Saturday, December 20, 2008

ದಶರಥ ಕೃತ ಶನೇಶ್ವರ ಸ್ತೋತ್ರಂ

’ಚಾಪಲಾಯ ಪ್ರಚೋದಿತಃ’ ಎಂಬಂತೆ ನನ್ನ ಹುಚ್ಚು ಮನಸ್ಸಿನ ಹತ್ತಾರು ಮುಖಗಳಲ್ಲಿ ಒಂದು ಮುಖ ಇತ್ತೀಚೆಗೆ ವೇದಾಂಗಗಳಲ್ಲಿ ಒಂದಾದ ಜೋತಿಷ್ಯದ ಕಡೆಗೆ ತಿರುಗಿದೆ. ಈ ವಿಶಾಲವಾದ ಭೂಮಂಡಲದಲ್ಲಿ ಇರುವ ವೈಪರೀತ್ಯಗಳನ್ನು ಕಂಡು - ಅರಿತು ನನ್ನ ಮನಸ್ಸಿಗೆ ಸರಿ ಹೊಂದುವ, ಸಮಂಜಸವೆನಿಸುವ, reconcile ಮಾಡಿಕೊಳ್ಳ ಬಹುದಾದಂತಹ worldview ರೂಪಿಸಿಕೊಳ್ಳಲು ನ್ಯಾಯ, ತರ್ಕ ಹೀಗೆ ಹತ್ತು ಹಲವು ಮಾರ್ಗೋಪಾಯಗಳು ಇದ್ದಿರ ಬಹುದು. ಸತ್ಯಾನ್ವೇಷಣೆಗೆ ಜೋತಿಷ್ಯವೂ ಒಂದು ಹೊಸ ದೃಶ್ಟಿಕೋಣವಾಗಲಿ ಎಂಬ ಇಂಗಿತದಿಂದ ಓಂ ಪ್ರಥಮವಾದ ಜೋತಿಷ್ಯಾಧ್ಯಯನ ಸಮಯದಲ್ಲಿ ನಾನು ಎದುರುಗೊಂಡ ಕೆಲ ಸ್ವಾರಸ್ಯ ಗಳನ್ನು ಹಂಚಿಕೊಳ್ಳುತಿದ್ದೇನೆ. ಓದುಗರಿಗೆ ಇದು ಕಾಗೆ - ಗೂಬೆ ಕಥೆ ಅನಿಸಿದರೆ ನನ್ನ ಕ್ಷಮೆ ಇರಲಿ. .

ಶನೇಶ್ವರನೆಂದರೆ ಸಾಮಾನ್ಯ ಜನರಿಗೇನು, ಅಸಮಾನ್ಯರಿಗೂ ಧಿಗಿಲೆಬ್ಬಿಸುವನು. ಶನೇಶ್ವರನ ಪಾಶದಿಂದ ಪಾರಾದವರು ಬೆರಳೆಣಿಕೆಯಷ್ಟೆ.ಶನೇಶ್ವರನು ೩೦ ವರುಶಗಳಿಗೊಮ್ಮೆ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವನಂತೆ. ಈ ಸಮಯದಲ್ಲಿ ರಾಜ ಮಹರಾಜರಿಗೆ ವಿಶೇಷ ಸಂಕಷ್ಟಗಳು ಮಾತ್ರವೇ ಅಲ್ಲ, ಗಂಡಾಂತರಗಳು ಎದುರಾಗುತ್ತವೆಯಂತೆ.ದಶರಥ ಮಹಾರಾಜರ ಆಳ್ವಿಕೆಯ ಸಮಯದಲ್ಲೂ ಸಹ ಛಾಯಪುತ್ರನು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವವನಿದ್ದ. ಆಗ ಶ್ರೀರಾಮಪಿತೃವು ಶನೇಶ್ವರನನ್ನು ಉದ್ದೇಶಿಸಿ ಸ್ತೋತ್ರವನ್ನು ರಚಿಸಿ ವಿಪತ್ತಿನಿಂದ ಪಾರಾದರಂತೆ. ಆದ್ದರಿಂದ ಈ ದಶರಥ ಮಹಾರಾಜ ಕೃತ ಶನೇಶ್ವರ ಸ್ತೋತ್ರವು ಶನಿಬಾಧೆಯಲ್ಲಿ ಇರುವವರಿಗೆ ಸಂಕಷ್ಟವನ್ನು ಉಪಶಮನ ಮಾಡುವಲ್ಲಿ ಅಪ್ರತಿಮ ಸಾಧನ.


