Sunday, February 09, 2020

ತಂಡುಲಾಸ್ತತ್ರ ಕಾರಣಮ್

ಅಕಾರಣಂ ವ್ಯಾಕರಣಂ ತಂತ್ರೀಶಬ್ದೋsಪ್ಯಕಾರಣಂ |
ಅಕಾರಣಂ ತ್ರಯೋ ವೇದಾಃ ತಂಡುಲಾಸ್ತತ್ರ ಕಾರಣಮ್ ||

(ಜಗತ್ತಿನ ವ್ಯವಹಾರವು ನಡೆಯುವುದಕ್ಕೆ) ವ್ಯಾಕರಣ ಶಾಸ್ತ್ರವು ಕಾರಣವಲ್ಲ. ವೀಣೆಯ ನಾದವೂ ಕಾರಣವಲ್ಲ. ಮೂರು ವೇದಗಳೂ ಕಾರಣವಲ್ಲ. ಅದಕ್ಕೆ ಕಾರಣವಾದದ್ದು ಅಕ್ಕಿ(ಅನ್ನ)!

ಜಗತ್ತಿನ ವ್ಯವಹಾರವು ನಡೆಯುತ್ತಿರುವುದು ಹೊಟ್ಟೆಯ ದೆಸೆಯಿಂದ. ಹೊಟ್ಟಬಟ್ಟೆಗಳ ಕಾರಣದಿಂದಾಗಿ ಅದ್ಭುತವಾದ ಜಗದ್‌ಯಂತ್ರವು ನಡೆಯುತ್ತಿದೆ. ಶಾಸ್ತ್ರ, ಸಂಗೀತ, ಪರಮಾರ್ಥ ವಿಚಾರಗಳೆಲ್ಲವೂ ಹೊಟ್ಟೆ ತುಂಬಿದ ಮೇಲೆಯೇ!

No comments: