ನೀ ಕೇಳಿದ್ದು ಪ್ರಶ್ನೆಗಳೆಂದು ತಿಳಿಯಲೇ ಇಲ್ಲವಯ್ಯ ನನ್ನೋಡೆಯ,
ಈಗ ಪರೀಕ್ಷೆಯು ಮುಗಿಯಿತೆಂದು ಹೇಳುವುದು ನಿನಗೆ ತರವೇ?
ಪರಕಿಸುವ ತೇದಿ ತಿಳಿದರೂ ನಾ
ತೇರ್ಗಡೆಯಾಗುವುದು ಅಷ್ಟಕ್ಕಷ್ಟೆ!
ಹೀಗಿರಲು ಹಟ್ಠಾತ್ತನೆ ಹೀಗೆ,
ತಿಳಿಯದೆಲೆ ನಾನು ತೂಕಡಿಸುತಿರುವಾಗ
ನನ್ನ ಬಲಾಬಲಗಳನು ತೂಗಿ,
ಮುಂದಿನ ತರಗತಿಗೆ ನನ್ನ ತಳ್ಳಿಯೂ ಹಾಕಿರಲು,
ಉತ್ತೀರ್ಣನಾದರೂ ನಾ ಹೇಗಾದರೂ ತಡೆದು ಕೊಳ್ಳಲಿ
ಈ ಚಕಮಕಿ.
ಇನ್ನು ಮುಂದೆ ಸಜ್ಜಾಗುವ ಗೋಜಿಗೆ ಹೋಗುವುದೇ ಇಲ್ಲ ಬಿಡು.
ಎಷ್ಟೆ ಆದರೂ ಇದ್ದೆ ಇದೆಯಲ್ಲ,
’ ಆದದ್ದೆಲ್ಲ ಒಳ್ಳೆಯದಕ್ಕೆ!’
- ಅನ್ನುವ ದಾಸರ ಸಮಜಾಯಿಷಿ, ಕುಂಟು
ನೆಪ, ಸಾಂತ್ವನ ಇತ್ಯಾದಿ ಇತ್ಯಾದಿ.
ಮತ್ತೆ,
ಇನ್ನೆಂದು ಹೂಡಿರುವೆ ತುರ್ತು ತಬ್ಬಿದ
ನಿನ್ನಯ ಧಿಡೀರ್ ಪರೀಕ್ಷೆ.......?
1 comment:
I wonder why I did not put a comment on this beautiful piece so far !!!
Post a Comment