ಧ್ಯಾತ್ವಾ ಸರಸ್ವತೀಂ ದೇವೀಂ ಗಣನಾಥಂ ವಿನಾಯಕಂ|
ರಾಜಾ ದಶರಥಃ ಸ್ತೋತ್ರಂ ಸೌರೆರಿದಮಥಾಕರೋತ್ ||

ನಮೋ ನೀಲಮಯೂಖಾಯ ನೀಲೊತ್ಫಲನಿಭಾಯ ಚ|
ನಮೋ ನಿರ್ಮಾಂಸದೇಹಾಯ ದೀರ್ಘಶ್ಮಷೃಜಟಾಯ ಚ||
ನಮೋ ವಿಶಾಲನೇತ್ರಾಯ ಶುಷ್ಕೋದರಾಯ ಭಯಾನಕ|
ನಮಃ ಪುರುಷಗಾತ್ರಾಯ ಸ್ಥೂಲರೋಮಾಯ ವೈ ನಮಃ||

ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತಪ್ತಾಯ ವೈ ನಮಃ|
ನಮಃ ಕಾಲಾಗ್ನಿರೂಪಾಯ ಕೃತಾಂತಕ ನಮೋಸ್ತುತೆ||
ನಮಸ್ತೆ ಕೋಟರಾಕ್ಷಾಯ ದುರ್ನಿರೀಕ್ಷ್ಯಾಯ ವೈ ನಮಃ|
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಲಿನೆ||

ನಮಸ್ತೆ ಸರ್ವಭಕ್ಷಾಯ ವಲೀಮುಖ ನಮೋಸ್ತುತೆ|
ಸೂರ್ಯಪುತ್ರ ನಮಸ್ತೇಸ್ತು ಭಾಸ್ಕರೆ ಭಯದಾಯಕ||
ಅಧೋದೃಶ್ಟೆ ನಮಸ್ತುಭ್ಯಂ ವಪುಃಷ್ಯಾಮ ನಮೋಸ್ತುತೆ|
ನಮೋ ಮಂದಗತೆ ತುಭ್ಯಂ ನಿಸ್ತ್ರಿಂಶಾಯ ನಮೋ ನಮಃ||

ತಪಸಾ ದಗ್ದದೇಹಾಯ ನಿತ್ಯಂ ಯೋಗರತಾಯ ಚ|
ನಮಸ್ತೆ ಙ್ನಾನನೇತ್ರಾಯ ಕಶ್ಯಪಾತ್ಮಜಸೂನವೆ||
ತುಷ್ಟೋ ದದಾಸಿ ವೈ ರಾಜ್ಯಂ ರುಷ್ಟೋ ಹರಸಿ ತತ್ಕ್ಷಣಾತ್|
ದೇವಾಸುರಮನುಷ್ಯಾಸ್ಚ ಪಶುಪಕ್ಷಿಸರೀಸೃಪಾಃ||

ತ್ವಯಾ ವಿಲೋಕಿತಾಃ ಸೌರೆ ದೈನ್ಯಮಾಶು ವ್ರಜಂತಿ ಚ|
ಬ್ರಹ್ಮಾ ಶಕ್ರೋ ಯಮಶ್ಚೈವ ಋಷಯಃ ಸಪ್ತತಾರಕಾಃ||
ರಾಜ್ಯಭ್ರಷ್ಠಾಷ್ಚ ತೆ ಸರ್ವೆ ತವ ದೃಶ್ಟ್ಯಾ ವಿಲೋಕಿತಾಃ|
ದೇಶಾ ನಗರಗ್ರಾಮಾ ದ್ವೀಪಾಶ್ಚೈವಾದ್ರಯಸ್ತಥಾ||

ರೌದ್ರದೃಷ್ಟ್ಯಾ ತು ಯೆ ದೃಷ್ಟಾಃ ಕ್ಷಯಂ ಗಚ್ಚಂತಿ ತತ್ಕ್ಷಕ್ಷಣಂ|
ಪ್ರಸಾದಂ ಕುರು ಮೆ ಸೌರೇ ವರಾರ್ಥೇಹಂ ತವಾಶ್ರಿತಃ
ಸೌರೆ ಕ್ಷಮಸ್ವಾಪರಾಧಂ ಸರ್ವಭೂತಹಿತಾಯ ಚ|

No comments: