಿಸುವ ತನಕ.
ಮೂಕ ಜಡ ವಾಸ್ತವಕ್ಕೆ
ಜಂಗಮ ವಾಗ್ಝರಿಯನೇಕೆ ಆರೋಪಿಸಲಿ?
ಬಳಸದ ಬಾಯ್ಗಳ ತುಕ್ಕುಗಟ್ಟಿದ ತುಟಿಗಳಿಗೇಕೆ
ಸಂಧಾನದ ಪಾರುಪತ್ಯವನ್ನೀಯಲಿ?
ಒಳಿತನೆಲ್ಲವ ಹೊರದೂಡಿ ನಡೆವ
ಕಿವುಡು ಕಿವಿಗಳಿಗಾವ ಮಹತ್ವವನೀಯಲಿ?
ಸಾಕು.
ಇನ್ನರ್ಥೈಸುವ ಗೀಳಿಗಿತ್ತಾಯ್ತು ತರ್ಪಣ.
ಗಂಟುಹಾಕಿದ ಹುಬ್ಬು ಮೋರೆಯ
ದಂಗೆದ್ದ ಕಿವಿಳಿಂತಿರಲಿ.
ಬರಡು ಬರಡಾದ ಹೃದಯಗಳಿಗೆನೆನ್ನುವಿರಿ?
Tuesday, May 31, 2011
ಸುಧರ್ಮ - ಸಂಸ್ಕೃತ ದಿನ ಪತ್ರಿಕೆ
Thursday, April 28, 2011
ಪ್ರಧಾನಿಗೊಂದು ಕಿವಿಮಾತು.

ಮಹಾಭಾರತದಲ್ಲಿ ಗುರು ಶುಕ್ರಾಚಾರ್ಯರು ವೃಷಪರ್ವನಿಗೆ ಉಪದೇಶಿಸುವ ಸಂದರ್ಭ. ಗುರುಗಳು ಹೀಗೆನ್ನುತ್ತಾರೆ -- " ರಾಜನ್! ಅಧರ್ಮವನಾಚರಿಸಿದರೆ ಅದು ಹಸುವಿನಂತೆ ಕೂಡಲೆ ಫಲವನ್ನೆಯುವುದಿಲ್ಲ. ಅದು ಮೆಲ್ಲನೆ ತಿರುಗಿ, ಅಧರ್ಮಿಯ ಬುಡವನ್ನೇ ಕದಿದುಹಾಕುತ್ತದೆ.
ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ |
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃತಂತಿ ||
-- ಮಹಾಭಾರತ, ಆದಿ, ೮೦-೨
ಪ್ರಸ್ತುತ ರಾಷ್ಟ್ರೀಯ ರಾಜಕಾರಣದಲ್ಲಿ ಹಗರಣಗಳದ್ದೆ ಕಾರುಬಾರು. ಲಕ್ಷಕೋಟಿ ಹಗರಣಗಳು ಸರ್ವೇಸಾಮಾನ್ಯವಾಗಿವೆ. ೨ಜಿ ಹಗರಣ, ಕಾಮನ್ ವೆಲ್ಥ್ ಹಗರಣ (ಸಮೂಹ ಐಶ್ವರ್ಯ!), "ಆದರ್ಶ" ಹಗರಣ, ಹೀಗೆ ಒಂದೇ, ಎರಡೇ... ರಾಜನಾದವನು ಸ್ವತಃ ಸದ್ಚಾರಿತ್ರನು, ಆದರೆ ಮಂತ್ರಿ ವರ್ಗದಲ್ಲಿ ಭ್ರಷ್ಟರು ಎಂದು ಸಮಜಾಯಿಶಿ ಹೇಳಿ , ಭ್ರಷ್ಟ್ರಾಚಾರದ ವಿರುದ್ದ ಭುಗಿಲೆದ್ದ ಬೆಂಕಿಯನ್ನು ತಣ್ಣಗಾಗಿಸಳು ಸಾಧ್ಯವಿಲ್ಲ. ಅದು ನಾಯಕ ಲಕ್ಷಣವಲ್ಲ. ರಾಜನೀತಿಯ ಬಗ್ಗೆ ರಾಮಾಯಣ ಹೀಗೆನ್ನುತ್ತದೆ --
ರಾಜಾ ಧರ್ಮಶ್ಚ ಕಾಮಶ್ಚ ದ್ರವ್ಯಾಣಾಂ ಚೋತ್ತಮೋ ನಿಧಿಃ|
ಧರ್ಮ ಶುಭಂ ವಾ ಪಾಪಂ ವಾ ರಾಜಮೂಲಂ ಪ್ರವರ್ತತೇ ||
- ರಾಮಾಯಣ, ಅರಣ್ಯ, ೫೦-೧೦
ರಾಜನೇ ಧರ್ಮಕಾಮಗಳಿಗೆ ಪ್ರವರ್ತಕ, ಅವನೇ ಅರ್ಥಕ್ಕೆ ನಿಧಿ. ಧರ್ಮವಾಗಲಿ, ಒಳ್ಳೆಯದಾಗಲಿ, ಕೆಟ್ಟದಾಗಲಿ - ರಾಜನ ಪ್ರೇರಣೆಯಿಂದ ನಡೆಯುತ್ತದೆ.
ರಾಜಮೂಲವು ಇಂತಿರುವಾಗ ಸುತ್ತ ಹರಡಿರುವ ಭ್ರಷ್ಟ ಸಂತತಿಯನ್ನು ತಮ್ಮದೆಂದು ಸ್ವೀಕರಿಸಿ, ಅದನ್ನು ಬುಡಸಮೇತ ಕಿತ್ತೊಗೆಯುವ ನಿಟ್ಟಿನಲ್ಲಿ ರಾಜಸಂಕಲ್ಪವಾಗಲಿ.
Wednesday, March 23, 2011
ನಮನ
Wednesday, March 02, 2011
ಲವ ಲೇಶ
ದಮ್ಮಯ್ಯ ! ನನ್ನ ಬಳಿಗೆ ಸಂಪೂರ್ಣ ಸತ್ಯವನು ತರಲು ಬೇಡಿರಯ್ಯ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ
ದಾಹವೆಂದೆನಷ್ಟೇ, ಇಡೀ ಸಮುದ್ರವನ್ನೇ ಕೇಳಲಿಲ್ಲ.
ಬೆಳಕನರಿಸಿದೆ, ಸಮಸ್ತ ತೇಜೋ ಮಂಡಲವಲ್ಲ.
ಆದರೆ ಸುಳುಹು ತರಲಾರದಿರಿ. ಒಂದು ಚುಕ್ಕಿ .... ಎಳ್ಳಷ್ಟು ...ಕಿಂಚಿತ್ತು....
ಬೆಳ್ಳಕ್ಕಿ ನೀರ್ದಾನಿಯಿಂದೆರೆಡು ಗುಟುಕು ಹೆಕ್ಕಿ ಹಾರುವ ಹಾಗೆ
ತೇವದೊಡಗೂಡಿ ಲವ ಲೇಶ ಹೀರಿ ಗಾಳಿ ಸಾಗಿಸುವ ಹಾಗೆ
Saturday, February 12, 2011
ಶ್ರೀಕರ ಆಮೋದಿನಿ

ನಂಜನಗೂಡಿನ ಸದ್ವೈದ್ಯಶಾಲಾ ಕರುನಾಡಿನಲ್ಲಿ ಮನೆಮಾತು. ಆಯುರ್ವೇದ-ಪ್ರಕೃತಿಚಿಕಿತ್ಸೆಗಳನ್ನು ಮನೆಮನೆಗೆ ತಲಪಿಸುವಲ್ಲಿ ಶ್ರೀಯುತರಾದ ಬಿ.ವಿ.ಪಂಡಿತರ ಸೇವೆ ಮಹತ್ತರವಾದುದು. ಸದ್ವೈದ್ಯಶಾಲೆಯಿಂದ ಗಾಯಕ-ವಾಚಕ ವರ್ಗಕ್ಕೆ ವರದಾನದಂತಿರುವುದು ಶ್ರೀ ಕರ ಆಮೋದಿನಿ . ಆಮೋದಿನಿಯ ಗುಳಿಗೆ ಸೇವಿಸುವುದರಿಂದ ಧ್ವನಿ ತೆರೆದು ಕೊಳ್ಳುತ್ತದೆ. ಕಚೇರಿಯ ಅಥವಾ ಪ್ರವಚನದ ಮುಂಚೆ ಒಂದು ಗುಳಿಗೆ ಬಾಯಿನಲ್ಲಿ ಹಾಕಿಕೊಂದರೆ ಸುಮಾರು ಹೊತ್ತು ಹಾಡಿ-ಮಾತನಾಡಿದರು ಗಂಟಲಿನಲ್ಲಿ ಆಯಾಸ ಅಥವಾ ನೋವು ತಿಳಿಯುವುದಿಲ್ಲ. ಅದಲ್ಲದೆ ಸ್ವರವು ಸರಿಯಾಗಿ ಹೊರಹೊಮ್ಮುವಂತೆ ಸಹಕಾರವನ್ನೀಯುತ್ತದೆ. ಆದ್ದರಿಂದಲೆ ಬಹಳಷ್ಟು ಗಾಯಕರ ಕೈಚೀಲಗಳಲ್ಲಿ ಆಮೋದಿನಿ ಶೋಭಿಸುತ್ತಿರುತ್ತದೆ. ಮಧುಕ, ಕುಂಕುಮಕೇಸರ ಗಳನ್ನೊಳಗೊಂಡ ಶ್ರೀಕರ ಆಮೋದಿನಿ ಸ್ವರಬೇಧ, ಸ್ವರಭಂಗ, ನಾಸಗಥ ರೋಗ, ಗಲರೋಗಗಳಿಗೆ ರಾಮಬಾಣ.
ಶ್ರೀಕರ ಆಮೋದಿನಿ - ಗಾಯಕ ವಾಚಕರ ಪಾಲಿನ ಸಂಜೀವಿನಿ.
Friday, February 11, 2011
ಒಂದು ಹಂತದ ನಂತರ
ತೃಪ್ತಿ ತರಿಸದ
ಸಾವಿರಾರು ಸಾಧನೆಗಳನು
ಹೇರಿ, ಗುಡ್ಡೆ ಹಾಕಿಕೊಂಡ ನಂತರ...
ತಿದ್ದಿಕೊಳಲು ಸಾಲ್ಗಟ್ಟಿ ನಿಂದ ಹಿಂದಿನ
ಸೋಲುಗಳ ಸರಪಳಿಯ ನಡುವಿರುವ ಅಂತರ ....
ಮುಂಬರುವ ಸೋಲುಗಳನು
ಮುತುವರ್ಜಿಯಿಂದ ಆಯ್ದು, ಹೆಕ್ಕಿ
ಸೋಲನಪ್ಪಿಕೊಳಲು ಸಜ್ಜಾಗುತಿರುವೆವೆ ನಿರಂತರ ? ..
ಒಂದು ಹಂತದ ನಂತರ... ಒಂದು ಹಂತದ ನಂತರ
ಸಾವಿರಾರು ಸಾಧನೆಗಳನು
ಹೇರಿ, ಗುಡ್ಡೆ ಹಾಕಿಕೊಂಡ ನಂತರ...
ತಿದ್ದಿಕೊಳಲು ಸಾಲ್ಗಟ್ಟಿ ನಿಂದ ಹಿಂದಿನ
ಸೋಲುಗಳ ಸರಪಳಿಯ ನಡುವಿರುವ ಅಂತರ ....
ಮುಂಬರುವ ಸೋಲುಗಳನು
ಮುತುವರ್ಜಿಯಿಂದ ಆಯ್ದು, ಹೆಕ್ಕಿ
ಸೋಲನಪ್ಪಿಕೊಳಲು ಸಜ್ಜಾಗುತಿರುವೆವೆ ನಿರಂತರ ? ..
ಒಂದು ಹಂತದ ನಂತರ... ಒಂದು ಹಂತದ ನಂತರ
Sunday, January 16, 2011
ಧನ್ವಂತ್ರಿ ವನ

ಙ್ನಾನಭಾರತಿಯ ಆವರಣದಲ್ಲಿ ೩೭ ಎಕರೆ ಧನ್ವಂತ್ರಿವನವಿದೆ. ಇದೊಂದು ನೈಸರ್ಗಿಕ ದವಾಖಾನೆ. ಸಾರ್ವಜನಿಕರಿಗೆ ಔಷಧೀಯ ಸಸ್ಯಗಳನ್ನು ವಿತರಿಸಲು ಈ ವನ ಸಿದ್ದವಾಗಿದೆ. ಕರ್ನಾಟಕ ಅರಣ್ಯ ಇಲಾಖೆ, ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ೧೯೮೭ರಲ್ಲಿ ಔಷಧೀಯ ಸಸ್ಯಗಳ ವನವನ್ನು ಬೆಳಸಲಾಯಿತು. ಇಲ್ಲಿ ಇರುವ ಪ್ರತಿಯೊಂದು ಗಿಡ, ಮರ, ಬೇರು, ಎಲೆ ಔಷಧೀಯ ಗುಣ ಹೊಂದಿದೆ. ಇಲ್ಲಿ ಸಸಿಗಳು ಗರಿಷ್ಟ ೩ ರೂಪಾಯಿಗೆ ದೊರೆಯುತ್ತವೆ. ಈ ಸಸಿಗಳನ್ನು ತಂದು ಸಣ್ಣಪುಟ್ಟ ಪಾಟುಗಳಲ್ಲಿ, ಹೂದಾನಿಗಳಲ್ಲಿ ಬೆಳೆಸಿ ಆರೋಗ್ಯ ಕಾಪಾಡಿಕೊಳ್ಳಬಹುದು.
ಸಸ್ಯಗಳ ಔಷಧೀಯ ಗುಣ: ಬಿಳಿಹಿಂಡಿ ಗಿಡದ ಬೇರನ್ನು ೩೦ ದಿನ ಬಳಸುವುದರಿಂದ ಕಿಡ್ನಿ ಸ್ಟೋನ್ ಕರಗಿಸಬಹುದು, ಮಧುನಾಶಿನಿ ಎಲೆಯಿಂದ ಸಕ್ಕರೆ ಖಾಯಿಲೆ ಹತೋಟಿಗೆ ತರಬಹುದು, ಬಾಯಿಹುಣ್ಣಿಗೆ ಬಸಲೆ ಎಲೆ, ರೋಗನಿರೋಧಕ ಶಕ್ತಿಗೆ ಶ್ರೀತುಳಸಿ, ಎಲ್ಲ ವಿಧವಾದ ಅಲರ್ಜಿಗೆ ದೊಡ್ಡಪತ್ರೆ ಸೊಪ್ಪು, ಸುಸ್ತು- ಜ್ವರ ಇತ್ಯಾದಿಗೆ ಅಮೃತಬಳ್ಳಿ, ಙ್ನಾಪಕಶಕ್ತಿಗೆ ಒಂದೆಲಗ. ಉಷ್ಣನಿವಾರಿಸಲು ಸೊಗದೆ ಬೇರು, ರಕ್ತಹೀನತೆ ನಿವಾರಣಗೆ ಚಕ್ರಮುನಿ ಸೊಪ್ಪು, ಕೆಮ್ಮು ನಿವಾರಣೆಗೆ ಆಡುಸೋಗೆ ಸೊಪ್ಪು...ಹೀಗೆ ಪಟ್ಟಿ ಬೆಳೆಯುತ್ತಲೆ ಇರುತ್ತದೆ.
ಇನ್ನೇಕೆ ತಡ ? ನಿಮ್ಮ ನೈಸರ್ಗಿಕ ತೋಟವನ್ನು ಪ್ರಾರಂಭಿಸಿ. ಸಂಪರ್ಕ: ಚಂದ್ರಕಾಂತ್, ವಲಯ ಅರಣ್ಯಾಧಿಕಾರಿ - ೯೪೪೮೫೧೯೩೪೭
ಕೃಪೆ: ವಿಜಯಕರ್ನಾಟಕ. ೪ ಜನವರಿ ೨೦೧೧
Tuesday, December 28, 2010
ರಾಗರಸಧಾರ
Monday, November 29, 2010
ರಾಮಾಯಣದಲ್ಲಿ ರಾಜನೀತಿ
ಶ್ರೀ ರಾಮಚಂದ್ರನು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಭರತನಿಗೆ ಉಪದೇಶಿಸುತ್ತಾ ಹದಿನಾಲ್ಕು ರಾಜದೋಶಗಳ ಬಗ್ಗೆ ಹೀಗೆಂದಿದ್ದಾನೆ:
ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ|
ಅದರ್ಶನಂ ಙ್ನಾನವತಾಮಾಲಸ್ಯಂ ಪಂಚವೃತ್ತಿತಾಂ||
ಏಕಚಿತನಮಥಾರ್ನಾಮನರ್ಥಙ್ನೈಶ್ಚ ಮಂತ್ರಣಂ|
ನಿಸ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ||
ಮಂಗಲಸ್ಯಾಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತ:|
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ||
ರಾಮಾಯಣ, ಅಯೋಧ್ಯಾ ೧೦೦ - ೬೫,೬೬,೬೭
ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಙ್ನರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚನೆ ನಡೆಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರ ಶುಭಕಾರ್ಯವನ್ನು ಮಾಡದಿರುವುದು, ಎಲ್ಲ ಶತೃಗಳ ಮೇಲೂ ಏಕಕಾಲಕ್ಕೆ ಯುದ್ಧಾರಂಭ -- ಈ ಹದಿನಾಲ್ಕು ದೋಷಗಳಿಗೆ ಅವಕಾಶ ಕೊಡಬೇಡವೆಂದು ಭರತನಿಗೆ ಉಪದೇಶಿಸಿದನು.
ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರಗಿಟ್ಟಿಸಿದ ಇಂದಿನ ಕಿಶ್ಕಿಂದಾ ಪ್ರದೇಶದ ಸರ್ಕಾರ, ರಾಮ ಭರತನಿಗೆ ಮಾಡಬೇಡ ಎಂದು ಆದೇಶಿದ ಎಲ್ಲ ೧೪ ರಾಜದೋಷಗಳನ್ನೂ ಚಾಚೂ ತಪ್ಪದೆ ಮಾಡಿತೋರಿಸಿದೆ. ರಾಮನೇ ನಾಚುವ ರೀತಿ ಸೃಜನಾತ್ಮಕವಾಗಿ, ರಾಮನೂ ಯೋಚಿಸಿರದ ಹತ್ತು ಹಲವು ಹೊಸ ದೋಷಗಳನ್ನು ಹೊದ್ದು ಮೆರೆದಿದೆ. ಸ್ವಯಂ ಸೇವಕ ಸಂಘ ಅಂದರೆ ನಮ್ಮ "ಸೇವೆ" ಸ್ವಯಂ ನಾವೇ ಮಾಡಿಕೊಳ್ಳುವುದು ಎಂಬಷ್ಟು ಹೀನಾಯ ಸ್ಥಿತಿ ತಲುಪಿರುವುದು ನಿಜಕ್ಕೂ ವಿಶಾದನೀಯ. ಇನ್ನು ಮಂತ್ರಿಮಂಡಲದಲ್ಲಂತೂ ಅರಿಷ್ಡ್ವರ್ಗಂಗಳನು ಗೆದ್ದ ಅತಿರಥ ಮಹಾರಥರೆ ಇದ್ದಾರೆ. ನಾವು ಆರಿಸಿ ಕಳುಹಿಸಿದ ಈ ಜನಪ್ರತಿನಿಧಿಗಳಿಗೆ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳು ಯಾವವೂ ತಿಳಿಯದು. ಕಾಮವನ್ನು ಗೆದ್ದ ರೇಣುಕಾಚಾರ್ಯ - ಹಾಲಪ್ಪನಂತವರು, ಕ್ರೋಧವನ್ನು ಗೆದ್ದ ಬಚ್ಚೆಗೌಡರು, ಮದವನ್ನು ಗೆದ್ದು - ರಾಜ್ಯಪಾಲರು, ಲೋಕಾಯುಕ್ತರನ್ನು ಒಮ್ಮೆಲೆ ಅತಿಯಾಗಿ ಗೌರವಿಸುವ ಮುಖ್ಯಮಂತ್ರಿಗಳು, ಲೋಭ ಗೆದ್ದ ಶೋಭ, ಮೋಹವೇ ಅರಿಯದ, ಪುತ್ರ ವ್ಯಾಮೋಹ ಅರಿಯದ ಕಟ್ಟಾ ಮತ್ತು ಮುಖ್ಯಮಂತ್ರಿಗಳು, ಮತ್ಸರದ ಕಿಡಿಯೂ ಸುಳಿಯದ ರೆಡ್ಡಿ ಸೋದರರು -- ಇನ್ನೂ ಹೀಗೆ ಹತ್ತು ಹಲವು ತೋಜೋ ಮಣಿಗಳಿಂದ ಕಂಗೊಳಿಸುವ ಕಮಲ ಸಾಂರಾಜ್ಯವನ್ನು ಚುನಾಯಿಸಿ ಕಳುಹಿಸಿದ ನಾವು ಗಳು ಎಷ್ಟು ಧನ್ಯರು ಎಂದು ನೆನೆದರೆ ಹೇಳಿಕೊಳ್ಳಲಾರದ ಹೆಮ್ಮೆ ಎನಿಸುತ್ತದೆ. ಒಂದು ವ್ಯವಸ್ಥೆಯಲ್ಲೇ ವಿಶ್ವಾಸ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಹಗರಣಗಳು ನಡೆದಿವೆ. ರಾಮನ ಪಕ್ಷಕ್ಕೆ ಮತ ಹಾಕಿದ ಮತದಾರನ ಮುಖಭಂಗವಾಗಿದೆ.ಸುತ್ತಲೂ ನಡೆಯುತ್ತಿರುವ ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಲುಕಿ ದನಿಗಾಣದೆ ಏಳು ಸುತ್ತಿನ ಕೋಟೆಯಲ್ಲಿ ಅಸಹಾಯಕನಾಗಿ ಶ್ರೀಸಾಮಾನ್ಯ ಅವಿತು ಕುಳಿತಿದ್ದಾನೆ. ಎಂದು ಈ ಸುಪ್ತ ಜ್ವಾಲಾಮುಖಿ ಸಿಡಿದು ನಿಲ್ಲುವುದೂ ಆ ದಿನ ನಾನು - ತಾನು , ರಾಮ - ರಹೀಮ ಯಾರೊಬ್ಬರನೂ ನೋಡದೆ ಎಲ್ಲರನ್ನೂ ಆಹುತಿ ತೆಗೆದು ಕೊಳ್ಳುತ್ತದೆ.
ಸೂ: ನಾನು ಈ ಬ್ಲಾಗ್ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆದಿರುವುದು ಅತ್ಯಂತ ಕಡಿಮೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯ"ಮಾನ"ಗಳ ಬಗ್ಗೆ ಬಹುವಾಗಿ ನೊಂದು ರಾಮನ ಹೆಸರು ಹೇಳಿ ಇನ್ನಾದರೂ ಧರ್ಮವನ್ನು ರಕ್ಷಿಸು ಎಂದು ಪ್ರಾಥಿಸಿ ಈ ಸಾಲುಗಳನ್ನು ಇಲ್ಲಿ ಪೋಸ್ಟಿಸಿದೆ.
ನಾಸ್ತಿಕ್ಯಮನೃತಂ ಕ್ರೋಧಂ ಪ್ರಮಾದಂ ದೀರ್ಘಸೂತ್ರತಾಂ|
ಅದರ್ಶನಂ ಙ್ನಾನವತಾಮಾಲಸ್ಯಂ ಪಂಚವೃತ್ತಿತಾಂ||
ಏಕಚಿತನಮಥಾರ್ನಾಮನರ್ಥಙ್ನೈಶ್ಚ ಮಂತ್ರಣಂ|
ನಿಸ್ಚಿತಾನಾಮನಾರಂಭಂ ಮಂತ್ರಸ್ಯಾಪರಿರಕ್ಷಣಂ||
ಮಂಗಲಸ್ಯಾಪ್ರಯೋಗಂ ಚ ಪ್ರತ್ಯುತ್ಥಾನಂ ಚ ಸರ್ವತ:|
ಕಚ್ಚಿತ್ತ್ವಂ ವರ್ಜಯಸ್ಯೇತಾನ್ ರಾಜದೋಷಾಂಶ್ಚತುರ್ದಶ ||
ರಾಮಾಯಣ, ಅಯೋಧ್ಯಾ ೧೦೦ - ೬೫,೬೬,೬೭
ನಾಸ್ತಿಕತೆ, ಸುಳ್ಳು, ಸಿಟ್ಟು, ಅನವಧಾನ, ನಿಧಾನವಾಗಿ ತಡೆದು ಕೆಲಸ ಮಾಡುವುದು, ಪ್ರಾಙ್ನರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯಚಾಪಲ್ಯದಲ್ಲಿ ಮುಳುಗುವುದು, ಯಾರೊಡನೆಯೂ ಸಮಾಲೋಚನೆ ನಡೆಸದೆ ಏಕಪಕ್ಷೀಯವಾದ ನಿರ್ಧಾರ, ಅನುಭವವಿಲ್ಲದವರೊಡನೆ ಮಂತ್ರಾಲೋಚನೆ, ನಿಶ್ಚಯಿಸಿದ ಕಾರ್ಯವನ್ನು ಆರಂಭಿಸದಿರುವುದು, ಮಂತ್ರಾಲೋಚನೆಯನ್ನು ರಹಸ್ಯವಾಗಿ ಉಳಿಸಿಕೊಳ್ಳದಿರುವುದು, ಮಂಗಳಕರ ಶುಭಕಾರ್ಯವನ್ನು ಮಾಡದಿರುವುದು, ಎಲ್ಲ ಶತೃಗಳ ಮೇಲೂ ಏಕಕಾಲಕ್ಕೆ ಯುದ್ಧಾರಂಭ -- ಈ ಹದಿನಾಲ್ಕು ದೋಷಗಳಿಗೆ ಅವಕಾಶ ಕೊಡಬೇಡವೆಂದು ಭರತನಿಗೆ ಉಪದೇಶಿಸಿದನು.
ಶ್ರೀರಾಮನ ಹೆಸರು ಹೇಳಿಕೊಂಡು ಅಧಿಕಾರಗಿಟ್ಟಿಸಿದ ಇಂದಿನ ಕಿಶ್ಕಿಂದಾ ಪ್ರದೇಶದ ಸರ್ಕಾರ, ರಾಮ ಭರತನಿಗೆ ಮಾಡಬೇಡ ಎಂದು ಆದೇಶಿದ ಎಲ್ಲ ೧೪ ರಾಜದೋಷಗಳನ್ನೂ ಚಾಚೂ ತಪ್ಪದೆ ಮಾಡಿತೋರಿಸಿದೆ. ರಾಮನೇ ನಾಚುವ ರೀತಿ ಸೃಜನಾತ್ಮಕವಾಗಿ, ರಾಮನೂ ಯೋಚಿಸಿರದ ಹತ್ತು ಹಲವು ಹೊಸ ದೋಷಗಳನ್ನು ಹೊದ್ದು ಮೆರೆದಿದೆ. ಸ್ವಯಂ ಸೇವಕ ಸಂಘ ಅಂದರೆ ನಮ್ಮ "ಸೇವೆ" ಸ್ವಯಂ ನಾವೇ ಮಾಡಿಕೊಳ್ಳುವುದು ಎಂಬಷ್ಟು ಹೀನಾಯ ಸ್ಥಿತಿ ತಲುಪಿರುವುದು ನಿಜಕ್ಕೂ ವಿಶಾದನೀಯ. ಇನ್ನು ಮಂತ್ರಿಮಂಡಲದಲ್ಲಂತೂ ಅರಿಷ್ಡ್ವರ್ಗಂಗಳನು ಗೆದ್ದ ಅತಿರಥ ಮಹಾರಥರೆ ಇದ್ದಾರೆ. ನಾವು ಆರಿಸಿ ಕಳುಹಿಸಿದ ಈ ಜನಪ್ರತಿನಿಧಿಗಳಿಗೆ ಕಾಮ, ಕ್ರೋಧ, ಮದ, ಲೋಭ, ಮೋಹ, ಮತ್ಸರಗಳು ಯಾವವೂ ತಿಳಿಯದು. ಕಾಮವನ್ನು ಗೆದ್ದ ರೇಣುಕಾಚಾರ್ಯ - ಹಾಲಪ್ಪನಂತವರು, ಕ್ರೋಧವನ್ನು ಗೆದ್ದ ಬಚ್ಚೆಗೌಡರು, ಮದವನ್ನು ಗೆದ್ದು - ರಾಜ್ಯಪಾಲರು, ಲೋಕಾಯುಕ್ತರನ್ನು ಒಮ್ಮೆಲೆ ಅತಿಯಾಗಿ ಗೌರವಿಸುವ ಮುಖ್ಯಮಂತ್ರಿಗಳು, ಲೋಭ ಗೆದ್ದ ಶೋಭ, ಮೋಹವೇ ಅರಿಯದ, ಪುತ್ರ ವ್ಯಾಮೋಹ ಅರಿಯದ ಕಟ್ಟಾ ಮತ್ತು ಮುಖ್ಯಮಂತ್ರಿಗಳು, ಮತ್ಸರದ ಕಿಡಿಯೂ ಸುಳಿಯದ ರೆಡ್ಡಿ ಸೋದರರು -- ಇನ್ನೂ ಹೀಗೆ ಹತ್ತು ಹಲವು ತೋಜೋ ಮಣಿಗಳಿಂದ ಕಂಗೊಳಿಸುವ ಕಮಲ ಸಾಂರಾಜ್ಯವನ್ನು ಚುನಾಯಿಸಿ ಕಳುಹಿಸಿದ ನಾವು ಗಳು ಎಷ್ಟು ಧನ್ಯರು ಎಂದು ನೆನೆದರೆ ಹೇಳಿಕೊಳ್ಳಲಾರದ ಹೆಮ್ಮೆ ಎನಿಸುತ್ತದೆ. ಒಂದು ವ್ಯವಸ್ಥೆಯಲ್ಲೇ ವಿಶ್ವಾಸ ಕಳೆದುಕೊಳ್ಳುವಷ್ಟು ಪ್ರಮಾಣದಲ್ಲಿ ಹಗರಣಗಳು ನಡೆದಿವೆ. ರಾಮನ ಪಕ್ಷಕ್ಕೆ ಮತ ಹಾಕಿದ ಮತದಾರನ ಮುಖಭಂಗವಾಗಿದೆ.ಸುತ್ತಲೂ ನಡೆಯುತ್ತಿರುವ ಭ್ರಷ್ಟಾಚಾರದ ಚಕ್ರವ್ಯೂಹದಲ್ಲಿ ಸಿಲುಕಿ ದನಿಗಾಣದೆ ಏಳು ಸುತ್ತಿನ ಕೋಟೆಯಲ್ಲಿ ಅಸಹಾಯಕನಾಗಿ ಶ್ರೀಸಾಮಾನ್ಯ ಅವಿತು ಕುಳಿತಿದ್ದಾನೆ. ಎಂದು ಈ ಸುಪ್ತ ಜ್ವಾಲಾಮುಖಿ ಸಿಡಿದು ನಿಲ್ಲುವುದೂ ಆ ದಿನ ನಾನು - ತಾನು , ರಾಮ - ರಹೀಮ ಯಾರೊಬ್ಬರನೂ ನೋಡದೆ ಎಲ್ಲರನ್ನೂ ಆಹುತಿ ತೆಗೆದು ಕೊಳ್ಳುತ್ತದೆ.
ಸೂ: ನಾನು ಈ ಬ್ಲಾಗ್ನಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆದಿರುವುದು ಅತ್ಯಂತ ಕಡಿಮೆ. ಆದರೆ ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯ"ಮಾನ"ಗಳ ಬಗ್ಗೆ ಬಹುವಾಗಿ ನೊಂದು ರಾಮನ ಹೆಸರು ಹೇಳಿ ಇನ್ನಾದರೂ ಧರ್ಮವನ್ನು ರಕ್ಷಿಸು ಎಂದು ಪ್ರಾಥಿಸಿ ಈ ಸಾಲುಗಳನ್ನು ಇಲ್ಲಿ ಪೋಸ್ಟಿಸಿದೆ.
Sunday, October 31, 2010
ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ
ಉದ್ಯಮೇನೈವ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ ||
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ ||
Sunday, September 26, 2010
ರಾಶೊಮಾನ್ ಮತ್ತಿತರ ಕಥೆಗಳು

ನ್ಯಾಯಾಧೀಶರು ಮರಕಡಿಯುವವನನ್ನು ಪ್ರಶ್ನಿಸಿದಾಗ ಕೊಟ್ಟ ಹೇಳಿಕೆ:
ಹೌದು ಮಹಾಸ್ವಾಮಿ. ಖಂಡಿತವಾಗಿಯೂ ನಾನೆ ಮೃತದೇಹವನ್ನು ನೋಡಿದ್ದು. ಬೆಳಗಿನ ಸಮಯ ಎಂದಿನಂತೆ ಮರಕಡಿಯಲು ಹೋದಾಗ ಮೃತದೇಹವನ್ನು ಆ ಗಿರಿ ಕಂದರದ ತೊಪ್ಪಲ್ಲಲ್ಲಿ, ಒಂದು ಪೊದೆಯಲ್ಲಿ ನೋಡಿದೆ. ಸ್ಥಳ ಅಂತೀರಾ? ಯಾಮಶಿನ ರಸ್ತೆಯಿಂದ ಸುಮಾರು ೧೫೦ ಅಂಗುಲ ದೂರವಿದ್ದಿರಬಹುದು. ದಾರಿಗೆ ತುಸು ಪಕ್ಕದಲ್ಲಿನ ಬಿದಿರು ಪೊದೆ ಅದು.
ಹೆಣವು ನೀಲಿ ನಿಲುವಂಗಿ ಕಿಮೋನೊ ಮತ್ತು ಕ್ಯೋಟೊ ಶೈಲಿಯ ಮುದುರಿದ ತೋಪಿಯನ್ನುಟ್ಟು ಅಂಗಾತ ಮಲಗಿತ್ತು. ಒಂದೇ ಕತ್ತಿಯ ಸೀಳು ಎದೆಯನ್ನು ಸೀಳಿ ಘಾತಿಸಿತ್ತು. ಅತ್ತಿತ್ತ ಬಿದ್ದಿದ್ದ ಬಿದುರಿನ ತರುಗೆಲೆಗಳು ರಕ್ತಸಿಕ್ತವಾಗಿ ಕೆಂಪನೆ ಹುವಾಡಿಸಿತ್ತು. ಇಲ್ಲ, ರಕ್ತ ಇನ್ನು ಸುರಿಯುತ್ತಿರಲಿಲ್ಲ. ಗಾಯ ಆರಿದ್ದಿರಬೇಕು. ನಾನು ಬಂದದ್ದನು ಗಮನಿಸದೆ ನೊಣ ಒಂದು ಅಲ್ಲೆ ಅಂಟಿ ಕುಳಿತಿತ್ತು. ಅಲ್ಲಿ ಖಡ್ಗ ಇತ್ಯಾದಿ ಎನಾದ್ರು ಇತ್ತು ಅಂತೀರ? ಎಲ್ಲಿ ಆ ರೀತಿ ಯಾವುದೂ ಇರಲಿಲ್ಲ. ಇಲ್ಲ ಮತ್ತಿನ್ನೇನು ಇರಲಿಲ್ಲ ಮಹಾಸ್ವಾಮಿ. ಅಲ್ಲಿ ಮರದ ಬುಡದಲ್ಲಿ ಒಂದು ಹಗ್ಗವನ್ನು ಮಾತ್ರ ಗಮನಿಸಿದೆ. ಮತ್ತೆ.... ಹಗ್ಗದವನ್ನು ಬಿಟ್ಟರೆ ಅಲ್ಲಿ ಒಂದು ಬಾಚಣಿಗೆ ನೋಡಿದೆ. ಅಷ್ಟೆ ಅಲ್ಲಿದ್ದದ್ದು. ಬಹುಶಃ ಕೊಲೆಯಾಗುವಿದಕ್ಕೆ ಮುಂಚೆ ಹೊರಾಡಿ ಒದ್ದಾಡಿರ ಬೇಕು, ಯಾಕೆಂದ್ರೆ ಅಲ್ಲಿದ್ದ ಗರಿಕೆ-ಹುಲ್ಲುಗಳು, ಕೆಳಗೆ ಬಿದ್ದ ಬಿದುರಿನ ಎಲೆಗಳು ಎಲ್ಲವೂ ಚದುರಿದ್ದವು.
"ಹತ್ತಿರದಲ್ಲಿ ಕುದುರೇ ಏನಾದ್ರು?"
ಇಲ್ಲ ಸ್ವಾಮಿ. ಮನುಷ್ಯನು ಹೋಗುವುದೇ ಕಷ್ಟ ಅಲ್ಲಿ. ಇನ್ನು ಕುದುರೆ ಎಲ್ಲಿಂದ ಬರಬೇಕು.
ನ್ಯಾಯಾಧೀಶರಿಗೆ ಬೌದ್ಧ ಪರಿವ್ರಾಜಕನು ಕೊಟ್ಟ ಹೇಳಿಕೆ:
ಹೊತ್ತು? ನೆನ್ನೆ ಮಧ್ಯಾಹ್ನದ ವೇಳೆ ಸ್ವಾಮಿ. ಆ ನತದೃಶ್ಟ ಸೇಕಿಯಾಮದಿಂದ ಯಾಮಶಿನ ಹಾದಿ ಹಿಡಿದ್ದಿದ್ದ. ಸೇಕಿಯಾಮ ಕಡೆಗೆ ಕುದುರೆ ಮೇಲೆ ಸವಾರಿಮಾಡುತ್ತ, ಒಬ್ಬಳು ಹೆಂಗಸಿನ ಜೊತೆ ಸಾಗಿದ್ದ. ಈಗ ಅವಳು ಅವನ ಪತ್ನಿ ಎಂಬುದು ತಿಳಿದಿದೆ. ಸೆರಗು ಅಡ್ಡ ಹಾಯ್ದದ್ದರಿಂದ ಮುಖ ಕಾಣಿಸುತ್ತಿರಲ್ಲಿಲ್ಲ. ನನಗೆ ಅವಳ ಬಟ್ಟೆಯ ರಂಗೊಂದೆ ಕಂಡದ್ದು -- ಕಂದು ಬಣ್ಣದ ನಿಲುವಂಗಿ. ನೀಳವಾದ ಕೇಸರ ಗಳುಳ್ಳ ಅಶ್ವಾರೂಢಳಗಿದ್ದಳು. ಆ ಮಹಿಳೆಯ ಎತ್ತರ? ಒಹ್! ಸುಮಾರು ನಾಲ್ಕು ಅಡಿ ಐದು ಅಂಗುಲ. ನಾನು ಬೌದ್ಧ ಭಿಕ್ಷುವಾಗಿರುವುದರಿಂದ ಅವಳ ಕಡೆ ಹೆಚ್ಚು ಗಮನ ಹರಿಸಲಿಲ್ಲ. ಆ ಮನುಷ್ಯ ಖಡ್ಗಧರಿಸಿ ಸಶಸ್ತ್ರನಾಗಿರದೆ ಬಿಲ್ಲು ಬಾಣಗಳನ್ನು ಸಹ ಹೊತ್ತಿದ್ದ. ಮತ್ತೆ ಹೇಳುವುದಾದರೆ ಸರಿಸುಮಾರು ಇಪ್ಪತ್ತು ಬಿಲ್ಲಿಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿದ್ದ.
ಆತನು ಇಂತಹ ದುರ್ವಿಧಿಯನ್ನು ಸಂಧಿಸುತ್ತಾನೆಂದು ನಾನು ಎಣಿಸಿರಲಿಲ್ಲ. ನಿಜಕ್ಕು ಮಾನವ ಜೀವನ ಬೆಳಗಿನ ಮಂಜಿನಷ್ಟೆ ಸಾಶ್ವತ, ಮಿಂಚಿನ ಬಳ್ಳಿಯಷ್ಟೆ ಚಿರಾಯು. ಅವನ ಮೇಲಿನ ನನ್ನ ಸಹಾನುಭೂತಿಗೆ ಪದಗಳು ಸಾಕಾಗುವುದಿಲ್ಲ.
Sunday, August 15, 2010
ಕಲಿಕೆ
ನಾನಾ ಭಾವೋಪ ಸಂಪನ್ನಂ ನಾನಾ ಅವಸ್ಥಾಂತರಾತ್ಮಕಂ
ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ
ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ
ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ -- ಜಯಂತ ಭಟ್ಟ
ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ
ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ
ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ
ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ -- ಜಯಂತ ಭಟ್ಟ
ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ
Saturday, August 07, 2010
ಯಾತ್ರೆ ಮುಗಿಸಿದ ’ನಡೆದಾಡುವ ಕಾವ್ಯಕೋಶ’


ದ.ರಾ.ಬೇಂದ್ರೆ ಕಾವ್ಯ ಕುರಿತ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಇಹಲೋಕ ತ್ಯಜಿಸುವ ಕೆಲ ಘಂಟೆಗಳ ಮುನ್ನ ’ನಡೆದಾಡುವ ಕಾವ್ಯ ಕೋಶ’ ಎಂದು ಖ್ಯಾತರಾಗಿರುವ - ಕಿ.ರಂ. ನಾಗರಾಜ.
ಕಿತ್ತಾನೆ ರಂಗಪ್ಪ ನಾಗರಾಜ (ಕಿ.ರಂ.ನಾಗರಾಜ) ಇನ್ನಿಲ್ಲ. ನೆನ್ನೆಯಷ್ಟೆ ಸಂಚಯ ಮತ್ತು ಸುಚಿತ್ರ ಕಲಾ ಕೇಂದ್ರ ಆಯೋಜಿಸಿದ್ದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಸಹೃದಯರನ್ನು ಬೇಂದ್ರೆ ಕಾವ್ಯದಲ್ಲಿ ತಲ್ಲೀನರಾಗಿಸಿದ್ದ ಗಾರುಡಿಗ ಇಲ್ಲವೆಂದರೆ ನಜಕ್ಕೂ ನಂಬಲಾಗತ್ತಿಲ್ಲ. ’ಜೋಗಿ’ ಪದ್ಯವನ್ನು ಓದಬೇಕೆಂದು ಅವರು ಗುರುತು ಹಾಕಿಕೊಂಡು ಬಂದಿದ್ದರೂ, ಅವರ ನೆನ್ನೆಯ ಮನೋಧರ್ಮಕ್ಕೆ ಕಾಕತಾಲೀಯವೆಂಬಂತೆ ಒಲಿದು ಬಂದದ್ದು ಬೇಂದ್ರೆಯವರ ’ಸೃಷ್ಟಿ - ಪ್ರಳಯ’ ಕವನ. ಪ್ರತಿಯೊಂದು ಕ್ಷಣದಲ್ಲಿಯೂ ಸೃಷ್ಟಿ ಮತ್ತು ಪ್ರಳಯಗಳು ಬದಿ ಬದಿಯಲ್ಲಿಯೇ ಹೇಗೆ ಸುಳಿದಾಡುವವು ಎಂದು ತಮ್ಮ ಜೀವನದ ಅಂತಿಮ ಉಪನ್ಯಾಸದಲ್ಲಿ ಕಿ.ರಂ. ಮಾರ್ಮಿಕವಾಗಿ ನುಡಿದಿದ್ದರು. ಆ ಕ್ಷಣದಲ್ಲಿ ಶ್ರುಷ್ಟಿಯಾದ ಕಾವ್ಯ ವೃಷ್ಟಿ, ಇನ್ನು ಕೆಲವ ಘಂಟೆಗಳಲ್ಲಿ ಲಯವಾಗಿ, ಪ್ರಳಯವಾಗುತ್ತದೆಂದು ಕನಸು ಮನಸುನಲ್ಲೂ ನೆನೆಸಿರಲಿಲ್ಲ. ಕಾವ್ಯವನ್ನು ಅನುಭವಿಸಬೇಕೆಂದಿದ್ದರಷ್ಟೆ. ಸೃಷ್ಟಿ ಪ್ರಳಯಗಳ ಅನುಭವ ಮಾಡಿಸಿ ತೀರಿಕೊಂಡರು. ಉಪನ್ಯಾಸದ ಕೊನೆಯಲ್ಲಿ, -- " ನಾನು ನಿಮಗೆ ಹೇಳಬೇಕಾದುದು ಏನೂ ಇಲ್ಲ. ಈ ಕೆಲ ಘಂಟೆಗಳಲ್ಲಿ ನನ್ನ ಭಾವಮಂಡಲದಲ್ಲಿ ಸುಳಿದಾಡಿದ ಹಲವು ಲಹರಿಗಳ ಕುರಿತಾಗಿ ನನಗೆ ನಾನೆ ಮಾತನಾಡಿಕೊಂಡಿದ್ದೇನೆ. you people have just overheard " ಎಂದು ನುಡಿದಿದ್ದರು.
.
Saturday, July 31, 2010
ಅಪರಿಗ್ರಹ
ನಾಡು ಕಂಡಂಥ ಅತ್ಯಂತ ಉನ್ನತ ಶ್ರೇಣಿಯ ಚಿತ್ರಕಾರ, ಶಿಲ್ಪಿ, ಕಲಾ ತಪಸ್ವಿ ಶ್ರೀಯುತ ಕೆ.ವೆಂಕಟ್ಟಪ್ಪನವರು. ಇಲ್ಲಿ ’ಕಲಾ ತಪಸ್ವಿ’ ಎಂಬ ಪದಪ್ರಯೋಗ ಅತಿಶಯೋಕ್ತಿಯಾಗಲಿ, cliche ಯಾಗಲಿ ಅಲ್ಲದೆ ಸಂಧಬೋಚಿತವಾಗಿದೆ. ತಮ್ಮ ಜೀವನವನ್ನು ಕಲೆಗಾಗಿಯೇ ಮುಣುಪಾಗಿಟ್ಟು ಭೀಶ್ಮ ಪ್ರತಿಙ್ಜ್ನೆಯಂತೆ ಜೀವನ್ದುದ್ದಕ್ಕೂ ಅಖಂಡ ಬ್ರಹ್ಮಚರ್ಯೆ ಮತ್ತು ಅಪರಿಗ್ರಹದ ವ್ರತವನ್ನು ಸಾಧಿಸಿದ ಧೀಮಂತರು. ೧೯೧೩ ರಲ್ಲಿ ಅವರು ಹಿಮಾಲಯದ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅಪರಿಗ್ರಹದ ದೀಕ್ಷೆ ಸ್ವೀಕರಿಸಿದರು. ಯಾರಿಂದಲು ಯಾವುದೇ ರೀತಿಯ ಸಹಾಯವಾಗಲಿ, ಉಡುಗೊರೆಯಾಗಲಿ ಏನನ್ನೂ ಸ್ವೀಕರಿಸದ ವ್ರತವದಾಗಿತ್ತು.
೧೯೪೨ ರಲ್ಲಿ ದಿವಾನ್ ಬಹಾದ್ದೂರ್ ಪಿ. ರಾಘವೇಂದ್ರ ರಾಯರ ಮನೆಗೆ ಹೋಗಿದ್ದರು. ದಿವಾನರು ವೆಂಕಟ್ಟಪ್ಪನವರಿಗೆ ಬೀಳ್ಕೊಡುವಾಗ ತಾಂಬೂಲಾದಿಗಳನ್ನು ಸ್ವೀಕರಿಸಲು ಹೇಳಿದರು. ಆದರೆ ವೆಂಕಟಪ್ಪನವರು ಅಪರಿಗ್ರಹ ವ್ರತದಿಂದ ತಾಂಬೂಲವನ್ನೂ ಸ್ವೀಕರಿಸಲಿಲ್ಲ. ಕೊನೆಗೆ ದಿವಾನರ ಒತ್ತಾಯದ ಮೇರೆಗೆ, ಬೇರೆ ಇನ್ನಾರಿಗಾದರೂ ವೆಂಕಟಪ್ಪನವರು ತಾಂಬೂಲವನ್ನು ದಾನಮಾಡಲು ಅನುವು ಮಾಡಿಕೊಟ್ಟರೆ ತೆಗೆದುಕೊಳ್ಳುವುದಾಗಿ ಹೇಳಿದರು. ( ಶ್ರೀಯುತರ ದಿನಚರಿಯ ೧೭ ಸೆಪ್ಟೆಂಬರ್ ೧೯೪೨ ದಾಖಲಿಸಲಾಗಿದೆ.)
ಅಂತೆಯೆ ೧೯೫೦ ವಿನಾಯಕ ಚತುರ್ಥಿಗೆ ವೆಂಕಟ್ಟಪ್ಪನವರ ತಂಗಿ ಮೋದಕಗಳನ್ನು ತಂದುಕೊಡಲು ಅವರು ರೂಪಾಯಿ ದಕ್ಷಿಣೆ ಕೊಟ್ಟೆ ಅದನ್ನು ಸ್ವೀಕರಿಸಿದರು. ಮೋದಕವು ಹಾಗಿರಲಿ, ಒಮ್ಮೆ ವೆಂಕಟಪ್ಪವನರಿಗೆ ರುಚಿಸುವ ಹೇರಳೇಕಾಯಿ ಉಪ್ಪಿನಕಾಯನ್ನು ಅವರ ತಂಗಿ ತಂದುಕೊಟ್ಟರೆ, ಒಂದು ಶೀಶೆ ಉಪ್ಪಿನಕಾಯಿಗೆ ಮುಕ್ಕಾಲು ಸೇರು ಗೋಧಿಯನ್ನು ಕೊಟ್ಟು ತೆಗೆದುಕೊಂಡರು. ( ದಿನಚರಿ ದಾಖಲು: ೨೩ ಅಕ್ಟೋಬರ್ ೧೯೫೦)
ಈ ತಲೆಮಾರಿನ ಕಲಾವಿದರಿಗೆ (ಯಾರಿಗೆ ಆಗಲಿ) ಈ ಮಟ್ಟದ ನಿಸ್ಪೃಹತೆ ಇರಲು ಸಾಧ್ಯವೇ?
Subscribe to:
Posts (Atom)


