Sunday, February 09, 2020

ಮೈನಾಕ ಇವ ಮಾರ್ದವಮ್

ನಿಷ್ಣಾತೊsಪಿ ಚ ವೇದಾಂತೇ ಸಾಧುತ್ವಂ ನೈತಿ ದುರ್ಜನಃ |
ಚಿರಂ ಜಲನಿಧೌ ಮಗ್ನಃ  ಮೈನಾಕ ಇವ ಮಾರ್ದವಮ್ ||

ಮೈನಾಕ ಪರ್ವತವು ದೀರ್ಘಕಾಲ ಸಮುದ್ರದಲ್ಲಿ ಮುಳುಗಿದ್ದರೂ ಹೇಗೆ ಮೆತ್ತಗಾಗುವುದಿಲ್ಲವೋ,
ಹಾಗೆಯೇ,
ಜನ್ಮತಃ ಕೆಟ್ಟ ಸ್ವಭಾವದವನು ಅಕಸ್ಮಾತ್ ವೇದಾಂತ ಶಾಸ್ತ್ರಗಳಲ್ಲಿ ನಿಪುಣನಾದರೂ ಸಹ,
ಅವನಲ್ಲಿದ್ದ ಕೆಟ್ಟ ಗುಣ ದೂರಾಗಿ ಒಳ್ಳೆಯವನಾಗುವ ಸಂಭವ ಅತಿ ಕಡಿಮೆ.

#Vedanta 

No comments: